ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ

July 15, 2008 - 2:20pm — Chamaraj
ಕಳೆದ ೩೦ ವರ್ಷಗಳಿಂದ ರಸ್ತೆ ಬದಿಯ್ಲಲಿಯೇ ಜೀವನ ಸಾಗಿಸಿರುವ ಧಾರವಾಡದ ಬಸಪ್ಪ ಮುಳಗುಂದ.

ಈತನ ಹೆಸರು ಬಸಪ್ಪ ಫಕೀರಪ್ಪ ಮುಳಗುಂದ. ವಯಸ್ಸು ೭೫ ವರ್ಷ.

ಧಾರವಾಡದ ವಿರಕ್ತಮಠ ಓಣಿಯ ಮೂವತ್ತಡಿಯ ಪುಟ್ಟ ರಸ್ತೆಯ ಒಂದು ಪಕ್ಕದಲ್ಲಿ ಕಳೆದ ಮೂವತ್ತೆರಡು ವರ್ಷಗಳಿಂದ ಈತ ಠಿಕಾಣಿ ಹೂಡ್ಡಿದ್ದಾನೆ. ಯಾರನ್ನೂ ಏನೂ ಕೇಳುವುದಿಲ್ಲ. ಯಾರಾದರೂ ಹಣ ಅಥವಾ ಆಹಾರ ಕೊಡಲು ಬಂದರೆ ಸ್ವೀಕರಿಸುವುದಿಲ್ಲ. ರಸ್ತೆ ಪಕ್ಕ, ಚರಂಡಿ ಮೇಲೆ ದಿನಕ್ಕೆ ಎರಡು ಹೊತ್ತು ಅಡುಗೆ ಮಾಡುತ್ತಾನೆ. ಉಳಿದಂತೆ ಅವರಿವರಿಗೆ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಾನೆ. ರಾತ್ರಿಯಾಗುತ್ತಲೇ ಅಲ್ಲೇ ರಸ್ತೆ ಪಕ್ಕ ಮಲಗಿ ಬಿಡುತ್ತಾನೆ.

ಕಳೆದ ಮೂವತ್ತೆರಡು ವರ್ಷಗಳಿಂದ ಒಂದು ದಿನವೂ ವ್ಯತ್ಯಾಸವಾಗದಂತೆ ಈತ ಇಂತಹ ಬದುಕನ್ನು ನಡೆಸುತ್ತ ಬಂದಿದ್ದಾನೆ. ಒಂದು ವೇಳೆ ಈತ ಯಾರಿಂದಾದರೂ ಏನನ್ನಾದರೂ ಕೇಳ್ದಿದರೆ ಅದು ‘ವೇಳೆ ಎಷ್ಟು?’ ಎಂದು ಮಾತ್ರ.

ಏಕೆಂದರೆ ಈತ ಅಡುಗೆ ಮಾಡುವುದೇ ಎರಡು ಹೊತ್ತು. ಬೆಳಿಗ್ಗೆ ೧೦ಕ್ಕೆ ಹಾಗೂ ಸಂಜೆ ೫ಕ್ಕೆ. ಅದಕ್ಕಾಗಿ ಮಾತ್ರ ಸಮಯ ವಿಚಾರಿಸುವುದು. ಅದು ಬಿಟ್ಟರೆ ಆತನಿಗೆ ಈ ಜಗತ್ತಿನಿಂದ ಆಗಬೇಕಾಗಿರುವುದು ಏನೂ ಇಲ್ಲ.

ಸಿನಿಮಾ ಚಟ

ಬಸಪ್ಪ ಮುಳಗುಂದ ಮೊದಲು ಹೀಗಿದ್ದಿಲ್ಲ. ಅಂದರೆ ರಸ್ತೆ ಬದಿ ವಾಸವಾಗಲು ಬರುವುದಕ್ಕೆ ಮುಂಚೆ ಮಂಗಳವಾರಪೇಟೆಯ್ಲಲಿ, ವಕೀಲರೊಬ್ಬರ ಮನೆಯ ಪಕ್ಕ ಸ್ವಂತ ಮನೆ ಹೊಂದಿದ್ದ. ಮದುವೆಯಾಗಿದ್ದಿಲ್ಲ. ಪರಿಚಯದವರ ಬಟ್ಟೆ ಬರೆಗಳನ್ನು ಒಂದಾಣೆಗೆ ಎರಡರಂತೆ ಒಗೆದು, ಇಸ್ತ್ರೀ ಮಾಡುವ ಕೆಲಸ ಮಾಡುತ್ತಿದ್ದ. ಬಂದ ಹಣದಲ್ಲಿ ಊಟದ ಖರ್ಚು ತೆಗೆದರೆ ಮಿಕ್ಕಿದ್ದೆಲ್ಲ ಸಿನಿಮಾ ನೋಡಲು ಖರ್ಚಾಗುತ್ತಿತ್ತು.

ಕ್ರಮೇಣ ಸಿನಿಮಾ ವೀಕ್ಷಣೆ ಹುಚ್ಚಿನ ರೂಪಕ್ಕೆ ತಿರುಗಿತು. ಊಟದ ಪರಿವೆಯೂ ಇಲ್ಲದೇ ಸಿನಿಮಾ ನೋಡುವುದು ರೂಢಿಯಾಯಿತು. ಒಂಟಿಯಾಗ್ಗಿದ್ದ ಬಸಪ್ಪ ಸಿನಿಮಾ ವೀಕ್ಷಣೆಯಲ್ಲಿ ಮುಳುಗಿಹೋದ. ಇತ್ತ ಆತನ ಏಕೈಕ ಆಸ್ತಿಯಾಗಿದ್ದ ಮನೆ ಪಕ್ಕದಲ್ಲೇ ಇದ್ದ ವಕೀಲರ ಪಾಲಾಯಿತು.

ಬೀದಿಗೆ ಬಂದ ಬದುಕು

ಬಸಪ್ಪ ಬೀದಿಗೆ ಬಂದಿದ್ದು ಹಾಗೆ. ಮನೆ ಹೋಗಿದ್ದಕ್ಕೆ ಆತನಿಗೆ ವ್ಯಥೆ ಇರಲಿಲ್ಲ. ಆಸ್ತಿಯ ಬಗ್ಗೆ ಮೋಹವೂ ಇರಲಿಲ್ಲ. ಅದ್ಹೇಗೋ ಸಿನಿಮಾ ಚಟ ಬಿಟ್ಟು ಹೋಯಿತು. ಮೊದಲೇ ಮಾತು ಕಡಿಮೆ ಇದ್ದ ಬಸಪ್ಪ ಈಗ ಪೂರ್ತಿ ಮೌನಿಯಾದ. ತನ್ನ ಪಾಡಿಗೆ ತಾನು ರಸ್ತೆ ಬದಿ ಅಡುಗೆ ಮಾಡಿಕೊಂಡು, ಅಲ್ಲೇ ಬದುಕು ಪ್ರಾರಂಭಿಸಿದ. ಅವತ್ತಿನಿಂದ ವಿರಕ್ತಮಠದ ಪುಟ್ಟ ರಸ್ತೆ ಬದಿಯೇ ಆತನಿಗೆ ಮನೆಯಾಗಿದೆ.

ಬೆಳಿಗ್ಗೆ ಊಟವಾದ ನಂತರ ಸುತ್ತಲಿನ ಮನೆಗಳಿಗೆ ಹೋಗಿ ಕರೆಂಟ್-ನೀರಿನ ಬಿಲ್ ಕಟ್ಟುವುದು, ನೀರು ತುಂಬಿಕೊಡುವುದು ಮುಂತಾದ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಾನೆ. ಪರಿಚಯದವರ ಹಿಟ್ಟಿನ ಗಿರಣಿಗೆ ಹೋಗಿ, ಕೆಳಗೆ ಬಿದ್ದ ಹಿಟ್ಟನ್ನು ತಂದು ತನ್ನ ಅಡುಗೆ ಮಾಡಿಕೊಳ್ಳುತ್ತಾನೆ. ಅದು ಬಿಟ್ಟರೆ ತನ್ನ ಸೇವೆಗೆ ಆತ ಯಾರಿಂದಲೂ ಒಂದು ಪೈಸೆಯನ್ನೂ ಪಡೆಯುವುದಿಲ್ಲ. ಹಬ್ಬ ಇರಲಿ, ದುರ್ದಿನಗಳು ಬರಲಿ, ತನ್ನ ಮುದ್ದೆಯಂತಹ ಹಿಟ್ಟಿನ ರೊಟ್ಟಿ ಬಿಟ್ಟರೆ ಆತ ಬೇರೆ ಏನನ್ನೂ ತಿನ್ನುವುದಿಲ್ಲ.

 ಇದೊಂಥರಾ ಮಾನಸಿಕ ವ್ಯಕಲತೆ. ಆದರೆ, ಬಸಪ್ಪನ ದುರಾದೃಷ್ಟಕ್ಕೆ ಯಾರೂ ಚಿಕಿತ್ಸೆ ಮಾಡಿಸಿಲ್ಲ. ಕಳೆದ ಮೂರು ದಶಕಗಳಲ್ಲಿ ಧಾರವಾಡ ಸಾಕಷ್ಟು ಬದಲಾಗಿದೆ. ಬೇಕಾದಷ್ಟು ಬೆಳೆದಿದೆ. ಇಡೀ ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧಿ ಪಡೆದ ಮಾನಸಿಕ ಆರೋಗ್ಯ ಆಸ್ಪತ್ರೆ ಧಾರವಾಡದಲ್ಲಿದ್ದರೂ ಬಸಪ್ಪನಿಗೆ ಆ ಸೇವೆ ದಕ್ಕಿಲ್ಲ. ಎಲ್ಲರ ನಿರ್ಲಕ್ಷ್ಯಕ್ಕೆ ಒಳಗಾಗಿ, ಹೀಗೇ, ರಸ್ತೆಯ ಮೇಲೆ ಉಳಿದುಕೊಂಡೇ ಆತ ತನ್ನ ಯೌವನ ಕಳೆದುಬಿಟ್ಟ.

ಎಲ್ಲದಕ್ಕೂ ಸರ್ಕಾರವನ್ನು ಬೇಡುವ ದೂರುವ ಜನರ ನಡುವೆ ಏನನ್ನೂ ಕೇಳದ, ಏನಾದರೂ ಕೊಡಲು ಬಂದರೂ ನಿರಾಕರಿಸುವ, ಸುತ್ತಲಿನವರ ನೆಮ್ಮದಿ ಹೆಚ್ಚಿಸುತ್ತಲೇ ರಸ್ತೆ ಬದಿ ತನ್ನ ನೆಮ್ಮದಿ ಕಂಡುಕೊಂಡಿರುವ ಬಸಪ್ಪ ಮುಳಗುಂದ ನಿಜಕ್ಕೂ ವಿಕ್ಷಿಪ್ತ, ಆದರೆ ಅಪರೂಪದ ವ್ಯಕ್ತಿ.

- ಚಾಮರಾಜ ಸವಡಿ

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • Login or register to post comments
  • 233 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 15, 2008 - 4:45pm — harshavardhan v...

ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ

harshavardhan v.sheelavant's picture

ಚಾಮರಾಜ್ ಸರ್,

ಬಸಪ್ಪನಿಗೆ ಈಗ ಎರಡೂ ಕಣ್ಣು ಕಾಣುವುದಿಲ್ಲ. ದೇಹ ಶಕ್ತಿ ತೀರ ಕುಂದಿದೆ. ಬಹುಶ: ಬದುಕುವುದೇ ಆತನಿಗೆ ದುಸ್ತರವಾಗಿದೆ. ಇತ್ತೀಚೆಗೆ ವಿಸ್ಮೃತಿ ಬೇರೆ ಆತನಿಗೆ ಕಾಡುತ್ತಿದೆ. ೮೦ರ ಆಸುಪಾಸಿನ ವಯಸ್ಸು ಆತನದ್ದು. ಮತ್ತೊಮ್ಮೆ ಸಂಪದದಲ್ಲಿ ಬರೆಯುವ ಮೂಲಕ ಹಳೆಯ ಓದು, ಅನುಭವ ಎರಡನ್ನೂ ನನಪಿಸಿದ್ದೀರಿ. ಧಾರವಾಡದ ಬಗ್ಗೆ ನೀವು ಇಟ್ಟುಕೊಂಡಿರುವ ಈ ಪ್ರೀತಿ ಅನುಕರಣೀಯ.

ಧನ್ಯವಾದಗಳು,

ಹರ್ಷವರ್ಧನ ಶೀಲವಂತ,
ಧಾರವಾಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 18, 2008 - 6:35pm — Chamaraj

ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ

Chamaraj's picture

ನಿಜ ಹರ್ಷ. ನಾನು ನೋಡಿದಾಗಲೇ ಆತನಿಗೆ ಸಾಕಷ್ಟು ವಯಸ್ಸಾಗಿತ್ತು. ಸಮಾಜ ಆತನನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಅಸಮಾಧಾನ ಮತ್ತೆ ಕಾಡಿದಾಗ ಸಂಪದದಲ್ಲಿ ಬರೆದೆ.

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 15, 2008 - 8:47pm — smurthygr

ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ

smurthygr's picture

"ಇದೊಂತರಾ ಮಾನಸಿಕ ವಿಕಲತೆ’ - ಅನ್ನುವುದು ನನಗೆ ಸರಿ ಕಾಣುವುದಿಲ್ಲ. ಯಾವುದೇ ಚಿಂತೆ ಇಲ್ಲದೆ ಬೇರೆ ರೀತಿ ಬದುಕುವವರನ್ನು ಮಾನಸಿಕ ವಿಕಲರು, ಹುಚ್ಚರು ಎಂದೆಲ್ಲಾ ಕರೆಯುವುದು ಒಂದು ಅಭ್ಯಾಸ ಅಷ್ಟೆ. ನಮಗಿಂತ ಬೇರೆಯಾಗಿದ್ದಾರೆ ಎನ್ನುವುದೇ ನಮಗೆ ಚಿಂತೆ. ಅವರು ನೆಮ್ಮದಿಯಾಗಿರಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 18, 2008 - 6:32pm — Chamaraj

ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ

Chamaraj's picture

ನಮಗಿಂತ ಬೇರೆಯಾಗಿದ್ದಾರೆ ಎಂಬುದಕ್ಕೆ ಅದು ಒಂದು ಹೆಸರು ಮಾತ್ರವೇ ಹೊರತು, ಆ ಹೆಸರಿನಿಂದ ಅವರನ್ನು ಅವಹೇಳನ ಮಾಡಿಲ್ಲ. ವೈಯಕ್ತಿಕವಾಗಿ ನಾನು ಆ ಶಬ್ದವನ್ನು ಬಳಸಲು ಇಚ್ಧಿಸುವುದೂ ಇಲ್ಲ. ಕರೆಯುವುದೇ ಆದರೆ ಅವರನ್ನು ವಿಶಿಷ್ಠ ಚೇತನರು (ವಿಕಲ ಚೇತನರು ಎಂಬ ಬಳಕೆಯೂ ತಪ್ಪು ಎಂಬುದು ನನ್ನ ಅಭಿಪ್ರಾಯ) ಎಂದು ಕರೆಯಲು ಇಚ್ಛಿಸುತ್ತೇನೆ.

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 17, 2008 - 6:08am — yuvapremi

ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ

yuvapremi's picture

ಈತ ಬಹಳ ವಿಶೇಷ ವ್ಯಕ್ತಿತ್ವವುಳ್ಳ ಮನುಷ್ಯ ಎಂದರೆ ತಪ್ಪಾಗಲಾಗದು.
ಬಹುಶಃ ಇವರಿಗೆ ವಿದ್ಯೆ ಅನ್ನುವುದು ಇದ್ದಿದ್ದರೆ, ಇವರು ದೊಡ್ಡ ಹುದ್ದೆಯಲ್ಲಿ ಶಿಸ್ತಿನಿಂದ ಸೇವೆ ಸಲ್ಲಿಸುತ್ತಿದ್ದರು ಎಂಬುದು ಸುಳ್ಳಲ್ಲ. Smiling

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 18, 2008 - 6:23pm — Chamaraj

ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ

Chamaraj's picture

ವಿಶೇಷ ವ್ಯಕ್ತಿತ್ವ ಅನ್ನುವುದಕ್ಕಿಂತ ವಿಕ್ಷಿಪ್ತ ವ್ಯಕ್ತಿತ್ವ ಅನ್ನುವುದು ಸೂಕ್ತವಾಗುತ್ತದೇನೋ. ಇಡೀ ಸಮಾಜ ಸೇರಿಕೊಂಡು ಇಂಥವರನ್ನು ನಿರ್ಲಕ್ಷ್ಯಿಸುತ್ತ ಬರುತ್ತಿದೆ. ಇದು ನಮ್ಮೆಲ್ಲರ ಜವಾಬ್ದಾರಿ.

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 21, 2008 - 2:50pm — Aravind M.S

ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ

Aravind M.S's picture

ಜಪಾನ್ ದೇಶದ ಜನ ನಿಬಿಡ ಮುಖ್ಯ ದ್ವೀಪಗಳನ್ನು ಬಿಟ್ಟು ಇತರೆ ದ್ವೀಪವೊಂದರಲ್ಲಿ ಒಬ್ಬಾತ ಹೀಗೇ ವಾಸ ಮಾಡಿಕೊಂದಿದ್ದಾನೆ. ಅವನ ಕುರಿತ ಒಂದು ಸಾಕ್ಷ್ಯ ಚಿತ್ರದಲ್ಲಿ ಅವನನ್ನು ಸಂದರ್ಶಿಸಿದಾತ (ಒಂದೆರಡು ದಿನ ಆತನೊಡನೆ ಜೀವಿಸಿದ ನಂತರ) ಆತನಿಗೆ ವಿದಾಯ ಹೇಳುವ ಸಮಯ ಬಂದಾಗ "ಬರುತ್ತೇನೆ, ನಿಮ್ಮನ್ನು ತಿಳಿದು ಸಂತೋಷವಾಯಿತು, ಹಲವು ಜ್ಞಾನೋದಯವಾಯಿತು" ಎನ್ನುತ್ತಾ ಬಿಕ್ಕಿ ಕಣ್ಣೀರಿಡುತ್ತಾನೆ. ನನ್ನ ಕಣ್ಣುಗಳೂ ಹನಿಗೂಡಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 22, 2008 - 10:04am — Chamaraj

ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ

Chamaraj's picture

ಇಂತಹ ವಿಕ್ಷಿಪ್ತತೆಗೆ ಸಮಾಜ ನೇರ ಹೊಣೆ ಹೊರಬೇಕು. ನಮ್ಮ ಸುತ್ತಮುತ್ತ ಇರುವವರ ಬದುಕನ್ನು ಚೆಂದಗೊಳಿಸುವ ಸಣ್ಣ ಕಾಳಜಿಯೇ ಮನುಷ್ಯನನ್ನು ಸಂಘಜೀವಿಯನ್ನಾಗಿ ಮಾಡಿದ್ದು. ಅದನ್ನು ಮತ್ತೆ ಮತ್ತೆ ಅನುಸರಿಸಬೇಕಿದೆ.

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ!
  • ಕಳೆದ ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ಜೀವನ ಸಾಗಿಸುತ್ತಿರುವ ಧಾರವಾಡದ ಬಸಪ್ಪ ಮುಳಗುಂದ
  • ಕಳೆದ ೩೦ ವರ್ಷಗಳಿಂದ ರಸ್ತೆ ಬದಿಯ್ಲಲಿಯೇ ಜೀವನ ಸಾಗಿಸಿರುವ ಧಾರವಾಡದ ಬಸಪ್ಪ ಮುಳಗುಂದ.
  • ಅಡುಗೆ ಮಾಡುವ ವಿಧಾನ - ಒಂದು ಚುಟುಕ
  • ರಸ್ತೆ ನೀರಿನಿಂದ ಮಸ್ತ್ ಬೆಳೆ
Syndicate content

ಲೇಖಕರು

Chamaraj's picture

ಪೂರ್ಣ ಹೆಸರು
ಚಾಮರಾಜ ಸವಡಿ

ಪರಿಚಯ

ವೃತ್ತಿಯಿಂದ ಪತ್ರಕರ್ತ. ಸದ್ಯ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ನ್ಯೂಸ್‌ ಎಡಿಟರ್‍ ಎಂದು ಕೆಲಸ ಮಾಡುತ್ತಿದ್ದೇನೆ. ಬರವಣಿಗೆ ಇಷ್ಟದ ಕೆಲಸ.
See my blog: http://chamarajsavadi@blogspot.com

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಂಗಾರದ ಅರಮನೆ
  • ಗುರಿಯ ಮೊಸರನ್ನದಲ್ಲೇಕೆ ಪ್ರೇಮದ ಕಲ್ಲು?
  • 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
  • ಸಹಜ ಕೃಷಿ ಹರಿಕಾರ ಮಸನೊಬು ಫುಕುಓಕಾ ಮರಳಿ ಮಣ್ಣಿಗೆ.
  • ಬಸವಣ್ಣನಾಗಬೇಕೆಂದು ಬಯಸಿದ ಯಡಿಯೂರಪ್ಪ ಅಮೆರಿಕದಲ್ಲಿ ಮೂಗಬಸವನಾದದ್ದು!
  • ತಪ್ಪಿ ನಡೆಸ ಸರ್ಕಾರ
  • ನಿಸ್ವಾರ್ಥಿ ಪಾರಂಪರಿಕ ವೈದ್ಯರ ಮುಂದೆ ಸ್ವಾರ್ಥದ ‘ಪೇಟೆಂಟ್’ ಹಾವಳಿ!

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ಎಲ್ಲ ತುಸುಹೊತ್ತು...
    August 22, 2008 - 9:22am
  • uniquesupri
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 9:18am
  • savithasr
    ಉ: ಲಾಲಿ
    August 22, 2008 - 9:16am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:14am
  • uniquesupri
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 9:12am
  • mahesha
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 8:56am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 8:48am
  • savithasr
    ಉ: ಪ್ರಶ್ನೆ 230308.....?
    August 22, 2008 - 8:31am
  • mahesha
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 8:17am
  • mahesha
    ಉ: ಎಲ್ಲ ತುಸುಹೊತ್ತು...
    August 22, 2008 - 8:09am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 31 ಅತಿಥಿಗಳು ಆನ್ಲೈನ್ ಇರುವರು.


ಸನ್ಮಾನ ಮತ್ತು ಪುರಸ್ಕಾರಗಳು ನೀರ್ಗುಳ್ಳೆಯಂತೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator