ಈಗಿನಂತೆ 2 ಸದಸ್ಯರು ಮತ್ತು 77 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ದೂರದರ್ಶನದ ಆ ದಿನಗಳು ...
bhalle's picture
ಶ್ರೀನಾಥ್ ಭಲ್ಲೆ
08
Feb
2011
ಲೇಖನ

ಸಂಜೆ ನಾಲ್ಕು ಘಂಟೆ ಐವತ್ತೈದು ನಿಮಿಷ. ಮನೆಯ ಕಪ್ಪು ಬಿಳುಪು ಟಿ.ವಿ ಆನ್ ಆಯಿತು. ಅಂದು ನಮಗೆ ಕಲರ್ ಟಿ.ವಿ ಅಂದ್ರೆ ಆಗ್ತಿರಲಿಲ್ಲ ... ಯಾಕೆ ಅಂದ್ರ? ನಮ್ಮ ಮನೆಯಲ್ಲಿ...

ಪ್ರತಿಕ್ರಿಯೆಗಳು: 46
ಹಿಟ್ಸ್ : 1,220
ರಷ್ಯ ಪ್ರವಾಸ ಕಥನ ಭಾಗ ೨: ಯುದ್ಧದ ನೇರಪ್ರಸಾರ, 'ನೇವ' ನದಿಯ ತೇವ!
anilkumar's picture
ಎಚ್.ಎ. ಅನಿಲ್ ಕುಮಾರ್
30
Sep
2006
ಪುಟ
ನೇರ ಪ್ರಸಾರದ ಯುದ್ಧ: ಜಗತ್ತಿನ ಇತಿಹಾಸದಲ್ಲಿ ನೇರ ಪ್ರಸಾರವಾದ ಎರಡನೇ ಯುದ್ಢ 'ಕೊಲ್ಲಿ ಯುದ್ಧ'. ಎಲ್ಲ ಯುದ್ಧಗಳೂ ಕೊಲ್ಲೋ ಯುದ್ಧಗಳೇ. ಇಪ್ಪತ್ತನೇ ಶತಮಾನದ ಆರ೦ಭದಲ್ಲಿ...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,938
ಸಿ.ಇ.ಟಿ ಎಂಬ ಮಾಯಜಿಂಕೆಯ ಬೆನ್ನು ಹತ್ತಿ - ಒಂದು ವರದಿ
partha1059's picture
ಪಾರ್ಥಸಾರಥಿ
10
Sep
2011
ಬ್ಲಾಗ್ ಬರಹ

                        ...

ಪ್ರತಿಕ್ರಿಯೆಗಳು: 26
ಹಿಟ್ಸ್ : 348
ಪ್ರಕ್ಷುಬ್ಧ ಮೋಕ್ಷದ ಕಥಾಲೋಕಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೨
anilkumar's picture
ಎಚ್.ಎ. ಅನಿಲ್ ಕುಮಾರ್
07
Jun
2010
ಪುಟ

(೩೯)

’ಪ್ರಕ್ಷುಬ್ಧ’ ಅಥವ ಪವನ್ ಕುಮಾರ್ ಭಟ್ಟಾಚಾರ್ಯ ನಿಜಕ್ಕೂ ಪ್ರಕ್ಷುಬ್ಧ ವ್ಯಕ್ತಿತ್ವದವ. "ನನಗೆ ಮೋಕ್ಷ...

ಪ್ರತಿಕ್ರಿಯೆಗಳು: 0
ಹಿಟ್ಸ್ : 712
"ಐ-ಸುಧಾ" - ಒಂದು ಐ-ಫೋನ್ ಅಪ್ಲಿಕೇಶನ್
Sunil Jayaprakash's picture
ನನ್ನಿ ಸುನಿಲ
18
Aug
2010
ಪುಟ

ಗೆಳೆಯರೆ,

ಸುಧಾ ಮ್ಯಾಗಝೀನ್ ನಿಮಗೆಲ್ಲ ತಿಳಿದಿರಬಹುದು. ಈ ನನ್ನ ನೆಚ್ಚಿನ ಸುಧಾ ಮ್ಯಾಗಝೀನಿಗೋಸ್ಕರ ಐ-ಸುಧಾ ಎನ್ನುವಂತಹ ಒಂದು ಐ-ಫೋನ್ ಅಪ್ಲಿಕೇಶನ್ ಅನ್ನು ಬರೆದಿದ್ದೇನೆ...

ಪ್ರತಿಕ್ರಿಯೆಗಳು: 21
ಹಿಟ್ಸ್ : 1,578
ನೆನಪಿನ ಮಳೆಯಲ್ಲಿ...ಮರೆಯಲಾಗದ ದಿನದ ನೆನಪು
rashmi_pai's picture
Rashmi Pai
23
Jan
2010
ಬ್ಲಾಗ್ ಬರಹ

ನಾನು ನಿರೀಕ್ಷಿಸಿದ್ದ ದಿನ ಇಷ್ಟು ಬೇಗ ಬಂದು ಬಿಡುತ್ತೆ ಎಂದು ನೆನೆಸಿರಲಿಲ್ಲ. ಕಳೆದ ವರ್ಷದ ಕ್ರಿಸ್್ಮಸ್್ಗೆ ಮುನ್ನ ಊರಿಗೆ ಹೋಗಿದ್ದಾಗ ನಮ್ಮೂರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ...

ಪ್ರತಿಕ್ರಿಯೆಗಳು: 15
ಹಿಟ್ಸ್ : 1,107
ಅನನ್ಯ ಅಲ್ಲಮ ೧೨ (೧)
csomsekraiah's picture
ಸಿ ಸೋಮಶೇಖರಯ್ಯ
21
Nov
2011
ಲೇಖನ

ಮಧುವರಸರು ಮಗಳು ಲಾವಣ್ಯಳೊಡನೆ ಮೋಳಿಗೆ ಮಾರಯ್ಯನವರ ಕುಟೀರದಿಂದ ಹಿಂತಿರುಗಿ ಬಂದು ವಿಶ್ರಾಂತಿ ಪಡೆಯುತ್ತಿದ್ದರು . ಅಂದು ಮಹಮನೆಯ ಎಲ್ಲ ಶರಣರ ಪ್ರಸಾದದ ಹೊಣೆಹೊತ್ತ ಮಾರಯ್ಯನವರು...

ಪ್ರತಿಕ್ರಿಯೆಗಳು: 4
ಹಿಟ್ಸ್ : 122
ಮಾಹಿತಿ ಹಕ್ಕು ದುರ್ಬಲಗೊಳಿಸುವ ಯತ್ನ
addoor's picture
ಅಡ್ಡೂರು ಕೃಷ್ಣ ರಾವ್
17
Oct
2011
ಲೇಖನ

ಮಾಹಿತಿ ಹಕ್ಕಿನ ಬಳಕೆಯಿಂದಾಗಿ ಗುಟ್ಟುಗುಟ್ಟಾಗಿ ನಡೆಯುತ್ತಿದ್ದ ಸರಕಾರದ ವ್ಯವಹಾರಗಳು ಬಹಿರಂಗವಾಗುತ್ತಿವೆ. ಹಗರಣಗಳು ಬೆಳಕಿಗೆ ಬರುತ್ತಿವೆ. ಇದರಿಂದಾಗಿ ಕಂಗೆಟ್ಟಿರುವ ಕೇಂದ್ರ...

ಪ್ರತಿಕ್ರಿಯೆಗಳು: 14
ಹಿಟ್ಸ್ : 698
ಛಂದ ಪುಸ್ತಕ ಆಹ್ವಾನ
ಸುಮ ನಾಡಿಗ್'s picture
ಸುಮ ನಾಡಿಗ್
27
Dec
2011
ಲೇಖನ

ಛಂದ ಪುಸ್ತಕದ ವಸುಧೇಂದ್ರ ಅವರು ಕಳುಹಿಸಿದ ಮೈಲ್ ನಿಂದ:

ಳೆದ ಏಳು ವರುಷಗಳಿಂದ...

ಪ್ರತಿಕ್ರಿಯೆಗಳು: 0
ಹಿಟ್ಸ್ : 132
ಅಪ್ಪನಿಗೊಂದು ಪತ್ರ
rashmi_pai's picture
Rashmi Pai
19
Jun
2011
ಬ್ಲಾಗ್ ಬರಹ
ಪ್ರೀತಿಯ ಪಪ್ಪಾ,...
ಪ್ರತಿಕ್ರಿಯೆಗಳು: 10
ಹಿಟ್ಸ್ : 782

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್?

ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್?

ರಾಜ್ಯ ಸರಕಾರ ಈ ಸಾಲಿನ ಬಜೆಟ್ಟಿನಲ್ಲಿ ರೈತರಿಗೆ ಉಚಿತ ವಿದ್ಯುತ್ ಘೋಷಿಸಿದೆ. ರೈತರಿಗೆ ಇದು ಸರಕಾರದ ಬಹುದೊಡ್ಡ ಬಳುವಳಿ ಎನ್ನಲಾಗುತ್ತಿದೆ. ಎಷ್ಟು ದೂರದೃಷ್ಟಿಯುಳ್ಳ ಬಳುವಳಿ ಇದು? ನಿಜವಾಗಲೂ ಕಾಳಜಿಯ ಬಳುವಳಿಯೇ? ಎಂದು ಈ ಲೇಖನದಲ್ಲಿ ಪ್ರಶ್ನಿಸುತ್ತಾರೆ ಸುಗ್ಗಿ.
“ಒಲೆಗೆ ಉರುವಲು ಇಲ್ಲ ಎಂದು ಕಲ್ಪವೃಕ್ಷವನ್ನು ಕಡಿವರುಂಟೆ...?” ಇಂಥದೊಂದು ಉದಾಹರಣೆ ಆ ಆಧುನಿಕ ಸಂದರ್ಭ ಕಾಣಬೇಕು ಎಂದರೆ ಕರ್ನಾಟಕಕ್ಕೆ ಬನ್ನಿ. ಬಜೆಟ್ ನೋಡಿ. ರೈತರ ಅಧಿನಾಯಕನೆಂದೇ ಕರೆಸಿಕೊಳ್ಳಲು ಖುಷಿ ಪಡುವ, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ರೈತರಿಗೆ ಬಹುದೊಡ್ಡ ಬಳುವಳಿ ನೀಡಿದ ನೆಮ್ಮದಿಯಲ್ಲಿದ್ದಾರೆ. ಆದರೆ, ಅವರ ಈ ಆಶಯ ದೂರದೃಷ್ಟಿಯುಳ್ಳದ್ದೇ ಎಂಬುದು ನಿಜಕ್ಕೂ ವಿಚಾರ ಮಾಡಬೇಕಾದ ವಿಷಯ. ನಿಜ, ರೈತರು ಕಷ್ಟದಲ್ಲಿದ್ದಾರೆ. ರೈತರಿಗೆ ನೆರವು ನೀಡಲೇಬೇಕು. ಮುಖ್ಯಮಂತ್ರಿಗಳ ಈ ಯೋಜನೆ ರೈತರ ಪರ ನಿಲುವೇನೋ ಸರಿ. ಆದರೆ, ಇದರ ದೂರಗಾಮಿ ಪರಿಣಾಮ ಜೀವ ವಿರೋಧಿಯೂ ಆಗಿರುವುದು ದುರಂತ. ಇಂದಿನ ಬವಣೆಗೆ ನೀಗಿಸಿಕೊಳ್ಳುವ ಭರದಲ್ಲಿ ಭವಿಷ್ಯದ ಬೊಕ್ಕಸಕ್ಕೆ ಬೊಕ್ಕೆ ಹಾಕುವುದು ಸರಿಯೇ? ಮುಖ್ಯಮಂತ್ರಿಗಳ ಈ ಕ್ರಮ ಭವಿಷ್ಯದ ರೈತಾಪಿ ಕುಲಕ್ಕೆ ಕಂಟಕವಾಗುವುದರಲ್ಲಿ ಸಂದೇಹವಿಲ್ಲ. ಇಷ್ಟೆಲ್ಲಾ ಹೇಳಬೇಕಾಗಿ ಬಂದಿದ್ದು ರೈತರಿಗೆ ಉಚಿತ ವಿದ್ಯುತ್ತು ನೀಡಲು ಸರ್ಕಾರ ಮುಂದೆ ಬಂದಿದ್ದರಿಂದ. ಈ ಯೋಜನೆ ಕಾರ್ಯಸಾಧುವಲ್ಲ, ಎಂಬುದು ಈಗಾಗಲೇ ಹಲವಾರು ಬಾರಿ, ಹಲವಾರು ರಾಜ್ಯಗಳಲ್ಲಿ –ನಮ್ಮ ರಾಜ್ಯವೂ ಸೇರಿದಂತೆ, ಸಾಬೀತಾಗಿದೆ. ಈ ಯೋಜನೆಯನ್ನು ವಿರೋಧಿಸುತ್ತಿರುವವರೂ, ವಿದ್ಯುತ್ ಸಮಸ್ಯೆ, ಬೊಕ್ಕಸಕ್ಕೆ ಭಾರ ಎಂದೆಲ್ಲಾ ಕಾರಣ ಕೊಡುತ್ತಿದ್ದಾರೆ. ಅದು ನಿಜವೂ ಇರಬಹುದು. ಆದರೆ, ಬಹುಮುಖ್ಯ ಮೂಲ ಕಾರಣವೊಂದು ಹಿನ್ನೆಲೆಯಲ್ಲೇ ಉಳಿದು ಬಿಟ್ಟಿದೆ. ಅದು ಅಂತರ್ಜಲ. ಲೇಖನದ ಉಳಿದ ಭಾಗ ವಾಟರ್ ಪೋರ್ಟಲ್ಲಿನಲ್ಲಿದೆ. ಓದಲು ಕ್ಲಿಕ್ ಮಾಡಿ ». ("ಕನ್ನಡದಲ್ಲಿ ವಾಟರ್ ಪೋರ್ಟಲ್" ಯೋಜನೆ ಸಂಪದ ಫೌಂಡೇಶನ್ನಿನ ಸಹಯೋಗದಿಂದ ಮೂಡಿ ಬರುತ್ತಿದೆ.)
No votes yet
860 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
Aravinda's picture
22
Jul
2008
7:08
ಉಚಿತ ಎಂದು ಹೇಳಿಕೆ ಅಷ್ಟೆ :( ನಮ್ಮ ಊರಿನ ಕಥೆ ಹೇಳ್ತೀನಿ ಕೇಳಿ. ವಿದ್ಯುತ್ ಉಚಿತವಿಲ್ಲದಿದ್ದಾಗಲೂ ದಿನಕ್ಕೆ 7 ಕ್ಕೂ ಹೆಚ್ಚು ಗಂಟೆಗಳ ಕಾಲ ಲೋಡ್ ಶೆಡ್ಡಿಂಗ್, ಅಮೇಲೆ ಕೆಲವು ಸಮಯ ಸಿಂಗಲ್ ಫೇಸ್. ತೋಟಗಳಿಗೆ ನೀರುಣಿಸಲು ರಾತ್ರಿ ೧೦ ರ ನಂತರ 3 ಫೇಸ್ ವಿದ್ಯುತ್. ಪಂಪ್ ಏನಾದರೂ ಮನೆಯಿಂದ ದೂರ ಇದ್ದರೆ ಮುಗೀತು ಕಥೆ, ರಾತ್ರಿ ಅಲ್ಲಿಗೆ ಹೋಗಿ ಮೋಟರ್ ಆನ್ ಮಾಡಿ ಬರಬೇಕು. ಅಷ್ಟೇ ಅಲ್ಲ ಬೇರೆಯವರೆಲ್ಲಾ ಬೇಗ ಪಂಪ್ ಸ್ಟಾರ್ಟ್ ಮಾಡಿದ್ರೆ ನಮ್ಮನೆ ಪಂಪ್ ವೋಲ್ಟೇಜ್ ಲೋ ಅಂತ ಕುಳಿತು ಬಿಡಿತ್ತೆ. ಇನ್ನು ಉಚಿತ ಅಂತ ಹೇಳಿದರೆ ಎಷ್ಟು ಗಂಟೆ ಲೋಡ್ ಶೆಡ್ಡಿಂಗೋ(24 ಗಂಟೆ ಮಾಡದಿದ್ರೆ ಸಾಕು :) ) ಇನ್ನು ಮಳೆಗಾಲದಲ್ಲಿ ಯಾರೂ ತೋಟಕ್ಕೆ ನೀರು ಬಿಡೋಲ್ಲ ಅಂತ ಗೊತ್ತಿರೋದ್ರಿಂದ ಲೋಡ್ ಶೆಡ್ಡಿಂಗ್ ಕಡಿಮೆ ಇರುತ್ತೆ, ಆದರೆ ನಮ್ಮ ಗ್ರಹಚಾರಕ್ಕೆ ಕಾಡುಗಳ ಮಧ್ಯೆ ಪವರ್ ಲೈನ್ ಇರೋದ್ರಿಂದ ಮರಗಳು ಬಿದ್ದೋ ಅಥವ ಸಿಡಿಲು ಬಡಿದೊ ಕೈಕೊಡುತ್ತೆ. ಅಮೇಲೆ ಒಂದು ವಾರಕ್ಕೂ ಹೆಚ್ಚು ದಿನ ಅಲೀಬೇಕು ಸರಿಮಾಡಿಸಲು. ಆದರೆ ಒಂದು ಮಾತು ಹೇಳಬೇಕೆನಿಸುತ್ತೆ, ಮಲೆನಾಡಿನ ಜರಿಗಳಲ್ಲಿ ಸಣ್ಣ ಸಣ್ಣ ವಿದ್ಯುತ್ ತಯಾರಿಕಾ ಕೇಂದ್ರ ಗಳನ್ನು ಮಾಡಲು ಪ್ರೋತ್ಸಾಹಿಸಬೇಕು ಅಂತ. ನಮ್ಮ ಹಳ್ಳಿಯಲ್ಲಿ ಸಿಗುವ ಮೊಬೈಲ್ ನೆಟ್ ವರ್ಕ್ ಸದ್ಯಕ್ಕೆ bsnl ಒಂದೇ ! .. (ಇನ್ನು ಅಂತರ್ಜಾಲ ಕನಸು) ನಮ್ಮೂರಲ್ಲೂ ಮಳೆಕೊಯ್ಲು ಆರಂಬಿಸಿದಾರೆ ಕೆಲವರು, ನಮ್ಮ ಮನೆಯ ಕೆರೆಯಲ್ಲೂ ಮಳೆಕೊಯ್ಲಿಗೆ ಪ್ಲಾನ್ ಮಾಡಿದೀವಿ :) ನಿಮ್ಮವನೇ, ಅರವಿಂದ
hpn's picture
22
Jul
2008
10:18
ಅರವಿಂದ, interesting ಮಾಹಿತಿ ಮಾರಾಯ. ಸೋಲಾರ್ ಬಳಸಿಕೊಳ್ಳುವ ಪ್ರಯೋಗಗಳೇನಾದ್ರೂ ಆಗಿವೆಯ? -- ನನ್ನ ಬ್ಲಾಗ್: ಪರಿವೇಶಣ | PariveshaNa
prameela's picture
22
Jul
2008
11:44
ನಮ್ಮಲ್ಲಿ ಉಚಿತ ಅನ್ದರೆ ಸದರ ಜಾಸ್ತಿ.ಮೌಲ್ಯ ಗೊತ್ತಿಲ್ಲ.ಸಿನ್ಗಲ್ ಫೇಸ್ ಇದ್ರೂ ಅದನ್ನು ಥ್ರೀ ಫೇಸ್ಗೆ ಬದಲಾಯಿಸಿ ವಿದ್ಯುತ್ ಬಳಸೋ ಜಾಣರಿರುವಾಗ ನೀರಿನ ಕೊರತೆ ಅಲ್ಲೂ ಕಾಡಬಹುದಲ್ಲವೆ?ಹಳ್ಳಿ ಅನ್ದ್ರೆ ಸ್ವಲ್ಪ ಅಲಕ್ಶ್ಯ.ಆದಾಯ ಕಮ್ಮಿ ಅನ್ತ ವಿದ್ಯುತ್ ಕಡಿತ ಮಾಡ್ತಾರೆ.ಅದೇ ರಾಜಧಾನಿಯಲ್ಲಿ ಅಳೆದೂ ಸುರಿದೂ ವಿದ್ಯುತ್ ಕಡಿತ ಶುರುವಾಯ್ತು(ದಿನಕ್ಕೆ ೫೦ ಲಕ್ಶ ಆದಾಯ ಕಡಿಮೆ ಆಗುತ್ತಲ್ಲ).ನಗರದವರಿಗೆ ತೊನ್ದರೆ ಆಗಬಾರದು ;ಹಳ್ಳಿ ಆದ್ರೆ ಪರವಾಗಿಲ್ಲ ಅನ್ನೋದು ಯಾವ ನ್ಯಾಯ?ಮೊದಲು ಕೇರಿಗೊನ್ದು ಬಾವಿ ಇತ್ತು;ಈಗ ಮನೆಗೊನ್ದು ಬಾವಿ ಇದೆ.ಹೀಗಾದರೆ ಅನ್ತರ್ಜೆಲದ ಕಥೆ ಏನು?ವಿದ್ಯುತ್ ನೀರು ಉಳಿಸಿ ಅನ್ದ್ರೆ ಜಿಪುಣಿ ಅನ್ತಾರೆ.ಬಿಲ್ ಕಟ್ತೀವಿ ಅನ್ತ ಬೇಕಾಬಿಟ್ಟಿ ಬಳಸಬಾರದುಅಲ್ವ?ಹಗಲೂ ಉರಿಯುವ ಬೀದಿ ದೀಪಗಳನ್ನು ಹಾಗೂ ಸರಕಾರಿ ಕಚೇರಿಗಲ್ಲಿ ವಿದ್ಯುತ್ ಪೋಲು ಆಗುವುದನ್ನು ತಡೆದರೆ ಬೇಕಾದಶ್ಟಾಯ್ತು.
Chamaraj's picture
23
Jul
2008
5:23
ನಿಜ ಹರಿಪ್ರಸಾದ್‌, ಇದೊಂದು ಬೋಗಸ್‌ ಯೋಜನೆ. ಏಕೆಂದರೆ, ಹಿಂದೆ ಕೂಡ ಇಂಥವೇ ’ಜನಪ್ರಿಯ’ ಯೋಜನೆಗಳನ್ನು ಘೋಷಿಸಲಾಗಿತ್ತು. ಆದರೆ, ಅವು ಸರಿಯಾಗಿ ಕೆಲಸ ಮಾಡದ ಉದಾಹರಣೆಗಳು ಕಣ್ಣ ಮುಂದೆಯೇ ಇವೆ. ಇದೊಂದು ಮೂರ್ಖ ಯೋಜನೆಯೂ ಹೌದು. ಯಾವುದೇ ಸೌಲಭ್ಯ ಉಚಿತವಾಗಿ ಬಂದರೆ, ಅದರ ಮಹತ್ವ ಗೊತ್ತಾಗದಿರುವ ಸಂದರ್ಭಗಳೇ ಬಹಳ. ದುರ್ಬಳಕೆ ಹೆಚ್ಚು. ಅದನ್ನು ತಡೆಯುವುದು ಸುಲಭವಲ್ಲ. ಇಂತಹ ಯೋಜನೆಗಳಿಂದಾಗಿ ರೈತರು ಈಗಾಗಲೇ ಸರ್ಕಾರದ ಮೇಲೆ ಅವಶ್ಯಕತೆಗಿಂತ ಹೆಚ್ಚೇ ಅವಲಂಬಿತರಾಗಿದ್ದಾರೆ. ಅದರ ಪರಿಣಾಮವಾಗಿ, ಒಂದಿಷ್ಟು ಏರುಪೇರಾದರೂ ಸಹಿಸಿಕೊಳ್ಳಲಾಗದೇ ಆತ್ಮಹತ್ಯೆಯತ್ತ ಮುಖ ಮಾಡುತ್ತಾರೆ. ಉಚಿತ ಅಥವಾ ಸಹಾಯಧನದಲ್ಲಿ ರಸಗೊಬ್ಬರ, ಬಿತ್ತನೆ ಬೀಜ, ಇತ್ಯಾದಿ ಕಾರ್ಯಕ್ರಮಗಳು ರೈತನನ್ನು ಪರಾವಲಂಬಿ ಮಾಡಿಯಾಗಿದೆ. ಅದರ ಸಾಲಿಗೆ ಉಚಿತ ವಿದ್ಯುತ್ತೂ ಸೇರಿಕೊಳ್ಳುತ್ತದೆ. ಇದು ವಿಫಲವಾಗುತ್ತದೆ. ಅಷ್ಟೇ ಅಲ್ಲ, ಅತ್ಯಂತ ದುಬಾರಿಯಾಗಿ ವಿಫಲವಾಗಲಿದೆ. - ಚಾಮರಾಜ ಸವಡಿ