ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು

January 31, 2006 - 5:43pm — shreekant.mishrikoti

ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು

ಪ್ರಜಾವಾಣಿ ( ೨೦೦೫ರ ದೀಪಾವಳಿ ವಿಶೇಷಾಂಕದಲ್ಲಿ ) ಕವಿತಾ ಸ್ಪರ್ಧೆಯ ತೀರ್ಪುಗಾರರು ಹೀಗೆ ಬರೆಯುತ್ತಾರೆ -

ಒಂದು ಓದಿಗೆ ತನ್ನನ್ನು ಬಿಟ್ಟುಕೊಟ್ಟು ಬಹುಬೇಗ ಖಾಲಿಯಾಗುವ ಕವಿತೆ ಅಲ್ಪಾಯುವಾದುದು. ಕವಿತೆಯ ಸಮ್ಮೋಹವಿರುವದೇ ಅದರ ನಿಗೂಢತೆಯಲ್ಲಿ . ಓದುವವರ ಮನಸ್ಸಿನಲ್ಲಿ ಬೇರುಗಳನ್ನು ಬಿಟ್ಟು ಅಲ್ಲಿನ ನೀರುಂಡು ಅಲ್ಲಿಯೇ ಹೂಬಿಡುವ ಕವಿತೆ ಚಿರಂಜೀವಿ. ಅಂಥ ಕವಿತೆಯು ಒಂದು ಕೈಮರವಷ್ಟೇ . ನಮ್ಮ ಸುಕೃತದಿಂದ ಅಂಥ ಕವಿತೆಗಳು ನಮಗೆ ಸಿಕ್ಕಾವು. '

ಎಂದು ಹೇಳುತ್ತಾರೆ.

ಈಗ ಈ ಕವಿತೆಯನ್ನು ನೋಡೋಣ ( www.udbhava.com ನಲ್ಲಿ 'ello hutti' ಎಂದು ಹುಡುಕಿ ಕೇಳಬಹುದು. ಶ್ರೀಯುತ ಸಿ. ಅಶ್ವತ್ಥ್ ಅವರು ಭಾವಪೂರ್ಣವಾಗಿ ಹಾಡಿದ್ದಾರೆ )

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಳಗೊಳಗೆ ಹರಿಯುವವಳು
ಜೀವ ಹಿಂಡಿ ಹಿಪ್ಪೆ ಮಾಡಿ ಒಳಗೊಳಗೆ ಕೊರೆಯುವವಳು
ಸದಾ ಗುಪ್ತಗಾಮಿನಿ
ನನ್ನ ಶಾಲ್ಮಲಾ
ಸದಾ ಗುಪ್ತಗಾಮಿನಿ
ನನ್ನ ಶಾಲ್ಮಲಾ

ಹಸಿರು ಉರಿವ ಎಲೆಗಳಲ್ಲಿ ಬಸಿರ ಬಯಕೆ ಒಸರುವವಳು
ತುಟಿ ಬಿರಿವ ಹೂಗಳಲ್ಲಿ ಬೆಂಕಿ ಹಾಡು ಉಸುರುವವಳು
ಸದಾ ತಪ್ತ ಕಾಮಿನಿ
ನನ್ನ ಶಾಲ್ಮಲಾ
ಸದಾ ತಪ್ತ ಕಾಮಿನಿ
ನನ್ನ ಶಾಲ್ಮಲಾ

ಭೂಗರ್ಭದ ಮೌನದಲ್ಲಿ ಜುಮ್ಮೆನುತ ಬಳುಕುವವಳು
ಅರಿವಿಲ್ಲದೆ ಮೈಯ ತುಂಬಿ ಕನಸಿನಲ್ಲಿ ತುಳುಕುವವಳು
ಸದಾ ಸುಪ್ತಮೋಹಿನಿ
ನನ್ನ ಶಾಲ್ಮಲಾ
ಸದಾ ಸುಪ್ತಮೋಹಿನಿ
ನನ್ನ ಶಾಲ್ಮಲಾ

ನನ್ನ ಬದುಕ ಭುವನೇಶ್ವರಿ ನನ್ನ ಶಾಲ್ಮಲಾ
ನನ್ನ ಹೃದಯ ರಾಜೇಶ್ವರಿ ನನ್ನ ಶಾಲ್ಮಲಾ
ಸದಾ ಗುಪ್ತಗಾಮಿನಿ ನನ್ನ ಶಾಲ್ಮಲಾ
ಸದಾ ಗುಪ್ತಗಾಮಿನಿ ನನ್ನ ಶಾಲ್ಮಲಾ

---

ಈ ಕವನ ಒಂದು ಸಲಕ್ಕೆ ಅರ್ಥವಾಗುವದಿಲ್ಲ ; ಆದರೆ ಏನೋ ಆಕರ್ಷಣೆಯಂತೂ ಇದೆ.
ಯಾವುದರ ಬಗ್ಗೆ ? ಅಥವಾ ಯಾರ ಬಗ್ಗೆ ಇದೆ? .

ಮೊದಲು ಇದನ್ನು ಬರೆದ ಕವಿಯ ಕುರಿತು ನೋಡೋಣ . ಇವರು ಶ್ರೀ ಚಂದ್ರಶೇಖರ ಪಾಟೀಲರು. ಹಿಂದೆ ಬಂಡಾಯ ಸಾಹಿತ್ಯ ಚಳುವಳಿಯ ಮುಂಚೂಣಿಯಲ್ಲಿದ್ದರು. ಸದ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು. ಇವರು ಧಾರವಾಡದವರು . ಅಲ್ಲಿ ಶಾಲ್ಮಲಾ ನದಿ ಉಗಮವಾಗಿ ಸರಸ್ವತಿ ನದಿಯ ಹಾಗೆ ಗುಪ್ತಗಾಮಿನಿಯಾಗಿ ನೆಲದಡಿಯೇ ಹರಿಯುತ್ತದೆ ಎಂದು ಹೇಳುತ್ತಾರೆ ಎಂಬುವದನ್ನು ಇಲ್ಲಿ ಗಮನಿಸಬೇಕು.

ಮೊದಲು ನದಿಯ ಬಗ್ಗೆ ಹೇಳುತ್ತಿದ್ದಾರೆ ಅನಿಸುತ್ತದೆ , ನಂತರ ಇಲ್ಲ ಪ್ರಿಯತಮೆಯ ('ನನ್ನ ' ಶಾಲ್ಮಲಾ ) ಬಗ್ಗೆ ಅನಿಸುತ್ತದೆ ನಂತರ ಧಾರವಾಡದ ಹಸಿರು , ಕೆಂಪು ಬಣ್ಣದ ಗುಲ್ಮೊಹರ್ ಹೂಗಳನ್ನು ನೆನಪಿಸುವ ಸಾಲಿವೆ. 'ಅರಿವಿಲ್ಲದೆ ಮೈಯ ತುಂಬಿ ಕನಸಿನಲ್ಲಿ ತುಳುಕುವವಳು' ಮತ್ತೆ ನಲ್ಲೆಯ ಬಗ್ಗೆ ಎನಿಸುತ್ತದೆ. ಮತ್ತೆ ಭುವನೇಶ್ವರಿ , ರಾಜೇಶ್ವರಿ , ಗುಪ್ತಗಾಮಿನಿ ಶಬ್ದಗಳು ದಾರಿ ತಪ್ಪಿಸುತ್ತವೆ. ಬಹುಶ: ಮೈತುಂಬಿದ ಕನ್ನಡಾಭಿಮಾನದ ಕುರಿತೇನೋ ಅನಿಸುತ್ತದೆ. ಅಥವಾ ಕಾವ್ಯ/ಸಾಹಿತ್ಯಸರಸ್ವತಿಯ ಕುರಿತೂ ಇರಬಹುದು.

ಬಂಡಾಯ ನವ್ಯಕವಿಗಳಿಂದ ರೋಮ್ಯಾಂಟಿಕ್ ಕವನವನ್ನು ಬರೆಸಿರುವದು ಧಾರವಾಡದ ಅಂತರ್ಗತ ಶಕ್ತಿಯೇನೋ ?

  • ಕಾವ್ಯ ಮತ್ತು ಕವನ
~.~
  • Login or register to post comments
  • 784 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶಾಲ್ಮಲಾ!!ಅಯ್ಯಯ್ಯೋ!!!ಚೀ!!ಥೋತೊತೊ!!!
  • ಗುಪ್ತಗಾಮಿನಿ ಶಾಲ್ಮಲಾ
  • 'ಮುಕ್ತ' ಹಾಡಿನ ಹಿಂದೆ...
  • ಶಾಲ್ಮಲೆಯ ಮಲಟೀಕ್ಯಾಸ್ಟು
  • ಬಯಕೆ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ

ಇತ್ತೀಚಿನ ಪ್ರತಿಕ್ರಿಯೆಗಳು

  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 6:41pm
  • madhava_hs
    ಉ: ಕುಮಾರವ್ಯಾಸ ಭಾರತ
    July 24, 2008 - 6:41pm
  • mahesha
    ಉ: ಸ್ತ್ರೀಸೌಂದರ್ಯ
    July 24, 2008 - 6:04pm
  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 23 ಅತಿಥಿಗಳು ಆನ್ಲೈನ್ ಇರುವರು.


ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು |
ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ ||
ನಿತ್ಯಜೀವನದಿ ನೀನಾ ನಯವನನುಸರಿಸೊ |
ಸತ್ವದಾಶೆಯ ನೀಗಿ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator