ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೩)

January 9, 2006 - 11:43pm — pvravi

*****ಭಾಗ ೧೩

ಜಾಲಂಧರ ಬಿಟ್ಟು ಅಪಾಯಕಾರಿಯಾದ ಪರ್ವತ ಮಾರ್ಗವಾಗಿ ಸುಮಾರು ೩೫೦ ಕ್ರ್‍ಓಶಗಳ ದೂರ ಪ್ರಯಾಣದ ನಂತರ ಕುಲೂತ ದೇಶವನ್ನು ಸೇರಿದೆವು. ನನ್ನ ಮಿತ್ರ ಉದ್ದಕ್ಕೂ ತನ್ನ ತಾಳೇಗರಿಗಳಂತಹ ಪತ್ರಗಳ ಮೇಲೆ ಏನನ್ನೋ ಬರೆಯುತ್ತಲೇ ಇದ್ದ. ಕುಲೂತ ದೇಶವನ್ನು ಬಿಟ್ಟು ಸುಮಾರು ೩೫೦ ಕ್ರೋಶಗಳು ದಕ್ಷಿಣದಿಕ್ಕಿನಲ್ಲಿ ನಡೆದ ನಂತರ ಶತಾದ್ರು ನದಿಯ ತೀರದಲ್ಲಿದ್ದ ಶತಾದ್ರು ದೇಶವನ್ನು ತಲುಪಿದೆವು. ಶತಾದ್ರು ಬಿಟ್ಟು ನಋತ್ಯ ದಿಕ್ಕಿನಲ್ಲಿ ೪೦೦ ಕ್ರ್‍ಓಶಗಳ ದೂರ ಸವೆಸಿದ ನಂತರ ಪಾರ್ಯಾತ್ರ ದೇಶವನ್ನು ಸೇರಿ, ಬಳಿಕ ಪೂರ್ವ ದಿಕ್ಕಿನಲ್ಲಿ ೨೫೦ ಕ್ರ್‍ಓಶಗಳ ಪಯಣದ ನಂತರ ಮಥುರಾನಗರಿಯನ್ನು ಸೇರಿದೆವು.

ಈ ಮಥುರಾ ಪ್ರದೇಶವು ಸುಮಾರು ೨೫೦೦ ಕ್ರ್‍ಓಶಗಳ ಸುತ್ತಳತೆ ಹೊಂದಿದೆ. ಮಥುರಾ ನಗರದ ಸುತ್ತಳತೆ ಸುಮಾರು ೧೦ ಕ್ರೋಶಗಳಿದ್ದು, ಈ ಊರು ಮಹಾನದಿಯಾದ ಯಮುನೆಯ ತೀರದಲ್ಲಿದೆ. ಇಲ್ಲಿಯ ನೆಲ ಸಮೃದ್ಧ ಹಾಗು ಫಲವತ್ತಾಗಿದ್ದು ಇಲ್ಲಿ ಬಹು ಮಾತ್ರದಲ್ಲಿ ಆಹಾರ ಧಾನ್ಯ ಬೆಳೆಯಲಾಗುತ್ತದೆ. ಇಲ್ಲಿಯವರು ದೊಡ್ಡ ಮರಗಳನ್ನೂ ಬೆಳೆಯುತ್ತಾರೆ. ಇಲ್ಲಿಯ ಆಮ್ಲ ಕಾಯಿ ಸುಪ್ರಸಿದ್ಧ. ಆಮ್ಲದ ಮರಗಳು ಎರಡೂ ರೀತಿಯವು - ಹಸಿರು ಹಾಗು ಹಳದಿ ವರ್ಣವುಳ್ಳ ಫಲಗಳು.

ಬಹು ಉತ್ಕಟವಾದ ಕಾರ್ಪಸವಲ್ಲದೆ ಪೀತ-ಕನಕವನ್ನೂ ಇಲ್ಲಿ ಉತ್ಪತ್ತಿ ಮಾಡಲಾಗುತ್ತದೆ. ಇಲ್ಲಿಯ ವಾತಾವರಣವು ಸುಖಮಯವಾಗಿರುತ್ತದೆ. ಇಲ್ಲಿಯ ಜನರು ಮೃದು ಸದ್ಭಾವನೆ ಸ್ವಭಾವದವರಾಗಿದ್ದು ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ತೆಗೆದುಕೊಳ್ಳುತ್ತಾರೆ. ವಿದ್ವತ್ತು ಹಾಗು ಸುಶೀಲತೆಯನ್ನು ಬಹಳ ಎತ್ತಿ ಆಡಿಸುತ್ತಾರೆ.

ಬೌದ್ಧರ ಸುಮಾರು ೨೦ ಸಂಘಾರಾಅಮ್ಗಳಿವೆ, ಅವುಗಳಲ್ಲಿ ಸುಮಾರು ೨೦೦೦ ಭಿಕ್ಕುಗಳು. ಅಶೋಕರಾಜನೇ ಕಟ್ಟಿಸಿದ್ದೆಂದು ಪ್ರಖ್ಯಾತಿ ಪಡೆದ ಮೂರು ಬೌದ್ಧ ಸ್ತೂಪಗಳಿವೆ. ಮೂರು ಮಾಸಗಳಿಗೊಮ್ಮೆ ಇವರು ದೊಡ್ಡ ಧರ್ಮ-ಪ್ರದರ್ಶನ ನಡೆಸಿ, ಪ್ರಸಾದಗಳನ್ನು ನೈವೇದ್ಯ ಮಾಡಿ, ಪತಾಕೆ ಲಾಂಛನಗಳೊಂದಿಗೆ ತಮ್ಮ ಉಚ್ಛ ದ್ರವ್ಯಗಳ ಪ್ರದರ್ಶನ ಮಾಡುತ್ತಾರೆ. ಧೂಪದ ಹೊಗೆ ಗಗನಕ್ಕೇರಿ, ಪುಷ್ಪಗಳ ವೃಷ್ಟಿಯನ್ನೇ ಮಾಡುತ್ತಾರೆ. ಇಲ್ಲಿಯ ಆಗಿನ ರಾಜನೂ ಇವರನ್ನು ಹುರಿದುಂಬಿಸುತ್ತಿದ್ದ. ನನ್ನ ಮಿತ್ರ ಇಂತಹ ಒಂದು ಧರ್ಮಾಚರಣೆಯಲ್ಲಿ ಪಾಲ್ಗೊಂಡ, ನಾನೂ ಅಲ್ಲಿಗೆ ವೀಕ್ಷಕಮಾತ್ರನಾಗಿ ಹೋಗಿಬಂದೆ. ಪ್ರತಿ ದಿನದ ಆಗುಹೋಗುಗಳನ್ನೂ ನನ್ನ ಮಿತ್ರ ತನ್ನ ಗರಿಗಳಲ್ಲಿ ಬರೆದುಕೊಳ್ಳುತ್ತಿದ್ದ. ನಾನು ಏನೆಂದು ಕೇಳಿದಾಗ ನಮ್ಮ ದೇಶದ ರೀತಿ ರಿವಾಜುಗಳೆಂದು ಹೇಳಿದ. ಆದರೆ ಬೌದ್ಧ ಧರ್ಮ ರಿವಾಜುಗಳನ್ನು ನಮೂದಿಸುತ್ತಿದ್ದನೇ ವಿನಃ, ಒಂದು ದಿನವಾಗಲಿ ಅವನು ನಮ್ಮ ಧರ್ಮದ ವಿವರ ಕೇಳಬರಲಿಲ್ಲ.

ಮಥುರೆಯಲ್ಲಿ ನಮ್ಮ ಧರ್ಮದ ಕೇವಲ ಐದು ದೇವಾಲಯಗಳಿದ್ದವು. ಆದರೆ ಸಾಮಾನ್ಯ ಮನುಷ್ಯರು ಹೆಚ್ಚಾಗಿ ನಮ್ಮ ದೇವರುಗಳನ್ನವಲಂಭಿಸಿದವರೇ. ಸ್ತೂಪ-ಸಂಘಾರಾಮಗಳಿಗೆ ಆಗಾಗ ಹೋಗುತ್ತಿದ್ದರೂ ಇವರ ಇಷ್ಟ ದೇವತೆ, ಹಾಗು ಪೂಜೆ ನಮ್ಮ ವಿಧಾನದಲ್ಲಿಯೇ. ಅಂತೆಯೇ ನಾವು ಅಲ್ಲಿದ್ದ ಸಮಯದಲ್ಲಿ ಬಂದ ಪರ್ವವೊಂದರಲ್ಲಿ ವ್ರತವನ್ನು ನಾನು ಅಲ್ಲಿಯೇ ಆಚರಿಸಿದೆ. ಬೌದ್ಧರು ನಡೆಸಿದ ಅದ್ದೂರಿ ನಮ್ಮಲ್ಲಿರಲಿಲ್ಲ ಆದರೂ ಭಕ್ತಿಭಾವ ಹಾಗು ಶ್ರದ್ಧೆಗಳ ಕೊರತೆ ಇರಲಿಲ್ಲವೆನಿಸಿತು.

ಊರಿನಿಂದ ಪೂರ್ವ ದಿಕ್ಕಿನಲ್ಲಿ ಸುಮಾರು ೨-೩ ಕ್ರೋಶಗಳ ದೂರದಲ್ಲಿ ಬೆಟ್ಟಗಳ ಮಧ್ಯದಲ್ಲಿ ಒಂದು ಸಂಘಾರಾಮವಿದೆ. ಇದರಲ್ಲಿ ತಥಾಗಥ ಬುಧ್ಧನ ನಖವಿದೆಯಂತೆ. ಬಳಿಯೇ ಒಂದು ಕಲ್ಲಿನ ಮನೆಯಿದೆ. ಶೂದ್ರನಾಗಿ ಹುಟ್ಟಿ, ನಂತರ ಭಿಕ್ಷುವಾಗಿ, ಅರ್‍ಹಟನಾದ ಉಪಗುಪ್ತನು ಇಲ್ಲಿ ಧರ್ಮ ಬೋಧನೆ ಮಾಡುತ್ತಿದ್ದನಂತೆ. ಹತ್ತಿರವೇ ಬುದ್ಧನು ಓಡಾಡಿದ ಸ್ಥಳವೆಂದು ಕಟ್ಟಿಸಿದ ಸ್ತೂಪಗಳು ಇವೆ. ಮಥುರಾ ನಗರವನ್ನು ಬಿಟ್ಟು ಹೊರಟೆವು. ಈಶಾನ್ಯ ದಿಕ್ಕಿನಲ್ಲಿ ಸುಮಾರು ೨೫೦ ಕ್ರೋಶಗಳ ಅಂತರದಲ್ಲಿ ಸ್ಥಾನೇಶ್ವರ ಇದೆ. ಮತ್ತೆ ೨-೩ ದಿನಗಳ ಪ್ರಯಾಣದನಂತರ ಸ್ಥಾನೇಶ್ವರವನ್ನು ಸೇರಿದೆವು.

ಸ್ಥಾನೇಶ್ವರ - ಹರ್ಷ ಚಕ್ರವರ್ತಿಯ ಮೂಲ ದೇಶ. ಈ ಪ್ರದೇಶದ ಸುತ್ತಳತೆ ಸುಮಾರು ೩೫೦೦ ಕ್ರೋಶಗಳು. ಇಲ್ಲಿಯ ನೆಲವೂ ಬಹು ಸಮೃದ್ಧ ಹಾಗು ಫಲವತ್ತಾಗಿದ್ದು ಇಲ್ಲಿ ಬಹುಮಾತ್ರದಲ್ಲಿ ಆಹಾರ ಧಾನ್ಯಗಳು ಬೆಳೆಯುತ್ತವೆ. ವಾತಾವರಣವು ಸ್ವಲ್ಪ ಉಷ್ಣಮಯವಾಗಿರುತ್ತದೆ. ಮೊದಲಿಗೆ ಇಲ್ಲಿಯ ಜನಾಂಗ ಏಕೋ ಸ್ವಲ್ಪ ಶೈತ್ಯ ಹಾಗು ಕುಟಿಲ ಮನೋಭಾವದವರೆನಿಸಿತು. ಆದರೆ ಇವರು ಬಹಳೇಬಹಳ ಶ್ರೀಮಂತರು ಹಾಗು ಆಮಿಷ ಪ್ರಿಯರು. ಮಾಟ ಮಂತ್ರಗಳನ್ನವಲಂಭಿಸಿದ ಇವರುಗಳು ಅಸಾಧಾರಣ ಪ್ರಚಂಡ ಅಳವು ಹೊಂದಿದವರನ್ನು ಆದರಿಸುತ್ತಾರೆ. ಹೆಚ್ಚಿನ ಜನ ಅರ್ಥ-ಕಾಮಗಳನ್ನು ಹಿಂಬಾಲಿಸುತ್ತಾರೆ. ವಿಶ್ವದಾದ್ಯಂತದಿಂದ ಅಪರೂಪ ಹಾಗು ಉಚ್ಛ ದ್ರವ್ಯಗಳು ಇಲ್ಲಿ ಬಂದು ಸೇರಿವೆಯೇನೋ ಎನ್ನುವಷ್ಟು ವೈಭವ!

ಹರ್ಷ ಚಕ್ರವರ್ತಿಯ ನೆಲೆಯವರು ಇಂಥವರೇ ಎನಿಸಿತು. ಸ್ಥಾನೇಶ್ವರದ ವೈಭವವನ್ನು, ಜನರ ಶೀಲ ಗುಣವನ್ನೂ ನನ್ನ ಗೂಢಚರ್ಯೆಯ ದಿನಗಳಲ್ಲಿ ಕೇಳಿ ತಿಳಿದಿದ್ದೆ. ಮೊದಲಿಗೆ ನನಗೆ ಅರ್ಥವಾಗಲಿಲ್ಲ. ನನ್ನ ಮಿತ್ರ ಬಳಿಯಿದ್ದ ಸಂಘಾರಮಕ್ಕೆ ತೆರಳಿದ ಕೂಡಲೆ ನನ್ನ ಜಟೆ-ಜನಿವಾರಗಳನ್ನು ಗುರುತಿಸಿ ನನಗೆ ಆದರದ ಸ್ವಾಗತ ನೀಡಿದರು; ಬ್ರಾಹ್ಮಣರೊಬ್ಬರ ಮನೆಗೆ ಕರೆದೊಯ್ದು ಸತ್ಕಾರ ಮಾಡಿ ಉಪಹಾರಗಳನ್ನಿತ್ತರು. ಭೋಜನಕ್ಕಡ್ಡಿಯಿಲ್ಲವಾದರೂ ಉಪಹಾರಗಳನ್ನು ನಾನು ಸ್ವೀಕರಿಸಲಿಲ್ಲ - ಸ್ವೀಕರಿಸುವಂತಿರಲಿಲ್ಲ. ನನಗೆ ಈಗ ಅರ್ಥವಾಯಿತು. ಇವರು ನನ್ನ ಬುದ್ಧಾನುಯಾಯಿ ಮಿತ್ರನನ್ನು ಕಂಡು ಸ್ವಲ್ಪ ಹಿಂಜರಿದಿದ್ದಿರಬೇಕು. ಈಗ ನನ್ನೊಬ್ಬನನ್ನೇ ಕಂಡು ಸ್ನೇಹಭಾವ ತೋರುತ್ತಿದ್ದರು. ಇಲ್ಲಿ ನಮ್ಮ ಧರ್ಮ ಪ್ರಬಲವಾಗಿತ್ತು; ಬೌದ್ಧರು ಹಿಂದುಳಿದಿದ್ದರು.

ಅಂದು ನನ್ನ ಆತಿಥೇಯರ ಗೃಹದಲ್ಲೇ ತಂಗಿದ್ದೆ. ಉದ್ದಕ್ಕೂ ನಾನು ಯಾವ ಸಂಘಾರಾಮದಲ್ಲೂ ತಂಗುತ್ತಿರಲಿಲ್ಲ, ಭೋಜನ ಮಾಡುತ್ತಿರಲಿಲ್ಲ. ಊರಾಚೆ ಅಥವ ಛತ್ರ-ದೇವಸ್ಥಾನಗಳಲ್ಲಿ ತಂಗುತ್ತಿದ್ದೆ. ಮೊದಲಿನ ಒಪ್ಪಂದದಂತೆ ನನ್ನ ಮಿತ್ರ ಇದ್ಯಾವುದಕ್ಕೂ ಆಕ್ಷೇಪಣೆ ಮಾಡುತ್ತಿರಲಿಲ್ಲ. ಆದರೆ ಇಂದು ನನ್ನ ಮಿತ್ರನಿಗೆ ಇದು ಏಕೋ ಸರಿಯಾಗಿ ಕಾಣಿಸಲಿಲ್ಲ. ಮಾರನೆಯ ದಿನ ಮತ್ತೆ ಸಂಧಿಸಿದಾಗ ಕೋಪಗೊಂಡು ನನ್ನನ್ನು ಸ್ವಲ್ಪ ಖಂಡಿಸತೊಡಗಿದ. ಅವನನ್ನು ಹೀನವಾಗಿ ಕಂಡ ಈ ಸ್ಥಳದ ಜನರ ಮನೆಯಲ್ಲಿ ನಾನು ತಂಗಿದ್ದು ಅವನಿಗೆ ಸ್ವಲ್ಪ ಅವಮಾನಾವೆನಿಸಿರಬಹುದು. ಇವನೊಡನೆ ಈ ಸಮಯದಲ್ಲಿ ಜಗಳವಾಡಲು ಬಯಸದೆ, ನಾನಿದನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ.

ಸ್ಥಾನೇಶ್ವರದಲ್ಲಿ ನಾವು ಒಂದು ವಾರ ಕಳೆಯಬೇಕಾಯಿತು. ಊರಿನ ದೇವಾಲಯವೊಂದರಲ್ಲಿ ಇದ್ದ ವೃದ್ಧರೊಬ್ಬರು ನನ್ನ ಸಂಸ್ಕೃತ ವಾರ್ತೆಯನ್ನು ಕೇಳಿ, ಕೆಲವೇ ಘಳಿಗೆಗಳಲ್ಲಿ ನನ್ನನ್ನು ಬಹಳ ಹಚ್ಚಿಕೊಂಡಿದ್ದರು. ಒಂದು ದಿನ ಅವರು ಈ ಸ್ಥಳದ ಮಹತ್ವವನ್ನು ಹೇಳಿದರು. ನನ್ನ ಮಿತ್ರನೂ ನನ್ನೊಡನೆಯೇ ಇದ್ದ - ಅವರು ಹೇಳುತ್ತಿದ್ದಂತೆ ಅವನು ಎಲ್ಲವನ್ನೂ ಬರೆದುಕೊಳ್ಳುತ್ತಿದ್ದ.

ಊರಿನಿಂದ ಸುಮಾರು ೨-೩ ಕ್ರೋಶಗಳ ದೂರದಲ್ಲಿ ಅಶೋಕರಾಜನೇ ಕಟ್ಟಿಸಿದನೆಂದು ಹೇಳಲ್ಪಡುವ ಸ್ತೂಪವೊಂದಿದೆ. ಬೃಹತ್ ಆಕಾರದ ಈ ಸ್ತೂಪವು ಕೆಂಪು ವರ್ಣದ ಹೊಳೆವ ಶಿಲೆಗಳಿಂದ ಕಟ್ಟಲ್ಪಟ್ಟಿದೆ. ಈ ಸ್ತೂಪದಲ್ಲಿ ನನ್ನ ಮಿತ್ರ ಪ್ರಾರ್ಥನೆ ಮಾಡಿದ ನಂತರ ನಾವು ಸ್ಥಾನೇಶ್ವರವನ್ನು ಬಿಟ್ಟು ಹೊರಟೆವು.

  • ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ (ಕಾದಂಬರಿ)
~.~
  • Login or register to post comments
  • 611 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೫)
  • ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೨)
  • ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೪)
  • ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೧)
  • ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೦)
Syndicate content

ಲೇಖಕರು

pvravi's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ

ಇತ್ತೀಚಿನ ಪ್ರತಿಕ್ರಿಯೆಗಳು

  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 6:41pm
  • madhava_hs
    ಉ: ಕುಮಾರವ್ಯಾಸ ಭಾರತ
    July 24, 2008 - 6:41pm
  • mahesha
    ಉ: ಸ್ತ್ರೀಸೌಂದರ್ಯ
    July 24, 2008 - 6:04pm
  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 24 ಅತಿಥಿಗಳು ಆನ್ಲೈನ್ ಇರುವರು.


"ಎಂಥ ನಾಡಿದು ಯೆಂಥ ಕಾಡಾಯಿತೋ"

— ರಂ. ಶ್ರೀ. ಮುಗಳಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator