ಜೀವನ
ಬದುಕು - ಬವಣೆ
April 15, 2008 - 5:19pm — arunasirigereಹುಟ್ಟು ಸಾವುಗಳ ಮಧ್ಯೆ
ಏನೆಲ್ಲಾ ನೋಡುವೆವು
ನೋವು ನಲಿವು, ಅಸಹನೆ
ಅನ್ಯಾಯ, ಅಕ್ರಮ ವಂಚನೆ
ಅದೆಷ್ಟೋ ಸಹಿಸಲಾಗದ ಮುಖಗಳು
ಅವುಗಳೊಂದಿಗಿನ ಪ್ರತಿ ಕ್ಷಣಗಳು
ಕೆಲವೊಮ್ಮೆ ನಾವು ನಗಲಾರದೆ
ಕಳೆದುಬಿಡುತ್ತೇವೆ ವಾರ ತಿಂಗಳುಗಳು
ಬೆಳೆದಂತೆ ಜವಾಬ್ದಾರಿ, ಹೆಚ್ಚುವ ಆತಂಕಗಳು
ಪ್ರತಿದಿನವೂ ಹೊಸತು, ಹೊಸ ಸಂಬಧಗಳು ಮುಂದೆ ಓದಿ »

- arunasirigere ರವರ ಬ್ಲಾಗ್
- Login or register to post comments
- 152 hits
- Email this blog



ಹೀಗೊಂದು ಬೆಳಗು
February 28, 2008 - 10:16pm — kalpanaಪುಟ್ಟ ಮಗ "ಅಮ್ಮಾ ತಲೆನೋವು!" ಎಂದು ಚೀರುತ್ತಾ ಎದ್ದ. ಚೂರು ನೆಗಡಿ ಇದ್ದವನಿಗೆ ಜ್ವರವೂ ತಗಲಿತ್ತು. ಸರಿ, ಔಷಧಿ ಹಾಕಿ ಬಳಿಯಲ್ಲೇ ಮಲಗಿದೆ. ಸ್ವಲ್ಪ ಹೊತ್ತಿಗೆ, ವಾಕರಿಕೆ ಎಂದು ಹೋಗಿ ಬಚ್ಚಲಿನಲ್ಲಿ ಎಲ್ಲವೂ ಕಕ್ಕಿದ. ಅದೆಲ್ಲ ಶುಚಿ ಮಾಡಿ ಮತ್ತೆ ಮಲಗಿಸಿದೆ. ದೊಡ್ಡ ಮಗನಿಗೆ ಶಾಲೆಗೆ ಏನು ಬೇಕೆಂದು ಕೇಳಿ, ಅವನ ಇಷ್ಟದ ನೂಡಲ್ಸ್ ಮಾಡಿದೆ. ಮುಂದೆ ಓದಿ »

ಎಲ್ಲೆಲ್ಲಿ ನೋಡಲೂ...
January 8, 2008 - 12:46am — hpnಬಸವನಗುಡೀಲಿ ಒಮ್ಮೆ ಮೆಣಸಿನಕಾಯಿ ಬಜ್ಜಿ ಜಡಿದು ಜೊತೆಗೆ ಕೊಟ್ಟ ಪೇಪರ್ರು, ಕವರ್ರು ಎಸೆಯೋಕೆ ಬುಟ್ಟಿ ಹುಡುಕುತ್ತಿದ್ದೆವು. "ಕಸದ ಬುಟ್ಟಿ ಎಲ್ಲಿದೆ?" ಎಂದು ಎದುರಿಗಿದ್ದ ಅಂಗಡಿಯವನಿಗೆ ಕೇಳಿದರೆ ಕಿಸಕ್ಕೆಂದು ನಕ್ಕುಬಿಟ್ಟ. "ಏನ್ ಅಮೇರಿಕಾದಿಂದ ಬಂದ್ರಾ? ಅಲ್ಲೇ ಹಾಕಿ ಮೂಲೇಲಿ!".
ರಸ್ತೆ ಬದೀಲಿ, ಖಾಲಿ ಸೈಟುಗಳಲ್ಲಿ ಪಾರ್ಥೇನಿಯಮ್ ಗಿಡ ಬಿಟ್ಟರೆ ರಾರಾಜಿಸೋದು ಪ್ಲಾಸ್ಟಿಕ್ ಕವರ್ರುಗಳೇ. ಮುಂದೊಂದು ಪೀಳಿಗೆಯಲ್ಲಿ ಆರ್ಕಿಯಾಲಜಿ ಎಂದುಕೊಂಡು ಬೆಂಗಳೂರನ್ನು ಅಗೆದರೆ ಅದೆಷ್ಟು ಸವಾಲುಗಳು ಎದುರಾಗಬಹುದೋ! ಅವರುಗಳಿಗೆ ಇಷ್ಟೊಂದು ಕವರ್ರುಗಳು ಸಿಕ್ಕು ಇದರಿಂದ ಏನರ್ಥ ಮಾಡಿಕೊಳ್ಳಬೇಕೆಂದು ತೋಚದ ಪರಮ ಸಮಸ್ಯೆಯಾಗಿಬಿಡಬಹುದು. ಅಥವ ಪ್ಲಾಸ್ಟಿಕ್ ಕವರ್ರು ಎಂಬುದೊಂದಿತ್ತು ಎಂದು ಆ ಪೀಳಿಗೆಯವರಿಗೆ ಗೊತ್ತಾದರೆ ಅವರು ಹಿಗ್ಗಾಮುಗ್ಗಿ ಯಾರನ್ನೂ ಬಿಡದೇ ಈ ಪೀಳಿಗೆಯ ಎಲ್ಲರನ್ನೂ ಬೈದುಕೊಳ್ಳುವಂತಾಗಬಹುದು.
ಹಿಂದಿದ್ದ ಅಪಾರ್ಟ್ಮೆಂಟಿನ ಸೆಕ್ಯೂರಿಟಿ "ಕಳ್ ನನ್ ಮಕ್ಳು, ಬಿ ಬಿ ಎಂ ಪಿ ಬಂದು ಇವರ ಕಸಾನ ಹಾಕ್ಕೊಂಡ್ ಓಗ್ದೇ ಇದ್ರೆ ಆಯ್ತು ಸಾಮಿ, ಓದು ಬರಹ ಬಂದ್ರೂ ಉಪ್ಯೋಗಿಲ್ಲಾ ಇಲ್ಲೇ ವಟ್ಕತಾರೆ" ಎಂದು 'ಓದು ಬರಹ ಬಲ್ಲ' ಎಲ್ಲರನ್ನೂ ಸೇರಿಸಿ ಬಯ್ಯುತ್ತಿದ್ದುದು ನೆನಪಾಗುತ್ತದೆ. ಮುಂದೆ ಓದಿ »

ಜೀವನವ್ಯಾಪಾರ - ನಾವು ಏಕೆ ಓದುತ್ತಿರಬೇಕು?
October 1, 2007 - 2:23pm — shreekant.mishrikotiವ್ಯಾಪಾರಿ ಇವತ್ತು ಆದ ವ್ಯಾಪಾರ - ಟರ್ನ್ ಓವರ್ ಎಷ್ಟೆಂದು ನೋಡುತ್ತಾನೆಯೇ ಹೊರತು ಲಾಭ-ಹಾನಿ ಲೆಕ್ಕಾಚಾರ ಮಾಡುವದಿಲ್ಲ ; ಇವತ್ತು ಬಂದ ಹಣವನ್ನು ಎನಿಸಿ ಅದೆಲ್ಲ ಲಾಭವೇ ಎಂಬಂತೆ ಸಂತೋಷಪಡುತ್ತಾನಂತೆ .
ಹೀಗೆ ಬಾಳನ್ನು ನೋಡುವ ದೃಷ್ಟಿ ಎರಡಿವೆ . ಒಂದು - ವಿಕ್ರಯದ ಮೊತ್ತ ನೋಡಿ ಸಂತಸಪಡುವ ದೃಷ್ಟಿ . ಆತ ಲಾಭವನ್ನು ಗಣಿಸುವದಿಲ್ಲ . ಅಂಗಡಿಯಲ್ಲಿ ಹಗಲೆಲ್ಲ ಗಿರಾಕಿ ತುಂಬಿರಬೇಕು , ವ್ಯಾಪಾರವಾಗಬೇಕು .
ಲೋಕದ ತತ್ವಜ್ನಾನಿಗಳು ಅಕೌಂಟಂಟರಂತೆ . ಎಲ್ಲವನ್ನು ಸಂಶಯದಿಂದ ನೋಡಿ , ವ್ಯವಹಾರಕ್ಕೆಲ್ಲ ಆಧಾರ ಕೇಳಿ ವ್ಯಾಪಾರದಲ್ಲಿ ಲಾಭವಿಲ್ಲೆಂದು ನಿರ್ವಿಕಾರವಾಗಿ ಹೇಳುವರು . ನಿಮ್ಮ ಆನಂದಕ್ಕೆ ಪ್ರಮಾಣ ಬೇಡುವರು . ಸವಕಳಿ ತೆಗೆಯುವರು , ದೋಷಗಳನ್ನು ಎತ್ತಿ ತೋರಿಸುವರು. ಮುಂದೆ ಓದಿ »

ಮನುಷ್ಯ ದೇವರ ಸೃಷ್ಟಿ ಅಲ್ಲ
March 29, 2006 - 2:01pm — shreekant.mishrikotiಜೇನ್ ಪಾಲ್ ಸಾರ್ತ್ರ್ ಫ್ರಾನ್ಸಿನಲ್ಲಿ ಹುಟ್ಟಿದ್ದು . ಅವನೊಬ್ಬ ತತ್ವಜ್ಞಾನಿ , ವಿಚಾರವಾದಿ , ಕಾದಂಬರಿಕಾರ , ನಾಟಕಕಾರ , ಸಾಹಿತ್ಯ ವಿಮರ್ಶಕ, ಜೀವನ ಚರಿತ್ರಕಾರ , ಪ್ರಬಂಧಕಾರ , ಪತ್ರಕರ್ತ , ಮಾರ್ಕ್ಸವಾದಿ , ಪ್ರಮುಖ ರಾಜಕಾರಣಿ , ಮತ್ತು ಫ್ರೆಂಚ್ ಅಸ್ತಿತ್ವವಾದದ ಜನಕ.
ಅವನು ಪ್ರತಿಪಾದಿಸಿದ ಅಸ್ತಿತ್ವವಾದದ ತಿರುಳು ಹೀಗಿದೆ- ಮುಂದೆ ಓದಿ »


RSS: