ಜ್ಞಾನವಾಹಿನಿ
ಉಳ್ಳವರು ಶಿವಾಲಯವ ಮಾಡುವರು
May 9, 2008 - 2:47am — hamsanandiಇಂದು ಬಸವ ಜಯಂತಿ. ಕರ್ನಾಟಕದ ಧಾರ್ಮಿಕ ಮತ್ತು ಸಾಮಾಜಿಕ ಪರಂಪರೆಯಲ್ಲಿ ಬಲು ಮುಖ್ಯರಾದ ಮೂವರ ಜಯಂತಿಗಳು ಸುಮಾರು ಒಂದೇ ಸಮಯಕ್ಕೆ ಬರುವುದು ( ಬಸವಣ್ಣ, ಶಂಕರಾಚಾರ್ಯ ಮತ್ತು ರಾಮಾನುಜಾಚಾರ್ಯ) ಕಾಕತಾಳೀಯವಾದರೂ, ಗಮನಿಸಬೇಕಾದ ಸಂಗತಿ. ಮುಂದೆ ಓದಿ »

ಆರು ಹುಸಿ ವಿದ್ಯೆಗಳು
May 7, 2008 - 11:52am — hamsanandiಕನ್ನಡಕಂದರು ಆರು ಬಗೆಯ ಹುಸಿವಿದ್ಯೆಗಳ ಬಗ್ಗೆ ಸಂಸ್ಕೃತ ಸುಭಾಷಿತಗುಚ್ಛವೊಂದನ್ನು ಹಾಕಿದ್ದರು. ನನಗೆ ಅರ್ಥವಾದ ಮಟ್ಟಿಗೆ ಕನ್ನಡಿಸಿರುವೆ.
ಇನ್ನೂ ಒಳ್ಳೆಯ ಅನುವಾದವನ್ನು ಕನ್ನಡಕಂದರು ಕೊಡುವ ಸಾಧ್ಯತೆ ಇದೆ
ಅಲ್ಲಿಯವರೆಗೆ ಇದು ಓದಿ!
ಕಲಿತದು ವಿದ್ಯೆ ಮಾಡಲದು ನೆರವು ತನಗೋ ಮೇಣ್ ಪರರಿಗೋ
ಅದಿಲ್ಲದೆ ಬರಿ ಹೊತ್ತಿಗೆಯೊಳಿರಲದರಿಂದೇನು ಭಾರವಿದ್ಯೆಯಿಂ? || 1||
ಹಿರಿಮೆಯಿಂದ ಒಯ್ಯಬೇಕದು ಸಟೆಯಿಂ ದಿಟದೆಡೆಗೆ
ಅಲ್ಲದೆ ದಿಟದಿಂ ಸಟೆಯೆಡೆಗೊಯ್ದರದು ಕೀಳುವಿದ್ಯೆಯು ||2|| ಮುಂದೆ ಓದಿ »

- hamsanandi ರವರ ಬ್ಲಾಗ್
- Login or register to post comments
- 224 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮೂರು ಬಗೆಯ ಜನರು
January 23, 2008 - 6:19am — hamsanandi
ಎಡರುಗಳಿಗೆ ಹೆದರಿ ತೊಡಗರು ಬೀಡಾಡಿಗಳು
ನಡುನಡುವೆ ತಡೆಬರಲು ಬಿಡುವರು ನಾಡಾಡಿಗಳು
ಎಡಬಿಡದೆ ಬರುವೆಡರುತೊಡರುಗಳ ಹೊಡೆತದಲೂ
ಹಿಡಿದುದನು ಕೈ ಬಿಡದೆ ನಡೆಸು**ವವರಗ್ಗಳರು
(ಬೀಡಾಡಿ: ನೀಚ ; ನಾಡಾಡಿ : ಸಾಮಾನ್ಯ ; ಅಗ್ಗಳ : ಶ್ರೇಷ್ಟ)*
ಮೂಲ ಸಂಸ್ಕೃತ ಸುಭಾಷಿತ:
ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈ: ಮುಂದೆ ಓದಿ »

ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ
January 6, 2008 - 7:48am — hamsanandiಇಂದು ಜನವರಿ ಆರು. ಸರಿಯಾಗಿ ನೂರರವತ್ತೊಂದು ವರ್ಷದ ಹಿಂದೆ, ನಾವು ಒಬ್ಬ ರಾಜನನ್ನು ಕಳೆದುಕೊಂಡೆವು. ಅಥವಾ ನಿಜ ಹೇಳಬೇಕೆಂದರೆ, ಅವತ್ತಿನಿಂದ ಆತ ಚಿರಂಜೀವಿಯಾಗಿಹೋದರು. ಈ ರಾಜ ಯಾವ ಯುದ್ಧವನ್ನೂ ಮಾಡಿ ಜಯಿಸಿಲಿಲ್ಲ. ಯಾವ ರಾಜ್ಯಕ್ಕೂ ರಾಜನಾಗಲಿಲ್ಲ. ಎಲ್ಲವನ್ನೂ ’ತ್ಯಾಗ’ ಮಾಡಿದರೂ, ಸಂಗೀತ ಪ್ರಪಂಚಕ್ಕೇ ರಾಜರಾಗಿ ಮೆರೆದರು.
ಹೌದು. ತ್ಯಾಗರಾಜರ ದೇಹಾಂತ್ಯ ಆದದ್ದು ೧೮೪೭ರ ಜನವರಿ ಆರರಂದು. ಆ ದಿನ ಪುಷ್ಯ ಬಹುಳ ಪಂಚಮಿ. ಪುರಂದರ ದಾಸರನ್ನು ಮನಸಲ್ಲೇ ಗುರುವಾಗಿ ನಿಲಿಸಿಕೊಂಡ ತ್ಯಾಗರಾಜರು ದಾಸರ ಆರಾಧನೆಯ ತಿಂಗಳಾದ ಪುಷ್ಯ ಮಾಸದಲ್ಲೇ ದೇಹತ್ಯಾಗ ಮಾಡಿದ್ದು ಕಾಕತಾಳೀಯವಿರಬಹುದು. ಆದರೆ, ಪುರಂದರ ದಾಸರ ರಚನೆಗಳಿಗೂ, ತ್ಯಾಗರಾಜರ ರಚನೆಗಳಲ್ಲೂ ಇರುವ ಹೋಲಿಕೆ ಕಾಕತಾಳೀಯವೇ? ಅಥವಾ, ದಾಸರ ಸಾಹಿತ್ಯ ತ್ಯಾಗರಾಜರ ಮೇಲೆ ಮಾಡಿದ ಪ್ರಭಾವದ ಪರಿಣಾಮವೇ? ಅಥವಾ ಮಹಾತ್ಮರ ಮನಗಳು ಒಂದೇ ತೆರದಲ್ಲಿ ಯೋಚಿಸುವುವೇ?
(ಚಿತ್ರ: http://www.karnatik.com/ ಕೃಪೆ)
ಮುಂದೆ ಓದಿ »


RSS: