Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಆರ್ಟ್ ಆಫ್ ಲಿವಿಂಗ್ ಒಂದು ನೋಟ

March 1, 2006 - 6:32am — sinchanabhat

'ಜೀವನ ಕಲೆ',ಹೌದು ಎಲ್ಲವನ್ನೂ ಅರ್ಥೈಸಿಕೊಂಡರೆ ಸುಂದರ. ಕಲೆ ಎಂಬುದು ಹುಟ್ಟಿದ್ದೇ ಕಲಾಕಾರರಿಂದ.ನಾವೆಲ್ಲರೂ ನಮ್ಮ ಬದುಕಿನ ಕಲಾಕಾರರೆ.ಗುರುಮುಖೇನ ಕಲಿತರೆ ವಿದ್ಯೆ ಎನ್ನುವಂತೆ,ವಿದ್ಯೆಯನ್ನು ಜನಸಮೋಹಕ್ಕೆ ಗುರುವಾಗಿ ಬೋಧಿಸ ಹೊರಟವರಲ್ಲಿ ಪ್ರಮುಖರು ಶ್ರೀ ರವಿಶಂಕರ್ ಗುರೂಜಿ.

'Art of living' ಇದು ಶ್ರೀ ರವಿಶಂಕರ್ ಗುರೂಜಿ ಅವರಿಂದ 1982 ರಲ್ಲಿ ಸ್ಥಾಪನೆಯಾಯಿತು.ರೋಚಕ ನಡೆ ನಡೆದು ಬಂದು ಮೊನ್ನೆ ಮೊನ್ನೆಯಷ್ಟೇ ಬೆಳ್ಳಿ ಹಬ್ಬವನ್ನು ಅತ್ಯಂತ ವಿಜ್ರಂಭಣೆಯಿಂದ ವಿಭಿನ್ನತೆಯ ತವರಾದ ಬೆಂಗಳೂರಿನಲ್ಲಿ ಆಚರಿಸಿಕೊಂಡಿತು.

ಜಕ್ಕೂರು ವಿಮಾನ್ ನಿಲ್ದಾಣದ ನಿಬಿಡ ಜನಸ್ತೋಮ,ಇದರ ಜನಪ್ರಿಯತೆಯನ್ನು ನೋಡಿ ಮಂತ್ರ ಮುಗ್ಧರನ್ನಾಗಿಸುವಂತಿತ್ತು.ರಷ್ಯಾ,ಅಮೇರಿಕಾ,ಕೆನಡಾ,ಪಾಕಿಸ್ತಾನ ಹೀಗೇ ವಿಶ್ವದೆಲ್ಲೆಡೆಯಿಂದ ಬಂದ ಜನರು ವಿಶ್ವವೇ ಒಂದು ಕುಟುಂಬ ಎಂಬ ಅವರ ಮನದ ಮಾತಿಗೆ ಸಾಕ್ಷಿಯಾಗಿ ನಿಂತಿದ್ದರು. ಜಾತಿ,ಮತ,ಪಂಥ ಗಳ ಬೇದವಿಲ್ಲದೆ ಮನ ಪರಿವರ್ತನೆಯನ್ನೇ ಮೂಲ ಮಂತ್ರವಾಗಿಸಿಕೊಂಡು ನೊಂದವರಿಗೆ ಸಾಂತ್ವನ ನೀಡಿದ್ದಾರೆ,ಹಸಿದವರಿಗೆ ಅನ್ನ ನೀಡಿರಬಹುದು.ಇಲ್ಲಿ ನೆರೆದ ಲಕ್ಷಾಂತರ ಜನರ ಮೊಗದಲ್ಲಿ ಭಕ್ತಿ ,ಶೃದ್ಧೆ,ನಂಬಿಕೆಯ ಹೊರತಾಗಿ ಇನ್ನೇನೂ ಇರಲಿಲ್ಲ.

ಇಂತಹ ಅದ್ಭುತ ಕಾರ್ಯವೆಸಗುವುದರಲ್ಲಿ ಸಫಲರಾದ ರವಿಶಂಕರ್ ಗುರೂಜಿಯಂತಹ ಮಹಾನ್ ವ್ಯಕ್ತಿಯ ಸ್ಪೂರ್ತಿಯ ಸೆಲೆ ಎಲ್ಲಿದೆ?ಎಂಬ ಪ್ರಶ್ನೆಗೆ ಉತ್ತರವಾಗಿ ಹಿನ್ನೆಲೆ ನೋಡ ಹೊರಟರೆ ತಿಳಿದದ್ದು, 1980 ರಲ್ಲಿ ಬಸವನಗುಡಿ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ ರವಿ. ಆತನ ವಿಲಕ್ಷಣ ಗುಣಗಳಿಂದಾಗಿ ಸಹಪಠಿಗಳಿಂದ ಖೋಜಾ ರವಿ ಎಂದು ಕರೆಸಿಕೊಳ್ಳುತ್ತಿದ್ದವನು ಖಿನ್ನನಾಗಿ ಓಡಿಹೋದವನು, ಮಹೇಶ್ ಯೋಗಿ ಅವರ ಇಂಟರನ್ಯಾಷನಲ್ ಯೋಗಕೇಂದ್ರದಲ್ಲಿ Transcandental meditation ಕಲಿತು,ತಾನು ತಿಳಿದ ಧ್ಯಾನವನ್ನು ಸುದರ್ಶನಕ್ರಿಯಾ ಎಂಬಹೆಸರಿನಲ್ಲಿ ವಿಶ್ವದೆಲ್ಲೆಡೆ ಪಸರಿಸಿದ. ಇದರಿಂದ ಪ್ರಭಾವಿತರಾದ ಜನರಿಂದ, ರವಿ ದಟ್ಟಹೆಜ್ಜೆಯನ್ನಿಟ್ಟು ಸಾಕ್ಷಾತ್ ದೈವ ಸ್ವರೂಪಿ ರವಿಶಂಕರ್ ಗುರೂಜಿ ಆದರು. ಇದನ್ನು ಕೇಳಿ ಕೆಲವರಿಗೆ ಓದುಬಾರದ ಕುರುಬನಿಗೆ ಸರಸ್ವತಿ ಒಲಿದು ಮಹಾನ್ ಕವಿ ಕಾಳಿದಾಸನಾದಂತೆ ಅನ್ನಿಸಬಹುದು.

ಶ್ರೀ ರವಿಶಂಕರ್ ಅವರ Art of living ನ ಮನ ಪರಿವರ್ತನೆ ಎಂಬ ಮೂಲ ಮಂತ್ರ ವಿಶ್ವದೆಲ್ಲೆಡೆ ಜಯಗಳಿಸಿದೆ.ಅವರು ಸಮಾಜದ ಸರ್ವತೋಮುಖ ಬೆಳವಣಿಗೆಗೆ ಶ್ಲಾಘನೀಯ ಕೊಡುಗೆ ಕೊಡಲಿ.ಅವರ ಈ ಪರಿವರ್ತನೆ ಎಂಬುದು ಒಂದು ಕ್ಷಣದ ದುಃಖ ವನ್ನು ಮರೆಸುವ ಭ್ರಮೆಯ ಜಗತ್ತಿನೆಡೆಗಿನ ಪಯಣವಾಗದಿದ್ದರೆ ಸಾಕು ಎಂದು ಮನದಲ್ಲೇ ಪ್ರಾರ್ಥಿಸೋಣಾ.

  • ಪ್ರಚಲಿತ
Ornamental seperator
  • Login or register to post comments
  • 550 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 1, 2006 - 6:02pm — tvsrinivas41

ಇನ್ನೂ ಹೆಚ್ಚಿನ ಮಾಹಿತಿ

tvsrinivas41's picture

ರವಿಶಂಕರರ ಬಗ್ಗೆ ಚಿಕ್ಕದಾಗಿ ಚೊಕ್ಕದಾಗಿ ಮಾಹಿತಿ ಒದಗಿಸಿ ಕೊಟ್ಟಿದ್ದೀರಿ. ಇನ್ನೂ ಹೆಚ್ಚಿನ ವಿಷಯಗಳನ್ನು ತಿಳಿಸಿಕೊಡಿ. ನಿಮಗೆ ಇವರ ಪರಿಚಯವಿತ್ತೇ? ಇದೇ ಸಮಯದಲ್ಲಿ ನಾನು ಆಚಾರ್ಯ ಪಾಠಶಾಲೆಯಲ್ಲಿ ಕಲಿಯುತ್ತಿದ್ದೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • Email this ಪ್ರತಿಕ್ರಿಯೆ
March 2, 2006 - 4:40am — sinchanabhat

ತಿಳಿದಿಲ್ಲ

sinchanabhat's picture

ಇಲ್ಲ,ಅವರ Art of living ಕ್ಲಾಸ್ ಗಳ ಕುರಿತು ನನಗೇನೂ ತಿಳಿದಿಲ್ಲ. ನನಗೆ ಅವರ ಪರಿಚಯವಂತೂ ನೆರೆದ ಜನಸ್ತೋಮದಷ್ಟೂ ಇಲ್ಲ.ಅವರ ಜನಪ್ರಿಯತೆಯ ನೋಡಿದ್ದರಲ್ಲಿ,ಕೇಳಿದ್ದರಲ್ಲಿ ಎಷ್ಟು ಹೇಳೀದರೆ ಸಾಕೋ ಅಷ್ಟುಹೇಳಿದ್ದೇನೆ.ಇದಕ್ಕೆ ಹೊರತಾದ ಪ್ರಮುಖ ವಿಶಯಗಳೇನಿದ್ದರು ಸಂಪದ ಮಿತ್ರರೆ ದಯವಿಟ್ಟು ನಮ್ಮೊಡನೆ ಹಂಚಿಕೊಳ್ಳಿ .

  • Login or register to post comments
  • link
  • Email this ಪ್ರತಿಕ್ರಿಯೆ
March 1, 2006 - 8:33pm — Sunil Jayaprakash

ಆರ್ಟ್ ಆಫ್ ಲಿವಿಂಗ್ ಒಂದು ನೋಟ

Sunil Jayaprakash's picture

sinchanabhat wrote:
ರೋಚಕ ನಡೆ ನಡೆದು ಬಂದು ಮೊನ್ನೆ ಮೊನ್ನೆಯಷ್ಟೇ ಬೆಳ್ಳಿ ಹಬ್ಬವನ್ನು ಅತ್ಯಂತ ವಿಜ್ರಂಭಣೆಯಿಂದ ವಿಭಿನ್ನತೆಯ ತವರಾದ ಬೆಂಗಳೂರಿನಲ್ಲಿ ಆಚರಿಸಿಕೊಂಡಿತು. ಜಕ್ಕೂರು ವಿಮಾನ್ ನಿಲ್ದಾಣದ ನಿಬಿಡ ಜನಸ್ತೋಮ,ಇದರ ಜನಪ್ರಿಯತೆಯನ್ನು ನೋಡಿ ಮಂತ್ರ ಮುಗ್ಧರನ್ನಾಗಿಸುವಂತಿತ್ತು.

ಆ ಸಮಾರಂಭದಲ್ಲಿ ಅನೇಕ ಒಳ್ಳೆಯ ಕಾರ್ಯಕ್ರಮಗಳು ನಡೆದರೂ ನನಗೆ ಬಹಳ ಇಷ್ಟವಾದದ್ದು, ಎರಡನೆಯ ದಿನ ರಾತ್ರಿ ಸಿ. ಅಶ್ವತ್ಧ್ ರವರು ಹಾಡಿದ, "ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲ್ಲಿ ನಿತ್ಯವೂ ಅವತರಿಪ ಸತ್ಯಾವತಾರ" ಗೀತೆ. 

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಹೇಶ್ ಯೋಗಿಯವರ ನಿಧನ !
  • ಶ್ರೀ. ಶ್ರೀ ರವಿಶಂಕರ್ ರವರ, ’ ಆರ್ಟ್ ಆಫ್ ಲಿವಿಂಗ್, ’ ಸಂಸ್ಥೆಯಲ್ಲಿ ದುಡಿಯುತ್ತಿರುವ ಭಾರತೀಯ ಸ್ವಯಂಸೇವಕರುಗಳು !
  • ’ಆರ್ಟ್ ಫ್ ಲಿವಿಂಗ್” ಜನಪ್ರಿಯತೆ, ವಿದೇಶಗಳಲ್ಲಿ ಸಕತ್ತಾಗಿದೆ !
  • ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಶುಭಾಶಯಗಳು...
  • ಅಮೆರಿಕದ ಜನತೆಗೆ, ’ಬದುಕಲು ಕಲಿಯಲು,’ ತಿಳಿಸಿದ ನಂತರ, ಶ್ರೀ. ಶ್ರೀ. ರವಿಶಂಕರ್ ಜೀ, ರವರು, ಮುಂಬೈ ನಗರದ ಜನರನ್ನು ಆಶೀರ್ವದಿಸಲು, ಬರುತ್ತಿದ್ದಾರೆ !
Syndicate content

ಲೇಖಕರು

sinchanabhat's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಮ್ಮಜಿಖಷೆಸ್ಸ ಖನಮ ಒಜಿ
  • ಅಂತಿಮ ಸಂಸ್ಕಾರ:ಹೊಸ ವಿಧಾನ
  • ದಾವೂದ್ ಇಬ್ರಾಹಿಂ ಬಂಧನ......ನಂತರ
  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 12, 2008 - 6:16pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 12, 2008 - 5:56pm
  • ಸಂಗನಗೌಡ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 5:27pm
  • omshivaprakash
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 4:41pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 4:37pm
  • prasannasp
    ಉ: ದೊಡ್ಡದಾದ ಮಂಚ ???
    May 12, 2008 - 4:10pm
  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ಅತ್ಮದ ಸತ್ಯವು ಪರಮ ಸತ್ಯದೊಡನೆ ನೆಡೆಸುವ ಸಂಭಾಷಣೆಯೇ ಪ್ರಾರ್ಥನೆ.

— ಫಿಲಿಪ್ ಜೇಮ್ಸ್ ಬೈಲಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator