24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಝೆನ ಕಥೆ ೩೬: ಛತ್ರ

February 6, 2006 - 5:11pm
olnswamy

ತಲೆಮಾರುಗಳು
 

 

  ಸುಪ್ರಸಿದ್ಧ ಝೆನ್ ಗುರುವೊಬ್ಬ ರಾಜನ ಅರಮನೆಯ ಬಳಿಗೆ ಬಂದ. ಸೀದಾ ರಾಜನ ಬಳಿಗೆ ಹೋದ.

ಸಭೆಯಲ್ಲಿ ಕುಳಿತಿದ್ದ ರಾಜ ಅವನನ್ನು ಗುರುತಿಸಿದ. "ಏನು ಬೇಕಾಗಿತ್ತು?" ಎಂದು ಕೇಳಿದ.

"ಈ ಛತ್ರದಲ್ಲಿ ಇವತ್ತು ರಾತ್ರಿ ಉಳಿಯಬೇಕು" ಅಂದ ಗುರು.

"ಇದು ನನ್ನ ಅರಮನೆ, ಛತ್ರವಲ್ಲ" ಎಂದ ರಾಜ.

"ನಿನಗಿಂತ ಮೊದಲು ಯಾರಿದ್ದರು ಇಲ್ಲಿ?"

"ನನ್ನ ತಂದೆ. ಈಗ ಅವರು ತೀರಿ ಹೋಗಿದ್ದಾರೆ."

"ಅವರಿಗಿಂತ ಮೊದಲು?"

"ನನ್ನ ತಾತ ಇಲ್ಲಿದ್ದರು. ಅವರೂ ಈಗಿಲ್ಲ."

"ಎಲ್ಲರೂ ಕೊಂಚ ಕಾಲ ಇದ್ದು ಹೋಗುವ ಈ ಜಾಗ ಛತ್ರವಲ್ಲದೆ ಬೇರೆ ಇನ್ನೇನು?"

 

[ವ್ಯಾಸ ತನ್ನ ಭಾರತದಲ್ಲಿ ಹೇಳುತ್ತಾನೆ: ದಿನವೂ ಪ್ರಾಣಿಗಳು ಸಾಯುತ್ತಿದದ್ದರೂ ಪ್ರತಿಯೊಂದು ಜೀವಿಯೂ ತಾನು ಶಾಶ್ವತವಾಗಿ ಇರುತ್ತೇನೆ ಅಂದುಕೊಳ್ಳುವುದೇ ಈ ಲೋಕದ ವೈಶಿಷ್ಟ್ಯ]


No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by bhatpp on
ಅಥವಾ ಪುರಂದರದಾಸರು ಹೇಳಿದಂತೆ .. "ಮುನ್ನ ಶತಕೋಟಿ ರಾಯರುಗಳಾಳಿದ ನೆಲವ ತನ್ನದೆಂದು ಶಾಸನವ ಬರೆಸಿ .. ಆರು ಹಿತವರು ನಿನಗೆ, ನಾರಿಯೋ, ಧಾರುಣಿಯೋ ..?" ಧಾರುಣಿ, ಧನದ ವ್ಯಾಮೋಹ ಅನಾದಿ ಕಾಲದಿಂದಲೂ ಜನರನ್ನು ಬಿಟ್ಟಿಲ್ಲ!

Submitted by JAYADEV on
ಸರ್..., ನನಗೆ ತಿಳಿದಂತೆ ಝೆನ್ ಕತೆಗಳು ಈ ತರಹ ಸ್ಪಷ್ಟವಾಗಿ ಕೊನೆಯಲ್ಲಿ ಮೋರಲ್ ಹೇಳುವುದಿಲ್ಲ. ಅವುಗಳಲ್ಲಿ ಮೋರಲ್ ಅಥವ ಎಸ್ಸೆನ್ಸ್ ಅಡಕವಾಗಿದ್ದು ಬಹಳವಾಗಿ ಯೋಚಿಸಬೇಕಾಗುತ್ತದೆ. ನನ್ನ ಅನಿಸಿಕೆ ಸರಿಯೇ? ತಪ್ಪೇ? ಸ್ವಲ್ಪ ವಿವರಿಸಿ ಹೇಳ್ತೀರಾ? ಜಯದೇವ ಪ್ರಸಾದ. ’ಮೊಳೆಯಾರ’ , ಉಡುಪಿ.

Submitted by olnswamy on
ನಿಮ್ಮ ಅನಿಸಿಕೆ ಬಹಳ ಮಟ್ಟಿಗೆ ಸರಿ. ಆದರೆ ಹಾಗೆ ಸ್ಪಷ್ಟವಾಗಿ ಉದ್ದೇಶವನ್ನು ಹೇಳುವ ಕಥೆಗಳೂ ಇವೆ. ಝೆನ್ ಕಥೆಗಳಲ್ಲಿ ಬರುವ ಕೋನ್ ಎಂದು ಕರೆಯಲಾಗುವ ರಚನೆಗಳು, ಕನ್ನಡದ ಮುಂಡಿಗೆಗಳ ಹಾಗೆ, ಬೆಡಗಿನ ವಚನಗಳ ಹಾಗೆ ಇರುತ್ತವೆ. ಅವು ಮಾತ್ರ ಯಾವುದೇ ನೀತಿಯನ್ನು ಬಾಯಿ ಬಿಟ್ಟು ಹೇಳುವುದಿಲ್ಲ. ನಾಗಭೂಷಣ