ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ

July 24, 2008 - 4:51pm — nagenagaari

(ನಗೆ ನಗಾರಿ ಸಾಹಿತ್ಯ ಬ್ಯೂರೋ)

ಮಾಜಿ ಕವಿಗಳು, ಹಾಲಿ ಚಿಂತಕರಾದ ಶ್ರೀಯುತ ಪಾಪಣ್ಣನವರು ನಮ್ಮ ವರದಿಗಾರನನ್ನು ಖಾಸಗಿ ನಿವಾಸಕ್ಕೆ ಕರೆಸಿಕೊಂಡು ನೀಡಿದ ಸಂದರ್ಶನದಲ್ಲಿ ‘ನೂರು ವರ್ಷಗಳ ಕಾಲ ಎಲ್ಲಾ ಬಗ್ಗೆಯ ಕಾವ್ಯವನ್ನು ಬ್ಯಾನ್ ಮಾಡಬೇಕು’ ಎಂದು ಸರ್ಕಾರಕ್ಕೆ ಕ್ರಾಂತಿಕಾರಕ ಶಿಫಾರಸ್ಸನ್ನು ಮಾಡಿದ್ದಾರೆ. ಪುಸ್ತಕ, ಪತ್ರಿಕೆ, ಸಿನೆಮಾ, ಸಿನೆಮಾ ಹಾಡು, ಸಿನೆಮಾ ಹಾಡಿನ ಸಾಹಿತ್ಯದಲ್ಲಿ ಸಾಲು ಹೀಗೆ ಯಾವುದಾದರೊಂದನ್ನು ಬ್ಯಾನ್ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹ ಪಡಿಸುತ್ತಾ ಓಡಾಡುತ್ತಿದ್ದ ಪುಡಿ ಸಂಘಟನೆಗಳೆಲ್ಲವೂ ಪಾಪಣ್ಣನವರ ಮಾತನ್ನು ಕೇಳಿ ಬೆಚ್ಚಿ ಬಿದ್ದು ಎದ್ದು ಕುಳಿತಿವೆ.

ತಮ್ಮ ಕ್ರಾಂತಿಕಾರಕ ನಿಲುವಿಗೆ ಕಾರಣವೇನು? ಹಿಂದೆ ನೀವೂ ಅನೇಕಾನೇಕ ಕವನಗಳನ್ನು ಬರೆದಿರುವಿರಿ. ಉತ್ತಮ ಸಾಹಿತಿ ಎಂದು ಹೆಸರು ಪಡೆದಿದ್ದೀರಿ. ನೀವು ಹೀಗೆ ಬಂಡಾಯವೆದ್ದಿರುವುದರ ಹಿಂದಿನ ಚಿಂತನೆ ಯಾವುದು ಎಂದು ನಮ್ಮ ವರದಿಗಾರ ಪ್ರಶ್ನಿಸಿಲಾಗಿ ಪಾಪಣ್ಣನವರು ತಮ್ಮ ಬಿಳಿಯ ಗಡ್ಡದ ನಡುವೆ ಬೆರಳು ಹರಿದಾಡಿಸಿ ಮಾತಿಗೆ ಶುರು ಮಾಡಿದರು, ‘ನೋಡಿ, ನಾನು ನನ್ನ ಕೈ ನಡೆಯುತ್ತಿದ್ದ ಕಾಲದಲ್ಲಿ ಒಂದಷ್ಟು ಕವಿತೆಗಳನ್ನು ಬರೆದಿದ್ದೇನೆ. ಕೆಲವೊಂದನ್ನು ಬರೆಸಿದ್ದೇನೆ -ಅಂದರೆ ನಾನೇ ಹೇಳಿ ಬರೆಸಿದ್ದೇನೆ ಅಂತ ಕಣ್ರೀ- ನನ್ನ ಕವನ ಸಂಕಲನಕ್ಕೆ ಸಹೃದಯರಿಂದ ಭಾರೀ ಗೌರವವೇ ಸಿಕ್ಕಿದೆ. ಕುಳಿತುಕೊಳ್ಳಲು ಪೀಠವೂ ಸಿಕ್ಕಿದೆ. ನನ್ನ ಕವನಗಳನ್ನು ಮಕ್ಕಳು ಪಠ್ಯ ಪುಸ್ತಕಗಳಲ್ಲಿ ಓದುತ್ತಿದ್ದಾರೆ. ಅರ್ಥವಾಗದೆ ಉರು ಹೊಡೆಯುತ್ತಿದ್ದಾರೆ. ಶಿಕ್ಷಕರು ಮೊದಲು ಪಾಠಗಳನ್ನು ಓದಿ ಎಂದು ಸಲಹೆ ಕೊಡುತ್ತಿದ್ದಾರೆ. ವಿಶ್ವ ವಿದ್ಯಾಲಯಗಳಲ್ಲಿ ನನ್ನ ಕವನಗಳ ಪೋಸ್ಟ್ ಮಾರ್ಟಮ್ ನಡೆಸಿದವರಿಗೆ ಡಾಕ್ಟರ್ ಎಂದು ಕರೆಯುತ್ತಿವೆ. ಇದೆಲ್ಲದರ ಬಗ್ಗೆ ನನಗೆ ಯಾವ ತಕರಾರೂ ಇಲ್ಲ. ಅಸಲಿಗೆ ನನ್ನನ್ನು ಕಾರ್ಯಕ್ರಮಗಳಿಗೆ ಕರೆದಾಗ ಕವಿ ಎಂದು ಕರೆದರೆ ಮುದಗೊಳ್ಳುತ್ತೇನೆ. ಕೆಲವರು ನನ್ನನ್ನು ಆಗಾಗ ಮಾಜಿ ಕವಿಗಳು ಎಂದು ಕರೆದಾಗ ಹಾಲಿ ಕೊಲೆಗಾರನಾಗಲಾ ಎಂದು ಹಗಲೂ ರಾತ್ರಿ ಚಿಂತಿಸಿದ್ದೇನೆ.

‘ಅದೆಲ್ಲಾ ಬಿಡಿ. ಈಗ ನನ್ನ ಆಗ್ರಹದ ವಿಷಯಕ್ಕೆ ಬರೋಣ. ಇನ್ನು ನೂರು ವರ್ಷಗಳ ಕಾಲ ಯಾರೂ ಕವನಗಳನ್ನು ಬರೆಯ ಬಾರದು. ಈಗ ಕವನ ಬರೆಯಲು ಶುರು ಮಾಡಿರುವವರು ಕಾವ್ಯ ರಚನೆಗೆ ತಿಲಾಂಜಲಿಯನ್ನಿಡಬೇಕು. ಈಗ ಪ್ರಕಟವಾಗುತ್ತಿರುವ ಕವನ ಸಂಕಲನಗಳನ್ನೆಲ್ಲಾ ಉರುವಲಿಗೆ ಹಾಕಿ ದಿನವೂ ಜನರು ಬಿಸಿನೀರಿನಲ್ಲಿ ಸ್ನಾನ ಮಾಡಬೇಕು. ಹೊಸ ಸಂಕಲನಗಳ್ಯಾವೂ ಪ್ರಕಟವಾಗದ ಹಾಗೆ ಸರಕಾರ ಕಟ್ಟುನಿಟ್ಟು ಮಾಡಬೇಕು. ಕವಿಯು ಸಮಾಜ ವಿದ್ರೋಹಿ ಎಂಬುದನ್ನು ಸಂವಿಧಾನದಲ್ಲಿ ಸೇರಿಸಿ ತಿದ್ದು ಪಡಿ ಮಾಡಬೇಕು. ತಮ್ಮನ್ನು ತಾವು ಕವಿ ಎಂದು ಕರೆದುಕೊಳ್ಳುವವರನ್ನು ಕಂಬಿಗಳ ಹಿಂದೆ ನಿಲ್ಲಿಸಬೇಕು. ಕವಿತೆ ಬರೆಯೋದು, ಓದುವುದು ನನಗಿಷ್ಟ ಎನ್ನುವವರನ್ನು ಹುಚ್ಚು ಬಿಡಿಸುವ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಬೇಕು. ಧರ್ಮಗ್ರಂಥಗಳಲ್ಲಿ ಕವಿತೆ ವಾಚನ ಧರ್ಮ ಬಾಹಿರ ಎಂದು ನಮೂದಾಗುವ ಹಾಗೆ ಧಾರ್ಮಿಕ ಮುಖಂಡರು ಗಮನ ಹರಿಸಬೇಕು. ಇವೆಲ್ಲವುಗಳಿಗೆ ಒತ್ತಾಸೆಯಾಗಿ ಸರಕಾರ ನೂರು ವರ್ಷಗಳವರೆಗೆ ಪೊಯೆಟ್ರಿಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕು.’

‘ಅದೆಲ್ಲಾ ಸರಿ. ಸಾರ್ ಆದರೆ ಯಾಕೆ ಬ್ಯಾನ್ ಮಾಡಬೇಕು ಎಂದು ನೀವು ಹೇಳಲೇ ಇಲ್ಲವಲ್ಲ?’ ಪ್ರಶ್ನಿಸಿದ ವರದಿಗಾರ.

‘ ಹೀಗೆ ನೂರು ವರ್ಷ ಪೊಯೆಟ್ರಿಯನ್ನು ಬ್ಯಾನ್ ಮಾಡಿದರೆ ಕವಿಗಳ ಶನಿ ಸಂತಾನ ನಾಶವಾಗುತ್ತದೆ. ಕವಿತೆಯ ಹೆಸರಿನಲ್ಲಿ ಜಂಡು ಬಾಮ್, ಅನಾಸಿನ್ ಮಾರಾಟ ಮಾಡುತ್ತಾ ಮೆಡಿಕಲ್ ಸ್ಟೋರ್‍‌ಗಳಿಗೆ ಲಾಭ ಮಾಡುವ ದಂಧೆಯವರ ಜನಾಂಗಕ್ಕೆ ಅಂತ್ಯ ಬರುತ್ತದೆ. ನೂರು ವರ್ಷ ಕಳೆದು ಬರುವ ಹೊಸ ಜನರೇಶನ್ನಿನಲ್ಲಿ ಕವಿಗಳ ಕೆಟ್ಟ ಸಂಸ್ಕೃತಿ ಇರುವುದಿಲ್ಲ. ಪತ್ರಿಕೆಗಳು ಸ್ಪೇಸ್ ಫಿಲ್ಲರ್‌ಗಳಿಗೆ ಕೊಂಚ ಕಾಲ ಒದ್ದಾಡ ಬಹುದು. ವಾಲಂಟರಿ ರಿಟೈರ್ ಮೆಂಟ್ ತೆಗೆದುಕೊಂಡವರು ನಾಲ್ಕೈದು ಉದ್ಘಾರಗಳನ್ನು ಹೊರಡಿಸಿ ತಮ್ಮನ್ನು ತಾವು ಕವಿ ಎಂದು ಕರೆದು ಸಂಭ್ರಮಿಸಿಕೊಳ್ಳುವುದಕ್ಕೆ ಕೊಂಚ ತೊಂದರೆಯಾಗಬಹುದು. ಉದ್ಯೋಗವಿಲ್ಲದವರು ಶಬ್ಧ ಕೋಶದ ರಸಾಯನ ಮಾಡಿ ತಮ್ಮ ರೆಸ್ಯೂಮಿನಲ್ಲಿ ‘ಖ್ಯಾತ
ಕವಿ’ ಎಂದು ನಮೂದಿಸಿಕೊಳ್ಳುವುದಕ್ಕೆ ಉತ್ಸಾಹಕ್ಕೆ ಹಾನಿಯಾಗಬಹುದು. ಆದರೆ ಲಕ್ಷಾಂತರ ಮರಗಳ ಜೀವ ಉಳಿಯುತ್ತದೆ, ಕವನ ಸಂಕಲನಗಳ ಪ್ರಕಟಣೆ ನಿಲ್ಲುವುದರಿಂದ.’

‘ಒಳ್ಳೆಯ ವಿಚಾರಗಳು ಸಾರ್. ಆದರೆ ಪೊಯೆಟ್ರಿಯನ್ನ ಬರೇ ನೂರು ವರ್ಷ ಬ್ಯಾನ್ ಮಾಡಬೇಕು ಅಂದಿರಿ. ಅಲ್ಲದೆ ಕೇವಲ ಈಗ ನಿಮ್ಮ ನಂತರ ಬರೆದವರ ಕವನ ಸಂಕಲನಗಳನ್ನು ಸುಡಬೇಕು ಎಂದು ಅಪ್ಪಣೆ ಕೊಡಿಸಿದಿರಿ. ಆದರೆ ಹಿಂದಿನದರ ಬಗ್ಗೆ ಮಾತಾಡಿಲ್ಲ. ಏನಿದರ ಮರ್ಮ?’ ಗೊಂದಲ ತಡೆಯಲಾರದೆ ಕೇಳಿದ ವರದಿಗಾರ.

‘ಇದು ನನ್ನ ಆಶಯದ ಬಹು ಮುಖ್ಯ ಅಂಶ. ನೂರು ವರ್ಷ ಕವನಗಳನ್ನು ಬ್ಯಾನ್ ಮಾಡುವುದರಿಂದ ಜನರಿಗೆ ಕವನ ಬರೆಯುವುದು, ಕಾವ್ಯ ಓದುವುದರಲ್ಲಿ ಆಸಕ್ತಿ ಹೊರಟು ಹೋಗುತ್ತದೆ. ಕವಿಗಳ ಕುಲವೇ ಅಸುನೀಗುತ್ತದೆ. ಜನರಿಗೆ ಹೆಚ್ಚು ಹೆಚ್ಚು ಸಮಯದ ಉಳಿತಾಯವಾಗುತ್ತದೆ. ಆಗ ಜನರು ಹೆಚ್ಚು ಹೆಚ್ಚು ದುಡಿಯಲು ಶುರು ಮಾಡುತ್ತಾರೆ. ಹೆಚ್ಚು ಸಂಪಾದಿಸುತ್ತಾರೆ. ದುಡ್ಡು ಕೂಡಿಡುತ್ತಾರೆ. ಮನೆಯನ್ನು ಟಿವಿ, ಫ್ರಿಡ್ಜು, ವಾಶಿಂಗ್ ಮಶೀನು, ಕಂಪ್ಯೂಟರು, ಕಾರು, ಬೈಕು, ಏರೋಪ್ಲೇನುಗಳಿಂದ ತುಂಬಿಸುತ್ತಾರೆ. ಕೊನೆಗೆ ಇದೆಲ್ಲಾ ಇಷ್ಟೆನಾ ಅನ್ನಿಸಲು ಶುರುವಾಗುತ್ತದೆ. ಬದುಕು ಇಷ್ಟು ನಿಸ್ಸಾರವಾ ಎಂದು ಕೇಳಿಕೊಳ್ಳತೊಡಗುತ್ತಾರೆ. ಆಗ ಕವಿತೆಯ ಜೀವಸಾರದ ಗುಟುಕಿಗಾಗಿ ಬಾಯಾರಿ ತತ್ತರಿಸುತ್ತಾರೆ. ಆದರೆ ಆಗ ಯಾವ ಕವನಗಳೂ ಇರುವುದಿಲ್ಲ. ಕವಿಗಳೂ ದಿವಂಗತರಾಗಿರುತ್ತಾರೆ. ಜನರಿಗೆ ಕವಿತೆಗಳೇ ಬದುಕು ಅನ್ನಿಸಲು ಶುರುವಾಗುತ್ತದೆ.’

‘ಇದರಿಂದೇನು ಲಾಭವಾಗುತ್ತೆ ಸಾರ್?’

‘ಆಗ ಉಳಿದವರ್ಯಾರ ಕವನಗಳೂ ಇರೋದಿಲ್ಲ. ನನ್ನವು ಮಾತ್ರ ಇರುತ್ತವೆ. ನಾನು ಬರೆದಿಟ್ಟು ಹೋದ ಕವನಗಳೇ ಸಂಜೀವಿನಿಗಳಾಗುತ್ತವೆ. ನನ್ನ ಖರ್ಚಾಗದ ಕವನ ಸಂಕಲನಗಳು ಹಾಟ್ ಗಾಸಿಪ್ಪಿನ ಹಾಗೆ ಬಿಕರಿಯಾಗುತ್ತವೆ. ನಾನು ಹೇಗೂ ನನ್ನ ಮೊಮ್ಮಕ್ಕಳಿಗೆ ಕಾಸು ಕೂಡಿಟ್ಟಿಲ್ಲ. ಅವರಿಗೆ ಒಂದು ದಾರಿಯಾಗುತ್ತದೆ. ಅದಕ್ಕೇ ನಾನು ಸರ್ಕಾರಕ್ಕೆ ಈ ಕೂಡಲೇ ಕವನಗಳನ್ನು, ಕವಿಗಳನ್ನೂ ನೂರು ವರ್ಷಗಳವರೆಗೆ ಬ್ಯಾನ್ ಮಾಡಬೇಕು ಎಂದು ಆಗ್ರಹಿಸುತ್ತೇನೆ.

  • ಲಲಿತ ಪ್ರಬಂಧ, ಹಾಸ್ಯ
~.~
  • Login or register to post comments
  • 279 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 24, 2008 - 5:27pm — vikashegde

ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ

vikashegde's picture

Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 24, 2008 - 9:25pm — nagenagaari

ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ

nagenagaari's picture

ವಿಕಾಸ್, ನಿಮ್ಮ ಕಾವ್ಯ ನವ್ಯವೋ, ನವ್ಯೋತ್ತರವೋ ಎಂಬ ಜಿಜ್ಞಾಸೆ ನಡೆಯುತ್ತಿದೆ. ಉತ್ತರಿಸಿ ಗೊಂದಲ ಪರಿಹರಿಸಿ...
......................................
ನಗುವು ಸಹಜ ಧರ್ಮ ನಗದಿರುವುದು ನಿಮ್ಮ ಕರ್ಮ!
ನನ್ನ ಬ್ಲಾಗ್: http://nagenagaaridotcom.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಗಿದರೂ ಮುಗಿಯದ್ದು
  • ಲೈಫ್ ಸ್ಟೈಲ್??
  • ನೂರು ದಿನ ಪೂರೈಸಿದ `ಸರ್ಕಾರ್' `ಸಿನಿಮಾ'!!!
  • ನೂರು ಕನಸುಗಳು
  • ನಿಂಬೆ ಗಿಡ
Syndicate content

ಲೇಖಕರು

nagenagaari's picture

ಪೂರ್ಣ ಹೆಸರು
ನಗೆ ಸಾಮ್ರಾಟ್

ಪರಿಚಯ

ನಗೆಯ ಹೊನಲು ಹರಿಸುವುದರಲ್ಲೇ ತೃಪ್ತಿ. ಅದಕ್ಕಾಗೇ ಈ ತಾಣ ತೆರೆದಿರುವೆ:
http://nagenagaaridotcom.wordpress.com/

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಂಗಾರದ ಅರಮನೆ
  • ಗುರಿಯ ಮೊಸರನ್ನದಲ್ಲೇಕೆ ಪ್ರೇಮದ ಕಲ್ಲು?
  • 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
  • ಸಹಜ ಕೃಷಿ ಹರಿಕಾರ ಮಸನೊಬು ಫುಕುಓಕಾ ಮರಳಿ ಮಣ್ಣಿಗೆ.
  • ಬಸವಣ್ಣನಾಗಬೇಕೆಂದು ಬಯಸಿದ ಯಡಿಯೂರಪ್ಪ ಅಮೆರಿಕದಲ್ಲಿ ಮೂಗಬಸವನಾದದ್ದು!
  • ತಪ್ಪಿ ನಡೆಸ ಸರ್ಕಾರ
  • ನಿಸ್ವಾರ್ಥಿ ಪಾರಂಪರಿಕ ವೈದ್ಯರ ಮುಂದೆ ಸ್ವಾರ್ಥದ ‘ಪೇಟೆಂಟ್’ ಹಾವಳಿ!

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 9:18am
  • savithasr
    ಉ: ಲಾಲಿ
    August 22, 2008 - 9:16am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:14am
  • uniquesupri
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 9:12am
  • mahesha
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 8:56am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 8:48am
  • savithasr
    ಉ: ಪ್ರಶ್ನೆ 230308.....?
    August 22, 2008 - 8:31am
  • mahesha
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 8:17am
  • mahesha
    ಉ: ಎಲ್ಲ ತುಸುಹೊತ್ತು...
    August 22, 2008 - 8:09am
  • mahesha
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 8:05am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 24 ಅತಿಥಿಗಳು ಆನ್ಲೈನ್ ಇರುವರು.


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator