ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಅರೆಬೆತ್ತಲೆ ಮೆರವಣಿಗೆ

February 22, 2006 - 11:31am — sinchanabhat

ಉಪಮುಖ್ಯಮಂತ್ರಿ ಯಡಿಯೂರಪ್ಪನವರು ಅಂಬೇಡ್ಕರರ ಭಾವಚಿತ್ರವನ್ನು ತೆಗೆಸಿದ್ದಾರೆಂದು ಅವರ ವಿರುದ್ಧ ಕೂಗು ಕೇಳಿಬರುತ್ತಿದೆ.ಅದಕ್ಕೆ ಒಂದು ಉನ್ನತಸ್ಥಾನದಲ್ಲಿರುವ ಅವರ ಪ್ರತಿಕ್ರಿಯೆ ನಗುಬರಿಸುತ್ತದೆ.

ಗೋಡೆಯ ಮೇಲೆ ಹಾಕಿದ ಭಾವಚಿತ್ರಗಳಿಗೆ ಅಂಟಿದ ದೂಳಿಗಿಂತ ಗಲಬೆಗಳಿಂದ ಮೆತ್ತುವ ರಾಡಿಯೇ ಜಾಸ್ತಿ.ರಾಡಿತೊಳೆವುದು ದೂಳು ಒರೆಸುವವರಿಂದಾ ಆಗದ ಕೆಲಸವೇ?

ನಮ್ಮ ಸಂವಿಧಾನ ಇಷ್ಟರಮಟ್ಟಿಗೆ ವ್ಯವಸ್ಥಿತ ಎನ್ನುವಂತೆ ರೂಪಗೊಂಡಿದೆ ಅಂದರೆ ಅದಕ್ಕೆ ಕಾರಣೀಕರ್ತರು ಸಂವಿಧಾನಶಿಲ್ಪಿ 'ಡಾ. ಅಂಬೇಡ್ಕರ್' ಅವರು.ದಮನಕ್ಕೊಳಗಾದವರನ್ನು ಮೇಲೆತ್ತಲು ಶ್ರಮಿಸಿದ ಇವರು ದಲಿತರ ನಾಯಕರೆಂದು ಗುರುತಿಸಿಕೊಳ್ಳುತ್ತಾರೆ. ಅವರೊಬ್ಬ ಪೂಜನೀಯ ವ್ಯಕ್ತಿ ಅಂದರೆ ದಲಿತರಿಗೊಂದೆ ಎಂಬ ಅರ್ಥಮೂಡದು.

ಭ್ರಷ್ಟಾಚಾರಗಳ ಹುಟ್ಟು ಮನೆ ಸರ್ಖಾರಿ ಕಚೇರಿಗಳಲ್ಲಿ ದೇಶದ ಉನ್ನತ ನಾಯಕರುಗಳಾದ ಮಹಾತ್ಮಾಗಾಂಧಿ,ಜವಾಹರಲಾಲನೆಹರು, ಲಾಲ್ಬಹದ್ದೂರ್ ಶಾಸ್ತ್ತ್ರಿ,ಇಂದಿರಾಗಾಂದಿ ಮೊದಲಾದವರ ಭಾವಚಿತ್ರಗಳು ಕಂಡುಬರುತ್ತವೆ. ಅಲ್ಲಿ ಅವರ ಭಾವಚಿತ್ರಳನ್ನು ಹಾಕಿದ್ದಾದರೂ ಏಕೆ? ಭಕ್ತಿ ಭಾವ ಶ್ರದ್ದೆ ಗಳಿಂದ ಅವರ ತತ್ವಗಳನ್ನು ಆದರ್ಶವಾಗಿಸಿಕೊಂಡು ಅವರು ತೋರಿಸಿದ ಹಾದಿಯಲ್ಲಿ ನಡೆಯಬೇಕೆಂಬ ಉದ್ದೇಶದಿಂದಲೆ? ಬಹುಶಃ ಇದಾವುದಕ್ಕೂ ಅಲ್ಲ. ಅಂದು ಇದ್ದ ಬ್ರಿಟಿಶ್ ರಾಣಿಯ ಭಾವಚಿತ್ರವ ಇಳಿಸಿ ಅಲ್ಲಿ ನಮ್ಮನಾಯಕರನ್ನಿರಿಸಿರುವುದು ನಮ್ಮ ನಾಯಕರಿಗೆ ಕೊಟ್ಟ ಗೌರವವಿರಬಹುದು ! ಆದರೆ ಅದು ಈಗಂತೂ ಗೋಡೆಗೊಂದಿಷ್ಟು ಸಿಂಗಾರವಷ್ಟೆ.ಭ್ರಷ್ಟಾಚಾರವನ್ನು ನಿರ್ಮೂಲಗೊಳಿಸುತ್ತೇನೆಂದು ಮುನ್ನುಗ್ಗುತ್ತಿರುವ ನಮ್ಮ ಲೋಕಾಯುಕ್ತ ಎನ್.ವೆಂಕಟಾಚಲ ಅವರ ಕೈಯ್ಯೊಳಗೆ ಸಿಲುಕಿ ನಿಂತ ಹುಳಿಮೊಗದ ಅಧಿಕಾರಿಗಳ ಹಿಂದೆ ಗೋಡೆಗೆ ಸತ್ವವಿಲ್ಲದೆ,ಅರ್ಥವಿಲ್ಲದೆ,ಭಾವಮೂಡದೆ ನಿರ್ಮಲವಾಗಿ ಅಂಟಿಕೊಂಡ ಭಾವಚಿತ್ರಗಳು.

ದಲಿತರಿಗಾಗಿ ಹೋರಾಡಿದ ನಮ್ಮ ಸಂವಿದಾನ ಶಿಲ್ಪಿ ಇಂದು ನಮ್ಮೊಡನಿದ್ದರೆ,ದಮನಕ್ಕೆ ಒಳಗಾದವರನ್ನು ಮೇಲೆತ್ತಲು ಅವರು ಮಾಡಿದ ಪ್ರಯತ್ನ ಕೊಂಡೊಯ್ಯುತ್ತಿರುವುದೆಲ್ಲ್ಲಿ ಎಂದು ಕಣ್ಣಾರೆ ನೋಡಬಹುದಿತ್ತು.ಸಿಗುವ ಹೆಚ್ಹಿನ ಮೀಸಲಾತಿಗಳಿಂದಾಗಿ ಜನರು ದಲಿತರು,ಹಿಂದುಳಿದವರು,ಎಂದು ಹೇಳಿಕೊಳ್ಳಲೇ ಹೆಚ್ಹು ಇಚ್ಹಿಸುತ್ತಾರೆ.ಅಷ್ಟಕ್ಕೂ ದಮನಕ್ಕೊಳಗಾದವರು ಅಂದರೆ ಜಾತಿಯಿದೆಯೇ? ಅದಾವುದೋ ತಲೆಮಾರುಗಳ ಹಿಂದೆ ಪೂರ್ವಿಕರು ರಾಜರಾಗಿದ್ದರೆಂದು ನೆನೆದು ಇಂದು ಅದೇರೀತಿ ಕಿರೀಟ ಮಾಡಿಸಿಕೊಳ್ಳ ಹೊರಟವರಿಗೆ ಏನೆನ್ನಬೇಕು..

ಬ್ರಿಟಿಷರ ಒಡೆದು ಆಳುವ ನೀತಿಯನ್ನು ಚೂರೂ ತಪ್ಪದೆ ಅನುಸರಿಸುವ ನಮ್ಮ ಇಂದಿನ ರಾಜಕಾರಣಿಗಳಿಗೆ ಅಂಬೇಡ್ಕರ್, ಗಾಂಧಿ,ಇಂತಹ ಪ್ರತಿಮೆಗಳು ಅಸ್ತ್ರಗಳು. ಇಂತವುಗಳನ್ನು ಕಾರ್ಯರೂಪಕ್ಕೆ ತರಲೆಂದೇ ಹುಟ್ಟಿಕೊಳ್ಲುವ ಕೆಲವು ಅಸ್ಪಷ್ಟ ರಾಜಕೀಯ ಸಂಘಟನೆಗಳು.ಮತಗಳಿಕೆಗೆಂದೇ ಜಾತಿಯೆಂಬುದನ್ನು ಎತ್ತಿ ಹಿಡಿದು ಹೂಡುವ ತಂತ್ರಗಳು. ಮಾನ್ಯ ಉಪಮುಖ್ಯಮಂತ್ರಿ ಯಡಿಯೂರಪ್ಪನವರು ಭಾವಚಿತ್ರದವಿಶಯವಾಗಿ ನಿಜವಾಗಿ ಮಾಡಿದ್ದೇನೋ ತಿಳಿಯದು.ಆದರೆ ಅವರು ತನ್ನನ್ನು ತಾನು ಸಮರ್ಥಿಸಿಕೊಳ್ಳುವಂತ ಸರಿಯಾದ ಉತ್ತರ ನೀಡಿ,ತಪ್ಪಾಗಿದ್ದರೆ ಸರಿಪಡಿಸಿಕೊಂಡು ನಡೆವುದಬಿಟ್ಟು ಗೋಗರೆವಂತೆ ಫೋಸುಕೊಟ್ಟು ದೇವರಾಣೆ ಹಾಕುತ್ತಾರಲ್ಲಾ, ಇದೇನಾ ಅವರಲ್ಲಿರುವ ನಾಯಕಗುಣ.

ನನಗನ್ನಿಸುವಂತೆ ಮಹಾನ್ ವ್ಯಕ್ತಿಗಳ ಭಾವಚಿತ್ರಗಳ ಮುಂದೆ ನಗ್ನಚಿತ್ರಗಳ ನೋಡುವುದಕ್ಕಿಂತ,ಅವರ ಭಾವಚಿತ್ರಗಳನ್ನೇ ಕೆಳಗಿಳಿಸಿದರೆ ಅವರನ್ನು ಅಲ್ಪ ಪ್ರಮಾಣದಲ್ಲಾದರೂ ಗೌರವಿಸಿದಂತೆನಿಸುತ್ತದೆ. ಇಲ್ಲವಾದರೆ ಅರೆಬೆತ್ತಲೆ ಮೆರವಣಿಗೆ ಮಾಡುತ್ತೇವೆಂದು ಕೂಗಡುವ ಕಾರ್ಯಕರ್ತರ ಸುಂದರ ಛಾಯಾಚಿತ್ರ ಪತ್ರಿಕೆಗಳ ಅಂಕಣಕ್ಕಿಳಿದಾಗ ಅದಕ್ಕೇ ಫ್ರೇಮ್ ಹಾಕಿಸಬೇಕಷ್ಟೇ???

  • ಪ್ರಚಲಿತ
~.~
  • Login or register to post comments
  • 665 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇಂತಹ ರಾಜಕೀಯ ವ್ಯವಸ್ಥೆಗೆ ಬದಲಾವಣೆ ಎಂದು................?
  • ಈ ಅಸಮಾನ್ಯ ಬಾಲಕ, ಮೊಹನ್ ದಾಸ್ ಗೆ, ಇಂದು ೧೩೮ ನೆ ವರ್ಷದ ಹುಟ್ಟಿದ ಹಬ್ಬ !
  • ಮಾನ್ಯ ಶ್ರೀ. ಯಡಿಯೂರಪ್ಪನವರು, ಇಂದಿನ ಕರ್ನಾಟಕರಾಜ್ಯದ ಮುಖ್ಯ ಮಂತ್ರಿಗಳು.
  • ಆನೆ ಬಂತಾನೆ ಬಂತಾನೆ ಬಂತಮ್ಮಮ್ಮಾ..
  • ಪುಂಡಾಟಕ್ಕೆ ಕೊನೆಯೆಲ್ಲಿ?
Syndicate content

ಲೇಖಕರು

sinchanabhat's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
  • vikashegde
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:53pm
  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:52pm
  • Jayalaxmi.Patil
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:37pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:30pm
  • kannadakanda
    ಉ: ಮುರಿ, ಮುಱಿ
    September 8, 2008 - 2:26pm
  • girish.rajanal
    ಉ: ನೀನು ನಾನು ಜೋಡಿ
    September 8, 2008 - 2:21pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 146 ಅತಿಥಿಗಳು ಆನ್ಲೈನ್ ಇರುವರು.


ದುರ್ಬಲರಿಗೆ ಕ್ಷಮಿಸುವ ಹಕ್ಕಿಲ್ಲ, ಕ್ಷಮಿಸುವ ಶಕ್ತಿ ಮತ್ತು ಹಕ್ಕಿರುವುದು ಬಲಿಷ್ಠರಿಗೆ ಮಾತ್ರ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator