ವಿಜಯ ಕರ್ನಾಟಕ
ಪ್ರತಿಕ್ರಿಯೆ ಮುಗಿಲು ಮುಟ್ಟಿದಾಗ...
April 26, 2008 - 2:00am — hpn
ನಾವಂದುಕೊಂಡದ್ದು ೫೦ ಜನ. ವಾರವೊಂದರಲ್ಲೇ ನೂರಾಯ್ತು. ನಮಗೆಲ್ಲ ಆಶ್ವರ್ಯವಾಗಿತ್ತು. ಬಹಳ ಖುಷಿಯಾಗಿತ್ತು! ಎರಡು ಸೆಶ್ಶನ್ ಇಟ್ಟುಕೊಳ್ಳೋಣ ಅಂತ ಮಾತನಾಡಿಕೊಂಡಿದ್ದೆವು.
ಇವತ್ತು ನೂರಾರು ನೋಂದಣಿಗಳು. ನಮಗೆಲ್ಲ ಒಮ್ಮೆ ಭಯವಾಯ್ತು. ಗ್ನು/ಲಿನಕ್ಸ್ ಬಗ್ಗೆ ಇಷ್ಟೊಂದು ಜನ ಆಸಕ್ತಿ ವಹಿಸುವರೆಂಬುದನ್ನು ಕನಸು ಮನಸ್ಸಿನಲ್ಲೂ ನಾವುಗಳು ಎಣಿಸಿರಲಿಲ್ಲ.
ಇಂದು ಬೆಳಿಗ್ಗೆ ವಿ.ಕ ಹಾಗೂ ಕನ್ನಡಪ್ರಭದಲ್ಲಿ ಕಾರ್ಯಕ್ರಮದ ಕುರಿತು ಬಂದ ಲೇಖನಗಳಿಂದ ಕೆಲವೇ ಘಂಟೆಗಳಲ್ಲಿ ನೋಂದಣಿ ಇಮ್ಮಡಿಯಾಗಿ ೩೦೦ ದಾಟಿ ಹೋಯ್ತು!
ಆದರೆ ಕಾರ್ಯಕ್ರಮ ಇಟ್ಟುಕೊಂಡಿರುವ ಜಾಗದಲ್ಲಿ ಹೆಚ್ಚು ಜನರಿಗೆ ಅನುವು ಮಾಡಿಕೊಡುವುದಕ್ಕೆ ಅನುಮತಿ ನಮಗಿಲ್ಲ. ನಮ್ಮೆಲರ ದುಗುಡ ಹೇಳತೀರದು! ಹೀಗಾಗಿ ನಿಜವಾಗಲೂ installationನಲ್ಲಿ ಭಾಗವಹಿಸುವವರು ಮಾತ್ರ ಬನ್ನಿ ಎಂದು ಎಲ್ಲರಿಗೂ ಕೊನೆ ಘಳಿಗೆಯಲ್ಲಿ ತಿಳಿಸಿದೆವು.
ಈ ಬಗ್ಗೆ ನಮ್ಮೆಲ್ಲರ ಪರಿಸ್ಥಿತಿ ಅರಿತು ಸ್ಪಂದಿಸಿದ ಎಲ್ಲರಿಗೂ ಅನಂತ ವಂದನೆಗಳು.

ಸುದ್ದಿ ಪ್ರಸಾರದಲ್ಲಿ ಎಡವುವ ಪತ್ರಿಕೆ...
June 22, 2007 - 3:53pm — veenadsouzaಸ್ಪರ್ದೆಯ ಭರದಲ್ಲಿ ಇಂದಿನ ಮಾದ್ಯಮಗಳು ಗುಣಮಟ್ಟವನ್ನು ಮರೆತಿವೆ. ಪತ್ರಿಕೆಯಲ್ಲಿ ಸುದ್ದಿ ಪ್ರಸಾರವಾಗಬೇಕಾದರೆ ಜಾಹೀರಾತನ್ನು ನೀಡಬೇಕಾಗುತ್ತದೆ. ಹಣಕ್ಕಾಗಿ ಸುದ್ದಿಗಳನ್ನು ಮಾರುತ್ತಿದ್ದಾರೆ. ಮಾದ್ಯಮಗಳು ವ್ಯವಹಾರಕ್ಕೆ ಮಾರು ಹೋಗಿ ಗಾಸಿಪ್ ಹಾಗೂ ಅನಾವಶ್ಯಕ ಸುದ್ದಿಗಳನ್ನೇ ಹೆಚ್ವು ಪ್ರಚಾರ ಮಾಡುತ್ತಿವೆ. ಮುಂದೆ ಓದಿ »

- veenadsouza ರವರ ಬ್ಲಾಗ್
- Login or register to post comments
- 379 hits
- Email this blog




RSS: