ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ತಪ್ಪಿ ನಡೆಸ ಸರ್ಕಾರ

August 20, 2008 - 10:29pm — Balaraj DK

ಇದು ಖಂಡಿತಾ ನಾಚಿಕೆಗೇಡಿತನದ ವಿಚಾರ. ಯಡಿಯೂರಪ್ಪ ಸರ್ಕಾರಕದಕೆ ಕಿಂಚಿತ್ತೂ ರೈತರ ಮೇಲೆ ಪ್ರೀತಿ ಅಷ್ಟೇಕೆ ಸಾಮಾನ್ಯ ಜವಾಬ್ದಾರಿ ಕೂಡ ಇಲ್ಲ. ಮತದಾರ ಪ್ರಭುವಿನ ತೀರ್ಮಾನಕ್ಕೆ ಇದು ಛಡಿಯೇಟು ಅಲ್ಲದೆ ಮತ್ತೇನು...

ಹೌದು ನಾನು ಕರ್ನಾಟಕದ ಅತೀವೃಷ್ಠಿಗೆ ಸ್ಪಂದಿಸದೆ ಅಕ್ಕಗಾಗಿ ಹೊರಟಿರುವ ಸವಾರಿ ಕಂಡು ಹೀಗೆನ್ನಬೇಕಾಯಿತು. ಒಂದೆಡೆ ಅಕ್ಕ ಸಂಸ್ಥೆಯಿಂದ ಅಧಿಕೃತ ಆಹ್ವಾನ ಬಂದಿರುವ ಕಲಾವಿದರ ಪಡೆ ಒಂದೆಡೆಯಾದರೆ, ಪುಕ್ಕಟೆಯಾಗಿ ವಿದೇಶ ರೌಂಡ್ ಹೊಡೆಯಲು ಹಾತೊರೆಯುತ್ತಿರುವರೇ ಹೆಚ್ಚಾಗಿದ್ದಾರೆ. ತೀವ್ರ ಟೀಕೆಗೆ ಓಳಗಾಗಿ ಮಾತು ಬದಲಿಸಿದ ಮುಖ್ಯಮಂತ್ರಿ ಕ್ಷಣ ಮಾತ್ರದಲ್ಲೇ ಅದನ್ನು ಬದಲಾಯಿಸಿದು ತಲೆ ತಗ್ಗಿಸಬೇಕಾದ ವಿಚಾರ.

ಇಲ್ಲಿ ಮೂಲಭೂತ ವಿಚಾರವಾಗಿ ಒಂದು ಎದುರಾಗುತ್ತೆ. ಚುನಾವಣಾ ಟಿಕೆಟ್ ಗಿಟ್ಟಿಸುವುದರಿಂದ ಹಿಡಿದು, ಗುಂಡು ತುಂಡು ಸೇರಿದಂತೆ ಕೋಟ್ಯಾಂತರ ರೂಪಾಯಿ ವ್ಯಯಿಸಲು ತುಯಾರಿರುತ್ತಾರೆ. ಆದರೆ ಅಧಿಕಾರ ಸಿಕ್ಕ ಮೇಲೆ ಸ್ವಂತ ಖರ್ಚಿನಲ್ಲಿ ಪ್ರವಾಸ ಇವರು ಯಾಕೆ ಕೈಗೊಳ್ಳಲಲ್ಲ. ಹೋ ಹೀಗಿರಬೇಕು ಪುಕ್ಕಟೆಯಾಗಿ ಬರುವುದಾದದರೆ ನನಗೂ ನಮ್ಮಪ್ಪನಿಗೂ ಇರಲಿ ಅನ್ನುವ ಮನೋಭಾವ ಇವರದ್ದಾಗಿರಬೇಕು ಅಲ್ಲವೇ.!

ಈ ಹಿಂದೆಯೇ ಸಾವಿರ ರೈತರನ್ನು ಚೀನಾ ಪ್ರವಾಸ ಕೈಗೊಳ್ಳಲು ಹಣಕಾಸು ಒದಗಿಸಲು ಸರ್ಕಾರ ನಡೆಸಿದೆ ಎಂಬ ಸುದ್ದಿ. ಖಂಡಿತ ಪ್ರವಾಸ ಕೈಗೊಳ್ಳುವ ಯಾರು ಕೂಡ ರೈತನಾಗಿರುವುದಿಲ್ಲ. ಇವರೆಲ್ಲಾ ಪಕ್ಷದ ಕಾರ್ಯಕರ್ತರಲ್ಲದೆ ಬೇರಾರಿಗೂ ಅವಕಾಶ ದುರ್ಲಭ. ಯಾರಿಗೆ ಪಕ್ಷದ ಪರ ಒಲವು ಹಾಗೂ ಅನುಚೇಷ್ಟೆಗಳು ಹೊಂದಿದ್ದಾರೋ ಅವರಿಗೆ ಮಾತ್ರ ಈ ಸುವರ್ಣಾವಕಾಶ.

ಖ್ಯಾತ ಕಾದಂಬರಿಕಾರ ಎಸ್‌ ಎಲ್ ಬೈರಪ್ಪ ಒಂದು ನಿದರ್ಶನದ ಮೂಲಕ ಇದನ್ನು ಸೂಚ್ಯವಾಗಿ ಖಂಡಿಸಿದ್ದಾರೆ. ( ವಿಕ ಪತ್ರಿಕೆ) ಆದರೂ ನಮ್ಮದು ಚಂಡಿ ಕಂಡ ನಾಡಲ್ಲವೇ... ಹೇಳಿದ್ದನ್ನು ಬಿಟ್ಟು, ಮಾಡಬೇಕಿದ್ದನ್ನು ಬಿಟ್ಟು ಬೇರೆಲ್ಲಾ ಮಾಡುವ ಜಾಯಮಾನ.

ರೈತರ ಹೆಸರಲ್ಲಿ ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಇಂದು ಅವರ ಮಗ್ಗುಲಿಗೆ ಒದೆಯಲಾರಂಭಿಸಿದ್ದಾರೆ. ಉತ್ತರ ಕರ್ನಾಟಕದ ಜನತೆ ಪ್ರವಾಹದ ನೀರಲ್ಲಿ ಕಣ್ಣೀರಿಡುತ್ತಿದ್ದಾರೆ. ಇದು ಸಿಎಂಗಾಗಲೀ ಸ್ಥಳೀಯ ಜನಪ್ರತಿನಿಧಿಗಳಿಗಾಗಲಿ ಗೊತ್ತಿಲ್ಲವೇ. ಅಥವಾ ಅಧಿಕಾರ ಬಂದೊಡನೆ ಮತದಾರರ ಚಿಂತೆ ಯಾಕೆ ಅನ್ನುತ್ತಿದ್ದಾರ.. ಅಥವಾ ಚುನಾವಣೆ ಸಮೀಪಿಸಿದಾಗ ಮತದಾರ ಪ್ರಭುಗಳನ್ನು ಓಲೈಸಿಕೊಂಡ್ರೆ ಆಯಿತು ಬಿಡು ಅಂತೀದಾರ...

ಅದರಲ್ಲೂ ಒಂದು ವಿಶೇಷ ಅಥವಾ ತಮಾಷೆಯ ಏನಾದರು ಅಂದುಕೊಳ್ಳಿ. ಅಕ್ಕ ಪ್ರಿಯ ಅಮೇರಿಕನ್ನರಿಗೆ ತಿರುಪತಿಯ ಲಾಡು ಕೂಡ ರವಾನೆಯಗುತ್ತಿದೆ. ಅದು ಐದು ಸಾವಿರ ಲಾಡುಗಳು ಅಮೇರಿಕಾಕ್ಕೆ ಸಿದ್ದವಾಗಿವೆ. ಅದು ಸಿಎಂ ಜೊತೆಗೆಯೇ.

ಮಾನ್ಯ ಯಡಿಯೂರಪ್ಪನವರೇ ಅನ್ನದಾತ ಮರೆತು ಅಧಿಕಾರ ಚುಕ್ಕಾಣಿ ನಡೆಸಿದ ಅನೇಕ ಸರ್ಕಾರಗಳು ನೆಲ ಕಚ್ಚಿವೆ. ಅದು ನಿಮ್ಮ ನೆನಪಿನಲ್ಲಿರಲಿ. ಬಹು ಉತ್ಸಾಹದಿಂದ ಕಾರ್ಯಾರಂಭ ಮಾಡಿದ್ರಿ ನಿಜ. ಅನೇಕ ರೀತಿಯ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ್ದೀರಾ.. ಆದರೆ ಈಗೇಕೆ ನಿಮ್ಮ ಬುದ್ದಿ ಕೈಕೊಟ್ಟಿತ್ತೋ ಗೊತ್ತಿಲ್ಲ.

ಮುಂದಿನ ವರ್ಷಗಳಲ್ಲಿ ನಿಮ್ಮ ಆಪ್ತೇಷ್ಟರ ಹಾಗೂ ನಾಯಕರ ಹಸಿವು ತಣಿಸುವಂತರಾಗಿ. ಪ್ರವಾಹ, ಅತೀವೃಷ್ಠಿ ಹಾಗೂ ಬೆಂಗಳೂರಿನಂತಹ ಸರಣಿ ಬಾಂಬ್‌ಗಳ ವಿಚಾರಕ್ಕೆ ಮೊದಲ ಆದ್ಯತೆ ನೀಡಿ. ಅದು ಬಿಟ್ಟು ಕ್ಷಣ ಕ್ಷಣಕ್ಕೆ ಅಕ್ಕಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ನೀಡುವುದು ಬಿಟ್ಟು ಬಿಡಿ. ಬೂಕನೆಕೆರೆ ಯಡಿಯೂರಪ್ಪನವರೇ ನೀವು ರೈತರು. ಹಾಗೆ ಪ್ರವಾಹ ಹಾಗೂ ಅತೀವೃಷ್ಠಿಗೆ ಒಳಗಾದ ಜನರೂ ರೈತರೇ.. ಈಗಲಾದ್ರು ಒಮ್ಮೆ ಯೋಚಿಸಿ ಅವಶ್ಯಕತೆ ಹಾಗೂ ಆಹ್ವಾನವಿದ್ದವರನ್ನು ಮಾತ್ರ ಕರೆದೊಯ್ಯುವಂತರಾಗಿ ಮಾನ್ಯ ಮುಖ್ಯಮಂತ್ರಿಗಳೇ..
- ಬಾಲರಾಜ್ ಡಿ.ಕೆ

ಪ್ರಚಲಿತ

  • ಚಿಂತನೆ
~.~
  • Login or register to post comments
  • 237 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 20, 2008 - 11:41pm — gangadharg

ಉ: ತಪ್ಪಿ ನಡೆಸ ಸರ್ಕಾರ

gangadharg's picture

ಸಾರ್ ಯಾಕೋ ಗೊತ್ತಿಲ್ಲ ಎರಡೆರಡು ಸಾರಿ ನಿಮ್ ಲೇಖ್ನಾ ನೋಡ್ದೆ ಗೂಗಲ್ ರೀಡರ್ನಲ್ಲಿ. ಎರಡೆರಡು ಸಾರಿ ಹಾಕಿದ್ರಾ ಹ್ಯಾಗೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತಪ್ಪಿ ನಡೆದ ಸರ್ಕಾರ
  • ಮಾನ್ಯ ಶ್ರೀ. ಯಡಿಯೂರಪ್ಪನವರು, ಇಂದಿನ ಕರ್ನಾಟಕರಾಜ್ಯದ ಮುಖ್ಯ ಮಂತ್ರಿಗಳು.
  • ವಿಶ್ವಾಸಮತದಲ್ಲಿ ಗೆಲುವು ಸಾಧಿಸಿದ, ಹೊಸ ಬಿಜೆಪಿ ಸರ್ಕಾರ !
  • B-A-D ಹಾಗೂ ರಾಜಕಾರಣ
  • ಯಡ್ಡಿಯ ಸೈಕಲ್ ಗೆಲುವು
Syndicate content

ಲೇಖಕರು

Balaraj DK's picture

ಪೂರ್ಣ ಹೆಸರು
ಬಾಲರಾಜು ಡಿ.ಕೆ.

ಪರಿಚಯ

ಈಗ ತಾನೆ ಸ್ನಾತಕೋತ್ತರ ಪದವಿ ಮುಗಿಸಿ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಓದುವುದು, ಬರೆಯುವುದರಲ್ಲಿ ಆಸಕ್ತಿಯಿದೆ. ಕನ್ನಡಪ್ರಭ ಪತ್ರಿಕೆಯ ಕಾಲೇಜು ರಂಗ ಅಂಕಣದಲ್ಲಿ ಲೇಖನಗಳು ಅಚ್ಚಾಗಿವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
  • ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
  • ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
  • ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
  • ಮಕ್ಕಳ ಹಾಡು
  • ಉಗ್ರವಾದ - ಇದೊಂದು ಹಳೇ ಉದ್ಯೋಗ
  • ಹೀಗೊ೦ದು ರಸಕ್ಷಣ

ಇತ್ತೀಚಿನ ಪ್ರತಿಕ್ರಿಯೆಗಳು

  • sudhimail
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:54pm
  • benaka
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 1:52pm
  • Aravind M.S
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:16pm
  • mahesha
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:13pm
  • sudatta
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:11pm
  • kannadakanda
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:05pm
  • Achala Sethu
    ಉ: ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
    December 3, 2008 - 1:00pm
  • savithasr
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 12:55pm
  • mahesha
    ಉ: ಭ್ರಷ್ಟ ರಾಷ್ಟ್ರಕ್ಕೆ ಭ್ರಷ್ಟ ಪ್ರಜೆಗಳೇ ಕಾರಣ
    December 3, 2008 - 12:39pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 3, 2008 - 12:30pm
ಇನ್ನಷ್ಟು
ಈಗಿನಂತೆ 18 ಸದಸ್ಯರು ಮತ್ತು 451 ಅತಿಥಿಗಳು ಆನ್ಲೈನ್ ಇರುವರು.


ಮಾನವರು ಯುಧ್ಧಕ್ಕೆ ಅಂತ್ಯವನ್ನು ತರಬೇಕು, ಇಲ್ಲದಿದ್ದರೆ ಯುಧ್ಧ ಎಲ್ಲರಿಗೂ ಅಂತ್ಯವನ್ನು ತರುತ್ತದೆ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator