ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಆಯ್ದ ಸಂಸ್ಕೃತ ಸುಭಾಷಿತಗಳು (೨೮-೩೦)

March 6, 2006 - 4:39pm — shreekant.mishrikoti

೨೮.
ಯಾರ ಮುಖವು ಪ್ರಸನ್ನವಾಗಿದ್ದು , ಯಾರ ಮಾತುಗಳು ಅಮೃತಸಮಾನವೋ , ಪರೋಪಕಾರವೇ ಯಾರ ಕೆಲಸವು ಆಗಿರುವದು ಅವರನ್ನು ಯಾರು ತಾನೇ ಗೌರವಿಸುವದಿಲ್ಲ ?

ಮೂಲ :-
ವದನಂ ಪ್ರಸಾದಸದನಂ
ಹೃದಯಂ ಸುಧಾಮುಚೋ ವಾಚ:
ಕರಣಂ ಪರೋಪಕರಣಂ
ಯೇಷಾಂ ಕೇಷಾಂ ನ ತೇ ವಂದ್ಯಾ: ?

೨೯.
ಒಳ್ಳೆಯ ಜನರ ಸಹವಾಸದ ಬಯಕೆ , ಪರರ ಸದ್ಗುಣವನ್ನು ಪ್ರೀತಿಸುವದು , ಗುರುವಿನಲ್ಲಿ ನಮ್ರತೆ , ಕಲಿಕೆಯ ಚಟ , ಸ್ವಪತ್ನಿಯಲ್ಲಿ ಪ್ರೀತಿ , ಜನರ ನಿಂದೆಯ ಭಯ , ಶೂಲಪಾಣಿಯಾದ ಶಿವನಲ್ಲಿ ಭಕ್ತಿ , ಮನಸ್ಸಿನ ನಿಗ್ರಹದಲ್ಲಿ ಶಕ್ತಿ , ದುಷ್ಟರ ಸಹವಾಸದಿಂದ ದೂರ ಇರುವಿಕೆ , ಈ ಗುಣಗಳುಳ್ಳ ಜನರಿಗೆ ನಮ್ಮ ನಮಸ್ಕಾರ!

ಮೂಲ :-
ವಾಂಛಾ ಸಜ್ಜನಸಂಗಮೇ
ಪರಗುಣೇ ಪ್ರೀತಿ:
ಗುರೌ ನಮ್ರತಾ
ವಿದ್ಯಯಾಂ ವ್ಯಸನಂ
ಸ್ವಯೋಷಿತಿ: ರತಿ:
ಲೋಕಾಪವಾದಾತ್ ಭಯ:
ಭಕ್ತಿ: ಶೂಲಿನಿ
ಶಕ್ತಿ: ಆತ್ಮದಮನೇ
ಸಂಸರ್ಗಮುಕ್ತಿ: ಖಲೇ
ಏಶು ಏತೇ ವಸಂತಿ ನಿರ್ಮಲಗುಣಾ:
ತೇಭ್ಯೋ ನರೇಭ್ಯೋ ನಮ:

೩೦.
ಇತರರಿಗಾಗಿ ಸ್ವಾರ್ಥವನ್ನು ತ್ಯಜಿಸುವವರು ಸತ್ಪುರುಷರು.
ತಮಗೆ ಹಾನಿಯಾಗದ ಹಾಗೆ ಪರೋಪಕಾರ ಮಾಡುವವರು ಸಾಮಾನ್ಯ ಜನರು.
ಸ್ವಾರ್ಥ ಸಾಧನೆಗಾಗಿ ಪರರಿಗೆ ಹಾನಿ ಮಾಡುವವರು ರಾಕ್ಷಸರು.
ಇನ್ನು ನಿರರ್ಥಕವಾಗಿ ಪರರ ಹಿತಕ್ಕೆ ಧಕ್ಕೆ ಮಾಡುವವರಿಗೆ ಏನನ್ನಬೇಕೋ ತಿಳಿಯದು.

ಮೂಲ :-
ಏತೇ ಸತ್ಪುರುಷಾ: ಪರಾರ್ಥಘಟಕಾ: ಸ್ವಾರ್ಥಾನ್ ಪರಿತ್ಯಜ್ಯಯೇ
ಸಾಮಾನ್ಯಾಸ್ತು ಪರಾರ್ಥಮುದ್ಯಮಭೃತ: ಸ್ವಾರ್ಥಾವಿರೋಧೇನ ಯೇ
ತೇಮಿ ಮಾನವರಾಕ್ಷಸಾ: ಪರಹಿತಂ ಸ್ವಾರ್ಥಾಯ ನಿಘ್ನಂತಿ ಯೇ
ಯೇ ತು ಘ್ನಂತಿ ನಿರರ್ಥಕಂ ಪರಹಿತಂ ತೇ ಕೇನ ಜಾನೀಮಹೆ .

  • ಚಿಂತನೆ
~.~
  • Login or register to post comments
  • 536 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 6, 2006 - 6:54pm — ಮಹೇಶ ಭೋಗಾದಿ

ಈ ಸುಭಾಷಿತಗಳನ್ನು ಯಾವ ಪುಸ್ತಕದಿಂದ

ಮಹೇಶ ಭೋಗಾದಿ's picture

ಈ ಸುಭಾಷಿತಗಳನ್ನು ಯಾವ ಪುಸ್ತಕದಿಂದ ಉದ್ಧರಿಸಿ ಬರೆಯುತ್ತಿರುವಿರೆಂದು ದಯವಿಟ್ಟು ತಿಳಿಸಿ.

ಸಂಸ್ಕೃತದ ಒಬ್ಬ ಪ್ರಸಿದ್ಧ ಸುಭಾಷಿತಕಾರನ ಹೆಸರು ಮರೆತು ಹೋಯಿತು ದಯಾಮಾಡಿ ಕೆಲವು ಸುಭಾಷಿತಕಾರರನ್ನು ಹೆಸರಿಸಿ. ಆತನು ಒಂದು ಸುಭಾಷಿತದ ಗ್ರಂಥವನ್ನು ರಚಿಸಿದ್ದಾನೆ.

ಧನ್ಯವಾದ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2006 - 7:41pm — srivathsajoshi

ಉ: ಸುಭಾಷಿತ ಪುಸ್ತಕ

srivathsajoshi's picture

'ಸುಭಾಷಿತ ರತ್ನ ಭಾಂಡಾಗಾರ' ಎಂಬ ಪುಸ್ತಕ ಅತ್ಯುತ್ಕೃಷ್ಟವಾದುದು. ನನ್ನ ಬಳಿ ಇದೆ, ಅಮೆರಿಕೆಗೆ ಬರುವಾಗಲೂ ತಕೊಂಡು ಬಂದಿದ್ದೇನೆ.

ಬೆಂಗಳೂರಿನಲ್ಲಿ ಚಾಮರಾಜಪೇಟೆಯಲ್ಲಿ 'ವೇದಾಂತ ಬುಕ್ ಡಿಪೊ' (ಉಮಾ ಟಾಕೀಸ್ ಹತ್ತಿರ) ದಲ್ಲಿ ಸಿಗುತ್ತದೆ. ನಾನು ಅಲ್ಲೇ ಖರೀದಿಸಿದ್ದು.

ನೀವು ನೆನಪಿಸಿಕೊಳ್ಳಲು ಯತ್ನಿಸುತ್ತಿರುವ ಸುಭಾಷಿತಕವಿ 'ಭರ್ತೃಹರಿ' ಇರಬಹುದೆಂದುಕೊಂಡಿದ್ದೇನೆ.

- ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2006 - 7:52pm — ಮಹೇಶ ಭೋಗಾದಿ

ಭರ್‍ತೃಹರಿ

ಮಹೇಶ ಭೋಗಾದಿ's picture

ಹೌದು. ಧನ್ಯವಾದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 7, 2006 - 9:13am — tvsrinivas41

ವಂದನೀಯರು

tvsrinivas41's picture

ಸುಭಾಷಿತ # 29ರಲ್ಲಿ ಸೂಚಿಸಿರುವಂತಹ ಜನರು ಈಗ ಸಿಗ್ತಾರಾ? ಇಂಥಹವರು ನಿಜಕ್ಕೂ ವಂದನೀಯರು. ಶ್ರೀಕಾಂತ ಅವರೇ ಸುಭಾಷಿತಗಳನ್ನು ಚೆನ್ನಾಗಿ ನಿರೂಪಿಸ್ತಿದ್ದೀರ. ಹಾಗೆಯೇ ಮಹೇಶ್ ಅವರು ಪದಗಳನ್ನು ಒರೆಗೆ ಒಡ್ಡಿ ಹೊಳಪು ಕೊಡ್ತಿದ್ದಾರೆ.

ಇಬ್ಬರ ಕೆಲಸಗಳಿಗೂ ವಂದನೆಗಳು

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆಯ್ದ ಸಂಸ್ಕೃತ ಸುಭಾಷಿತಗಳು (೨೨-೨೫)
  • ಭಕ್ತಿಯ ಶಕ್ತಿ.
  • "ನಾನು-ನೀನು
  • ಪ್ರಶ್ನೆ...?
  • ಪ್ರಶ್ನೆ...
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...
  • ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:46am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 58 ಅತಿಥಿಗಳು ಆನ್ಲೈನ್ ಇರುವರು.


ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator