ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಇನ್ನಷ್ಟು ಆಯ್ದ ಗಾದೆಮಾತುಗಳು(21-30) :

March 16, 2006 - 5:16pm — shreekant.mishrikoti

೨೧. ಇಷ್ಟಾದರೂ ಕಂಡ್ರಾ ಕೃಷ್ಣಭಟ್ರೇ ಅಂದ್ರೆ ಮುಪ್ಪಿನ ಕಾಲಕ್ಕೆ ಮೂರೇ ಹೆಂಡ್ರು ಅಂದ್ರಂತೆ!
೨೨. ಅಶ್ವತ್ಥ ಕಟ್ಟೆ ಸುತ್ತಿ ಹೊಟ್ಟೆ ಮುಟ್ಟಿ ನೋಡಿಕೊಂಡಳಂತೆ!
೨೩. ಆಕಾಶ ನೋಡಲು ನೂಕು ನುಗ್ಗಲೇ?
೨೪. ಆಗೋ ಪೂಜೆ ಆಗುತ್ತಿರಲಿ , ಊದೋ ಶಂಖ ಊದಿಬಿಡೋಣ
೨೫. ಆಡಿ ತಪ್ಪಬೇಡ , ಓಡಿ ಸಿಕ್ಕಬೇಡ .
೨೬. ಅಳಿಯನ ಕುರುಡು ಬಯಲಾದಾಗ ( ನಾ. ಕಸ್ತೂರಿಯವರ ಪ್ರಕಾರ -ಅಳಿಯನ ಬರುಡು ಬಯಲಾದಾಗ!)
೨೭. ಮನೆ ತಿನ್ನೋನಿಗೆ ಬಾಗಿಲು ಹಪ್ಪಳ-ಸಂಡಿಗೆ.
೨೮. ಆನೆ ಮೆಟ್ಟಿದ್ದೇ ಹಾದಿ, ಶೆಟ್ಟಿ ಬಿಟ್ಟಲ್ಲೇ ಪಟ್ಟಣ.
೨೯. ಆಪತ್ತಿಗೆ ಹರಕೆ, ಸಂಪತ್ತಿಗೆ ಮರೆವು.
೩೦. ಆಯ್ಕೊಂಡು ತಿನ್ನುವ ಕೋಳಿ ಕಾಲು ಮುರಿದ ಹಾಗೆ!

  • ಗಾದೆಗಳು
~.~
  • Login or register to post comments
  • 1458 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 16, 2006 - 9:14pm — ಮಹೇಶ ಭೋಗಾದಿ

Re: ಇನ್ನಷ್ಟು ಆಯ್ದ ಗಾದೆಮಾತುಗಳು(21-30) :

ಮಹೇಶ ಭೋಗಾದಿ's picture

shreekant.mishrikoti wrote:
೨೧. ಇಷ್ಟಾದರೂ ಕಂಡ್ರಾ ಕೃಷ್ಣಭಟ್ರೇ ಅಂದ್ರೆ ಮುಪ್ಪಿನ ಕಾಲಕ್ಕೆ ಮೂರೇ ಹೆಂಡ್ರು ಅಂದ್ರಂತೆ!

ಶ್ರೀಕಾಂತರೆ,

ಎಲ್ಲ ಗಾದೆಗಳು ನನಗೆ ಹೊಸತು. ಮೇಲಿನ ಗಾದೆಯು ನನಗೆ ಅರ್ಥವಾಗಲಿಲ್ಲ.

ಧನ್ಯವಾದ.

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 4:22am — hpn

ಗಾದೆಮಾತು

hpn's picture

ಎಷ್ಟು ಕಂಡ್ಯೋ ಕೃಷ್ಣ ಭಟ್ಟಾ ಅಂದ್ರೆ, ಮುಪ್ಪಿನ ಕಾಲಕ್ಕೆ ಮೂರು ಜನ ಹೆಂಡ್ರಂತೆ!

- ಇದು ನಾನು ಕೇಳಿದ ಈ ಗಾದೆಯ version. Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 8:01am — ಶ್ರೀನಿಧಿ

ಅಪರೂಪ

ಶ್ರೀನಿಧಿ's picture

ಈವೆಲ್ಲಾ ಅಪರೂಪದ ಗಾದೆಗಳು ಶ್ರೀಕಾಂತರೆ. ಬಹಳ ಚೆನ್ನಾಗಿ ಬರುತ್ತಿದೆ. ಕೆಲವು ಗಾದೆಗಳ ಹಿಂದೆ ರಸವತ್ತಾದ ಕಥೆಗಳಿವೆ (ನಿಜವಲ್ಲದಿರಬಹುದು..). ಆವನ್ನೂ ಹಾಕಿದರೆ ಚೆನ್ನಾಗಿರುತ್ತದೆ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 2:04pm — ಮಹೇಶ ಭೋಗಾದಿ

ವಿ: ಅಪರೂಪ

ಮಹೇಶ ಭೋಗಾದಿ's picture

ಶ್ರೀನಿಧಿ wrote:
ಈವೆಲ್ಲಾ ಅಪರೂಪದ ಗಾದೆಗಳು ಶ್ರೀಕಾಂತರೆ. ಬಹಳ ಚೆನ್ನಾಗಿ ಬರುತ್ತಿದೆ. ಕೆಲವು ಗಾದೆಗಳ ಹಿಂದೆ ರಸವತ್ತಾದ ಕಥೆಗಳಿವೆ (ನಿಜವಲ್ಲದಿರಬಹುದು..). ಆವನ್ನೂ ಹಾಕಿದರೆ ಚೆನ್ನಾಗಿರುತ್ತದೆ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ಸ್ವಾಮಿ ಶ್ರೀನರೆ,

ನಿಮಗೆ ತಿಳಿದ ಆ ಗಾದೆಗಳ ಮುಂದೆ ಹಿಂದೆ ಇರುವ ರಸವತ್ತಾದ ಕತೆಗಳನ್ನು ಇಲ್ಲಿ ಬರೆಯಿರಿ, ದಯೆಮಾಡಿ.

ಅವನ್ನು ನಾವೆಲ್ಲರು ಓದೋಣ!!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 10:56am — ಮಹೇಶ ಭೋಗಾದಿ

Re: ಗಾದೆಮಾತು

ಮಹೇಶ ಭೋಗಾದಿ's picture

hpn wrote:
ಎಷ್ಟು ಕಂಡ್ಯೋ ಕೃಷ್ಣ ಭಟ್ಟಾ ಅಂದ್ರೆ, ಮುಪ್ಪಿನ ಕಾಲಕ್ಕೆ ಮೂರು ಜನ ಹೆಂಡ್ರಂತೆ! - ಇದು ನಾನು ಕೇಳಿದ ಈ ಗಾದೆಯ version.

ರೀ HPN,

ಹಾಗಂದರೇನು ? ಗಾದೆಯ ಅರ್ಥವೇನು?

ದಯವಿಟ್ಟು(please) ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 11:37am — shreekant.mishrikoti

ಮೂರೇ ಜನ ಹೆಂಡ್ರು- ತಿದ್ದುಪಡಿ ಮತ್ತು ಅರ್ಥ

shreekant.mishrikoti's picture

ಎ(ಅ)ಷ್ಟು ಕಂಡ್ರಾ ಕೃಷ್ಣಭಟ್ರೇ ಅಂದ್ರೆ ಮುಪ್ಪಿನ ಕಾಲಕ್ಕೆ ಮೂರೇ ಹೆಂಡ್ರು ಅಂದ್ರಂತೆ! - ಇದು ಸರಿಯಾದ ಗಾದೆ ಮಾತು . (ಅವಸರದಲ್ಲಿ ತಪ್ಪಾಯಿತು, ಕ್ಷಮಿಸಿ).

ಈ ಗಾದೆ ಮನುಷ್ಯನ ಅತೃಪ್ತಿಯ ಬಗ್ಗೆ ಹೇಳುತ್ತದೆ. ಸದರಿ ಕೃಷ್ಣಭಟ್ಟರನ್ನು ಎಷ್ಟೆಲ್ಲ ಸುಖ ಕಂಡಿರ್‍ಅಲ್ಲಾ ಅಂತ ಅಸೂಯೆ/ಮೆಚ್ಚುಗೆಯಿಂದ ಯಾರೋ ಮಾತಾಡಿಸ್ತಾರೆ. ಅವರಿಗೋ ಮೂವರು ಹೆಂಡರಿದ್ದರೂ ( ಅದೂ ಮುಪ್ಪಿನಲ್ಲಿ! ) ತೃಪ್ತಿಯಿಲ್ಲ - ಮೂರೇ ಜನ ಹೆಂಡ್ರು ಅಂತ ದು:ಖ ಪಡುತ್ತಾರೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 11:46am — tvsrinivas41

ಹೀಗಿರಬಹುದಾ?

tvsrinivas41's picture

ಎಷ್ಟು ವಸಂತಗಳನ್ನು ಕಂಡೆ ಅಥವಾ ಎಷ್ಟು ವರ್ಷಗಳನ್ನು ಕಂಡೆ ಎಂದು ಕೇಳ್ತಿರಬಹುದೇ? ಅದಕ್ಕೆ ಕೃಷ್ಣ ಭಟ್ಟ 'ಸದಾಶಿವನಿಗೆ ಅದರದ್ದೇ ಧ್ಯಾನ' ಎನ್ನುವ ಹಾಗೆ ತನಗೆ ಇದುವರೆಗೆ ಆಗಿರುವ ಮದುವೆಗಳ ಲೆಕ್ಕದ ಬಗ್ಗೆ ಎಂದು ತಿಳಿದು ಹೀಗೆ ಹೇಳ್ತಿರಬಹುದೇ?

ಹರಿಯವರು ಇದರ ಬಗ್ಗೆ ವಿಶದೀಕರಿಸಬೇಕು.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 12:39pm — ಮಹೇಶ ಭೋಗಾದಿ

Re: ಹೀಗಿರಬಹುದಾ?

ಮಹೇಶ ಭೋಗಾದಿ's picture

tvsrinivas41 wrote:
ಎಷ್ಟು ವಸಂತಗಳನ್ನು ಕಂಡೆ ಅಥವಾ ಎಷ್ಟು ವರ್ಷಗಳನ್ನು ಕಂಡೆ ಎಂದು ಕೇಳ್ತಿರಬಹುದೇ? ಅದಕ್ಕೆ ಕೃಷ್ಣ ಭಟ್ಟ 'ಸದಾಶಿವನಿಗೆ ಅದರದ್ದೇ ಧ್ಯಾನ' ಎನ್ನುವ ಹಾಗೆ ತನಗೆ ಇದುವರೆಗೆ ಆಗಿರುವ ಮದುವೆಗಳ ಲೆಕ್ಕದ ಬಗ್ಗೆ ಎಂದು ತಿಳಿದು ಹೀಗೆ ಹೇಳ್ತಿರಬಹುದೇ? ಹರಿಯವರು ಇದರ ಬಗ್ಗೆ ವಿಶದೀಕರಸಬೇಕು. ವಂದನೆಗಳೊಂದಿಗೆ --- ತವಿಶ್ರೀನಿವಾಸ http://asraya.net

ಧನ್ಯವಾದಗಳು TVS ಮತ್ತು ಶ್ರೀಕಾಂತರಿಗೆ.

ರೀ TVS

ಹರಿಯುವವರು ಅಂದರೆ ಯಾರು ರೀ? ಎನ್ನನ್ನು ಹರಿಯುವವರು?

ಇದು ಕೂಡ ನಿಮ್ಮ ತಮಾಷೆ(ಶೆ)ನೆ?

ಅಯ್ಯೋ ರಾಮ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 1:00pm — tvsrinivas41

ಹರಿ ಹರಿ

tvsrinivas41's picture

ಹರಿಯುವವರಲ್ಲ ಸ್ವಾಮಿ, ಹರಿಯವರು - ಅಂದ್ರೆ ಹರಿಪ್ರಸಾದ ನಾಡಿಗರು.

ಒಂದು ರೀತಿಯಲ್ಲಿ ನೀವು ಹೇಳ್ತಿರೋದು ಸರಿಯೇ? ಕೋಪ ಬಂದ್ರೆ ಅವರು ನಮ್ಮನ್ನು ಹರಿದು ಹುರಿದು ಮುಕ್ಕಿಬಿಡ್ತಾರೆ (ತಮಾಷೆಗೆ ನಾಡಿಗರೇ).

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 3:59pm — srivathsajoshi

ಉ: ಹರಿಯ ಪರಿ

srivathsajoshi's picture

tvsrinivas41 wrote:
ಹರಿಯುವವರಲ್ಲ ಸ್ವಾಮಿ, ಹರಿಯವರು

'ಹರಿ' ಶಬ್ದಕ್ಕೆ ನಮಗೆಲ್ಲ ಗೊತ್ತಿರುವ 'ವಿಷ್ಣು', 'to flow', 'to tear off' ಎಂಬ ಅರ್ಥಗಳಷ್ಟೇ ಅಲ್ಲದೆ ಇನ್ನೂ ಕೆಲವು ಇವೆ! ಇದನ್ನು ಓದಿ:

"ಹರಿಯು ಹರಿಯೊಳಗಿರಲು ಹರಿಗೆ ಹರಿ ಬಂದು ಕಚ್ಚಲು ಹರಿಯು ಹರಿ ಹರಿ ಎಂದಿತು!"

= ಕಪ್ಪೆಯು ಗುಡಾಣದೊಳಗಿರಲು ಕಪ್ಪೆಗೆ ಹಾವು ಬಂದು ಕಚ್ಚಲು ಕಪ್ಪೆಯು ನಾರಾಯಣಾ ನಾರಾಯಣಾ ಎಂದಿತು.

ಆದ್ದರಿಂದ ಹರಿ = ಕಪ್ಪೆ, ಹರಿ = ಗುಡಾಣ, ಹರಿ = ಹಾವು ಎಂದೂ ಅರ್ಥವಿದೆ(ಯಂತೆ)! ಬಳಕೆಯಲ್ಲಿಲ್ಲ, ಅಷ್ಟೇ.

- ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 5:49pm — suchara

ಹರಿಕಥೆ

suchara's picture

ಹಾಗಾದರೆ ಇಲ್ಲಿ - ಹರಿಕೊಲ್ಲಲ್ ಹರಿ ಕಾಯ್ವನೆ? ಆಯಿತು !

ಸಮಸ್ಯಾ ಶ್ಲೋಕಕ್ಕೆ ಒಳ್ಳೆಯ ಪ್ರಶ್ನೆ.

- ಸುಚರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 6:20pm — srivathsajoshi

Re: ಹರಿಕಥೆ

srivathsajoshi's picture

ಸುಚರ wrote:
ಹಾಗಾದರೆ ಇಲ್ಲಿ - ಹರಿಕೊಲ್ಲಲ್ ಹರಿ ಕಾಯ್ವನೆ? ಆಯಿತು !

ಸಮಸ್ಯಾ ಶ್ಲೋಕಕ್ಕೆ ಒಳ್ಳೆಯ ಪ್ರಶ್ನೆ.

- ಸುಚರ

'ಹರಿ' ಗೆ ಇನ್ನೊಂದು ಆಯಾಮ:

ಹೆಂಡತಿ ಕನ್ನಡ ಮಾತಾಡುವವಳು, ಗಂಡ ತಮಿಳು ಭಾಷೆ ಮಾತನಾಡುವವನು. ಹಣ, ಹಾಲು ಮೊದಲಾದ 'ಹ'ಕಾರದ ಕನ್ನಡ ಪದಗಳನ್ನು ಅವನು ಪಣ, ಪಾಲು ಎಂದೇ ಉಚ್ಚರಿಸುವನು. ಅವನನ್ನು ತಿದ್ದುವಾಗೆಲ್ಲ ಅವಳು ಹರಿ ಹರಿ... ('ಪ' ಅಲ್ಲ, 'ಹ'ರೀ... ಎಂದು) ಎನ್ನುವಳು!

ಇದು 'ಹ'ರಿಕಥೆಯಲ್ಲೊಂದು ಉ'ಪ' ಕಥೆ!

- ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 7:43pm — tvsrinivas41

ಸಾಕು ಮಾಡೋಣ್ವೇ?

tvsrinivas41's picture

ವಿಷಯ ಎಲ್ಲಿಂದ ಎಲ್ಲಿಗೋ ಹೋಗ್ತಿದೆ. ಸದ್ಯಕ್ಕೆ ಇಲ್ಲಿಗೇ ಸಾಕು ಮಾಡೋಣ್ವೇ?

ಶ್ರೀಹರಿ ಹಿರಣ್ಯಕಶಿಪುವಿನ ಹೊಟ್ಟೆ ಬಗೆದಾಯ್ತು. ಇನ್ನು ಶ್ರೀಕಾಂತರು ಹೆಚ್ಚು ಹೆಚ್ಚು ಗಾದೆಗಳನ್ನು ಸಂಪದದಲ್ಲಿ ತುಂಬಿಸಲಿ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 8:08pm — srivathsajoshi

Re: ಸಾಕು ಮಾಡೋಣ್ವೇ?

srivathsajoshi's picture

tvsrinivas41 wrote:
ವಿಷಯ ಎಲ್ಲಿಂದ ಎಲ್ಲಿಗೋ ಹೋಗ್ತಿದೆ. ಸದ್ಯಕ್ಕೆ ಇಲ್ಲಿಗೇ ಸಾಕು ಮಾಡೋಣ್ವೇ?

ಆಯ್ತು, ಸಾಕು ಮಾಡೋಣ. ಯಾರಿಗಾದರೂ ನನ್ನ ಟಿಪ್ಪಣಿಗಳಿಂದ ನೋವಾಗಿದ್ದರೆ ದಯwitಉ ಕ್ಷಮಿಸಿ. ಮನನೋಯಿಸುವ ಉದ್ದೇಶ ನನ್ನ ಟಿಪ್ಪಣಿಗಳಲ್ಲಿ ಇರಲಿಲ್ಲ, ಒಂದೊಮ್ಮೆ ಕಂಡುಬಂದರೆ, 'ಆ ಉದ್ದೇಶವಿಲ್ಲ...' ಎಂಬುದನ್ನು ವ್ಯಕ್ತಪಡಿಸಲಾಗದ ನನ್ನ ಅಸಾಮರ್ಥ್ಯ. ಅದನ್ನು ಮನ್ನಿಸಿ.

ಸಂಪದವನ್ನು ಸೊಂಪಾಗಿ ಬೆಳೆಸೋಣ.

ಇತಿ,

ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 5:57pm — pavanaja

ವೈ ಡು ಯು ಹರಿ?

pavanaja's picture

ನಾನು ಮುಂಬಯಿಯ ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿದ್ದಾಗ ಅಲ್ಲಿದ್ದ ನಮ್ಮ ಸಹೋದ್ಯೋಗಿಯೊಬ್ಬರ ಹೆಸರು ಹರಿ ರಾವ್ ಎಂದಾಗಿತ್ತು. ನಾವು ಅವರನ್ನು ಚುಡಾಯಿಸಲು "why do you hurry Rao?" ಎನ್ನುತ್ತಿದ್ದೆವು.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 1:05pm — ಶ್ರೀನಿಧಿ

ಸರಿಯಾಗಿದೆಯಲ್ಲ??

ಶ್ರೀನಿಧಿ's picture

ಶ್ರೀನಿವಾಸ್ ಅವರು ಸರಿಯಾಗಿಯೇ ಬರ್ದಿದ್ದಾರಲ್ರೀ. ನಿಮ್ಮ ಟಿಪ್ಪಣಿಯಲ್ಲಿ "ಎನನ್ನು" ಎನ್ನುವುದು "ಏನನ್ನು" ಎಂದಾಗಬೇಕು.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 1:46pm — ಮಹೇಶ ಭೋಗಾದಿ

Re: ಸರಿಯಾಗಿದೆಯಲ್ಲ??

ಮಹೇಶ ಭೋಗಾದಿ's picture

ಶ್ರೀನಿಧಿ wrote:
ಶ್ರೀನಿವಾಸ್ ಅವರು ಸರಿಯಾಗಿಯೇ ಬರ್ದಿದ್ದಾರಲ್ರೀ. ನಿಮ್ಮ ಟಿಪ್ಪಣಿಯಲ್ಲಿ "ಎನನ್ನು" ಎನ್ನುವುದು "ಏನನ್ನು" ಎಂದಾಗಬೇಕು.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ಧನ್ಯವಾದ ರೀ ಶ್ರೀನರೆ!

ಅಯ್ಯೋ!! ಎನ್ನನ್ನು ಅಂದರೆ ನನ್ನನ್ನು ಎಂದಾಗುವುದು.

ನಾನು ಬರೆದದ್ದು... ನನ್ನನ್ನು ಹರಿಯುವವರು ಯಾರು? ಎಂದು ಕೇಳಿದಂತಾಗುವುದು!!!

ಅಕಟಕಟ!!! ಎಂತಹ ಅರ್ಥಾಭಾಸ !!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 7:37pm — hpn

ಅತಿಯಾಯ್ತು

hpn's picture

mahesh_b_s wrote:
ರೀ TVS

ಹರಿಯುವವರು ಅಂದರೆ ಯಾರು ರೀ? ಎನ್ನನ್ನು ಹರಿಯುವವರು?

ಇದು ಕೂಡ ನಿಮ್ಮ ತಮಾಷೆ(ಶೆ)ನೆ?

ಗುರುವೇ, ಸ್ವಲ್ಪ ಅತಿಯಾಯ್ತು.

ಒಂದಷ್ಟು decent ಆಗಿ, ethical ಆಗಿ behave ಮಾಡೋದು ಕಲೀರಿ. ಸಮುದಾಯದಲ್ಲಿ ನಿಮ್ಮದೊಂದು ಜವಾಬ್ದಾರಿ ಇರತ್ತೆ ಅನ್ನೋದನ್ನ ಮರೆಯಬಾರದು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 4:05pm — srivathsajoshi

Re: ಹೀಗಿರಬಹುದಾ?

srivathsajoshi's picture

tvsrinivas41 wrote:
ಅದಕ್ಕೆ ಕೃಷ್ಣ ಭಟ್ಟ 'ಸದಾಶಿವನಿಗೆ ಅದರದ್ದೇ ಧ್ಯಾನ' ಎನ್ನುವ ಹಾಗೆ ತನಗೆ ಇದುವರೆಗೆ ಆಗಿರುವ ಮದುವೆಗಳ ಲೆಕ್ಕದ ಬಗ್ಗೆ ಎಂದು ತಿಳಿದು ಹೀಗೆ ಹೇಳ್ತಿರಬಹುದೇ?

'ಪಟ್ಟಣಕ್ಕೆ ಬಂದ ಪತ್ನಿಯರು' ಚಿತ್ರದ ಗೀತೆಯನ್ನು ಹೀಗೆ ಬದಲಾಯಿಸಬಹುದು:

"ಒಬ್ಬಳ ಕಾಟವೆ ಸಾಕಾಗಿ ಹೋಗಿದೆ... ಒಬ್ಬಳ ಕಾಟಕೆ ತುತ್ತಾಗಿ ಹೋಗಿಹೆ...
ಮೂವರು ಹೆಂಡಿರೆ ಕೃಷ್ಣಭಟ್ಟಾ ನಿನಗೆ...!"

- ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 16, 2006 - 11:08pm — pratap

pratap's picture

ಸಕ್ಕತ್ತಾಗಿವೆ ಗಾದೆಗಳು. ಇವಲ್ಲವೂ ಕೆಳೆ ಇರ್ಲಿಲ್ಲ... ಇನ್ನೊ ಹೀಗೇ ಬರಲಿ ಸ್ವಾಮಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 9:54pm — Sunil Jayaprakash

ಮೆಚ್ಚುಗೆ: ಇನ್ನಷ್ಟು ಆಯ್ದ ಗಾದೆಮಾತುಗಳು(21-30) :

Sunil Jayaprakash's picture

shreekant.mishrikoti wrote:
೨೨. ಅಶ್ವತ್ಥ ಕಟ್ಟೆ ಸುತ್ತಿ ಹೊಟ್ಟೆ ಮುಟ್ಟಿ ನೋಡಿಕೊಂಡಳಂತೆ!

ಬಹುಶಃ ಎಷ್ಟು ತಳ್ಳಗಾದೆ ಎಂದು ನೋಡಿಕೊಳ್ಳುವುದಕ್ಕಿರಬಹುದು. . ಯಪ್ಪಾ ಅದೇನು ಕಾಳಜಿ ದೇಹ ಸ್ವಾಸ್ಥ್ಯದ ಮೇಲೆ.

ನೋಡಿ, ಈ ಗಾದೆ ಕಟ್ಟಿದವರಿಗೂ ಗೊತ್ತು. ಹೆಂಗಸರಿಗೇ ಮೋಹ ಹೆಚ್ಚು (ಅದು ಮೋಹ ಅಲ್ಲ ಆರೋಗ್ಯದ ಮೇಲಿನ ಕಾಳಜಿ ಎಂದೂ ಸಹ ವ್ಯಾಖ್ಯಾನಿಸಬಹುದು) ಎಂದು ತೋರಿಸುತ್ತದೆ.

ವೇದ ಸುಳ್ಳಾದರೂ  ಗಾದೆ ಸುಳ್ಳಾಗುವುದಿಲ್ಲವಲ್ಲ. ಹಾಗಾಗಿ ಹೆಂಗಸರು ಇದರ ವಿರುದ್ಧ ವಾದ ಮಾಡುವ ಹಾಗಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 10:04pm — tvsrinivas41

ಹಾಗಲ್ಲ

tvsrinivas41's picture

ನನಗೆ ತಿಳಿದ ಮಟ್ಟಿಗೆ ಅದು ಹಾಗಲ್ಲ. ಮಕ್ಕಳಾಗದವರು ಅಶ್ವತ್ಥ ಕಟ್ಟೆಯನ್ನು ಸುತ್ತುತ್ತಾರೆ. ಹಾಗೆ ಮಾಡುವುದರಿಂದ ಮಕ್ಕಳಾಗುತ್ತದೆ ಎಂಬ ಅನಿಸಿಕೆ. ಈ ಗಾದೆ ಮಾತಿನಲ್ಲಿ ಒಂದು ಸುತ್ತು ಸುತ್ತಿದ ತಕ್ಷಣ ಮಗುವಾಗುವ ಸೂಚನೆ ಇದೆಯೇ ಎಂದು ಪರೀಕ್ಷಿಸುತ್ತಿದ್ದಾಳೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 17, 2006 - 10:23pm — Sunil Jayaprakash

ಓಹೋ ಹೌದೇನು

Sunil Jayaprakash's picture

ಇಲ್ಲೇ ಅಡಕವಾಗಿರುವುದು. ಗಾದೆಗಳ ಸರ್ವಕಾಲಿಕ ಸತ್ಯ.

ಹೇಗೆಂದಿರೋ....ನೋಡಿ...ಹಿಂದೆ ಹರಕೆಗೆ, ಇಂದು....ನಾನು ಕೊಟ್ಟ ಕಾರಣಕ್ಕೆ..

ಆದರೆ ನೀವು ಹೇಳುವುದೇ ಸರಿಯಿರಬೇಕು ಅನ್ನಿಸುತ್ತೆ. ನನ್ನ ಕಾರಣವನ್ನು ಕುಚೋದ್ಯಕ್ಕಾಗಿ ಬರೆದದ್ದು ಎಂದು ತಿಳಿಯುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 18, 2006 - 12:03pm — shreekant.mishrikoti

ಅಶ್ವತ್ಥ ಕಟ್ಟೆ ಸುತ್ತ-ಇದು ಸರಿ.

shreekant.mishrikoti's picture

ಶ್ರೀನಿವಾಸ ಅವರ ವಿವರಣೆ ಸರಿ.

ಅಶ್ವತ್ಥ ಪ್ರದಕ್ಷಿಣೆಯ ಫಲವಾಗಿ ಮಕ್ಕಳ ಸೂಚನೆ ಪರೀಕ್ಷಿಸುವ ಆತುರ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇನ್ನಷ್ಟು ಆಯ್ದ ಗಾದೆಮಾತುಗಳು(೩೧-೪೦) :
  • ಇನ್ನಷ್ಟು ಅಪರೂಪದ ಗಾದೆಮಾತುಗಳು
  • ಮತ್ತಷ್ಟು ಗಾದೆಗಳು - ೪
  • ಮೆದುಳಿಗೆ ಮೇವು ಇನ್ನಷ್ಟು ಗಾದೆಮಾತುಗಳು
  • ಗಂಡ-ಹೆಂಡತಿ-ಅತ್ತೆಯ ಕುರಿತ ಮೂರು ಜೋಕುಗಳು!
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
    October 7, 2008 - 9:16am
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 8:48am
  • mahesha
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
    October 7, 2008 - 8:45am
  • savithasr
    ಉ: ಗಾಂಧೀಸ್ಮರಣೆ
    October 7, 2008 - 8:28am
  • Sunil Jayaprakash
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
    October 7, 2008 - 8:01am
  • shylaswamy
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
    October 7, 2008 - 7:58am
  • Sunil Jayaprakash
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
    October 7, 2008 - 7:57am
  • Sunil Jayaprakash
    ಉ: ಸ್ವಲ್ಪನಗಿ
    October 7, 2008 - 7:42am
  • venkatesh
    ಉ: ರಾಜ್ಯೋತ್ಸವ ಓಟ ೨೦೦೮
    October 7, 2008 - 7:34am
  • Sunil Jayaprakash
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 7, 2008 - 7:27am
ಇನ್ನಷ್ಟು


ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator