ಭಾರತ
ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
April 10, 2008 - 6:18pm — hpnತನ್ನ ಹೆಸರಿಗೆ ತಕ್ಕಂತೆ ಅಮರ ಚಿತ್ರ ಕಥೆ ಇವತ್ತಿಗೂ ಭಾರತದ ಸಂಸ್ಕೃತಿಯ ಮಜಲುಗಳನ್ನು ಹೊತ್ತು ಎಂದಿನ ಕಳೆಯನ್ನು ಉಳಿಸಿಕೊಂಡಿದೆ. ಚಿಕ್ಕವನಿದ್ದಾಗ ನನಗೆ ಈ ಪುಸ್ತಕಗಳನ್ನು ಕೊಳ್ಳಲಾಗುತ್ತಿರಲಿಲ್ಲ. ಅಮ್ಮನ ಕೈಗೆ ಎಟುಕದ ಬೆಲೆ ಇರುತ್ತಿತ್ತು ಈ ಪುಸ್ತಕಗಳಿಗೆ (ಅಪ್ಪ ನನಗೆ ಎಂದಿಗೂ ಪುಸ್ತಕ ಕೊಡಿಸುವ ಗೋಜಿಗೆ ಹೋಗುತ್ತಿರಲಿಲ್ಲ). ಹೀಗಾಗಿ ಇವುಗಳು ಎಟುಕುತ್ತಿದ್ದುದು ಲೈಬ್ರೆರೀಲೆ. ಮಳೆ ಬರುತ್ತಿದ್ದರೂ ದೂರದ ಲೈಬ್ರೆರೀಗೆ ಛತ್ರಿ ಹಿಡಿದು ಅರ್ಧ ನೆಂದು ತೊಪ್ಪೆಯಾಗಿ ಹೋಗುತ್ತಿದ್ದೆ - ಅಷ್ಟೊಂದು ಹುಚ್ಚಿರುತ್ತಿತ್ತು. ಆದರೆ ನನ್ನ ಅಣ್ಣ ಅಕ್ಕನ ಮಕ್ಕಳಿಗೆ ಹೀಗಿಲ್ಲ - ನಾವೆಲ್ಲರೂ ಯಾವುದಾದರೊಂದು ಪುಸ್ತಕ ಕಂಡ ಕೂಡಲೆ ಕೊಂಡು ಮನೆಗೆ ತರುತ್ತಿರುತ್ತೇವೆ. ತಮಾಷೆಯೆಂದರೆ ನನ್ನ ಅಣ್ಣನ ಮಗನಿಗೆ ಈ ಪುಸ್ತಕ ಓದೋದಕ್ಕಿಂತ ನಿಕಲೋಡಿಯನ್ ಚ್ಯಾನಲ್ಲಿನಲ್ಲಿ ಬರೋ "ಹತ್ತೋರಿ", ಪೋಗೋ ಚ್ಯಾನಲ್ಲಿನಲ್ಲಿನ "ನಾಡ್ಡಿ", "ಮಿ. ಬೀನ್" ಮುಂತಾದವೇ ಬಲು ಇಷ್ಟ!
ಟಾಟಾ ಸ್ಕೈ ಹೊತ್ತು ತರುವ ಡಿಜಿಟಲ್ ಸಿಗ್ನಲ್ಲು ಕ್ಲಾರಿಟಿ ಇರುವ ಚೆಂದದ ಚಿತ್ರಗಳನ್ನು ಮೂಡಿಸಿ ಪುಸ್ತಕ ಓದು ಇನ್ನಷ್ಟು ದೂರ ಮಾಡಿಬಿಟ್ಟಿದೆ. ಮುಂದೆ ಓದಿ »

- hpn ರವರ ಬ್ಲಾಗ್
- 38 ಪ್ರತಿಕ್ರಿಯೆಗಳು
- 1196 hits
- Email this blog



ಡಿಸ್ನಿ, UTV ಹಾಗೂ ಭಾರತದ ಮನರಂಜನೆ ಉದ್ಯಮ
February 19, 2008 - 5:49pm — hpnಹೆಚ್ಚಾಗಿ ಭಾರತದಲ್ಲಿ ಹೊರಬರುವ ಸಿನಿಮಾಗಳು ಪ್ರೀತಿ, ಪ್ರೇಮ, ಹೀರೋ ಹೀರೋಯಿನ್ನುಗಳಲ್ಲೇ ಮುಗಿದುಹೋಗುತ್ತವೆ. ಇದೇ ರೀತಿಯ ಹಾಡು ಕುಣಿತ ಇರುವ ಚಿತ್ರಗಳ ಟ್ರೆಂಡೇ ಹೆಚ್ಚಿರುವಾಗ ಇಗೋ ಇಲ್ಲೊಂದು ಪಾಸಿಟಿವ್ ಡೆವಲಪ್ಮೆಂಟು!

ದಿ ಹಿಂದೂ ವರದಿ ಪ್ರಕಾರ ಡಿಸ್ನಿ ಕಂಪೆನಿ ತನ್ನ ಸಬ್ಸಿಡರಿಯ ಮೂಲಕ ಭಾರತದ ಕಂಪೆನಿಯಾದ ಯೂ ಟಿ ವಿಯಲ್ಲಿ ಹಣ ಹೂಡಿಸುತ್ತಿದೆಯಂತೆ!
UTVಯ ನಿರ್ಮಾಣಗಳನ್ನು ಗಮನಿಸಿದರೆ ಬಾಲಿವುಡ್ ಟ್ರೆಂಡಿನ ನಡುವೆ ಅವರು ಧೈರ್ಯದಿಂದ ನಡೆಸಿರುವ ಪ್ರಯೋಗಗಳು ಕಣ್ಣಿಗೆ ಬೀಳುತ್ತವೆ. ಅದರಲ್ಲಿ ಕೆಲವು ಕೋಸ್ಲಾ ಕಾ ಘೋಸ್ಲಾ, ಛತ್ರಿ ಚೋರ್ ಹಾಗೂ ಈಗ ತಾನೆ ಹೊರಬಂದಿರುವ ಜೋಧ ಅಕ್ಬರ್. ಈ ಪಟ್ಟಿಯಲ್ಲಿ ಮೊದಲೆರಡು ಬಹಳ ಸೃಜನಶೀಲ ಚಿತ್ರಗಳಾದರೆ ಕೊನೆಯದು ಹಾಲಿವುಡ್ ಸಿನಿಮಾಗಳೊಂದಿಗೆ ಗುರುತಿಸಿಕೊಳ್ಳುವಷ್ಟು ಚೆಂದವಾದ ತಂತ್ರಜ್ಞಾನವಿರುವಂಥದ್ದು. ಇವರ ಮೊದಲ ಹಲವು ನಿರ್ಮಾಣಗಳಲ್ಲಿ ಒಂದಾದ ಶಾಂತಿ ಬಹಳ ಜನಪ್ರಿಯತೆ ಪಡೆದಿತ್ತು. ಡಿಡಿ ೧ರಲ್ಲೇ ಬರುತ್ತಿದ್ದ ಮಹಾಭಾರತ ಹಾಗೂ ಮಾಯಾಮೃಗದಂತಹ ದಾರಾವಾಹಿಗಳನ್ನು ಕೂತು ನೋಡುವಂತೆ ಮನೆಯ ಎಲ್ಲರೂ ಇದನ್ನು ಎಲ್ಲ ಕೆಲಸ ಬಿಟ್ಟು ಜೊತೆಗೆ ಕೂತು ನೋಡುತ್ತಿದ್ದರು. ಮುಂದೆ ಓದಿ »

- hpn ರವರ ಬ್ಲಾಗ್
- Login or register to post comments
- 274 hits
- Email this blog



ಭಾರತದ [ಪ್ರ]ಗತಿ
January 4, 2008 - 3:39pm — arunasirigereಭಾರತದ [ಪ್ರ]ಗತಿ
ಭಾರತ ಭಾರತ ಭಾರತ ದೇಶ
ಬಡವರಿಂದ ಕೂಡಿದ ಶ್ರೀಮಂತ ದೇಶ
ಇಲ್ಲಿನ ಜನ ಜಗತ್ತಿನ ಶೇಷ
ಬಡತನ ಆಗಬೇಕು ನಿಶೇಷ
ನಮ್ಮ ಬಡತನಕೆ ಕಾರಣ ಇಂಗ್ಲೀಷರು
ಎಂದು ಹೇಳುವರು ಭಾರತೀಯರು
ಜಪಾನ್ ದೇಶವೂ ಕೂಡಿತ್ತು ಬಡತನದಿಂದ
ಈಗ ಅದು ನಲಿಯುತಿದೆ ಅಭಿವೃದ್ಧಿಯಿಂದ
ಇರುಳಲ್ಲಿ ದೊರಕಿದ ಸ್ವಾತಂತ್ರ್ಯ
ಮಾಡಿದೆ ನಮ್ಮನ್ನೆಲ್ಲಾ ಅತಂತ್ರ
ಶ್ರೀಮಂತರಿಗೆ ಹಣದ ಮೋಹ ಮುಂದೆ ಓದಿ »

- arunasirigere ರವರ ಬ್ಲಾಗ್
- Login or register to post comments
- 133 hits
- Email this blog



ಭಾರತ ಎಂದರೆ ಏನು?
September 16, 2007 - 6:33pm — savithruಭಾರತ ಎಂದರೆ ಏನು?
ನಮ್ಮ ದೇಶದ ಅಧಿಕೃತ ಹೆಸರು ಇಂಡಿಯ. ಆದರೆ ನಮ್ಮಲ್ಲಿ ಕೆಲವು ಜನ ಇದನ್ನ ಹಿಂದೂಸ್ತಾನ, ಭಾರತ ಅಂತ ಕರೆಯುತ್ತೇವೆ.
ನನಗೆ ಇಂಡಿಯಾ ಅಂದ ತಕ್ಷಣ ನಮ್ಮ ಬೆಂಗಳೂರಿಂತ ಪಟ್ಟಣಗಳು, ಅಲ್ಲಿನ ಮೋಸ , ಧಗ, ವಂಚನೆಗಳೆಲ್ಲವೂ ಕಣ್ಮುಂದೆ ಬರುತ್ತವೇ. IT. BT, ವಿಜ್ಞಾನ-ತಂತ್ರಜ್ಞಾನ ಕ್ಶೇತ್ರದಲ್ಲಿ ಸಾಧನೆ ಮಾಡಿದನ್ತ ದೇಶ ಕಣ್ಣ ಮುಂದೆ ಬರುತ್ತೆ! ಮುಂದೆ ಓದಿ »

ಜಾಹಿರಾತು ಇದ್ರೇನೆ ಒಳ್ಳೇದು!
August 22, 2007 - 12:55am — hpnಅನ್ಯ ದೇಶಗಳಲ್ಲಿ ಕ್ರಿಕೆಟ್ ಪ್ರಸಾರವಾಗುವಾಗ ಜಾಹಿರಾತು ಕಡಿಮೆ ಎಂಬ ವಿಷಯ ಅದೆಷ್ಟೋ ಸಾರಿ ಕೇಳಿಬರುತ್ತಿರುತ್ತದೆ. ಅದಕ್ಕೆ ಹೋಲಿಸಿ ನೋಡಿದರೆ ಪ್ರತಿ ಓವರಿನ ಮಧ್ಯೆ ಜಾಹಿರಾತು ತೋರಿಸುವುದು ಹುಚ್ಚುತನವೆನಿಸಿಬಿಡಬಹುದು. ಮುಂದೆ ಓದಿ »




RSS: