ಇತಿಹಾಸ
ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
December 28, 2007 - 4:16am — hamsanandi
ವಕ್ರನಾದ ಶುಕ್ರ?
November 20, 2007 - 3:27am — hamsanandi
ಕೆಲವು ದಿನಗಳ ಹಿಂದೆ ಸವಿತೃ ಅವರು ಒಂದು ಪ್ರಶ್ನೆ ಕೇಳಿದರು. ಗ್ರಹಗಳ ವಕ್ರದೃಷ್ಟಿ ಯಾಕೆ ಬೀಳುತ್ತೆ ಅಂತ ಅವರ ಕೇಳಿಕೆ. ಅವರು ಆ ಪ್ರಶ್ನೆ ಕೇಳಿದ್ದು ನನಗೆ ಆಶ್ಚರ್ಯ ಆಯಿತು. ಯಾಕೆ ಗೊತ್ತೇ? ಗ್ರಹಗಳು ವಕ್ರವಾದರೆ, ಸೂರ್ಯನಿಗೇನು ಚಿಂತೆ ಅಲ್ಲವೇ?
[ಸವಿತೃ, ಸವಿತಾ ಇವೆಲ್ಲ ಸೂರ್ಯನ ಹೆಸರುಗಳೇ!]. ಆಮೇಲನ್ನಿಸಿತು - ಅವರು ಹೀಗೆ ಕೇಳಿದ್ದು ಸರಿಯಾಗೇ ಇದೆ ಅಂತ. ಯಾಕಂದ್ರೆ, ಈ ಗ್ರಹಗಳು ವಕ್ರವಾಗೋದು ಈ ಬಡಪಾಯಿ ಭೂಮಿ (ಅಥವ ಇತರ ಗ್ರಹಗಳ ಮೇಲೆ) ನಿಂತೆ ನೋಡೋರಿಗೆ ಮಾತ್ರ. ಸೂರ್ಯನ ಮೇಲಿಂದ ನಿಂತು ನೋಡಿದರೆ, ವಕ್ರವಾಗೋದು ಸಾಧ್ಯವೇ ಇಲ್ಲ. ಸೂರ್ಯನ ಮೇಲೆ ನಿಂತಂತೂ ನೋಡಕ್ಕಾಗಲ್ಲ, ಇನ್ನು ಬೇರೆ ಗ್ರಹಗಳ ಮೇಲೆ ಯಾರಪ್ಪಾ ಇದಾರೆ ನಿಂತು ನೋಡಕ್ಕೆ ಅನ್ನಬೇಡಿ. ಇವತ್ತಲ್ಲದಿದ್ದರೆ ಇನ್ನೊಂದು ದಿನ ಆ ಪ್ರಯತ್ನವೂ ಯಶಸ್ಸು ಕಾಣುತ್ತೆ ಅನ್ನೋ ನಂಬಿಕೆ ನನ್ನದು.
ಶುಕ್ರನಿಗೆ ವಕ್ರದೃಷ್ಟಿ ಬೀರ್ತಾನೆ ಅನ್ನೊ (ಕು)ಖ್ಯಾತಿ ಅಷ್ಟೇನೂ ಇಲ್ಲ. ಹಾಗೆ ನೋಡಿದರೆ, ಶನಿಗೆ ಆ ಪಟ್ಟ ಸಿದ್ಧವಾಗಿಹೋಗಿದೆ. ರಾಮೇಶ್ವರಕ್ಕೆ ಹೋದ್ರೂ ಶನೀಶ್ವರ ಬಿಡ ಅನ್ನೋ ಗಾದೆ ಕೇಳಿದೀರಲ್ಲ. ಆದ್ರೆ, ನಿಜ ಹೇಳ್ಬೇಕೂಂದ್ರೆ, ಶನಿ ಅಂದ್ರೆ ಒಂದು ಪಾಪದ ಪ್ರಾಣಿ. ಬೇಡ. ಪ್ರಾಣಿ ಅಲ್ಲ. ಪಾಪದ ಗ್ರಹ ಅನ್ನೋಣ. ಅದರ ಹೆಸರಲ್ಲೇ ಅದು ಗೊತ್ತಾಗತ್ತೆ. ಅದು ನಿಜವಾಗಿ ಶನೀಶ್ವರನಲ್ಲ. ಶನೈಶ್ಚರ. ಶನೈ: ಚರತಿ ಅಯಂ ಇತಿ ಶನೈಶ್ಚರಃ. ಈ ಗ್ರಹ ನಿಧಾನವಾಗಿ(ಶನೈ:) ಹೋಗುತ್ತೆ (ಚರತಿ), ಅದಕ್ಕೆ ಅವನು ಶನೈಶ್ಚರ. ಅಷ್ಟೇ. ಆಕಾಶದಲ್ಲಿ ಯಾವುದೇ ಒಂದು ಜಾಗದಿಂದ ಹೊರಟು, ಮತ್ತೆ ಅದೇ ಜಾಗಕ್ಕೆ ಮರಳಿ ಬರೋದಕ್ಕೆ ಶನಿಗೆ ಮೂವತ್ತು ವರ್ಷ ಬೇಕು. ಅದೇ ಕೆಲಸ ಮಾಡೋದಕ್ಕೆ ಗುರುವಿಗೆ ಹನ್ನೆರಡು ವರ್ಷ ಬೇಕು. ಅಂದಹಾಗೆ, ಭಾರತದಲ್ಲಿ ಅರವತ್ತು ವರ್ಷಗಳ ಸಂವತ್ಸರ ಚಕ್ರ ಇದೆಯಲ್ಲ, ಅದು ಇವೆರಡರ ಮೇಲೇ ನಿಂತಿರೋದು. ಉದಾಹರಣೆಗೆ, ಈ ಇವತ್ತು ಶನಿ, ಗುರು ಎರಡೂ, ಆಕಾಶದಲ್ಲಿ ಒಂದಕ್ಕೊಂದಕ್ಕೆ ಹತ್ತಿರವಾಗಿ, ಎರಡೂ, ಜ್ಯೇಷ್ಟಾ ನಕ್ಷತ್ರದ ಹತ್ತಿರ ಇದೆ ಅಂತ ಇಟ್ಟುಕೊಳ್ಳಿ. (ಸುಮ್ಮನೆ ಇಟ್ಟುಕೊಳ್ಳಿ. ಯಾವ ನಕ್ಷತ್ರವಾದರೂ ಆಗಿರಬಹುದು. ಮೇಷ ವೃಷಭವೇ ಮೊದಲಾದ ರಾಶಿಚಕ್ರದಲ್ಲಿ ಅತೀ ಪ್ರಕಾಶಮಾನವಾದ ನಕ್ಷತ್ರ ಜ್ಯೇಷ್ಟಾ. ಅದಕ್ಕೇ ಅದರ ಉದಾಹರಣೆ ತೆಗೆದುಕೊಂಡೆನಷ್ಟೆ. ಇರಲಿ). ಮತ್ತೆ ಸುಮಾರು ಮೂವತ್ತು ವರ್ಷಗಳ ಬಳಿಕ ಶನಿ ಅಲ್ಲೇ ಬಂದಿರುತ್ತಾನೆ. ಹಾಗೇ ಅರವತ್ತು ವರ್ಷಗಳ ನಂತರವೂ ಅಲ್ಲೇ ಇರುತ್ತಾನೆ. ಈ ಅರವತ್ತು ವರ್ಷಗಳಲ್ಲಿ ಗುರು ಆಕಾಶದ ಸುತ್ತ ಐದು ಬಾರಿ ಪ್ರದಕ್ಷಿಣೆ ಮಾಡಿ, ಮತ್ತೆ ಜ್ಯೇಷ್ಟಾ ನಕ್ಷತ್ರದ ಬಳಿಯೇ ಬರುತ್ತಾನೆ. ಹಾಗಾಗಿ, ಪ್ರಭವ ವಿಭವ ಮೊದಲಾದ ಸಂವತ್ಸರ ಚಕ್ರ ಆಕಾಶದಲ್ಲಿ ಗುರುಶನಿಗಳು ಒಟ್ಟಿಗೆ ಕಾಣಿಸಿಕೊಳ್ಳುವ ಘಟನೆಯನ್ನಾಧರಿಸಿದೆ. ತಿಳೀತಲ್ಲ? ಮುಂದೆ ಓದಿ »

ಶಿವಾಜಿಯನ್ನು ಕನ್ನಡ ರಾಣಿ ಮಲ್ಲಮ್ಮ ಬಂಧಿಸಿದ್ದಳೇ?
October 5, 2007 - 4:57pm — shreekant.mishrikotiಶಿವಾಜಿ ಒಂದು ಸಲ ಹಂಪೆಯ ಸುತ್ತಲ ಪ್ರದೇಶಕ್ಕೆ ಭೆಟ್ಟಿ ಕೊಟ್ಟನು . ಈ ಭಾಗದಲ್ಲಿ ಅರಾಜಕತೆ ಇತ್ತು . ಆಗ ಜನರು ಅವನನ್ನು ಈ ಭಾಗದ ಆಡಳಿತ ವಹಿಸಿಕೊಳ್ಳಲು ಕೇಳಿಕೊಳ್ಳುವರು . ಅವನು ಅದೇಕೋ ಒಪ್ಪುವದಿಲ್ಲ .
ಬಹುಶ: ಇದು ಬೆಳವಡಿ ಇರಬೇಕು ...ನಾನು ಓದಿದ್ದು ನನಗೆ ಸರಿಯಾಗಿ ನೆನಪಿಲ್ಲ . ... ಮುಂದೆ ಓದಿ »

"ಆವರಣ" ದ ಬಗ್ಗೆ ಅನಂತಮೂರ್ತಿಯ ಅಸಂಬದ್ಧ ಪ್ರಲಾಪಗಳು
May 29, 2007 - 4:25pm — srimanmohanಮನುಷ್ಯ ಸಹಜ ಮತ್ಸರದ ಪ್ರಭಾವಕ್ಕೆ ಒಳಗಾಗಿ ಅನಂತಮೂರ್ತಿಯವರು ಆಡಿದ ಮಾತುಗಳಿಗೆ ಮೌನವಾಗಿದ್ದು ಅವರ ಕುರಿತು ಅನುಕಂಪ ಸೂಚಿಸಿ ಕೇವಲ ಮೌನವಾಗಿರವುದು ಸಹ್ಯವಾಗಲಿಲ್ಲ. ಮುಂದೆ ಓದಿ »





RSS: