ಝೆನ್ ಕಥೆ ೩೩: ಸಾವಧಾನ!

"ನಾನು ನಿಮ್ಮ ಬಳಿ ಕತ್ತಿವರಸೆಯ ಕೌಶಲ ಕಲಿಯಬೇಕೆಂದಿದ್ದೇನೆ. ಪರಿಣತಿಯನ್ನು ಪಡೆಯಲು ಎಷ್ಟು ಕಾಲ ಬೇಕಾದೀತು?" ಎಂದು ಕೇಳಿದ.
ತೀರ ಸಹಜವೆಂಬಂತೆ ಗುರು "ಹತ್ತು ವರ್ಷ" ಎಂದ.
"ನನಗೆ ಬೇಗ ಕಲಿಯಬೇಕೆಂದು ಇಷ್ಟ. ಪ್ರತಿ ದಿನವೂ, ದಿನಕ್ಕೆ ಹದಿನೆಂಟು ಗಂಟೆಯ ಕಾಲ ಬೇಕಾದರೆ ಅಭ್ಯಾಸ ಮಾಡಬಲ್ಲೆ. ಹಾಗಾದರೆ ಎಷ್ಟು ಕಾಲ ಹಿಡಿದೀತು?" ಆತುರದಿಂದ ಯುವಕ ಕೇಳಿದ.
ಗುರು ಒಂದು ಕ್ಷಣ ಯೋಚನೆ ಮಾಡಿ "ಇಪ್ಪತ್ತು ವರ್ಷ" ಎಂದ.
[ನಮ್ಮ ಮಕ್ಕಳ ಶಿಕ್ಷಣದ ಬಗ್ಗೆ ನಾವು ಯೋಚಿಸುವ ರೀತಿಯನ್ನು ನೆನಪಿಸಿಕೊಳ್ಳಿ!]

- Login or register to post comments
- 1449 hits
- Email this page





RSS:
ಪ್ರತಿಕ್ರಿಯೆಗಳು
ಇದು ಬಹಳವೇ ಇಷ್ಟವಾಯಿತು
ನಾನೂ ವಯೋಲೀನ್ ಕಲಿಯುವ ಪ್ರಾರಂಭದಲ್ಲಿ ಹೀಗೆಯೇ ಯೋಚಿಸಿದ್ದೆ. ನಂತರ ಜ್ಞಾನೋದಯವಾಯಿತು. (ಜ್ಞಾನ - ಉದಯ ಇವಕ್ಕೆ ಕನ್ನಡ ಪದ ಯಾವುದು).
ತಿಳುವಳಿಕೆ
ಜ್ಞಾನ = ತಿಳುವಳಿಕೆ
ಉದಯ = ಹುಟ್ಟುವುದು
ಜ್ಞಾನೋದಯ = ತಿಳುವಳಿಕೆ ಹುಟ್ಟಿಕೊಂಡಿತು. ಹೀಗೆ ಹೇಳಬಹುದಾ ನೋಡಿ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಉ: ಇದು ಬಹಳವೇ ಇಷ್ಟವಾಯಿತು
ಉದಯ = ಹುಟ್ಟುವುದು
ಜ್ಞಾನೋದಯ = ತಿಳುವಳಿಕೆ ಹುಟ್ಟಿಕೊಂಡಿತು. ಹೀಗೆ ಹೇಳಬಹುದಾ ನೋಡಿ.
ನಾನೂ ವಯೋಲೀನ್ ಕಲಿಯುವ ಪ್ರಾರಂಭದಲ್ಲಿ ಹೀಗೆಯೇ ಯೋಚಿಸಿದ್ದೆ. ನಂತರ ತಿಳಿವಳಿಕೆ ಮೂಡಿತು.
ಜ್ಞಾನ ಎಂಬುದಕ್ಕೆ ಕನ್ನಡ ಪದ
ತಿಳಿವು ಎಂಬುದು ಜ್ಞಾನ ಎಂಬ ಪದಕ್ಕೆ ಸಮನಾದ ಅರ್ಥ ನೀಡುವ ಕನ್ನಡ ಪದ. ಜ್ಞಾತ=known ಎಂಬುದಕ್ಕೆ ತಿಳಿದದ್ದು, ತಿಳಿವು ಇವು ಸೂಕ್ತ ಎಂದು ತೋರುತ್ತದೆ.
ಉದಯ ಎಂಬುದಕ್ಕೆ ಮೂಡು ಸೂಕ್ತ. ಸೂರ್ಯ ಮೂಡಿದ ಇತ್ಯಾದಿ.
ಜ್ಞಾನೋದಯ ಎಂಬುಕ್ಕೆ ತಿಳಿವು ಮೂಡಿತು ಸರಿಯಾದ ಕನ್ನಡ ಬಳಕೆ ಅನಿಸುತ್ತದೆ.
ಅರಿವು ಎಂಬ ಇನ್ನೊಂದು ಪದವನ್ನು awareness ಎಂಬ ಅರ್ಥದಲ್ಲಿ ಬಳಸುವುದು ಒಳ್ಳೆಯದೆಂದು ತೋರುತ್ತದೆ. ತಿಳಿವು ನಮಗೆ ಈಗಾಗಲೇ ಗೊತ್ತಿದ್ದದ್ದು ಮತ್ತೆ ಮನಸ್ಸಿಗೆ ಬರುವುದು. ಅರಿವು ಇಡೀ ವ್ಯಕ್ತಿತ್ವಕ್ಕೆ ಆಗುವ ಅನುಭವಾಘಾತ! ಅದಕ್ಕೇ ವಚನಗಳಲ್ಲಿ ತಿಳಿವಿಗಿಂತ ಅರಿವು ಮಿಗಿಲು ಎಂಬ ಧೋರಣೆ ಇದೆ.