ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

‘ನರರ’ ನಾಡಿಗೆ ‘ವಾನರರ’ ಲಗ್ಗೆ

August 8, 2008 - 3:27pm — harshavardhan v...
ಮಾನವನಾದ ಕಪಿಯಿಂದ. ಮಾನವನ ಮುಖ ನೋಡು ಹೌದು ನಿಜವೆನಿಸುವುದು. ಕಪಿಯ ಹೃದಯ ನೋಡು ಅಲ್ಲೆನಿಸುವುದು ತಿಂಮ!

ಮಾನವನಾದ ಕಪಿಯಿಂದ;ಡಾರ್ವಿನ್ನಿನ ವಾದ.
ಏನು ಹೇಳಿದನವನು? ನಿಜವಾಗಿ ನಿಜವೇ?
ಮಾನವನ ಮುಖ ನೋಡು; ಹೌದು
ನಿಜವೆನಿಸುವುದು! ಕಪಿಯ ಹೃದಯ ನೋಡು
ಅಲ್ಲೆನಿಸುವುದೋ ತಿಮ್ಮ!?

ಎರಡು ದಶಕಗಳ ಕೆಳಗೆ ಖ್ಯಾತ ಹಾಸ್ಯ ಸಾಹಿತಿ ಬೀchi ತಮ್ಮ ‘ಅಂದನಾ ತಿಂಮ’ ಕೃತಿಯಲ್ಲಿ ಬಹು ಮಾರ್ಮಿಕವಾಗಿ ನಮ್ಮ ಪೂರ್ವಜರ (ಮಂಗಗಳ) ಕುರಿತು ಉಲ್ಲೇಖಿಸಿದ್ದರು. ಬಹುಶ: ಅಂದಿನ ಅವರ ಅನುಭವಪೂರ್ಣ ಹಾಗು ವಿಚಾರಪ್ರಚೋದಕ ಮಾತುಗಳು ನಾವು ಇಂದಿನವರಿಗೆ ಅನುಭವಕ್ಕೆ ಬರತೊಡಗಿವೆ ಎಂದರೆ ಅತಿಶಯೋಕ್ತಿ ಏನಲ್ಲ.

ಅತಿಲೋಲುಪ ಮಾನವ ಪ್ರಾಣಿ ವನ್ಯಜೀವಿಗಳ ಆಶ್ರಯತಾಣಗಳನ್ನು ತನಗೆ ಅನುಕೂಲವಾಗುವಂತೆ ಮನಸೋಇಚ್ಛೆ ಬಳಸಿದ. ಕಾಡು ಕಡಿದು
ಅವುಗಳ ವಾಸಸ್ಥಾನ ಹಾಳುಗೆಡವಿದ. ಈಗ ಮಂಗಗಳು ಧಾರವಾಡದಲ್ಲಿ ದಾರಿಗಾಣದೇ ‘ಉಪಾಯದಿಂದ’ ಆಹಾರ, ವಿಹಾರ, ವಾಸಸ್ಥಳ ಹಾಗು ಸಂತಾನೋತ್ಪತ್ತಿಗಾಗಿ ಮಾನವರ ವಾಸಸ್ಥಳಗಳನ್ನು ಆಕ್ರಮಿಸಿ, ತಮ್ಮ ಹಕ್ಕುಗಳಿಗಾಗಿ ಆಗ್ರಹಿಸುತ್ತಿವೆ.

ವಸ್ತುಸ್ಥಿತಿ: ಕಳೆದ ಒಂದು ತಿಂಗಳಿನಿಂದ ಧಾರವಾಡದಲ್ಲಿ ಮಂಗಗಳು ಹಲವಾರು ಟೋಳಿಗಳಲ್ಲಿ ಲಗ್ಗೆ ಇಟ್ಟಿವೆ. ಕಪ್ಪು ಹಾಗು ಕೆಂಪು ಮೂತಿಯ ವಾನರರ ಸೈನ್ಯ ಕಂಡು ನರರು ದಿಕ್ಕಾಪಾಲಾಗಿ ಓಡುವ ಸ್ಥಿತಿ ನಿರ್ಮಾಣಗೊಂಡಿದೆ. ಈ ಕಪ್ಪು ಹಾಗು ಕೆಂಪು ಮೂತಿಯ ವಾನರರ ಸೈನ್ಯ ಸಿಕ್ಕ ಸಿಕ್ಕ ಮನೆಗಳಿಗೆಲ್ಲ ನುಗ್ಗಿ ದಾಂಧಲೆ ಎಬ್ಬಿಸಿವೆ. ಮನೆಯ ಆವರಣದಲ್ಲಿರುವ ಚಿಕ್ಕು, ಪೇರಲ, ಹಲಸು ಹಾಗು ಹೂವಿನ ಗಿಡಗಳು, ಮಹಡಿಯ ಮೇಲೆ ಒಣಗಿಸಲು ಹಾಕಿರುವ ಒಣ ಖೊಬ್ಬರಿ, ಸಂಡಿಗೆ.. ನರರ ಇತ್ಯಾದಿ ವಸ್ತುಗಳು ಈ ವಾನರರ ಕೈಗೆ ಸುಲಭದಲ್ಲಿ ಸಿಕ್ಕರೆ, ಮನೆಯ ಒಳಗಡೆಯ ಹಣ್ಣು, ಗಜ್ಜರಿ, ಸೌತೆಕಾಯಿ, ಬ್ರೆಡ್ ಮುಂತಾದ ವಸ್ತುಗಳಿಗೆ ಹೊಂಚು ಹಾಕಿ ಕಾಯುತ್ತ ಕಿಟಕಿಗಳ ಇಲ್ಲವೇ ಬಾಗಿಲುಗಳ ಮೂಲಕ ಮನೆಯ ಒಳಗೆ ನುಗ್ಗಿ ಜನರನ್ನು ಹೆದರಿಸಿ ಅಧಿಕಾರದಿಂದ ಹೊತ್ತೊಯ್ದು ಹಂಚಿಕೊಂಡು ತಿನ್ನುತ್ತಿವೆ!

ಪ್ರತಿಫಲ: ಇವುಗಳ ಉಪಟಳ ತಾಳಲಾರದೇ ಕೆಲವರು ಮದ್ದು ಹಾಗು ಪಟಾಕಿಗಳನ್ನು ಸಿಡಿಸಿ ಓಡಿಸಲು ವ್ಯರ್ಥ ಪ್ರಯತ್ನ ಕೈಗೊಂಡಿದ್ದಾರೆ. ಸಪ್ಪಳಕ್ಕೆ ಬೆದರಿದ ಮಂಗಗಳು ದಿಕ್ಕಾಪಾಲಾಗಿ ಓಡುವ ಸಂದರ್ಭದಲ್ಲಿ ಹಲವಾರು ಮನೆಗಳ ಹೆಂಚುಗಳು ಜಖಂಗೊಂಡಿದ್ದು, ಇಲ್ಲಿನ ಪ್ರತಿಷ್ಟಿತ ಸುದ್ದಿ ಸಂಸ್ಥೆಗಳಲ್ಲಿ ಒಂದಾಗಿದ್ದ ಡಿಸಿಸಿ ಕಛೇರಿಯ ಅಲ್ಯುಮಿನಿಯಂ ಕೇಬಲ್ ಛತ್ರಿಗಳು, ಹಲವಾರು ಮನೆಗಳ ಟಿ.ವಿ ಆಂಟೇನಾಗಳು, ಮನೆಯ ಮುಂದೆ ನಿಲುಗಡೆ ಮಾಡಲಾಗಿದ್ದ ಕಾರಿನ ಟಾಪ್ ದಾಳಿಗೆ ಸಿಲುಕಿ ಅಪ್ಪಚ್ಚಿಯಾಗಿವೆ.

ವಾನರರ ಅಧ್ವಾನ: ಕೇವಲ ‘ಹಿಸ್’ ಎಂದು ಹಲ್ಲು ಕಿರಿದು ದೊಡ್ಡದಾದ ಕೋರೆ ಹಲ್ಲುಗಳನ್ನು ತೋರಿಸಿ ಮಕ್ಕಳನ್ನು ಹೆದರಿಸುತ್ತ ರಂಪಾಟ ಸೃಷ್ಠಿಸಿರುವ ಮಂಗಗಳಲ್ಲಿ ಕೆಂಪು ಮೂತಿಯ ಮಂಗಗಳು ಆಘಾತಕಾರಿಯಾಗಿ ಪರಿಣಮಿಸಿವೆ. ಈಗಾಗಲೇ ನಗರದ ಸಪ್ತಾಪುರ, ಮಿಚಿಗನ್ ಕಂಪೌಂಡ್ ಹಾಗು ಗಣೇಶನಗರಗಳಲ್ಲಿ ಈ ಮಂಗಗಳು ಜನರನ್ನು ಕಚ್ಚಿದ ಪ್ರಸಂಗಗಳು ಸಹ ವರದಿಯಾಗಿವೆ. ಮನೆಯ ಕಂಪೌಂಡ್ ಗೋಡೆ ಇಲ್ಲವೇ ಮೇಲ್ಛಾವಣಿಯ ಮೇಲೆ ಕುಳಿತುಕೊಂಡು ದಾಳಿ ನಡೆಸುವ ಈ ವಾನರರು ಈ ಮಾನವ ನಿರ್ಮಿತ ಮನೆಗಳು ನಮ್ಮ ಮನೆ ಎಂದು ಹಕ್ಕು ಸಾಧಿಸುತ್ತಿರುವಂತೆ ಮೇಲ್ನೋಟಕ್ಕೆ ತೋರುತ್ತದೆ.

ಕಾರಣ: ಈ ಎರಡೂ ಟೋಳಿಗಳಲ್ಲಿ ಸಾಕಷ್ಟು ಮಂಗಗಳಿದ್ದು, ಅವುಗಳಲ್ಲಿ ಹೆಣ್ಣು ಮಂಗಗಳಿಗೆ ಮುದ್ದಾದ ಅತಿ ಚಿಕ್ಕ ಮರಿಗಳಿವೆ. ಈ ಮರಿಗಳ ಸಂರಕ್ಷಣೆಗಾಗಿ ಕೆಲವೊಮ್ಮೆ ಗಂಡು ಮಂಗಗಳು ಜನರ ಮೇಲೆ ಎರಗುತ್ತಿವೆ. ನಾಯಿಗಳಿಂದಲೂ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಅವು, ವಾಹನಗಳ ಸಂಚಾರ, ಅವುಗಳ ಶಬ್ದ, ಕೆಲವೊಮ್ಮೆ ಅವುಗಳಿಂದ ವಾನರರಿಗೆ ಆದ ಅಪಘಾತ ಇತ್ಯಾದಿಗಳಿಂದ ಸದಾ ಬೆದರಿದಂತೆ ಕಂಡು ಬರುತ್ತಿದ್ದು, ಅನಿವಾರ್ಯವಾಗಿ ತಮ್ಮ ಆತ್ಮರಕ್ಷಣೆಗೋಸ್ಕರ ಜನರ ಮೇಲೆ ಎರಗುತ್ತಿವೆ. ಆದರೂ ಪ್ರಾಣಿ ಪ್ರಿಯರು ಹಾಗು ಕೆಲ ಸಹೃದಯರು
ಅವುಗಳಿಗೆ ಸ್ವಯಂ ಪ್ರೇರಣೆಯಿಂದ ಹಣ್ಣು ಮತ್ತು ಕಾಯಿ ನೀಡಿ ಅವುಗಳ ಸ್ನೇಹ ಸಂಪಾದಿಸಿದ್ದಾರೆ.

ದಾಂಡೇಲಿ ಕಾಡಿನಿಂದ: ಅರಣ್ಯ ಇಲಾಖೆಯ ಮೂಲಗಳ ಪ್ರಕಾರ ಈ ಕಾನನದ ಮಂಗಗಳು ಈ ಭಾಗದ ಸತತ ೪ ವರ್ಷದ ಬರಗಾಲದಿಂದ ತತ್ತರಿಸಿದ್ದು, ಕಾಡುಗಳಲ್ಲಿ ಕುಡಿಯಲು ನೀರು ಹಾಗು ಗಿಡಗಂಟಿಯಲ್ಲಿ ಯಾವುದೇ ಹಣ್ಣು ಸಿಗದ ಕಾರಣ ಹತಾಶಗೊಂಡು ಸಮೀಪದ ದಾಂಡೇಲಿ ಕಾಡಿನಿಂದ ಊರುಗಳಿಗೆ ತಮ್ಮ ಕುಟುಂಬ ಸಮೇತ ವಲಸೆ ಬಂದಿವೆ ಎನ್ನಲಾಗಿದೆ.

‘ಅಂತೂ ಕೇವಲ ಒಂದು ತಿಂಗಳಲ್ಲಿ ಅವುಗಳ ಉಪಟಳತಾಳಲಾರದೇ ಸಮೀಪದ ಪೊಲೀಸ್ ಠಾಣೆಗೆ, ಅರಣ್ಯ ಇಲಾಖೆಗೆ ಸಾಲದ್ದಕ್ಕೆ ಅಗ್ನಿಶಾಮಕ ದಳದ ಕಚೇರಿಗೆ ಫೋನಾಯಿಸಿದವರ ಸಂಖ್ಯೆ ಅಪಾರ. ಪಾಪ ಮಾನವರಿಗಾದರೆ ಈ ಎಲ್ಲ ಸೌಲಭ್ಯಗಳಿವೆ. ಆದರೆ ಕಳೆದ ೬೦ ವರ್ಷಗಳಿಂದ ಸತತವಾಗಿ ತನ್ನ ಆಸೆ, ದುರಾಸೆ, ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವ ಏಕೈಕ ಉದ್ದೇಶದಿಂದ ಸುತ್ತಮುತ್ತಲಿನ ಪರಿಸರದ ಮೇಲೆ ನಿರಂತರ ಪ್ರಹಾರಗೈಯ್ದ ವಿಚಾರವಂತ ಮಾನವ ಪ್ರಾಣಿಯನ್ನು ಈ ಪೂರ್ವಜರು ಅದೆಷ್ಟು ಸಹಿಸಿಕೊಂಡಿರಬೇಡ. ಈ ಪ್ರತಿಭಟನೆಯಿಂದ ಇನ್ನಾದರೂ ನಾವು ಪಾಠ ಕಲಿಯಬೇಕಿದೆ’ ಎನ್ನುತ್ತಾರೆ ಪರಿಸರವಾದಿ ಮುಕುಂದ ಮೈಗೂರ್.

ಅಂತೂ ಸುಸಂಸ್ಕೃತರ ನಾಡಾದ ಧಾರವಾಡದಲ್ಲಿ ಮುನಿದ ಪೂರ್ವಜರ ಅಧ್ವಾನ ನಮ್ಮೆಲ್ಲರಿಗೆ ಎಚ್ಚರಿಕೆಯ ಕರೆ ಘಂಟೆಯಾಗಿರಬಹುದು! ಅಲ್ಲವೇ?

  • ಪ್ರಚಲಿತ
~.~
  • Login or register to post comments
  • 179 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 11, 2008 - 9:59am — PusplataHosakeri

ಉ: ‘ನರರ’ ನಾಡಿಗೆ ‘ವಾನರರ’ ಲಗ್ಗೆ

PusplataHosakeri's picture

ಗುರುಗಳೆ ನೀವು ಹೇಳಿದ್ದು ಸರಿಯಾಗಿದೆ. ನಮಗೆಲ್ಲರಿಗು ಎಚ್ಚರಿಕೆಯ ಕರೆ ಘಂಟೆಯೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತಮ್ಮ ಮನೆಯ ಅಂಗಳ ಹಾಗು ಕಂಪೌಂಡ್ ಗೋಡೆಗೆ ಹತ್ತಿ ಬೆಳೆಸಿದ ಕೈತೋಟದ ಕುರಿತು ಉಲ್ಲಾಸ್ ಗುನಗಾ ವಿವರಣೆ. ಚಿತ್ರ: ಹರ್ಷ.
  • ಬಣ್ಣ ಸಹಿತ ಗಣಪತಿಯ ಸಾಧಕ-ಬಾಧಕಗಳು- ವಿಚಾರ ಸಂಕಿರಣ
  • ಕಂಪೌಂಡ್ ಗೋಡೆ ಹಾಗು ಮನೆಯ ಗೋಡೆಯ ಮಧ್ಯೆ ಗುನಗಾ ನಿಂತಿದ್ದಾರೆ. ಊಹಿಸಿ ಎಷ್ಟು ಜಾಗೆ ಇದೆ ಎಂದು! ಚಿತ್ರ: ಹರ್ಷ.
  • ಅವರೆಕಾಳಿನ ಕತೆ .....
  • ಈ ವಿಶಿಷ್ಟ ಬಾವಲಿಯ ಬಗ್ಗೆ ಗೊತ್ತೆ?
Syndicate content

ಲೇಖಕರು

harshavardhan v.sheelavant's picture

ಪೂರ್ಣ ಹೆಸರು
harshavardhan v. sheelavant

ಪರಿಚಯ

Assistant Professor, Institute of Mass Communication and Research, Hubli. Freelance Journalist. a netizen having own blog- 'arivinamarevu.blogspot.com.' Karnataka Media Academy awardee. AIR grade artist. Centre for Agricultural Media (CAM) Fellow. Love to contribute feature articles, farm crisis, rural and agri life. Happy to teach journalism, to promote citizen journalism.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
  • ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
  • ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ
  • ಮರಳಿ ಬರಲಿ ಬಾಲ್ಯ

ಇತ್ತೀಚಿನ ಪ್ರತಿಕ್ರಿಯೆಗಳು

  • ಪ್ರವೀಣ್
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 7, 2008 - 9:45am
  • mahesha
    ಉ: ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
    October 7, 2008 - 9:45am
  • srinivasps
    ಉ: ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
    October 7, 2008 - 9:16am
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 8:48am
  • mahesha
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
    October 7, 2008 - 8:45am
  • savithasr
    ಉ: ಗಾಂಧೀಸ್ಮರಣೆ
    October 7, 2008 - 8:28am
  • Sunil Jayaprakash
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
    October 7, 2008 - 8:01am
  • shylaswamy
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
    October 7, 2008 - 7:58am
  • Sunil Jayaprakash
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
    October 7, 2008 - 7:57am
  • Sunil Jayaprakash
    ಉ: ಸ್ವಲ್ಪನಗಿ
    October 7, 2008 - 7:42am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 65 ಅತಿಥಿಗಳು ಆನ್ಲೈನ್ ಇರುವರು.


ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |
ಶಕ್ತಿಯಧ್ಯಾತ್ಮಕದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator