ಸಂಜೆ ನಾಲ್ಕು ಘಂಟೆ ಐವತ್ತೈದು ನಿಮಿಷ. ಮನೆಯ ಕಪ್ಪು ಬಿಳುಪು ಟಿ.ವಿ ಆನ್ ಆಯಿತು. ಅಂದು ನಮಗೆ ಕಲರ್ ಟಿ.ವಿ ಅಂದ್ರೆ ಆಗ್ತಿರಲಿಲ್ಲ ... ಯಾಕೆ ಅಂದ್ರ? ನಮ್ಮ ಮನೆಯಲ್ಲಿ...
ಸಂಪದ ›
ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್?
ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್?
ಹರಿ ಪ್ರಸಾದ್ ನಾಡಿಗ್
ಬೆಂಗಳೂರು
July 22, 2008 - 2:57pm
ರಾಜ್ಯ ಸರಕಾರ ಈ ಸಾಲಿನ ಬಜೆಟ್ಟಿನಲ್ಲಿ ರೈತರಿಗೆ ಉಚಿತ ವಿದ್ಯುತ್ ಘೋಷಿಸಿದೆ. ರೈತರಿಗೆ ಇದು ಸರಕಾರದ ಬಹುದೊಡ್ಡ ಬಳುವಳಿ ಎನ್ನಲಾಗುತ್ತಿದೆ. ಎಷ್ಟು ದೂರದೃಷ್ಟಿಯುಳ್ಳ ಬಳುವಳಿ ಇದು? ನಿಜವಾಗಲೂ ಕಾಳಜಿಯ ಬಳುವಳಿಯೇ? ಎಂದು ಈ ಲೇಖನದಲ್ಲಿ ಪ್ರಶ್ನಿಸುತ್ತಾರೆ ಸುಗ್ಗಿ.
“ಒಲೆಗೆ ಉರುವಲು ಇಲ್ಲ ಎಂದು ಕಲ್ಪವೃಕ್ಷವನ್ನು ಕಡಿವರುಂಟೆ...?”
ಇಂಥದೊಂದು ಉದಾಹರಣೆ ಆ ಆಧುನಿಕ ಸಂದರ್ಭ ಕಾಣಬೇಕು ಎಂದರೆ ಕರ್ನಾಟಕಕ್ಕೆ ಬನ್ನಿ. ಬಜೆಟ್ ನೋಡಿ.
ರೈತರ ಅಧಿನಾಯಕನೆಂದೇ ಕರೆಸಿಕೊಳ್ಳಲು ಖುಷಿ ಪಡುವ, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ರೈತರಿಗೆ ಬಹುದೊಡ್ಡ ಬಳುವಳಿ ನೀಡಿದ ನೆಮ್ಮದಿಯಲ್ಲಿದ್ದಾರೆ. ಆದರೆ, ಅವರ ಈ ಆಶಯ ದೂರದೃಷ್ಟಿಯುಳ್ಳದ್ದೇ ಎಂಬುದು ನಿಜಕ್ಕೂ ವಿಚಾರ ಮಾಡಬೇಕಾದ ವಿಷಯ.
ನಿಜ, ರೈತರು ಕಷ್ಟದಲ್ಲಿದ್ದಾರೆ. ರೈತರಿಗೆ ನೆರವು ನೀಡಲೇಬೇಕು. ಮುಖ್ಯಮಂತ್ರಿಗಳ ಈ ಯೋಜನೆ ರೈತರ ಪರ ನಿಲುವೇನೋ ಸರಿ. ಆದರೆ, ಇದರ ದೂರಗಾಮಿ ಪರಿಣಾಮ ಜೀವ ವಿರೋಧಿಯೂ ಆಗಿರುವುದು ದುರಂತ. ಇಂದಿನ ಬವಣೆಗೆ ನೀಗಿಸಿಕೊಳ್ಳುವ ಭರದಲ್ಲಿ ಭವಿಷ್ಯದ ಬೊಕ್ಕಸಕ್ಕೆ ಬೊಕ್ಕೆ ಹಾಕುವುದು ಸರಿಯೇ? ಮುಖ್ಯಮಂತ್ರಿಗಳ ಈ ಕ್ರಮ ಭವಿಷ್ಯದ ರೈತಾಪಿ ಕುಲಕ್ಕೆ ಕಂಟಕವಾಗುವುದರಲ್ಲಿ ಸಂದೇಹವಿಲ್ಲ.
ಇಷ್ಟೆಲ್ಲಾ ಹೇಳಬೇಕಾಗಿ ಬಂದಿದ್ದು ರೈತರಿಗೆ ಉಚಿತ ವಿದ್ಯುತ್ತು ನೀಡಲು ಸರ್ಕಾರ ಮುಂದೆ ಬಂದಿದ್ದರಿಂದ.
ಈ ಯೋಜನೆ ಕಾರ್ಯಸಾಧುವಲ್ಲ, ಎಂಬುದು ಈಗಾಗಲೇ ಹಲವಾರು ಬಾರಿ, ಹಲವಾರು ರಾಜ್ಯಗಳಲ್ಲಿ –ನಮ್ಮ ರಾಜ್ಯವೂ ಸೇರಿದಂತೆ, ಸಾಬೀತಾಗಿದೆ. ಈ ಯೋಜನೆಯನ್ನು ವಿರೋಧಿಸುತ್ತಿರುವವರೂ, ವಿದ್ಯುತ್ ಸಮಸ್ಯೆ, ಬೊಕ್ಕಸಕ್ಕೆ ಭಾರ ಎಂದೆಲ್ಲಾ ಕಾರಣ ಕೊಡುತ್ತಿದ್ದಾರೆ. ಅದು ನಿಜವೂ ಇರಬಹುದು. ಆದರೆ, ಬಹುಮುಖ್ಯ ಮೂಲ ಕಾರಣವೊಂದು ಹಿನ್ನೆಲೆಯಲ್ಲೇ ಉಳಿದು ಬಿಟ್ಟಿದೆ. ಅದು ಅಂತರ್ಜಲ.
ಲೇಖನದ ಉಳಿದ ಭಾಗ ವಾಟರ್ ಪೋರ್ಟಲ್ಲಿನಲ್ಲಿದೆ. ಓದಲು ಕ್ಲಿಕ್ ಮಾಡಿ ».
("ಕನ್ನಡದಲ್ಲಿ ವಾಟರ್ ಪೋರ್ಟಲ್" ಯೋಜನೆ ಸಂಪದ ಫೌಂಡೇಶನ್ನಿನ ಸಹಯೋಗದಿಂದ ಮೂಡಿ ಬರುತ್ತಿದೆ.)

860 ಹಿಟ್ಸ್
- Login or register to post comments
- 860 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version
ಎಲ್ಲ ಪುಟಗಳು
ನನ್ನ ಬರಹಗಳು
ಇತ್ತೀಚಿನ ಪ್ರತಿಕ್ರಿಯೆಗಳು
ಉ: ಕವಿಕಲ್ಪನೆಯ ಶಿಲ್ಪಗಳ ನೋಡೋಣ ಬನ್ನಿ - ಸಪ್ತಗಿರಿವಾಸಿ
ಉ: ನಮ್ಮೂರ ಪ್ರತಿಭೆಗೆ ಶುಭಾಶಯಗಳು - ಸಪ್ತಗಿರಿವಾಸಿ
ಉ: ಕಣ್ಣ ಅಂಚಿನಲಿ - Ajjappa sarver
ಉ: ಕತೆ ಬರೆಯುವ ತಂತ್ರಾಂಶದ ಕತೆ ಕೇಳಿ - ಸಪ್ತಗಿರಿವಾಸಿ
ಉ: ಕಣ್ಣ ಅಂಚಿನಲಿ - ಸಪ್ತಗಿರಿವಾಸಿ



ಪ್ರತಿಕ್ರಿಯೆಗಳು