ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಕುಚೇಲ(ಸುಧಾಮ)ನ ಭಾಗ್ಯ- ಮಾಸ್ತಿಯವರ ಕಥೆ

February 21, 2006 - 2:28pm — shreekant.mishrikoti

ಶ್ರೀ ಕೃಷ್ಣನ ಬಾಲ್ಯಗೆಳೆಯ ಸುಧಾಮನ ಕಥೆ ನಿಮಗೆ ಗೊತ್ತು. ಅದನ್ನು ಕಥೆಗಾರ ಮಾಸ್ತಿಯವರು ಹೇಗೆ ನೋಡುತ್ತಾರೆ ಗೊತ್ತೆ ?
ಶ್ರೀ ಕೃಷ್ಣ ಈಗ ರಾಜನಾಗಿದ್ದಾನೆ . ಆದರೆ ಬದಲಾಗಿಲ್ಲ , ಬಾಲ್ಯದ ಗೆಳೆತನ ಮರೆತಿಲ್ಲ . ಕಡುಬಡತನದಲ್ಲಿ ಜೀವನ ಸಾಗಿಸುತ್ತಿರುವ ಸುಧಾಮ ಹೆಂಡತಿಯ ಒತ್ತಾಯಕ್ಕೆ ಮಣಿದು ಸಹಾಯ ಯಾಚಿಸಿ ಬಂದಿದ್ದಾನೆ . ಆದರೆ ಸ್ವಾಭಿಮಾನಿಯಾದ ಆತ ಗೆಳೆಯನನ್ನು ಬೇಡಲೊಲ್ಲ . ಆತ ಗೆಳೆಯನ ಎಳೆತನದ ಮೆಚ್ಚಿನ ತಿಂಡಿಯಾದ ಒಣ ಅವಲಕ್ಕಿಯನ್ನು ಕಟ್ಟಿಕೊಂಡು ಬಂದಿದ್ದಾನೆ . ಗೆಳೆಯನ ರಾಜ ವೈಭವ ಕಂಡು ಸಂಕೋಚದಿಂದ ಅದನ್ನು ಕೊಡದೆ ಇದ್ದಾನೆ. ಆದರೆ ಕೃಷ್ಣ ಬಿಡದೆ ಕಸಿದು ತಿಂದು ತನ್ನ ಹೆಂಡತಿಯರಿಗೆ ತಿನ್ನಿಸಿ ಸಂತೋಷಪಡುತ್ತಾನೆ . ಗೆಳೆಯನಿಗೆ ಬಹಳಷ್ಟು ಆದರ ಆತಿಥ್ಯ ಮಾಡುತ್ತಾನೆ . ಸುಧಾಮ ಏನೂ ಸಹಾಯ ಬೇಡುವದಿಲ್ಲ. ಹಾಗೆಯೇ ಮರಳುತ್ತಾನೆ .
ವಾಪಸು ತನ್ನ ಮನೆಯ ಹತ್ತಿರ ಹೋದಾಗ ಅಲ್ಲಿ ಅರಮನೆ ಸಕಲ ಸಮಗ್ರಿ , ವೈಭೋಗ ಕಂಡು ಬರುತ್ತದೆ . ಶ್ರೀ ಕೃಷ್ಣನ ಕಡೆಯವರು ಇದನ್ನೆಲ್ಲ ವ್ಯವಸ್ಥೆ ಮಾಡಿರುವದು ಅವನಿಗೆ ತಿಳಿಯುತ್ತದೆ. ಹೆಂಡತಿಯ ಆಸೆ ಈಡೇರಿದುದು , ಅವಳ ಕಷ್ಟ ದೂರವಾದುದು ಸಂತೋಷ . ಅವನ ಗುಡಿಸಲನ್ನು ಅವರು ಉಳಿಸಿದ್ದಾರೆ . ಇದನ್ನು ನೋಡಿ ಸುಧಾಮ ಅನ್ನುತ್ತಾನೆ - "ಒಳ್ಳೆಯದಾಯಿತು . ನಿನ್ನ ಆಸೆ ಈಡೇರಿತು . ನನ್ನ ಆಸೆ ಒಂದಿದೆ . ಅರಮನೆ ಕಟ್ಟಿದ ಮಹಾರಾಯರು ನನ್ನ ಗುಡಿಸಲನ್ನು ಉಳಿಸಿದ್ದಾರೆ . ಗೆಳೆಯನ ಪ್ರೀತಿಯ ಗುರುತು ಅಂತ ಈ ಅರಮನೇನ , ಅದರಲ್ಲಿ ನಿನ್ನನ್ನ , ನೋಡುತ್ತ ಹಿರಿಯರಿಂದ ಬಂದದ್ದು ಅಂತ ನಾನು ಆ ಗುಡಿಸಲಲ್ಲಿ ಬಾಳಬೇಕು ಅನ್ನೋದು ನನ್ನ ಆಸೆ . "
ಸುಧಾಮ ಅಂತೆಯೇ ಬಾಳಿದ. ಅರಮನೆಯನ್ನು ಬೇಡ ಎನ್ನಲಿಲ್ಲ , ತನ್ನ ಗುಡಿಸಲನ್ನು ಬಿಡಲಿಲ್ಲ . ಎರಡನ್ನೂ ತನ್ನ ಮನೆಯೆಂದೇ ಕಂಡ. ಎರಡರಲ್ಲಿ ಗುಡಿಸಲನ್ನು ಸ್ವಲ್ಪ ಮಾತ್ರ ಹೆಚ್ಚು ಇಷ್ಟವಾದ ಮನೆಯಾಗಿ ಮಾಡಿಕೊಂಡ .
ಈ ಸುದ್ದಿ ಶ್ರೀಕೃಷ್ಣನಿಗೆ ಈ ಸುದ್ದಿ ತಿಳಿದಾಗ " ಅದು ಅವನ ಭಾಗ್ಯ " ಎನ್ನುತ್ತಾನೆ.

  • ಪ್ರಬಂಧ
~.~
  • Login or register to post comments
  • 744 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಲ್ಲಾ ಕಥೆಗಳು: ೧೦:ಗೆಳೆಯನ ಗೆಳೆಯ, ಸಾರಿನ ಸಾರು
  • ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ
  • Father's Mother. (ಒಂದು ನೈಜ ಹಾಸ್ಯ)
  • ಒಡೆಯರ ನುಡಿಮುತ್ತುಗಳು
  • I ate nothing for 6 ಘಂಟೆ ಕಾಲ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಸ್ಪೇಸ್ ಮೌಂಟೆನ್”, ’ಡಿಸ್ನಿ ಲ್ಯಾಂಡ್” ನ ಮತ್ತೊಂದು ರೋಮಾಂಚಕ ತಾಣ ; ’ರೋಲರ್ ಕೋಸ್ಟರ್,’ ನಲ್ಲಿ ರಮಿಸುವುದೇ ಇಲ್ಲಿನ ವಿಶೇಷತೆ !
  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 10:25am
  • kannadakanda
    ಉ: 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
    July 25, 2008 - 9:48am
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 46 ಅತಿಥಿಗಳು ಆನ್ಲೈನ್ ಇರುವರು.


ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator