ಮಾನವರು ಯುಧ್ಧಕ್ಕೆ ಅಂತ್ಯವನ್ನು ತರಬೇಕು, ಇಲ್ಲದಿದ್ದರೆ ಯುಧ್ಧ ಎಲ್ಲರಿಗೂ ಅಂತ್ಯವನ್ನು ತರುತ್ತದೆ.

— ಜಾನ್ ಕೆನಡಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ರಾಜಕೀಯ

ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ?

ಪ್ರಿಯ ಮಿತ್ರರೇ,

 

ನೀವು ಕರ್ನಾಟಕದ (ದೇಶದ್ದು ಮತ್ತೆ ನೋಡೋಣ) ರಾಜಕೀಯ ಸ್ಥಿತಿಯನ್ನು ನೋಡಿ ಮರುಗಿದ್ದೀರಾ? ಅಸಹನೆಯಿಂದ ಶಪಿಸಿದ್ದೀರಾ? ಅಸಹಾಯಕತೆಯಿಂದ ಸಿಟ್ಟಿಗೆದ್ದಿದ್ದಿರೆ? ಏನಾದರೂ ಮಾಡಬೇಕು ಅನಿಸುತ್ತಿದೆಯೇ? ನಿಮ್ಮ ಉತ್ತರ "ಹೌದು" ಎಂದಾದರೆ...ನಾವ್ಯಾಕೆ ಹೊಸ ಪರ್ಯಾಯ ಶಕ್ತಿಯನ್ನು ರೂಪಿಸಬಾರದು? ಯಾವುದೇ ಜಾತಿ- "ism" ಗಳನ್ನೂ ನೋಡದ, ಬರಿಯ ಅಭಿವೃದ್ಧಿ-ಸಮಾನ ಜೀವನವನ್ನು ನೀಡುವ (ಕಮ್ಯುನಿಸಂ ಅಲ್ಲ ನೆನಪಿರಲಿ) ಯುವ ಪಕ್ಷವೊಂದು ಉದಯಿಸಬಾರದೇಕೆ? ರಾಜಕೀಯದಲ್ಲಿ ಕೆಟ್ಟ ಶಕ್ತಿಗಳೇ ಇರುವುದು ಎಂದು ಶಪಿಸುತ್ತ, ಅವರನ್ನೇ ಆಟವಾಡಲು ಬಿಡುವ ಬದಲು ಒಳ್ಳೆಯ ಶಕ್ತಿಗಳೇಕೆ ಪ್ರವೇಶಿಸಬಾರದು? ಈ ದಾರಿ ಸುಲಭವಲ್ಲ, ಗೊತ್ತಿದೆ. ಪ್ರಯತ್ನ ಮಾಡದೆ ಮಾತಾಡುವ ಬದಲು, ಪ್ರಯತ್ನಿಸಿ ನೋಡೋಣ ಎಂಬ ಆಶಯ ನನ್ನದು.

 
 ಮುಂದೆ ಓದಿ »

ತ್ರಿ-ವಾರಿಯೂ ಆಚಾರ್ಯ ರೇಣುಕರೂ...

(ನಗೆನಗಾರಿ ಅರಾಜಕೀಯ ಬ್ಯೂರೊ)

ಭಾರತವೆಂಬ ಭವ್ಯ ಇತಿಹಾಸದ ಪುರಾತನ ನಾಗರೀಕತೆಯ ದೇಶದ ಬಗ್ಗೆ ತಿಳಿದಿಲ್ಲದ, ಗೂಗಲಿಸಲು ಅಂತರ್ಜಾಲ ಸಂಪರ್ಕವಿಲ್ಲದ ದೇಶಗಳ ಜನರು ಭಾರತ ಎಂದರೆ ಹಾವು ಕುಣಿಸುವವರ ನಾಡೇ ಎಂದು ಪ್ರಶ್ನಿಸುವ ಮೊದಲೇ ಕಾಮಸೂತ್ರದ ಜನ್ಮಸ್ಥಳವೇ ಎಂದು ಪ್ರಶ್ನಿಸುತ್ತಾರೆ ಎಂದು ಬಿಟ್ಟಿ ವಿದೇಶ ಪ್ರವಾಸ ಮಾಡಿದ  ಸಾಮ್ರಾಟರು ತಮ್ಮನುಭವದಿಂದ ತಿಳಿಸಿದ್ದಾರೆ.  ಮುಂದೆ ಓದಿ »

ಕಂಬನಿ ಮಿಡಿಯುತ್ತಿರುವವರ ಕಾಯಬೇಕಾದ ಕೈಗಳು ಕುರ್ಚಿಯ ಹಿಂದೆ ಬಿದ್ದಿವೆ ನೋಡಿ!

'ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು
ನಗುತಾದ ಭೂ ತಾಯಿ ಮನಸು
ರಾಜಂಗು (ಯಡ್ಡಿ!) ,ರಾಣಿಗೂ (ರೆಡ್ಡಿ!) ಮುರಿದೋದ್ರೆ ಮನಸು
ಅರಮನೆಯಾಗೆನೈತೆ (ಕರುನಾಡು!) ಏನೈತೆ ಸೊಗಸು?'

ಈ ಹಳೆ ಹಾಡನ್ನ, ಹೀಗೆ ಬದಲಿಸಿ ರಾಜನ ಸ್ಥಾನದಲ್ಲಿ ಯಡ್ಡಿ, ರಾಣಿ ಸ್ಥಾನದಲ್ಲಿ ರೆಡ್ಡಿಯನ್ನ ಹಾಕಿ ಹಾಡೋಣವೆಂದರೆ, ಇಬ್ರು ಆ ಜಾಗಕ್ಕೆ ಫಿಟ್ ಆಗ್ತಾರ ಅನ್ನೋದೇ ಡೌಟು!. ರೋಮ್ ಹತ್ತಿ ಉರಿಯುವಾಗ ನೀರೋ ಪೀಟಿಲು ಕುಯ್ಯುತಿದ್ದನಂತೆ, ಹಾಗೆ ಉತ್ತರ ಕರ್ನಾಟಕದಲ್ಲಿ ಪ್ರವಾಹಕ್ಕೆ ಸಿಲುಕಿ ಜನ ಕಂಬನಿ ಮಿಡಿಯುತಿದ್ದರೆ, ಇವರು ಕುರ್ಚಿಯ ಹಿಂದೆ ಬಿದ್ದಿದ್ದಾರೆ.
 ಮುಂದೆ ಓದಿ »

ಕರ್‍ನಾಟಕಕ್ಕೆ ಪ್ರಾಂತೀಯತೆಯ ಅಪಾಯಗಳು

ಇತ್ತೀಚೆಗೆ ನನಗೊಂದು ಮನವರಿಕೆಯಾಗಿದೆ. ಅದಕ್ಕೆ ನನ್ ಗೆಳೆಯನ ಜತೆ ನಡೆದ ಮಾತುಕತೆಯೇ ಕಾರಣ. ನನಗೆ ಕನ್ನಡನೆಲದಲ್ಲಿ ಪ್ರಾಂತೀಯತೆ ಪ್ರಬಲವಾಗಬೇಕೆಂದು ಅನ್ನಿಸುತ್ತಿತ್ತು. ಆದರೆ ಅವನ ಮಾತುಗಳನ್ನು ಕೇಳಿ, ಪ್ರಾಂತೀಯತೆಯ ಅಪಾಯಗಳು ಅರಿವಾದವು.  ಮುಂದೆ ಓದಿ »

ಪ್ರಾಂತೀಯವಾದಕ್ಕೆ ಕೋಮುವಾದ ಬೆರೆತರೆ...

ನಾನ್ ಹಲದಿನಗಳಿಂದ ಈ ಬಗ್ಗೆ ಯೋಚಿಸ್ತಿದ್ದೆ. ನನ್ ಪ್ರಾಂತೀಯತೆಗೆ ಬೆಂಬಲವನ್ನ ಮತ್ತೊಮ್ಮೆ ನೋಡಿಕೊಳ್ತಿದ್ದೀನಿ.  ಮುಂದೆ ಓದಿ »

ಕುಮಾರಸ್ವಾಮಿ ರಾಮನಗರವನ್ನು ಮರೆತರೇ?

ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ (ಇದೀಗ ಮಾಜಿ) ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗಷ್ಟೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಅಯ್ಕಯಾಗಿದ್ದಾರೆ.  ಮುಂದೆ ಓದಿ »

"ರಾಜ" ಕಾರಣದಲ್ಲಿ ಕುಮಾರಸ್ವಾಮಿ

ಚಿತ್ರ ಕೃಪೆ - ಹಿಂದು ಡಾಟ್‌ ಕಾಮ್ ಮತ್ತು ಚುರುಮುರಿ

ದೇವೇಗೌಡರ ರಾಜಕೀಯ ಲೆಕ್ಕಾಚಾರದ ಬಗ್ಗೆ ರಾಜಕೀಯ ವಲಯ ಮಾತನಾಡತ್ತೆ. ಹಾಗಾದ್ರೆ ಈ ಸಲದ ಲೆಕ್ಕಾಚಾರ ಏನು ? ದೇವೇಗೌಡರು ತಮ್ಮ ಮಗನನ್ನೇಕೆ ಮುಂದೆ ಬಿಟ್ಟರು ? ಹಿಂದೆ ರಾಜ್ಯದಲ್ಲಿ ಬಿಜೆಪಿ ಜೊತೆ ಕೈ ಜೋಡಿಸಿದಾಗಲೂ ಇದೇ ನಡೆಯನ್ನು ದೇವೇಗೌಡರು ಅನುಸರಿಸಿದ್ದರು. ಏನೀ ಲೆಕ್ಕಾಚಾರ ಕೊಂಚ ಇತಿಹಾಸದ ಜೊತೆ ಸಮೀಕರಿಸಿ ನೋಡಿ...  ಮುಂದೆ ಓದಿ »

ಮನುಜ ಮತ - ವಿಶ್ವ ಮತ ಪ್ರತಿಪಾದಕನಾಗು!!!

ಈಗ ಅರ್ಧ ಘಂಟೆಗೆ ಮೊದಲು ನನಗೆ ತೀರ ಆತ್ಮೀಯರಾದ ಒಬ್ಬರಿಂದ ಈ ಸಂದೇಶ ಬಂತು:

"ನನಗೆ ಯಾರೂ ನಾಯಕರಿಲ್ಲ,
ಆದರೆ, ನಾ ನಿಂತ ಜನರ ಸಾಲಿನ ಮುಂಚೂಣಿಯಲ್ಲಿ ಆಡ್ವಾನಿಯ ಕಂಡೆ;
ನನಗೆ ಯಾವ ಪಕ್ಷವೂ ಇಲ್ಲ,
ಆದರೆ, ನನಗೆ ಜೈಕಾರ ಹಾಕುವವರ ಕೈಯಲ್ಲಿ ಬಿಜೆಪಿಯ ಧ್ವಜವ ಕಂಡೆ;
ನನಗೆ ಯಾವ ಮತವೂ ಇಲ್ಲ,
ಆದರೆ, ಕನಸಲ್ಲಿ ಶಿವ ಬಂದು ನಿನ್ನ ಧರ್ಮ ಯಾವುದು ಎಂದಾಗ ಹಿಂದೂ ಎಂದೆ;  ಮುಂದೆ ಓದಿ »

ನಕಾರಾತ್ಮಕ ಮತದ ಬಗೆಗೆ ದಿಕ್ಕು ತಪ್ಪಿಸುವ ಪತ್ರಿಕಾ ವರದಿ

ಇಂದಿನ ವಿಜಯ ಕರ್ನಾಟಕದಲ್ಲಿ ನಕಾರಾತ್ಮಕ ಮತಗಳೂ ಗಣನೆಗೆ ಎಂದು ಓದಿ ತುಂಬಾ ಕುಶಿಯಾಯಿತು. ಎಲ್ಲವೂ ನನ್ನ ಅನಿಸಿಕೆಗೆ ಅನುಗುಣವಾಗಿಯೇ ಇದೆ. ರಾಜಕಾರಣಿಗಳಿಗೆ ಸ್ವಲ್ಪವಾದರೂ ಬಿಸಿ ಮುಟ್ಟಿಸಲು ಸಾದ್ಯ ಅಂದುಕೊಂಡೆ. ಓದುತ್ತಾ ಹೋದಂತೆ ಇವರೆಲ್ಲೋ ದಾರಿ ತಪ್ಪಿದ್ದಾರೆ ಅನ್ನುವ ವಿಚಾರ ಸ್ಪಷ್ಟವಾಯಿತು. ಆದರೂ ತಿರುಳೆಷ್ಟು ಅರಿಯಲು ಆಂಗ್ಲ ಪತ್ರಿಕೆ ಬಿಡಿಸಿದೆ.  ಮುಂದೆ ಓದಿ »

ಲಾಲೂ ಯಾರು......!?

ಹೌದು ಲಾಲೂ ಕಂಗಾಲಾಗಿದ್ದಾರೆ...ಮೊದಲಬಾರಿ ನಡುಗುತ್ತಿದ್ದಾರೆ...ರಾಜ್ಯದಲ್ಲಿರುವ ಬಿಹಾರಿಗಳನ್ನು ಬೇರೆ ಬೇರೆ ರೇಲ್ವೆzoneಗಳಲ್ಲಿ
ತುರುಕಿಯೂ ಅವರು ಹೆದರಿದ್ದಾರೆ ಅಂದರೆ ಪ್ರಬಲವಾದ ಆಯುಧವೇ ಎದುರಾಳಿಗಳ ಕಡೆ ಇರಬೇಕು. ಆ ಆಯುಧವೇ ಅಭಿವೃದ್ದಿ ಎಂಬ ಸಂತಸದ ಸಂಗತಿ ನಿಜ ನಿತೀಶ್ ಕುಮಾರ್ ಅಸಾಧ್ಯವಾದದ್ದನ್ನು ಸಾಧಿಸುವತ್ತ ದಾಪುಗಾಲಿಟ್ಟಿದ್ದಾರೆ.... ಮೊದಲ ಸಲ ಮುಖ್ಯ  ಮುಂದೆ ಓದಿ »

Syndicate content