ಆಯ್ದ ಸಂಸ್ಕೃತ ಸುಭಾಷಿತಗಳು (೨೫-೨೭)
25. ಕಾವ್ಯ , ಶಾಸ್ತ್ರ , ವಿನೋದಗಳಲ್ಲಿ ಧೀಮಂತರು ಸಮಯ ಕಳೆದರೆ , ಮೂರ್ಖರು ಹಗಲು ರಾತ್ರಿಗಳನ್ನು ಜೂಜು , ಕಲಹ, ಮದ್ಯಪಾನಗಳಲ್ಲಿ ಕಳೆಯುವರು.
ಕಾವ್ಯ ಶಾಸ್ತ್ರ ವಿವಾದೇನ ಕಾಲೋ ಗಚ್ಛತಿ ಧೀಮತಾಂ |
ಮೂರ್ಖಾಣಾಂ ತು ದಿವಾ ರಾತ್ರೌ ದ್ಯೂತೇನ ಕಲಹೇನ ವಾ ||
26. ಹನಿ ಹನಿಯಾಗಿ ಕೊಡವು ನೀರಿನಿಂದ ತುಂಬುವಂತೆ , ವಿದ್ಯೆ , ಧರ್ಮ , ಮತ್ತು ಸಂಪತ್ತನ್ನು ಕ್ರಮೇಣ ಗಳಿಸಬೇಕು.
ಜಲಬಿಂದು ನಿಪಾತೇನ ಕ್ರಮಶ: ಪೂರ್ಯತೇ ಘಟ:
ಸ ಹೇತು: ಸರ್ವ ವಿದ್ಯಾನಾಂ ಧರ್ಮಸ್ಯ ಚ ಧನಸ್ಯ ಚ ||
27. ಒಳ್ಳೆಯ ಮಾತಿನಿಂದೊಡಗೂಡಿದ ದಾನ , ಗರ್ವವಿಲ್ಲದ ಜ್ಞಾನ , ಕ್ಷಮೆಯಿಂದೊಡಗೂಡಿದ ಶೌರ್ಯ , ತ್ಯಾಗಶೀಲ ಸಂಪತ್ತು ಈ ಗುಣಗಳೂಳ್ಳವರು ಜಗತ್ತಿನಲ್ಲಿ ದುರ್ಲಭರು.
ಆನಂ ಪ್ರಿಯವಾಕ್ಸಹಿತಂ ಜ್ಞಾನಮಗರ್ವಂ ಕ್ಷಮಾನ್ವಿತಂ ಶೌರ್ಯಂ |
ಇತ್ತಂ ತ್ಯಾಗಯುಕ್ತಂ ದುರ್ಲಭಮೇತತ್ ಚತುಷ್ಟಯಂ ಲೋಕೆ ||

- Login or register to post comments
- 661 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಸೂಪರ್ ಸುಭಾಷಿತ
ಸುಭಾಷಿತಗಳ ಒಳ್ಳೆಯ ಗುದಾಮನ್ನೇ ಮಾಡ್ತಿದ್ದೀರಿ. ಒಳ್ಳೆಯ ಕೆಲಸ ಹೀಗೆಯೇ ಮುಂದುವರೆಯಲಿ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಒಂದು ತಿದ್ದುಪಡಿ
೨೭ ನೇ ಸುಭಾಷಿತದ ಸಂಸ್ಕೃತ (ಸಕ್ಕದ!) ಮೂಲ ಹೀಗಿರಬೇಕಿತ್ತು. ಮೊದಲಕ್ಷರ ಬಿಟ್ಟುಹೋಗಿದೆ.
ದಾನಂ ಪ್ರಿಯವಾಕ್ಸಹಿತಂ ಜ್ಞಾನಮಗರ್ವಂ ಕ್ಷಮಾನ್ವಿತಂ ಶೌರ್ಯಂ |
ವಿತ್ತಂ ತ್ಯಾಗಯುಕ್ತಂ ದುರ್ಲಭಮೇತತ್ ಚತುಷ್ಟಯಂ ಲೋಕೆ ||
ಕಾವ್ಯ ಶಾಸ್ತ್ರ ವಿನೋದೇನ
ಕಾವ್ಯ ಶಾಸ್ತ್ರ (ವಿವಾದೇನ ಅಲ್ಲ)ವಿನೋದೇನ ಕಾಲೋ ಗಚ್ಛತಿ ಧೀಮತಾಂ |
ಮೂರ್ಖಾಣಾಂ ತು ದಿವಾ ರಾತ್ರೌ ದ್ಯೂತೇನ ಕಲಹೇನ (ವಾ)ಚ ||
ವಿವಾದೇನ ಅಂದರೆ ವಿವಾದದಿಂದ ಎಂದು ಆದರೆ ಇಲ್ಲಿ ವಿನೋದೇನ(ಅಂದರೆ ಕಾವ್ಯ ಶಾಸ್ತ್ರಗಳನ್ನು ಆನಂದಿಸುತ್ತಾ)
ಇಲ್ಲಿ ಮದ್ಯಪಾನದ ಪ್ರಸ್ತಾಪವಿಲ್ಲ.
ಮತ್ತು "ವಾ" ಬದಲು "ಚ" ಬರಬೇಕು ಅನಿಸುವುದು.
ವಾ ಎಂದರೆ ಪ್ರಶ್ನೆ ಕೇಳಿದಂತಾಗುವುದು.
27. ಒಳ್ಳೆಯ ಮಾತಿನಿಂದೊಡಗೂಡಿದ ದಾನ , ಗರ್ವವಿಲ್ಲದ ಜ್ಞಾನ , ಕ್ಷಮೆಯಿಂದೊಡಗೂಡಿದ ಶೌರ್ಯ , ತ್ಯಾಗಶೀಲ ಸಂಪತ್ತು ಈ ಗುಣಗಳೂಳ್ಳವರು ಜಗತ್ತಿನಲ್ಲಿ ದುರ್ಲಭರು.
ಇಲ್ಲಿ "ಗುಣಗಳೂಳ್ಳವರು" ಗುಣಗಳುಳ್ಳವರು ಆಗಬೇಕು.
ಮದ್ಯಪಾನದ ಪ್ರಸ್ತಾಪವಿಲ್ಲ , ಸರಿ
ಕಾವ್ಯ ಶಾಸ್ತ್ರ ವಿನೋದೇನ .... ನಾನು ಬರೆದ ಸಂಸ್ಕೃತ ಸುಭಾಷಿತದಲ್ಲಿ ಮದ್ಯಪಾನದ ಪ್ರಸ್ತಾಪವಿಲ್ಲ , ಸರಿ . ಆದರೆ ಬೇರೆ ಎಲ್ಲೋ ಓದಿದ ಅದೇ ಸುಭಾಷಿತದ ಪಠ್ಯದಲ್ಲಿ ಮದ್ಯದ ಪ್ರಸ್ತಾಪವಿದ್ದ ಹಾಗಿತ್ತು . ಸದ್ಯ ನನ್ನ ಹತ್ತಿರವಿರುವ ಸುಭಾಷಿತದ ಪಠ್ಯದಲ್ಲಿ ಮದ್ಯಪಾನದ ಪ್ರಸ್ತಾಪವಿಲ್ಲದಿದ್ದರೂ ಕನ್ನಡ ಅರ್ಥ ಬರೆಯುವಾಗ ಪ್ರಜ್ಞಾಪೂರ್ವಕವಾಗಿ ಸೇರಿಸಿದ್ದೇನೆ.
ಇನ್ನು ಗುಣಗಳೂಳ್ಳವರು- ಕನ್ನಡ ಕುಟ್ಟುವಾಗ ಆದ ತಪ್ಪು , ಉದ್ದೇಶಪೂರ್ವಕವಾದದ್ದಲ್ಲ. ಮುಂದೆ ಹೀಗೆ ಆಗದ ಹಾಗೆ ನೋಡಿಕೊಳ್ಳುತ್ತೇನೆ.
ಉ: ಆಯ್ದ ಸಂಸ್ಕೃತ ಸುಭಾಷಿತಗಳು (೨೫-೨೭)
ಜಲಬಿಂದು ನಿಪಾತೇನ ಕ್ರಮಶ: ಪೂರ್ಯತೇ ಘಟ:
ಸ ಹೇತು: ಸರ್ವ ವಿದ್ಯಾನಾಂ ಧರ್ಮಸ್ಯ ಚ ಧನಸ್ಯ ಚ ||
ನಮ್ಮ ಒಎಲ್ಎನ್ ಸ್ವಾಮಿಯವರು ತಮ್ಮ ಒಂದು ಝೆನ್ ಕಥಾ ಮಾಲಿಕೆಯಲ್ಲಿ ತಿಳಿಸಿದ್ದರು. ಇದು ಇಲ್ಲಿ ಬಹಳವಾಗಿ ಒಪ್ಪುತ್ತೆ.
ಉ: ಆಯ್ದ ಸಂಸ್ಕೃತ ಸುಭಾಷಿತಗಳು (೨೫-೨೭)
Systematic Investment Plan
-ಸುಚರ