ಬ್ರಹ್ಮ ಕಮಲಕ್ಕೆ ಜೊತೆ ನೀಡುತ್ತಿರುವ ಇನ್ನೊಂದು ಸುಂದರ ಪುಷ್ಪ - ಸೌಗಂಧಿಕಾ
ಸೌಗಂಧಿಕಾ ಪುಷ್ಪವೂ ಆಷಾಡ - ಶ್ರಾವಣ ಮಾಸಗಳಲ್ಲಿ ಅರಳಿ ಮನಸ್ಸನ್ನು ಸೆಳೆಯುವುದು. ಭೀಮನು ದ್ರೌಪಧಿಯ ಆಸೆಯನ್ನು ತೀರಿಸಲು ದ್ವಾರಕೆಯಿಂದ ತಂದನೆಂಬ ಪುರಾಣ ಕಥೆಯನ್ನು ಹೊಂದಿರುವ ಈ ಪುಷ್ಪವು ಸೌಂದರ್ಯದಿಂದ ಮಾತ್ರವಲ್ಲದೆ, ತನ್ನ ಮಂದ ಸುಗಂಧದಿಂದಲೂ ಮನಸೆಳೆಯುತ್ತದೆ. ಒಂದು ವ್ಯತ್ಯಾಸವೆಂದರೆ ಬ್ರಹ್ಮ ಕಮಲವು ಎಲೆಗೊಂದರಂತೆ ಅರಳಿದರೆ, ಇದು ಗೊಂಚಲಿಗೆ ಎಂಟು ಹತ್ತರಂತೆ ಅರಳಿ, ಜಾಲವನ್ನೇ ಹೆಣೆದು ಜಾದೂ ಮಾಡುತ್ತದೆ. ಅಲ್ಲದೆ ಹಗಲೂ ಅರಳಿದ್ದು ಎಲ್ಲರ ಕಣ್ಣಿಗೂ ಮುದ ನೀಡುತ್ತದೆ. ಶ್ರಾವಣದಲ್ಲಿ ಅರಳುವ ಈ ಪುಷ್ಪ ಮಾಸದ ಎಲ್ಲಾ ಹಬ್ಬಗಳಿಗೂ ಲಭ್ಯ.

- Login or register to post comments
- 132 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: