ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸಿನಿಮಾ

ಖಾಲಿಯಾದ ಮನೆಯಲ್ಲಿ ನೆನಪುಗಳ ಮೆರವಣಿಗೆ

ನೆನಪಿನ ಮತ್ತೊಂದು ಕೊಂಡಿ ಕಳಚಿತು.

ನಿರೀಕ್ಷಿತವಾಗಿದ್ದರೂ, ಕೆ.ಎಸ್‌. ಅಶ್ವತ್ಥ ಅವರ ಸಾವು ವಿಚಿತ್ರ ವ್ಯಾಕುಲತೆ ಉಂಟು ಮಾಡುತ್ತಿದೆ. ಅವರನ್ನು ನಾಯಕರನ್ನಾಗಿ ಆರಾಧಿಸದಿದ್ದರೂ, ಅದರಾಚೆಯ ಜೀವಂತ ವ್ಯಕ್ತಿಯನ್ನಾಗಿ ನಾವೆಲ್ಲ ನೋಡಿದ್ದೆವು. ಪಾತ್ರಗಳಿಗೆ ಜೀವ ತುಂಬುತ್ತಿದ್ದ ಅವರ ಪ್ರತಿಭೆಗೆ ಮಾರು ಹೋಗಿದ್ದೆವು. ಅವರು ಮುಖ್ಯ ವ್ಯಕ್ತಿಯಾಗಿ ಚರ್ಚೆಯಾಗುತ್ತಿರಲಿಲ್ಲ. ತುಂಬಿದ ಮನೆಯಲ್ಲಿ ತನ್ನ ಪಾಡಿಗೆ ತಾನು ಒಂದೆಡೆ ಕೂತ ಹಿರಿಯನಂತೆ, ನೆನಪಿನ ಅವಿಭಾಜ್ಯ ಅಂಗವಾಗಿದ್ದರು. ಈಗ ಆ ಸ್ಥಳ ಖಾಲಿ ಖಾಲಿ. ಒಂದು ಬನಿಯನ್‌, ಒಂದು ಲುಂಗಿ ಹಾಕಿಕೊಂಡ ನಮ್ರ ಮುಖದ, ವಿನಂತಿಸುವ ಕಂಗಳ ಅಶ್ವತ್ಥ ಈಗಿಲ್ಲ.

ಸುಮ್ಮನೇ ಕೂತು ನೆನಪಿಸಿಕೊಂಡರೂ ವಿವಿಧ ಪಾತ್ರಗಳ ಅಶ್ವತ್ಥ ಮುಖ ಕಣ್ಮುಂದೆ ಬರುತ್ತದೆ. ನಾನು ತುಂಬ ಇಷ್ಟಪಟ್ಟ ಸಿನಿಮಾಗಳಲ್ಲಿ ಕೆ. ಬಾಲಚಂದರ್‌ ನಿರ್ದೇಶನದ ಎರಡು ರೇಖೆಗಳು ಚಿತ್ರವೂ ಒಂದು. ಅದರಲ್ಲಿ ಅಸಹಾಯಕ ಮೇಷ್ಟ್ರ ಪಾತ್ರದಿಂದ, ನಿಷ್ಠುರ-ನಿಷ್ಕರುಣಿ ತಂದೆಯಾಗಿ ಅಶ್ವತ್ಥ ಅಭಿನಯ ಇವತ್ತಿಗೂ ಅಚ್ಚಳಿಯದಂತಿದೆ. ತನ್ನ ಮಗಳಿಗೆ ವಂಚಿಸಿ, ಅವಳ ಮಡಿಲಿಗೊಂದು ಮಗು ಕರುಣಿಸಿ, ಹೇಳದೇ ಕೇಳದೇ ಹೋಗಿ ಇನ್ನೊಂದು ಮದುವೆಯಾದ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳಲು ಯತ್ನಿಸಿದ ಪಾತ್ರವಾಗಿ ಅಶ್ವತ್ಥ ಅಭಿನಯ ಅದ್ಭುತ. ಕುವೆಂಪು ಅವರನ್ನು ಆರಾಧಿಸುವ ಮೇಷ್ಟ್ರು ಪೈಪ್‌ ಸೇದುವ ಕುಲೀನ ವರ್ಗದ ವ್ಯಕ್ತಿಯಾಗಿ ಬದಲಾಗುತ್ತಾರೆ. ವಿನಯದ ಜಾಗದಲ್ಲಿ ನಿಷ್ಠುರತೆ, ನಮ್ರತೆಯ ಸ್ಥಾನದಲ್ಲಿ ಅಂತಸ್ತಿನ ಹಮ್ಮು ಸೇರಿಕೊಳ್ಳುವ ಪರಿಯೇ ಅದ್ಭುತ.  ಮುಂದೆ ಓದಿ »

ಮನದಲ್ಲಿ ಮನೆ ಮಾಡಿದ ಮೇರುಕಲಾವಿದರಿಗೆ ರಂಗನಮನ

ಅಕ್ಟೋಬರ್ ನಾಲ್ಕರ ಭಾನುವಾರದ ಸಂಜೆ ಮನದಲ್ಲಿ ಮರೆಯಲಾಗದ ಸಂಜೆಯಾದದ್ದು ಆಕಸ್ಮಿಕ.

ಬೇರ್ಯಾವುದೋ ಕೆಲಸದ ಕಾರಣದಿಂದಾಗಿ ಕಲಾಕ್ಷೇತ್ರದ ಕಡೆಗೆ ಹೋದಾಗ ಅದು ಮರೆಯಲಾಗದ ಸಂಜೆಯಾಗಬಹುದೆಂಬ ಕಲ್ಪನೆಯೆ ಇರಲಿಲ್ಲ. ಅಲ್ಲಿ ನಾನು ಹೋಗಿದ್ದ ಕೆಲಸ ಮುಗಿಯುತ್ತಲೆ ವಾಡಿಕೆಯಂತೆ ರಂಗ ಗೆಳೆಯರನ್ನು ಭೇಟಿಮಾಡಲು ಸಂಸ ದ ಕಡೆಗೆ ಹೊರಟಾಗ ಅಲ್ಲಿ ಎಲ್ಲಾ ಬ್ಯುಸಿಯಾಗಿದ್ದರು...

ಅಲ್ಲೇ ಹಾದಿಯಲ್ಲಿ ಬೋರ್ಡ್ಮೇಲೆ ಪ್ರಕಾಶ್ ರೈ ಮತ್ತು ಉಮಾಶ್ರಿ ಯವರಿಗೆ ರಂಗ ಗೆಳೆಯರ ರಂಗನಮನ ಓದಿದ ಕೂಡಲೆ ಏನೂ ವಿಶೇಷ ಎಂದನಿಸಲಿಲ್ಲ .


ನಾ ಕಂಡ ನ್ಯೂಯಾರ್ಕ್

ಬಹಳ ದಿನಗಳೇ ಆಗಿ ಹೋಗಿತ್ತು ಚಲನಚಿತ್ರಗಳನ್ನು ಚಿತ್ರ ಮಂದಿರಕ್ಕೆ ಹೋಗಿ ನೋಡದೆ. ನನ್ನ ಬಹುಪಾಲು ಪಿ ಜಿ ಮಿತ್ರರು ಪರಭಾಷೆಯವರಾದ್ದರಿಂದ ಕನ್ನಡದ ಚಿತ್ರಗಳು ಅವರಿಗೆ ಅರ್ಥವಾಗೋಲ್ಲ . ಒಂದು ಸಂತೋಷದ ಸಂಗತಿ ಎಂದರೆ ಅವರು ನನ್ನ ಬಳಿ ಸಾಧ್ಯವಾದಷ್ಟು ಕನ್ನಡ ಪದ ಬಳಸಲು ಪ್ರಯತ್ನಿಸೋದು.  ಮುಂದೆ ಓದಿ »

ರಂಪಾಟ ಯಾರದು ರಮ್ಯಂದಾ !

ರಮ್ಯ ಚಿತ್ರಕೃಪೆ - ಸ್ವೀಟಾಪ್‌.ಬ್ಲಾಗ್‌ಸ್ಪೋಟ್‌ಡಾಟ್‌ಕಾಮ್‌

ಪಾಪ ! ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಒಂದು ವರ್ಷದ ಸಂಭ್ರಮದಲ್ಲಿದ್ರು. ಪ್ರಚಾರಕ್ಕೋಸ್ಕರ ಏನೆಲ್ಲಾ ಕಸರತ್ತು ಮಾಡ್‌ಬಹುದು ಅದೆಲ್ಲಾ ಮಾಡಿದ್ರು. ಆದರೇನು ಮಾಡೋದು ಇವತ್ತಿನ ದಿನಾನೇ ಹಾಗಿತ್ತೋ ಏನೋ ? ಒಂದೆಡೆ ಬಿಜೆಪಿ "ನಿಷ್ಠ" ಯತ್ನಾಳ್ ಹೇಳಿದ್ದು, ಸುದ್ದಿ ಮಾಧ್ಯಮದಲ್ಲಿ ಹೆಡ್‌ಲೈನ್ ಜಾಗ ಕಸಿದುಕೊಂಡಿತು.  ಮುಂದೆ ಓದಿ »

ರಮ್ಯಾ ಹೇಳಿದ್ದರಲ್ಲಿ ತಪ್ಪೇನಿದೆ?

ವಿವಾದದಲ್ಲಿ ರಮ್ಯಾ

ಪತ್ರಕರ್ತರು ಹಾಗೂ ಚಿತ್ರನಟಿ ರಮ್ಯಾ ನಡುವಿನ ಅಹಂ ವಿಷಯ ಹೊಸ ಜಗಳಕ್ಕೆ ಕಾರಣವಾಗಿದೆ.  ಮುಂದೆ ಓದಿ »

ಮುಂಬೈ ಮೇರಿ ಜಾನ್- ಒಳ್ಳೆಯ ಸಿನಿಮ - ಸಿಕ್ಕರ ನೋಡ್ರಿ

ಈ ಸಿನಿಮಾ ಈಗೀಗ ಟೀವಿಯಲ್ಲಿ ಬರುತ್ತ ಇದೆ. ಮೊನ್ನೆ ಕಲರ್ಸ್ ಚಾನೆಲ್ಲಿನಲ್ಲೋ ಮತ್ತೆಲ್ಲೋ ಬರುತ್ತ ಇತ್ತು. ನೋಡಿದೆ. ಮತ್ತೆ ಬಂದೀತು . ಗಮನಕ್ಕೆ ಬಂದರೆ ನೋಡಿ.  ಮುಂದೆ ಓದಿ »

'ಸಾವಿರದ ಶರಣ' ರಾಜ್ ನೆನಪಿಗೆ ನುಡಿ ನಮನ

Courtesy: wikipedia

ಇಪ್ಪತ್ತನೇ ಶತಮಾನದ ಭಾಷೆಯೆಂದೇ ಜನಪ್ರಿಯವಾದ ಸಿನಿಮಾದೊಂದಿಗೆ ಮನುಷ್ಯ ತನ್ನನ್ನು ಯಾವ ರೀತಿಯಲ್ಲಿ ಗುರುತಿಸಿಕೊಂಡಿದ್ದಾನೆಂದರೆ, ತಾನು ಮೊದಲು ನೋಡಿದ ಚಿತ್ರ, ನನ್ನ ಗೆಳೆಯನೊಂದಿಗೆ, ಗೆಳತಿಯೊಂದಿಗೆ, ಪ್ರೇಯಸಿಯೊಂದಿಗೆ, ಮದುವೆಯಾದ ನಂತರ ನೋಡಿದ್ದು, ನನ್ನ ಮಗನೊಂದಿಗೆ ನೋಡಿದ ಮೊದಲ ಚಿತ್ರ ಹೀಗೆ...ಜೀವನದ ಪ್ರತಿಯೊಂದು ಅಮೂಲ್ಯ ಕ್ಷಣವನ್ನೂ ಸಿನಿಮಾದೊಂದಿಗೆ ಬೆಸೆಯುವಷ್ಟು. ಹಾಗಾಗಿ, ಸಿನಿಮಾ ಎಂದಾಕ್ಷಣ ನನ್ನ ಕಣ್ಣ ಮುಂದೆ ಮೊದಲಿಗೆ ಕಾಣಿಸಿಕೊಳ್ಳುವುದು ಡಾ.ರಾಜ್ ಕುಮಾರ್. ಅವರಿಲ್ಲದ ಸಿನಿಮಾ ಪ್ರಪಂಚವನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಇಂದು ರಾಜ್ ಕುಮಾರ್ 80ನೇ ಹುಟ್ಟುಹಬ್ಬ. ಆದರೆ, ಅವರು ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲ, ನಿಜ. ಆದರೆ, ಕನ್ನಡ ಚಿತ್ರ ರಸಿಕರ ಮನದಾಳದಲ್ಲಿ ಸದಾ ಕಾಲ ಜೀವಂತವಾಗಿರುತ್ತಾರೆ. ಕನ್ನಡ ನಾಡು ನುಡಿ ಸಂಸ್ಕೃತಿ ಜೀವಂತವಾಗಿರುವವರೆಗೂ ಚಿರಂಜೀವಿಯಾಗಿರುತ್ತಾರೆ. ಆ ಚಿರಂಜೀವಿ ರಾಜ್ ಕುಮಾರನಿಗೆ ನನ್ನ ಈ ನುಡಿ ನಮನ.  ಮುಂದೆ ಓದಿ »

ಸೆವೆನ್ ಯಿಯೆರ್ಸ್ ಇನ್ ಟಿಬೆಟ್

ನೆನ್ನೆ ರಾತ್ರಿ Seven Years in Tibet ಎಂಬ ನಿನೆಮಾ ನೋಡಿದೆ. 

               ಹಿಮಾಲಯದಲ್ಲಿರುವ "ನಂಗಾ ಪರ್ವತ್" ಎಂಬ ಅತ್ಯಂತ ಕಶ್ಟಕರವಾದ ಪರ್ವತವನ್ನು ಹತ್ತಿಳಿಯಿಳಲು, ೧೯೩೯ ರಲ್ಲಿ ಆಸ್ಟ್ರಿಯಾದಿಂದ ಹೊರಟ ಪರ್ವತಾರೋಹಿಗಳ ತಂಡವನ್ನು ಬೀಳ್ಕೊಡಲು ರೈಲು ನಿಲ್ದಾಣದಲ್ಲಿದಲ್ಲಿ ಹಬ್ಬದ ವಾತಾವರಣವಿರುತ್ತದೆ. "ನಂಗಾ ಪರ್ವತ್" ಅನ್ನು ಹತ್ತಲು ಹೋದ ಬಹಳಶ್ಟು ಜರ್ಮನ್ನರು, ಕಳೆದು/ಸತ್ತು, ಕೆಲವರು ಬದುಕುಳಿದು ಬಂದಿರುತ್ತಾರೆ. ಆದ್ರೆ ಯಾರೂ ತುದಿ ಮುಟ್ಟಿರುವುದಿಲ್ಲ. ಇದರಿಂದ "ನಂಗಾ ಪರ್ವತ್" ಹತ್ತಿಳಿಯಿವುದು ಜರ್ಮನ್ನರಿಗೆ ಪ್ರತಿಶ್ಟೆಯ ವಿಶಯವಾಗಿರುತ್ತದೆ. ಈ ಸಲ ಹೋಗುವ ತಂಡದ ಮೇಲೆ ಸೋಶಲಿಸ್ಟ್ ಪಾರ್ಟಿಗೆ ಎಲ್ಲಿಲ್ಲದ ಭರವಸೆ. ಕಾರಣ, ಓಲಂಪಿಕ್ ಗಳಲ್ಲಿ ಮೆಡಲುಗಳನ್ನು ಗೆದ್ದ "ಹೆಯಿನ್-ರಿಚ್ ಹ್ಯಾರರ್(ಹೆನ್ರಿ)" ಎಂಬ ಪರ್ವತಾರೋಹಿ, ಈ ಸಲ ತಂಡದಲ್ಲಿರುತ್ತಾನೆ. ತಂಡದ ನಾಯಕನ ಹೆಸರು, ಪೀಟರ್.

         ಹೆನ್ರಿ ಸ್ವಭಾವತ ಒರಟ, ತಾನು ಮಾಡಿದ್ದೇ ಸರಿ ಎನ್ನುವವ. ಬಸುರಿ ಹೆಂಡತಿ ಬೇಡವೆಂದರೂ, ಹಿಮಾಲಯಕ್ಕೆ ಹೊರಟಿರುತ್ತಾನೆ.  ಮುಂದೆ ಓದಿ »

ಸ್ಲಂಡಾಗ್ ಬಗ್ಗೆ ನನ್ನ ಅನಿಸಿಕೆ ತಪ್ಪಾಯಿತು..

ಚಿತ್ರ ಕ್ರುಪೆ ಗೂಗಲ್.ನೆಟ್

ಕೆಲವು ದಿನಗಳ ಹಿಂದೆ ಸಂಪದದಲ್ಲಿ slum dog ಬಗ್ಗೆ ಪ್ರಸಾದ್ ವಿಮರ್ಶೆ ಬರೆದಿದ್ದರು http://www.sampada.n...

ಅದಕ್ಕೆ ನಾನೂ ಪ್ರತಿಕ್ರಿಯೆ ಸೇರಿಸಿ ನಮ್ಮ ಭಾರತವನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬುದಕ್ಕೆ ಸಹಮತವನ್ನೂ ವ್ಯಕ್ತಪಡಿಸಿದ್ದೆ...

ಆದರೆ ಆಗ ನಾನು ಈ ಸಿನಿಮಾ ನೋಡಿರಲಿಲ್ಲಾ..  ಮುಂದೆ ಓದಿ »

೩೫/೧೦೦

Syndicate content