ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ನಿಮ್ಮ ಪ್ರೀತಿಯನ್ನು ನಿವೇದಿಸುವ ಮುನ್ನ...

July 22, 2008 - 11:49am — palachandra


Photography by Palachandra, All rights reservedದೈಹಿಕ ಆಕರ್ಷಣೆ ಪ್ರೀತಿಗೆ ಮೊದಲ ಮೆಟ್ಟಿಲು. ಕೆಲವರಿಗೆ ಮೊದಲ ನೋಟದಲ್ಲೇ ಪ್ರೀತಿ ಅಂಕುರವಾದರೆ ಇನ್ನು ಕೆಲವರಿಗೆ ಹಲವು ಭೇಟಿ, ಭಾವನೆಗಳ ಹಂಚಿಕೆಯಿಂದ ಪ್ರೀತಿ ನಿಧಾನವಾಗಿ ಅವರ ಮನವನ್ನು ಆವರಿಸುತ್ತದೆ. ಸಹೋದ್ಯೋಗಿಗಳೋ, ಸಹಪಾಠಿಗಳೋ ಅಥವಾ ಗೆಳೆಯರಾದ ಸಮವಯಸ್ಕರಲ್ಲಿ ಪ್ರೀತಿ ಒಮ್ಮೊಮ್ಮೆ ನಮಗೆ ಅರಿವಿಲ್ಲದಂತೆಯೇ ಅಂಕುರಿಸುತ್ತದೆ. ಅವಳನ್ನು ನೋಡದೆ ಇದ್ದ ದಿನ ಏನೋ ಒಂದು ಬಗೆಯ ಸಂಕಟ, ಅವಳು ನಿಮ್ಮನ್ನು ನೋಡಿ ನಕ್ಕಾಗ ಏನೋ ಒಂದು ಬಗೆಯ ಉಲ್ಲಾಸ!

ಪ್ರತಿಯೊಬ್ಬರ ಜೀವನವೂ ತಾನು ಬೆಳೆದ ಮನೆ, ಪರಿಸರ, ಪಡೆದ ಶಿಕ್ಷಣದ ಪ್ರಭಾವದಿಂದ ತನ್ನದೇ ಆದ ಜೀವನದ ಬಗೆಗಿನ ನೋಟ ಬೆಳೆಸಿಕೊಂಡಿರುತ್ತದೆ. ನಮ್ಮ ಮನ ನಂತರ ಅವಳನ್ನು ಒಲಿಸುವ ಪ್ರಯತ್ನ ಮಾಡುತ್ತದೆ. ಈ ಒಲಿಸುವ ಪ್ರಯತ್ನದಲ್ಲಿ ಒಮ್ಮೊಮ್ಮೆ ನಮ್ಮ ತನವನ್ನು ಹೊರ ನೂಕಿ, ನಮ್ಮ ಕಲ್ಪನೆಯ ಆದರ್ಶ ನಮ್ಮನ್ನು ಸುತ್ತುವರಿಯುತ್ತದೆ. ಈ ಸಮಯದಲ್ಲಿ ನಾವು ನಮ್ಮ ಆದರ್ಶವನ್ನು, ಅವಳ ಆದರ್ಶ ಹಾಗು ಜಗತ್ತಿನ ಆದರ್ಶ ಎಂದು ತಪ್ಪಾಗಿ ತಿಳಿಯುವುದುಂಟು. ಅವಳ ಕುಡಿ ನೋಟ, ಸ್ನೇಹಪೂರ್ವಕ ನಗೆ ನಮ್ಮನ್ನು ಸ್ವಪ್ನ ಲೋಕಕ್ಕೆ ಒಯ್ಯುತ್ತದೆ. ಒಂಟಿಯಾಗಿರುವಾಗ, ಸ್ನೇಹಿತರ ಜೊತೆ ಇರುವಾಗ, ಊಟ ಮಾಡುವಾಗ, ನಿದ್ರೆ ಮಾಡುವಾಗ ಅವಳ ಮಧುರ ನೆನಪು ಕಾಡುತ್ತದೆ.

ಅವಳು ಬೇರೆ ಹುಡುಗರೊಂದಿಗೆ ಮಾತನಾಡಿದರೆ, ಫೋನ್ನಲ್ಲಿ ಗಂಟೆಗಟ್ಟಲೆ ನಗುತ್ತ ಮಾತನಾಡುವಾಗ, ಮಾತಿನ ಮಧ್ಯೆ ಇನ್ನೊಂದು ಹುಡುಗನ ಪ್ರಶಂಸೆ ಮಾಡಿದರೆ, ಆಕೆ ನಮ್ಮ ಕೈ ತಪ್ಪಿ ಹೋಗಬಹುದೇನೋ ಎನ್ನುವ ಏನೋ ಒಂದು ಬಗೆಯ ಸಂಕಟ! ಈ ಭಾವನೆ ನಮ್ಮನ್ನು ಪ್ರೇಮ ನಿವೇದಿಸುವ ಕಾರ್ಯಕ್ಕೆ ಪ್ರಚೋದನೆ ನೀಡುತ್ತದೆ. ಮುಖತಃ ಮಾತನಾಡಲು ಒಂದು ಬಗೆಯ ಅಳುಕು. ಹೀಗಾಗಿ ಕಾವ್ಯಮಯವಾಗಿ ನಮ್ಮ ನಿವೇದನೆಯನ್ನು ಪತ್ರದ ಮೂಲಕ ಪ್ರಕಟಿಸುತ್ತೇವೆ.

ಅವಳು ನೇರವಾಗಿ ತನ್ನ ಭಾವನೆ ಹಂಚಿಕೊಳ್ಳುವವಳಾದರೆ ನಿಮ್ಮ ಅದೃಷ್ಟ, ಇಲ್ಲವಾದಲ್ಲಿ ಇಲ್ಲಿಂದ ಆರಂಭವಾಗುತ್ತದೆ ನಿಮ್ಮ ಮನದ ತುಡಿತ. ಅವಳ ಮುಖ ನೋಡಲು ಯಾವುದೊ ಒಂದು ಬಗೆಯ ಹಿಂಜರಿಕೆ, ನೇರವಾಗಿ ಮಾತನಾಡಲು ಅಳುಕು. ಅವಳ ಮರುಪತ್ರಕ್ಕಾಗಿ ಶಿಕ್ಷೆಯ ನಿರೀಕ್ಷೆ, ನಮ್ಮನ್ನು ಮತ್ತೆ ಮತ್ತೆ ಪ್ರೇಮ ನಿವೇದನೆಗೆ ಪ್ರಚೋದಿಸುತ್ತದೆ. ಈ ಬಗೆಯ ಕಳವಳ ಅವಳ ಮನದಲ್ಲಿ ಏಳಬಹುದಾದ ಭಾವನೆಗಳಿಗೆ ಬೆಲೆ ಕೊಡಲು ಮರೆಯುತ್ತದೆ. ನಿಮ್ಮ ಮತ್ತೆ ಮತ್ತೆ ಮಾಡುವ ಪ್ರೇಮ ನಿವೇದನೆ ಅವಳಿಗೆ ತೊಂದರೆಯಾಗಬಹುದೆಂಬ ಕಲ್ಪನೆ ಅಳಿಯುತ್ತದೆ. ನಿಮ್ಮ ಈ ಬಗೆಯ ವರ್ತನೆ ಅವಳಿಗೆ ಅಸಹನೀಯವಾಗಿ ತೋರಿ ಕೊನೆಗೊಮ್ಮೆ ಋಣಾತ್ಮಕವಾಗಿ ಪ್ರತಿಕ್ರಿಯಿಸಬಹುದು. ಮತ್ತೆ ನಿಮ್ಮೊಂದಿಗೆ ಸ್ನೇಹ ಬೆಳೆಸಲು ಏನೋ ಒಂದು ಬಗೆಯ ಅಳುಕು ಕೂಡ ಅವಳನ್ನು ಕಾಡಬಹುದು.

ನಿಜವಾಗಿಯೂ ನೀವು ಒಬ್ಬರನ್ನು ಪ್ರೀತಿಸುತ್ತ ಇದ್ದರೆ, ಆಕೆಯನ್ನು ಒಲಿಸುವ ಬದಲು ಮೊದಲು ಆಕೆಯ ಒಳ್ಳೆಯ ಸ್ನೇಹಿತರಾಗಿ. ಸ್ನೇಹ ಬಲಿತ ಮೇಲೆ ನಿಮ್ಮ ಪ್ರೇಮವನ್ನು ಮುಖತಃ ನಿವೇದಿಸಿ. ಒಂದು ವೇಳೆ ಆಕೆಗೆ ನಿಮ್ಮಲ್ಲಿ ಅಂತಹ ಭಾವನೆ ಮೂಡಿಲ್ಲವಾದಲ್ಲಿ ನಿಮ್ಮ ಸ್ನೇಹ, ಸಂಬಂಧ ಅಂತೆಯೇ ಮುಂದುವರಿಯುತ್ತದೆ. ಬರಿ ಒಂದು ಪತ್ರವನ್ನು ನಂಬಿ ಆಕೆ ನಿಮ್ಮ ನಿವೇದನೆಯನ್ನು ಸ್ವೀಕರಿಸುತ್ತಾಳೆ ಎಂಬುದು ಬರಿ ಭ್ರಮೆ ಅಷ್ಟೆ! ಜೀವನದುದ್ದಕ್ಕೂ ನಿಮ್ಮೊಂದಿಗೆ ಬಾಳಬೇಕಾದ ಜೀವಕ್ಕೆ ಮೊದಲು ಬೇಕಿರುವುದು ಭರವಸೆ, ಅದು ಪ್ರಕಟವಾಗುವುದು ನಿಮ್ಮ ಕಣ್ಣಿನಲ್ಲಿ ಮಾತಿನ ಮೋಡಿಯಲ್ಲಲ್ಲ!

  • ಪ್ರಬಂಧ
~.~
  • Login or register to post comments
  • 168 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬರೆಯಲೇಗೆ ಪ್ರೇಮ ಪತ್ರ..!!
  • ಕುಂಟನಿ ಎಂಬ ವಿಸ್ಮಯ
  • ಒಂಥರಾ ಪ್ರೀತಿ...
  • ಸಂಕ್ರಾಂತಿಗೊಂದಿಷ್ಟು ಎಳ್ಳು-ಬೆಲ್ಲ...
  • ಸಂಕ್ರಾಂತಿಗೊಂದಿಷ್ಟು ಎಳ್ಳು-ಬೆಲ್ಲ...
Syndicate content

ಲೇಖಕರು

palachandra's picture

ಪೂರ್ಣ ಹೆಸರು
ಪಾಲಚಂದ್ರ

ಪರಿಚಯ

ನಾನು ಕಡಲ ತಡಿಯ ಭಾರ್ಗವ ಶಿವರಾಮ ಕಾರಂತರ ಊರಾದ ಕೋಟದವ. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಹಾಗೂ ನನ್ನ ಹವ್ಯಾಸ ಫೋಟೋಗ್ರಫಿ, ಚಾರಣ, ಅಡುಗೆ ಮಾಡುವುದು ಮತ್ತೆ ಓದುವುದು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಂಗಾರದ ಅರಮನೆ
  • ಗುರಿಯ ಮೊಸರನ್ನದಲ್ಲೇಕೆ ಪ್ರೇಮದ ಕಲ್ಲು?
  • 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
  • ಸಹಜ ಕೃಷಿ ಹರಿಕಾರ ಮಸನೊಬು ಫುಕುಓಕಾ ಮರಳಿ ಮಣ್ಣಿಗೆ.
  • ಬಸವಣ್ಣನಾಗಬೇಕೆಂದು ಬಯಸಿದ ಯಡಿಯೂರಪ್ಪ ಅಮೆರಿಕದಲ್ಲಿ ಮೂಗಬಸವನಾದದ್ದು!
  • ತಪ್ಪಿ ನಡೆಸ ಸರ್ಕಾರ
  • ನಿಸ್ವಾರ್ಥಿ ಪಾರಂಪರಿಕ ವೈದ್ಯರ ಮುಂದೆ ಸ್ವಾರ್ಥದ ‘ಪೇಟೆಂಟ್’ ಹಾವಳಿ!

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಏಕೆ ಕರ್ನಾಟಕದೆಡೆಗೆ ತಾತ್ಸಾರ
    August 22, 2008 - 9:49am
  • uniquesupri
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:40am
  • Sunil Jayaprakash
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 9:33am
  • uniquesupri
    ಉ: ಎಲ್ಲ ತುಸುಹೊತ್ತು...
    August 22, 2008 - 9:22am
  • uniquesupri
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 9:18am
  • savithasr
    ಉ: ಲಾಲಿ
    August 22, 2008 - 9:16am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:14am
  • uniquesupri
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 9:12am
  • mahesha
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 8:56am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 8:48am
ಇನ್ನಷ್ಟು
ಈಗಿನಂತೆ 17 ಸದಸ್ಯರು ಮತ್ತು 39 ಅತಿಥಿಗಳು ಆನ್ಲೈನ್ ಇರುವರು.


ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ

— --- ಟಿ.ಪಿ.ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator