ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.

— ಜೇಮ್ಸ್ ಬ್ರಾಡ್‌ಸ್ಕಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕಾವ್ಯ ಮತ್ತು ಕವನ

ಅಳಿಯದ ನೆನಪು

ಹೃದಯದಿ ಮೂಡಿದ ಭಾವನೆಗಳು


ಅವುಗಳೇ ನಿನ್ನಯ ನೆನಪುಗಳು


ನೆನಪಿನ ಪುಟಗಳ ಅಂಚಿನಲಿ


ಮೂಡಿದೆ ಸುಂದರ ಕನಸುಗಳು


 


ಸಾವಿರ ಕನಸ್ಸಿನ ಹಾಳೆಯಲಿ


ಜಾರಿ ಹೋಗದಿರಲಿ ನಿನ್ನ ಮಾತುಗಳು


ಯಾವ ಮೋಡಿಯಲಿ ನೀ ಸಿಲುಕಿರುವೆಯೋ


ನನ್ನ ಮನಸ್ಸ ನೀ ಮರೆತಿರುವೆ


 


ಗುಡುಗು ಸಿಡಿಲು ಬಂದರೂ ಸರಿಯೇ  ಮುಂದೆ ಓದಿ »

ನಿಶ್ಚಿಂತ ಚಿಂತನೆಗಳು

ನಿಶ್ಚಿಂತ ಚಿಂತನೆಗಳು

ಯೋಚನೆಗಳಿಗಿಲ್ಲ ಪರ್ಯವಸಾನ ಉಸಿರಾಡುವತನಕ,
ನೂರುರೂಪಧಾರಿ ಯೋಚನೆಸ್ವರೂಪ ಸುಕದುಃಖತವಕ.
ಚಿಂತನೆಗಿಹುದು ಸ್ವಂತ ಮೆದುಳ ಪೂರ್ಣ ಸ್ವಾತಂತ್ರ್ಯ,
ಅಂತೆಲ್ಲ ಚಿಂತನೆಗಳ ಬೆಳೆಸುವ ಅವರ್ಣ ತಾಂತ್ರ್ಯ!

ವಿವಿಧ ರೀತಿ ಪರಿಪರಿಯ ಪರಿಸ್ತಿತಿಗನ್ವಯವಾಗಿ
ವೈವಿಧ್ಯ ವರಸೆಯಲಿ ಅನುಭವಗಳಾಧಾರವಾಗಿ  ಮುಂದೆ ಓದಿ »

ಪ್ರೀತಿಯಿಂದ....

ಬರೆಯಲು ಬಾರದ ಭಾವವೊಂದು ಕಾದಿದೆ ಇಂದು
ಹೇಳಲಾಗದ ಮೌನವಾವರಿಸಿದೆ ಇಂದು..
ನೆನಪಿನ ಹಾಳೆಗಳನು ಮೃದುವಾಗಿ ತಿರುವಿದರೂ
ಸರಸರ ಸದ್ದು ಮಾಡುತ ರೆಪ್ಪೆ ಹಸಿಯಾಗಿದೆ...
ಏನೂ ತೋಚದ, ಏನೂ ಕಾಣದ
ಮಾಯೆಯೊಂದು ಬಿಗಿದಪ್ಪಿದೆ ಮನವನಿಂದು......

ಸಂಕ್ರಮಣ

Fall Colour Beauty
ಪ್ರಖರ ಕಿರಣಗಳಿಂದ ಮೆರೆದ ಸೂರ್ಯ
ಮರೆಯಾಗಲು ಹಿಮರಾಜನ ಮಡಿಲಲ್ಲಿ
ಆರ್ಭಟಿಸಲು ವರುಣ ಕಾರ್ಮೋಡಗಳ ಮುಗಿಲಲ್ಲಿ
ಉರುಳುತಿದೆ ಕಾಲಚಕ್ರ ನೀ ನಿಂತರೂ ನಾನಿಲ್ಲೆನೆನುತ

ಪುನರಾಗಮಿಸಲು ಹೇಮಂತ ಶರದಾದಿ ಋತುಗಳು
ಬದಲಾಗಲು ರವಿ-ಚಂದ್ರ-ಭುವಿ ನಕ್ಷೆಗಳು
ಕೈ ಜೋಡಿಸುತಿಹಳು ಇಳೆ, ಕಾಲನ ಜೊತೆಗೆ

ದೀಪಕ

ಜುಳು ಜುಳು ನಿನಾದದೊಂದಿಗೆ ಸಾಗಿದ್ದಳು ತುಂಗೆ
ಕಲರವದೊಂದಿಗೆ ಮರಳುತಿದ್ದವು ಹಕ್ಕಿಗಳು ಗೂಡಿಗೆ
ಕೇದಗೆಯ ಕಂಪಿನೊಂದಿಗೆ ಬೀಸಿತ್ತು ತಂಗಾಳಿ
ಮುಸ್ಸಂಜೆಯಾಗಿತ್ತು ರವಿ ಜಾರಿರಲು ಬಾನಂಚಿನಲ್ಲಿ

ವಿರಮಿಸಿರಲು ನಾ ಮರಳ ದಂಡೆಯಲ್ಲಿ
ನೀ ಕಂಡೆ ದೃಷ್ಟಿಗೆ ಅನತಿ ದೂರದಲ್ಲಿ
ಎತ್ತಲೋ ನೋಡುತಾ ಮುಗ್ಗರಿಸುತ್ತಿದ್ದೆ ನೀನು
ಕಂಡೆನೆಂತಹ ಚೆಲುವು ಬಳಿ ಧಾವಿಸಲು ನಾನು  ಮುಂದೆ ಓದಿ »

ಸ್ವಾಗತ

ಈ ನೆಲಕೆ ಮೂಡಿದ ಕೊಂಬು ನಾನು
ಬೇರಾರಿಗೂ ಲಭಿಸದ ಅಹಿಂಸೆ ಶಾಂತಿ ನಿಕೇತನ

ಸ್ವಾಗತ, ಸಚ್ಚಿದಾನಂದಾರ್ತಿಗಳಿಗೆ
ಆನಂದಾಶ್ರಮದ ಆನಂದಕೋಶಿಯ ಹಸನ್ಮುಖದ ಸ್ವಾಗತ

ಬನ್ನಿ, ಈ ನೆಮ್ಮದಿಯ ನೆರಳಿಗೆ
ಹಲವು ಹುಳುಕು ಬಳುಕು ಕೆಳದಾರಿಗಳ ಬಿಟ್ಟು ಬನ್ನಿ
ಯಾವುದಾದರೇನು ದಾರಿ? ನಾನಿರಲಿ ಗುರಿ!
ನಾನೇ ಸಚ್ಚಿದಾನಂದ !

ಹಿಮಪಾತ

IMG_3333.JPG

ಸುರಿದಿರಲು ಮಂಜಿನ ಹೂಮಳೆ
ಇಳೆಯಾಗಿದೆ ಬಿಳಿಹತ್ತಿಯ ಹಾಳೆ
ಕಾಣದಾಗಿದೆ ನಡೆದಾಡುವ ಹಾದಿ
ಆದ್ಯಂತವಾಗಿದೆ ಹಿಮದ ವಾರಿಧಿ

ನಾಕಂಡ ಮೊದಲ ಹಿಮಪಾತ
ಆದ ಸಂತೋಷ ಅಪರಿಮಿತ
ಹಿಡಿಯ ಹೊರಟೆ ಸೌಂದರ್ಯದ ಸೆರೆ
ಕಳಚಿ ಕ್ಯಾಮೆರ ಕಣ್ಣಿನ ಪೊರೆ

ಹಿಮರಾಜ ಸರಿಯಲು ನೇಪಥ್ಯಕ್ಕೆ
ಧುತ್ತೆಂದು ಧಾಳಿ ಹಿಮದಾಟಕೆ
ಅದೆಂತು ಚೆಲ್ಲಾಟ, ಹಿಮದೆರಚಾಟ
ಮರುಕಳಿಸಿತ್ತು ಬಾಲ್ಯದ ಹುಡುಗಾಟ  ಮುಂದೆ ಓದಿ »

ಆಟಿಕೆಗಳು

ಮಗುವೇ, ನೀನೆಷ್ಟು ಸುಖಿ ಆ ಮಣ್ಣಿನಲ್ಲಿ
ಆಟವಾಡುತ ಈ ಮುಂಜಾವಿನಲ್ಲಿ
ಆ ಮುರಿದ ಕಡ್ಡಿಯ ಜೊತೆಯಲಿ
ಬೆರೆಯಿತೆನ್ನ ಮುಗುಳ್ನಗೆ ನಿನ್ನಾಟದಲಿ

ನಾ ಮುಳುಗಿಹೆನು ನನ್ನ ಲೆಕ್ಕಪತ್ರಗಳಲಿ
ನೀ ನನ್ನತ್ತ ನೋಡಿದರೆ ಭಾವಿಸಬಹುದು
'ಇದೆಂಥಾ ಆಟವಯ್ಯಾ ನಿನ್ನದು,
ಚೆಂದದ ಬೆಳಗೊಂದು ಹಾಳಾಗಿಹುದು'

ಮಗುವೇ, ಮರೆತಿದ್ದೇನೆ ನಾ ಮಣ್ಣು ಮರಳನ್ನು  ಮುಂದೆ ಓದಿ »

ಪ್ರೀತಿಯೆಂದರೇನು?

ತಾಯಿಯ ಮಮತೆ
ತಂದೆಯ ವಾತ್ಸಲ್ಯ
ಗುರುವಿನ ಕಕ್ಕುಲತೆ
ಹಿರಿಯರ ಹಾರೈಕೆ
ಕಿರಿಯರ ವಾಂಛಲ್ಯ
ಸಖನ ಪ್ರೇಮ
ಎಲ್ಲವೂ ಪ್ರೀತಿಯ ರೀತಿಗಳಾದರೆ
ಪ್ರೀತಿಯೆಂದರೇನು?

ಹೆತ್ತವರಿಗೆ ಗೌರವ
ಗುರುಗಳಿಗೆ ಭಕ್ತಿ
ಹಿರಿಯರಿಗೆ ಮರ್ಯಾದೆ
ಕಿರಿಯರಿಗೆ ಅಕ್ಕರೆ
ಗೆಳೆಯರಿಗೆ ಸ್ನೇಹ
ಪ್ರಿಯಕರನಿಗೊಲವು
ಎಲ್ಲವೂ ಪ್ರೀತಿಯ ಅಭಿವ್ಯಕ್ತಿಗಳಾದರೆ
ಪ್ರೀತಿಯೆಂದರೇನು?

ಕರುಳಿನ ಕರೆ  ಮುಂದೆ ಓದಿ »

ಯಾವುದು ಸತ್ಯ?

ಕಣ್ಣಿಗೆ ಕಂಡದ್ದೇ ಸತ್ಯವೇ
ಕಿವಿ ಆಲಿಸಿದ್ದೇ ಸತ್ಯವೇ
ಬುದ್ಧಿಗೆ ತೋಚಿದ್ದೇ ಸತ್ಯವೇ
ಹೃದಯ ಭಾವಿಸಿದ್ದೇ ಸತ್ಯವೇ
ಯಾವುದು ಸತ್ಯ?

ಕುರುಡನ ಕನಸು ಸತ್ಯವೇ
ಮೂಕನ ಗಾಯನ ಸತ್ಯವೇ
ಹೆಳವನ ನರ್ತನ ಸತ್ಯವೇ
ಕಟುಕನ ಕರುಣೆ ಸತ್ಯವೇ
ಯಾವುದು ಸತ್ಯ?

ಸಾಕ್ಷ್ಯಗಳೇ ಸತ್ಯವೇ
ಸತ್ಯಕ್ಕೆ ಸಾಕ್ಷ್ಯಗಳೇ
ಸಾಕ್ಷ್ಯವು ಸಿಗದಿರುವುದೇ
ಸಾಕ್ಷ್ಯವಿಲ್ಲವೆನ್ನಲು ಸಾಕ್ಷಿಯೇ  ಮುಂದೆ ಓದಿ »

Syndicate content