ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಚತುರ್ಥಿಗೆ ಪರಿಸರಸ್ನೇಹಿ ಗಣಪ

July 17, 2008 - 6:45pm — Chamaraj
ಕಲ್ಲಿನ ಪರಿಸರಸ್ನೇಹಿ ಗಣಪ

ಮತ್ತೊಂದು ಮಾಲಿನ್ಯ ಪರ್ವ ಕಣ್ಣೆದುರು ನಿಂತಿದೆ.

ಗಣೇಶ ಚತುರ್ಥಿಗೆಂದು ಈಗಾಗಲೇ ಲಕ್ಷಾಂತರ ಟನ್ ಅಮೂಲ್ಯ ಜೇಡಿಮಣ್ಣನ್ನು ಬಗೆಯಲಾಗಿದೆ. ಸಾವಿರಾರು ಟನ್ ಅರಳೆಯೊಂದಿಗೆ ಕಲೆತು, ಲಕ್ಷಾಂತರ ಲೀಟರ್‌ಗಳ ವಿಷಕಾರಿ ಬಣ್ಣವನ್ನು ಬಳೆದುಕೊಂಡು ಗಣೇಶ ನಮ್ಮೆಲ್ಲರಿಂದ ಪೂಜಿತನಾಗಿ ಅಮೂಲ್ಯ ಜಲಮೂಲಗಳಾದ ಬಾವಿ, ಕೆರೆ, ಸರೋವರ, ನದಿ ಹಾಗೂ ಸಮುದ್ರ ಸೇರಲು ಸನ್ನದ್ಧನಾಗ್ದಿದಾನೆ.

ಅಲ್ಲಿಂದ ಶುರುವಾಗುತ್ತದೆ ವಿಷ ಚಕ್ರ.

ಸದ್ದಿಲ್ಲದೇ ಜಲಮೂಲದಲ್ಲಿ ಬೆರೆತು, ಅಂತರ್ಜಲ ಸೇರಿಕೊಳ್ಳುವ ವಿಷಕಾರಿ ರಾಸಾಯನಿಕಗಳು ನೂರಾರು ವರ್ಷಗಳ ಕಾಲ ಅಂತರ್ಜಲ ಹಾಗೂ ಮೇಲ್ಮೈ ನೀರನ್ನು ಕಲುಷಿತಗೊಳಿಸುತ್ತ ಸಾಗುತ್ತವೆ. ಗಣೇಶನ ಮೈ ಅಲಂಕರಿಸುವ ಹಲವಾರು ಬಣ್ಣ ಹಾಗೂ ಪದಾರ್ಥಗಳಲ್ಲಿ ಬೆರೆತಿರುವ ವಿಷಕಾರಿ ವಸ್ತುಗಳಾದ ಸೀಸ ಹಾಗೂ ಅಪಾಯಕಾರಿ ಪೆಟ್ರೋಲಿಯಮ್ ಉಪ ಉತ್ಪನ್ನಗಳು ವರ್ಷಗಟ್ಟಲೇ ನೀರಿನ ಮೂಲಕ ನಮ್ಮ ಮೈ ಸೇರುತ್ತವೆ. ವಂಶವಾಹಿಗಳ ಮೇಲೆ ಅಪಾಯಕಾರಿ ಪರಿಣಾಮ ಬೀರುವ ಮೂಲಕ ಭಾವಿ ಪೀಳಿಗೆಯನ್ನು ಮನೋದೈಹಿಕ ಅಂಗವೈಕಲ್ಯಕ್ಕೆ ಈಡು ಮಾಡುತ್ತವೆ.

ಪ್ರತಿ ವರ್ಷ ಈ ಕುರಿತು ಮಾಧ್ಯಮಗಳು ಎಚ್ಚರಿಸುತ್ತವೆ. ನಮ್ಮ ಧಾರ್ಮಿಕ ಶ್ರದ್ಧೆ ಪರಿಸರಸ್ನೇಹಿಯಾಗಲಿ ಎಂಬ ಕೂಗು ಕೇಳುತ್ತದೆ. ಆದರೆ ‘ಗಣಪತಿ ಬಪ್ಪ ಮೋರಯಾ’ ಕೇಕೆಯಡಿ ಅದರ ದನಿ ಕ್ಷೀಣ. ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಲೇ ಸಾಗಿರುವ ವಿಷಕಾರಿ ಚಕ್ರ ಸದ್ದಿಲ್ಲದೇ ನಮ್ಮ ವಾತಾವರಣವನ್ನು ಕಲುಷಿತಗೊಳಿಸುತ್ತಲೇ ಇದೆ. ಗಣೇಶನ ಅಲಂಕಾರಕ್ಕೆ ಬಳಸುವ ಥರ್ಮೋಕೋಲ್ ಹಾಗೂ ಇತರ ವಸ್ತುಗಳು ನೀರನ್ನು ಬಳಕೆಗೆ ಅಯೋಗ್ಯವಾಗಿ ಮಾಡುತ್ತಲೇ ಇವೆ. ಲಕ್ಷಾಂತರ ಟನ್ ಜೇಡಿಮಣ್ಣು ಜಲಮೂಲಗಳಲ್ಲಿ ಸೇರುವ ಮೂಲಕ ಹೂಳಿನ ಪ್ರಮಾಣ ಹೆಚ್ಚುತ್ತಲೇ ಇದೆ.

ಹೂಳನ್ನು ಹೇಗಾದರೂ ತೆಗೆಯಬಹುದು. ಆದರೆ ವಿಷಕಾರಿ ವಸ್ತುಗಳನ್ನು ಅಷ್ಟು ಸುಲಭವಾಗಿ ತೆಗೆಯಲಾಗದು. ಅವು ನೀರೊಳಗೆ ಬೆರೆಯುವುದರಿಂದ ಜಲಚರಿಗಳು ಸಾಯುತ್ತವೆ. ಅವನ್ನು ತಿಂದು ಪಕ್ಷಿಗಳು ಸಾಯುತ್ತವೆ. ಸತ್ತ ಪಕ್ಷಿಗಳ ದೇಹದಲ್ಲಿಯೂ ಈ ವಿಷವಸ್ತುಗಳು ನಾಶವಾಗದೇ ಮತ್ತೆ ಧರೆಗೆ ಮರಳುತ್ತವೆ. ಇದಕ್ಕೆ ಪರಿಹಾರವ್ಲಿಲವೆ?

ಪರಿಸರಸ್ನೇಹಿ ಗಣಪ

ಇಂಥದೊಂದು ಪ್ರಶ್ನೆಯಿಟ್ಟುಕೊಂಡು ಹೊರಟ ಒರಿಸ್ಸಾದ ಶಿಲ್ಪಿಗಳು ಕಳೆದ ಕೆಲ ವರ್ಷಗಳಿಂದ ಕಲ್ಲಿನ ಗಣಪನನ್ನು ತಯಾರಿಸಲು ಪ್ರಾರಂಭಿಸಿದ್ದಾರೆ. ಕೆಂಪು ಅಮೃತ ಶಿಲೆ, ಮರಳುಗಲ್ಲು ಮತ್ತು ಹಸಿರು ಕಲ್ಲುಗಳಲ್ಲಿ ಕೆತ್ತಿದ ಒಂದು ಅಡಿಯಿಂದ ಹಿಡಿದು ನಾಲ್ಕು ಅಡಿಗಳ ಎತ್ತರದ ಗಣೇಶ ವಿಗ್ರಹಗಳು ಈಗ ಜನಾಕರ್ಷಣೆ ಪಡೆದುಕೊಳ್ಳುತ್ತಿವೆ. ಮನೆಯ ಅಲಂಕಾರಕ್ಕೂ ಆಯಿತು, ಪೂಜೆಗೂ ಸಂದಿತು ಎಂದು ಅಲ್ಲಿನ ಜನ ಕಲ್ಲಿನಲ್ಲಿ ಕೆತ್ತಿದ ವಿಗ್ರಹಗಳನ್ನು ಗಣೇಶ ಚತುರ್ಥಿ ಪೂಜೆಗೂ ಬಳಸುತ್ತಿರುವುದು ಈಗ ಹೊಸ ಬೆಳವಣಿಗೆ.

ಇದರಿಂದ ಪ್ರೇರಣೆ ಪಡೆದ ಶಿವಮೊಗ್ಗದ ಬಿ.ಎಚ್. ರಸ್ತೆಯಲ್ಲಿರುವ ‘ದೇಸಿ ಸಂಸ್ಕೃತಿ’ ಅಂಗಡಿಯ ಮಾಲೀಕ ಸರ್ಜಾಶಂಕರ ಹರಳಿಮಠ ಗಣೇಶ ಚತುರ್ಥಿಗೆಂದು ಒರಿಸ್ಸಾದ ಕಲ್ಲಿನ ಗಣೇಶಮೂರ್ತಿಗಳನ್ನು ತರಿಸಿದ್ದಾರೆ. ‘ಮಣ್ಣಿನ ಗಣೇಶನಿಂದ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಬಳಸಿ ಎಸೆಯುವ ಆಧುನಿಕ ಪದ್ಧತಿ ಧಾರ್ಮಿಕ ಆಚರಣೆಗೂ ಹಬ್ಬಿದ್ದು ವಿಷಾದನೀಯ. ಇದನ್ನು ನಿವಾರಿಸುವ ವಿಚಾರ ಮಾಡಿ ಕಲ್ಲಿನ ವಿಗ್ರಹಗಳನ್ನು ಜನಪ್ರಿಯಗೊಳಿಸಲು ಯತ್ನಿಸುತ್ತಿದ್ದೇವೆ’ ಎನ್ನುವ ಸರ್ಜಾಶಂಕರ, ಗಣೇಶ ಅಲ್ಲದೇ ಶಿಲಾಬಾಲಿಕೆಯರು, ಬುದ್ಧ, ಮಹಾವೀರ ಮುಂತಾದವರ ವಿಗ್ರಹಗಳನ್ನು ತರಿಸಿದ್ದಾರೆ.

ಇಂತಹ ವಿಗ್ರಹಗಳ ಪ್ರಯೋಜನಗಳು ಹಲವು. ಇವಕ್ಕೆ ನಿತ್ಯ ಪೂಜೆ ಸಲ್ಲಿಸಬಹುದು. ಬಣ್ಣದ ಹಂಗಿಲ್ಲದಿರುವುದರಿಂದ ಪರಿಸರ ಮಾಲಿನ್ಯವಿಲ್ಲ. ನೀರಿನಲ್ಲಿ ವಿಸರ್ಜಿಸುವ ಅವಶ್ಯಕತೆಯಿಲ್ಲ. ಅಲಂಕಾರಕ್ಕೂ ಬಳಸಬಹುದು. ನಿತ್ಯ ಪೂಜೆಗೂ ಸೂಕ್ತ. ಮರ ಅಥವಾ ಇತರ ವಸ್ತುಗಳಿಂದ ಮಾಡಿರುವ ವಿಗ್ರಹಕ್ಕಿಂತ ಕಡಿಮೆ ಬೆಲೆಯಲ್ಲಿ ದೊರಕುತ್ತವೆ.

ಕುಶಲ ಕಲೆಗಳ ಅಭಿವೃದ್ಧಿ

‘ಪರಿಸರ ಕಾಪಾಡುವ ಜತೆಗೆ ಇವು ನಮ್ಮ ಸಾಂಸ್ಕೃತಿಕ ಕ್ಷೇತ್ರವನ್ನೂ ರಕ್ಷಿಸುತ್ತವೆ. ಬಹುತೇಕ ಕರಕುಶಲಿಗರು ಈಗ ತೀವ್ರ ಬಡತನದಲ್ಲಿದ್ದಾರೆ. ಅವರ ಉತ್ಪನ್ನಗಳಿಗೆ ಬೇಡಿಕೆ ಕಡಿಮೆ ಇರುವುದರಿಂದ ಉತ್ಪಾದನಾ ವೆಚ್ಚ ಅಧಿಕ. ಶ್ರೀಮಂತರು ಮಾತ್ರ ಇಂತಹ ವಸ್ತುಗಳನ್ನು ಕೊಳ್ಳಬಹುದಾದ ವಾತಾವರಣ ಇದೆ. ಒಂದು ವೇಳೆ ಧಾರ್ಮಿಕ ಆಚರಣೆಗೂ ಕರಕುಶಲ ಹಾಗೂ ಪರಿಸರಸ್ನೇಹಿ ಉತ್ಪಾದನೆಗಳು ಬಳಕೆಯಾಗತೊಡಗಿದರೆ ಉತ್ಪಾದನಾ ವೆಚ್ಚ ತಗ್ಗುತ್ತದೆ. ಬಡ ಶಿಲ್ಪಿಗಳು ಹಾಗೂ ಕರಕುಶಲಕರ್ಮಿಗಳ ಉತ್ಪಾದನೆಗಳಿಗೆ ಬೇಡಿಕೆ ಹೆಚ್ಚಿ, ಅವರ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ’ ಎನ್ನುತ್ತಾರೆ ಸರ್ಜಾಶಂಕರ.

ಒಂದಡಿಯಿಂದ ಮೂರಡಿ ಎತ್ತರದವರೆಗಿನ ಕಲ್ಲು ವಿಗ್ರಹಗಳ ಬೆಲೆ ರೂ.೫,೦೦೦ದಿಂದ ರೂ.೮,೦೦೦ವರೆಗೆ ಇದೆ. ಒಂದು ವೇಳೆ ಬೇಡಿಕೆ ಏರಿದರೆ ಬೆಲೆ ಸಹಜವಾಗಿ ಇಳಿಯುತ್ತದೆ. ಕರ್ನಾಟಕದ ಉದ್ದಗಲ ಸಾವಿರಾರು ಉತ್ತಮ ಶಿಲ್ಪಿಗಳ್ದಿದಾರೆ, ಲೋಹಕರ್ಮಿಗಳ್ದಿದಾರೆ. ಬೇಡಿಕೆ ಬಂದರೆ ಅವರೂ ಗಣಪನನ್ನು ನಿರ್ಮಿಸಲು ಸಿದ್ಧ. ಅವರವರ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ, ಆಸಕ್ತಿಗೆ ಅನುಗುಣವಾಗಿ ವಿಗ್ರಹಗಳ ನಿರ್ಮಾಣ ಸಾಧ್ಯ. ಬಳಸಿ ಬೀಸಾಡಿ ಪರಿಸರ ಮಾಲಿನ್ಯ ಉಂಟು ಮಾಡುವುದಕ್ಕಿಂತ ಮರುಬಳಕೆಯಾಗುವ ಸೊಗಸಾದ ವಿಗ್ರಹಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಉತ್ತಮ ಎನ್ನುತ್ತಾರೆ ಹರಳಿಮಠ. ಅಂಥದೊಂದು ಪ್ರಯತ್ನ ಈಗ ಚಿಕ್ಕದಾಗಿ ಪ್ರಾರಂಭವಾಗಿದೆ. ಆದರೆ ಈ ಭಾವನೆ ಎಲ್ಲೆಡೆ ವಿಸ್ತರಿಸಲು ಜನತೆ ಮನಸ್ಸು ಮಾಡಬೇಕಿದೆ.

ಆಸಕ್ತರು ಸರ್ಜಾಶಂಕರ ಹರಳಿಮಠ ಅವರನ್ನು ‘ದೇಸಿ ಸಂಸ್ಕೃತಿ’, ಮೈಲಾರೇಶ್ವರ ದೇವಸ್ಥಾನ ಸಂಕೀರ್ಣ, ಬಿ.ಎಚ್. ರಸ್ತೆ, ಶಿವಮೊಗ್ಗ, ದೂರವಾಣಿ 94487 80144ಗೆ ಸಂಪರ್ಕಿಸಬಹುದು.

- ಚಾಮರಾಜ ಸವಡಿ

  • ಮಾಹಿತಿ ಫಲಕ
~.~
  • Login or register to post comments
  • 138 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 18, 2008 - 7:19pm — muralihr

ಉ: ಚತುರ್ಥಿಗೆ ಪರಿಸರಸ್ನೇಹಿ ಗಣಪ

muralihr's picture

ಪೂಜೆ ಮುಗಿದ ಮೇಲೆ ಮನೆಯಲ್ಲಿ ಗಣಪನನ್ನು ಇಟ್ಟಕೊಳ್ಳುವುದು ಸ೦ಪ್ರದಾಯವಲ್ಲಾ ಅನ್ಸುತ್ತೆ !
ನಮ್ಮ್ ಮನೆಯಲ್ಲಿ ಬಣ್ಣ ಬಳಿಯದೇ ಇರುವ ಸಣ್ಣ ಗಣಪನನ್ನು ತರುತ್ತೇವೆ..
ಈ ವಿಷಯ ಕೇಳಿ ತಿಳಿಸ್ತೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 22, 2008 - 12:56am — hpn

ಉ: ಚತುರ್ಥಿಗೆ ಪರಿಸರಸ್ನೇಹಿ ಗಣಪ

hpn's picture

ಕೆಲವರಲ್ಲಿ ಇದು ಸಂಪ್ರದಾಯವಿರಬಹುದು.

ಕೆಲವರ ಮನೇಲಿ ಮಣ್ಣಿನ ಗಣಪನ ಬದಲು ಬೆಳ್ಳಿ ಗಣಪನನ್ನ ಪೂಜೆ ಮಾಡುವುದು ನೋಡಿರುವೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 22, 2008 - 9:57am — Chamaraj

ಉ: ಚತುರ್ಥಿಗೆ ಪರಿಸರಸ್ನೇಹಿ ಗಣಪ

Chamaraj's picture

ಸಂಪ್ರದಾಯ ನಮ್ಮ ನಮ್ಮ ಅನುಕೂಲಕ್ಕೆ ತಕ್ಕಂತೆ ಹುಟ್ಟಿಕೊಂಡಿದ್ದು ಅಲ್ವಾ ಮುರಳಿ? ಈಗ ಪರಿಸರ ವಿರೋಧಿ ಸಂಪ್ರದಾಯವನ್ನು ಬದಲಾಯಿಸಿಕೊಂಡರೆ ಉತ್ತಮ ಅನಿಸುತ್ತದೆ.

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚತುರ್ಥಿಗೆ ಪರಿಸರಸ್ನೇಹಿ ಗಣಪ
  • ಕತ್ತಲೆಯಿಂದ ಹೊರ ಬಂದ ಖಾದಿ
  • ಕತ್ತಲೆಯಿಂದ ಹೊರ ಬಂದ ಖಾದಿ!
  • ಧಾರವಾಡದಲ್ಲೀಗ ರಾಗಿ ಫೇಡೆ
  • ಧಾರವಾಡದಲ್ಲೀಗ ರಾಗಿ ಫೇಡೆ
Syndicate content

ಲೇಖಕರು

Chamaraj's picture

ಪೂರ್ಣ ಹೆಸರು
ಚಾಮರಾಜ ಸವಡಿ

ಪರಿಚಯ

ವೃತ್ತಿಯಿಂದ ಪತ್ರಕರ್ತ. ಸದ್ಯ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ನ್ಯೂಸ್‌ ಎಡಿಟರ್‍. ಬರವಣಿಗೆ ಇಷ್ಟದ ಕೆಲಸ.
See my blog: http://chamarajsavadi@blogspot.com

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 10:09am
  • roshan_netla
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 10:09am
  • madhava_hs
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 10:00am
  • kannadakanda
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:54am
  • madhava_hs
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 9:54am
  • kannadakanda
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:51am
  • anil.ramesh
    ಉ: ಮೊದಲ ಚಿತ್ರ
    September 8, 2008 - 9:43am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:28am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:05am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 192 ಅತಿಥಿಗಳು ಆನ್ಲೈನ್ ಇರುವರು.


ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator