ಚರಿತ್ರೆ
ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!
February 14, 2008 - 5:58am — hamsanandiಕನ್ನಡಕ್ಕೆ ಕೆಲಸ ಮಾಡಿರುವವರಲ್ಲಿ, ಕನ್ನಡ ಮನೆ ಮಾತಲ್ಲದವರು ಹಲವರು ಸೇರಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪುತಿನ ಮತ್ತೆ ದ.ರಾ.ಬೇಂದ್ರೆಯಂತಹವರ ಮನೆಮಾತು ಕನ್ನಡವಾಗಿರಲಿಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ. ಮುಂದೆ ಓದಿ »

ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ
February 6, 2008 - 12:31am — hamsanandiಫೆಬ್ರವರಿ ೬ - ೨೦೦೮ , ಪುಷ್ಯ ಬಹುಳ ಅಮಾವಾಸ್ಯೆ- ಇಂದು ಪುರಂದರದಾಸರ ಆರಾಧನೆ. ಕ್ರಿ.ಶ.೧೫೬೪ರಲ್ಲಿ ಪುರಂದರ ದಾಸರು ಇದೇ ದಿನ ಕಾಲವಾದದ್ದು. ಮುಂದೆ ಓದಿ »

- hamsanandi ರವರ ಬ್ಲಾಗ್
- Login or register to post comments
- 217 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ತಿರುವೈಯ್ಯಾರು ಮತ್ತು ಮಿಶನ್ ಸ್ಯಾನ್ ಹೊಸೆ
June 16, 2007 - 1:19am — hamsanandiಕನ್ನಡ ನಾಡಿನ ಜೀವನದಿ ಕಾವೇರಿ. ಹಾಗೇ ಮುಂದೆ ಹೋಗಿ, ಅದು ತಮಿಳುನಾಡಿಗೂ ಜೀವನದಿಯಾಗಿ ಹರಿಯುತ್ತಾಳೆ. ನಮಗಾದರೂ, ಕಾವೇರಿ ಅಲ್ಲದೆ, ತುಂಗೆ, ಭದ್ರೆ, ಕೃಷ್ಣೆ, ಕಾಳಿಯರ ಕೃಪೆ ತಕ್ಕಮಟ್ಟಿಗಿದೆ. ಆದರೆ, ತಮಿಳುನಾಡಿನಲ್ಲಿ, ಕಾವೇರಿ(ಮತ್ತು ಅದಕ್ಕೆ ಸೇರುವ ಹೊಳೆಗಳನ್ನು ಬಿಟ್ಟು) ಬೇರೆ ಪ್ರಮುಖವಾದ ನದೀಜಾಲವಿಲ್ಲ. ಹಾಗಾಗಿ, ತಮಿಳರು ನಮ್ಮಂತೆಯೇ ಕಾವೇರಿಯನ್ನು ಬಹಳ ಗೌರವದಿಂದ ಕಾಣುತ್ತಾರೆ.
ಮೊದಲಿಗೆ ಒಂದು ವಿಷಯದ ಬಗ್ಗೆ ಹೇಳಿಬಿಡುತ್ತೇನೆ. ಇದು ಕಾವೇರಿ ಜಲವಿವಾದದ ಪ್ರಶ್ನೆಯ ಬಗ್ಗೆಯ ಬರಹವಲ್ಲ
ನನ್ನ ಉದ್ದೇಶವೇ ಬೇರೆ. ಎಲ್ಲ ನದಿಗಳೂ ಸಾಮಾನ್ಯ ಸಮುದ್ರ ಸೇರುವ ಬಳಿ ಕವಲೊಡೆದು, ಹಲವು ಭಾಗಗಳಾಗುತ್ತವೆ. ಕಾವೇರಿಯೂ ಇದಕ್ಕೆ ಹೊರತಲ್ಲ. ತಮಿಳುನಾಡಿನ ತಿರುಚ್ಚಿರಾಪಳ್ಳಿಯ ಬಳಿ ಕಾವೇರಿ ಐದು ಭಾಗಗಳಾಗಿ ಒಡೆಯುತ್ತಾಳೆ. ಈ ಶಾಖೆಗಳಿಗೆ ಕಾವೇರಿ, ವೆಣ್ಣಾರ್, ವೆಟ್ಟಾರ್, ಕೊಡಮುರುಟಿ ಮತ್ತು ಕೊಲ್ಲಿಡಮ್ ಎಂದು ಹೆಸರಾಗುತ್ತದೆ. ಇಲ್ಲಿ ಒಂದು ವಿಷಯ ಹೇಳಬೇಕು. ವೆಣ್ಣಾರ್, ವೆಟ್ಟಾರ್ ಎಂಬಲ್ಲಿ ಬರುವ ರ ಕಾರ, ಹಳೆಗನ್ನಡದ ಶಕಟರೇಫ; (ನನಗೆ ಅದನ್ನು ಇಲ್ಲಿ ಬರೆಯಬೇಕೆಂದು ತಿಳಿಯದು). ಮತ್ತೆ, ಈ ಪದಗಳು ರ್ ಎನ್ನುವ ವ್ಯಂಜನದಿಂದ ಕೊನೆಯಾಗಿಲ್ಲ. ಬದಲಿಗೆ, ಅರ್ಧ ಉಕಾರದಲ್ಲಿ ಮುಗಿಯುತ್ತವೆ. (ಈ ರೀತಿಯ ಉಕಾರ ಇರುವ ಪದ ನೆನಪಿಗೆ ಬರುತ್ತಿಲ್ಲ). ಕನ್ನಡದ ಆರು, ಮಗು, ನಗು ಮೊದಲಾದ ಪದಗಳಲ್ಲಿ ಬರುವ ಪೂರ್ಣ ಉಕಾರವನ್ನು ಉಪಯೋಗಿಸದೇ ಹೇಳಿದರೆ ಹೇಗಿರುತ್ತೋ ಆ ರೀತಿ ಇರಬೇಕು ತಮಿಳಿನಲ್ಲಿ ಪದದ ಕೊನೆಗೆ ಬರುವ ಉಕಾರಗಳ ಉಚ್ಚಾರ. ಇನ್ನೂ ಹೇಳಬೇಕೆಂದರೆ ವೆಣ್ಣಾರು ಅನ್ನುವ ಪದವನ್ನು ವೆಣ್ಣಾಋ ಎನ್ನುವ ರೀತಿಯಲ್ಲಿ ಉಚ್ಚರಿಸಿದರೆ, ಮೂಲಕ್ಕೆ ಹತ್ತಿರವಾಗುತ್ತದೆ. ಮುಂದೆ ಓದಿ »

ಕಾಂಚೀಪುರದ ರಾಜಸಿಂಹೇಶ್ವರ, ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಎಲ್ಲೋರದ ಕೈಲಾಸ
June 2, 2007 - 12:15am — hamsanandiಈ ಮೂರು ದೇವಾಲಯಗಳನ್ನು ಒಟ್ಟಿಗೆ ಹೇಳಿದ ಕಾರಣವೇನು ಎನ್ನುವಿರಾ? ಕಾಂಚಿಯ ಪಲ್ಲವರು, ಪಟ್ಟದಕಲ್ಲಿನ ಚಾಲುಕ್ಯರು, ಮತ್ತು ಎಲ್ಲೋರದ ರಾಷ್ಟ್ರಕೂಟರು ಪರಸ್ಪರ ಬದ್ಧವೈರಿಗಳಲ್ಲವೇ? ಹಾಗಾದರೆ ಈ ಮೂವರ ನಡುವಿನ ತಂತು ಏನು? ಮುಂದೆ ಓದಿ »


RSS: