19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಆಯ್ದ ಸಂಸ್ಕೃತ ಸುಭಾಷಿತಗಳು (೨೫-೨೭)

February 24, 2006 - 4:41pm
shreekant.mishrikoti
25. ಕಾವ್ಯ , ಶಾಸ್ತ್ರ , ವಿನೋದಗಳಲ್ಲಿ ಧೀಮಂತರು ಸಮಯ ಕಳೆದರೆ , ಮೂರ್ಖರು ಹಗಲು ರಾತ್ರಿಗಳನ್ನು ಜೂಜು , ಕಲಹ, ಮದ್ಯಪಾನಗಳಲ್ಲಿ ಕಳೆಯುವರು. ಕಾವ್ಯ ಶಾಸ್ತ್ರ ವಿವಾದೇನ ಕಾಲೋ ಗಚ್ಛತಿ ಧೀಮತಾಂ | ಮೂರ್ಖಾಣಾಂ ತು ದಿವಾ ರಾತ್ರೌ ದ್ಯೂತೇನ ಕಲಹೇನ ವಾ || 26. ಹನಿ ಹನಿಯಾಗಿ ಕೊಡವು ನೀರಿನಿಂದ ತುಂಬುವಂತೆ , ವಿದ್ಯೆ , ಧರ್ಮ , ಮತ್ತು ಸಂಪತ್ತನ್ನು ಕ್ರಮೇಣ ಗಳಿಸಬೇಕು. ಜಲಬಿಂದು ನಿಪಾತೇನ ಕ್ರಮಶ: ಪೂರ್ಯತೇ ಘಟ: ಸ ಹೇತು: ಸರ್ವ ವಿದ್ಯಾನಾಂ ಧರ್ಮಸ್ಯ ಚ ಧನಸ್ಯ ಚ || 27. ಒಳ್ಳೆಯ ಮಾತಿನಿಂದೊಡಗೂಡಿದ ದಾನ , ಗರ್ವವಿಲ್ಲದ ಜ್ಞಾನ , ಕ್ಷಮೆಯಿಂದೊಡಗೂಡಿದ ಶೌರ್ಯ , ತ್ಯಾಗಶೀಲ ಸಂಪತ್ತು ಈ ಗುಣಗಳೂಳ್ಳವರು ಜಗತ್ತಿನಲ್ಲಿ ದುರ್ಲಭರು. ಆನಂ ಪ್ರಿಯವಾಕ್ಸಹಿತಂ ಜ್ಞಾನಮಗರ್ವಂ ಕ್ಷಮಾನ್ವಿತಂ ಶೌರ್ಯಂ | ಇತ್ತಂ ತ್ಯಾಗಯುಕ್ತಂ ದುರ್ಲಭಮೇತತ್ ಚತುಷ್ಟಯಂ ಲೋಕೆ ||
ಲೇಖನ ವರ್ಗ (Category): 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by tvsrinivas41 on
ಸುಭಾಷಿತಗಳ ಒಳ್ಳೆಯ ಗುದಾಮನ್ನೇ ಮಾಡ್ತಿದ್ದೀರಿ. ಒಳ್ಳೆಯ ಕೆಲಸ ಹೀಗೆಯೇ ಮುಂದುವರೆಯಲಿ. ವಂದನೆಗಳೊಂದಿಗೆ --- ತವಿಶ್ರೀನಿವಾಸ [:http://asraya.net]

Submitted by shreekant.mishrikoti on
೨೭ ನೇ ಸುಭಾಷಿತದ ಸಂಸ್ಕೃತ (ಸಕ್ಕದ!) ಮೂಲ ಹೀಗಿರಬೇಕಿತ್ತು. ಮೊದಲಕ್ಷರ ಬಿಟ್ಟುಹೋಗಿದೆ. ದಾನಂ ಪ್ರಿಯವಾಕ್ಸಹಿತಂ ಜ್ಞಾನಮಗರ್ವಂ ಕ್ಷಮಾನ್ವಿತಂ ಶೌರ್ಯಂ | ವಿತ್ತಂ ತ್ಯಾಗಯುಕ್ತಂ ದುರ್ಲಭಮೇತತ್ ಚತುಷ್ಟಯಂ ಲೋಕೆ ||

Submitted by ಮಹೇಶ ಭೋಗಾದಿ on
ಕಾವ್ಯ ಶಾಸ್ತ್ರ (ವಿವಾದೇನ ಅಲ್ಲ)ವಿನೋದೇನ ಕಾಲೋ ಗಚ್ಛತಿ ಧೀಮತಾಂ | ಮೂರ್ಖಾಣಾಂ ತು ದಿವಾ ರಾತ್ರೌ ದ್ಯೂತೇನ ಕಲಹೇನ (ವಾ)ಚ || ವಿವಾದೇನ ಅಂದರೆ ವಿವಾದದಿಂದ ಎಂದು ಆದರೆ ಇಲ್ಲಿ ವಿನೋದೇನ(ಅಂದರೆ ಕಾವ್ಯ ಶಾಸ್ತ್ರಗಳನ್ನು ಆನಂದಿಸುತ್ತಾ) ಇಲ್ಲಿ ಮದ್ಯಪಾನದ ಪ್ರಸ್ತಾಪವಿಲ್ಲ. ಮತ್ತು "ವಾ" ಬದಲು "ಚ" ಬರಬೇಕು ಅನಿಸುವುದು. ವಾ ಎಂದರೆ ಪ್ರಶ್ನೆ ಕೇಳಿದಂತಾಗುವುದು. 27. ಒಳ್ಳೆಯ ಮಾತಿನಿಂದೊಡಗೂಡಿದ ದಾನ , ಗರ್ವವಿಲ್ಲದ ಜ್ಞಾನ , ಕ್ಷಮೆಯಿಂದೊಡಗೂಡಿದ ಶೌರ್ಯ , ತ್ಯಾಗಶೀಲ ಸಂಪತ್ತು ಈ ಗುಣಗಳೂಳ್ಳವರು ಜಗತ್ತಿನಲ್ಲಿ ದುರ್ಲಭರು.

ಇಲ್ಲಿ "ಗುಣಗಳೂಳ್ಳವರು" ಗುಣಗಳುಳ್ಳವರು ಆಗಬೇಕು.

Submitted by shreekant.mishrikoti on
ಕಾವ್ಯ ಶಾಸ್ತ್ರ ವಿನೋದೇನ .... ನಾನು ಬರೆದ ಸಂಸ್ಕೃತ ಸುಭಾಷಿತದಲ್ಲಿ ಮದ್ಯಪಾನದ ಪ್ರಸ್ತಾಪವಿಲ್ಲ , ಸರಿ . ಆದರೆ ಬೇರೆ ಎಲ್ಲೋ ಓದಿದ ಅದೇ ಸುಭಾಷಿತದ ಪಠ್ಯದಲ್ಲಿ ಮದ್ಯದ ಪ್ರಸ್ತಾಪವಿದ್ದ ಹಾಗಿತ್ತು . ಸದ್ಯ ನನ್ನ ಹತ್ತಿರವಿರುವ ಸುಭಾಷಿತದ ಪಠ್ಯದಲ್ಲಿ ಮದ್ಯಪಾನದ ಪ್ರಸ್ತಾಪವಿಲ್ಲದಿದ್ದರೂ ಕನ್ನಡ ಅರ್ಥ ಬರೆಯುವಾಗ ಪ್ರಜ್ಞಾಪೂರ್ವಕವಾಗಿ ಸೇರಿಸಿದ್ದೇನೆ. ಇನ್ನು ಗುಣಗಳೂಳ್ಳವರು- ಕನ್ನಡ ಕುಟ್ಟುವಾಗ ಆದ ತಪ್ಪು , ಉದ್ದೇಶಪೂರ್ವಕವಾದದ್ದಲ್ಲ. ಮುಂದೆ ಹೀಗೆ ಆಗದ ಹಾಗೆ ನೋಡಿಕೊಳ್ಳುತ್ತೇನೆ.

Submitted by Sunil Jayaprakash on

[quote=shreekant.mishrikoti] ಹನಿ ಹನಿಯಾಗಿ ಕೊಡವು ನೀರಿನಿಂದ ತುಂಬುವಂತೆ , ವಿದ್ಯೆ , ಧರ್ಮ , ಮತ್ತು ಸಂಪತ್ತನ್ನು ಕ್ರಮೇಣ ಗಳಿಸಬೇಕು.

ಜಲಬಿಂದು ನಿಪಾತೇನ ಕ್ರಮಶ: ಪೂರ್ಯತೇ ಘಟ:

ಸ ಹೇತು: ಸರ್ವ ವಿದ್ಯಾನಾಂ ಧರ್ಮಸ್ಯ ಚ ಧನಸ್ಯ ಚ ||[/quote]

ನಮ್ಮ ಒಎಲ್ಎನ್ ಸ್ವಾಮಿಯವರು ತಮ್ಮ [http://sampada.net/n...| ಒಂದು ಝೆನ್ ಕಥಾ ಮಾಲಿಕೆಯಲ್ಲಿ] ತಿಳಿಸಿದ್ದರು. ಇದು ಇಲ್ಲಿ ಬಹಳವಾಗಿ ಒಪ್ಪುತ್ತೆ.