ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಗಳಸ್ಯ ಕಂಠಸ್ಯ

March 7, 2006 - 5:45am — tvsrinivas41

ಪಕ್ಕದ ಫ್ಲಾಟಿನಲ್ಲಿರುವುದು ಸುನಂದಮ್ಮ
ಮುಂಜಾನೆ ಹತ್ತಕ್ಕೆ ಅವರ ಮನೆ ಬಾಗಿಲು ತೆರೆವುದಮ್ಮ
ಬಾಗಿಲ ಬಳಿ ಅವರು ಬಂದರೆ ಹೆಂಗಸರಿಗೆ ಆನಂದವಮ್ಮ
ಇವರೊಂದಿಗೆ ಹರಟಿಸಲು ಅವರಿಗೂ ಮಹದಾನಂದವಮ್ಮ

ಮಾತು ಮಾತು ಮಾತು ಮಾತಿನಲ್ಲೇ ಇವರುಗಳ ಪ್ರಪಂಚ
ಇವರೆಲ್ಲರ ಮಾತಿನಲ್ಲಿ ಮನೆಯವರಾಗುವರು ಹುಚ್ಚ
ಮಕ್ಕಳ ಹೋಂ‍ವರ್ಕ್‍ಗೆ ಬೀಳುವುದು ಕತ್ತರಿ
ಇವರ ಮಾತುಗಳಲಿ ಇರುವುದು ಒಂದು ವೈಖರಿ

ಮಾತು ಶುರು ಆಗುವುದು ಅಡುಗೆ ಮನೆಯಿಂದ
ಮುಂದೆ ಹಾಯ್ದು ಹೋಗುವರು ಮಕ್ಕಳ ಓದಿನಿಂದ
ಮಥಿಸುವರು ರಾಜಕಾರಣಿಗಳ ಕೃತ್ಯಗಳ
ಒಮ್ಮೊಮ್ಮೆ ಭಿನ್ನಾಭಿಪ್ರಾಯ ಮೂಡಿ ಆಡುವರು ಜಗಳ

ಯಾವನೋ ಹುಡುಗ ಕೆಣಕಿದ ಇನ್ಯಾವದೋ ಹುಡುಗಿಯ
ತತ್‍ಕ್ಷಣ ಆಗುವರಿಬ್ಬರು ಇವರ ಮಾತಿಗೆ ವಿಷಯ
ಯಾರದೋ ಗಂಡ ಇಣುಕಿ ನೋಡಿದ ಇನ್ನೊಬ್ಬರ ಮನೆ ಕಿಟಕಿಯ
ಚರ್ಚಿಸಲದೂ ಬರುವುದು ಮೊದಲು ಇವರ ಬಳಿಯೇ

ಇವರಲೂ ನಾ ಕಂಡಿದ್ದೆ ಒಳ್ಳೆಯ ಗುಣ
ಹಬ್ಬ ಹರಿದಿನಗಳಲಿ ಓಡಾಡುವುದು ತಟ್ಟೆಗಳು ಝಣ ಝಣ
ಒಬ್ಬರ ಮನೆಯಲಾಗಲು ಅವಘಡ
ಇನ್ನೊಬ್ಬರ ಮನೆಯಲಾಗುವುದು ಶೋಕಾಚರಣೆ

  • ಕಾವ್ಯ ಮತ್ತು ಕವನ
~.~
  • Login or register to post comments
  • 416 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 7, 2006 - 7:48am — sinchanabhat

ಎಲ್ಲೆಡೆ

sinchanabhat's picture

ಎಲ್ಲೆಡೆ ಕಂಡು ಬರುವ ಅವರ ಮಾತುಗಳು ಅದೆಲ್ಲಿಂದ ಎಲ್ಲಿಗೋ ಹೋಗುವದಲ್ಲ,ತಿರುಗಿ ಇಲ್ಲಿಗೇ ಬರುವುದು.ನಾನು ಅದೆಲ್ಲೋ ಓದಿದ್ದೆ,ಹೆಂಗಸರಿಗೆ ಮಾನಸಿಕ ಕಾಯಿಲೆಗಳು ಕಡಿಮೆ ಇರಲು ಇಂತಹ ಮಾತುಗಳೂ ಕಾರಣ ಎಂಬುದನ್ನು.ಅದು ಎಷ್ಟರಮಟ್ಟಿಗೆ ನಿಜವೋ ನನಗೆ ತಿಳಿಯದು.ಆದರೆ ಇನ್ನಾರದೋ ಕಷ್ಟಕ್ಕೆ ಮರಗುವ, ಅವರ ಮಾತುಗಳನ್ನೂ ಮೀರುವ ಮನಸ್ಸು ಅವರಿಗಿದ್ದರೆ ಸಾಕು.ಕೆಟ್ಟದು ಮತ್ತು ಒಳ್ಳೆಯದೆಂಬುದನ್ನು ಹೀಗೇ ಎಂದು ವ್ಯಾಖ್ಯಾನಿಸುವುದು ತುಂಬಾ ಕಷ್ಟ ಅಲ್ಲವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 7, 2006 - 8:53am — tvsrinivas41

ಹೌದು

tvsrinivas41's picture

ನೀವು ಹೇಳುವುದು ಸರಿ. ಮಾತನಾಡುವುದರಿಂದ ಮನದ ಚಿಂತನೆಗಳು ಹೊರ ಬಂದು ಮನಸ್ಸಿನ ಭಾರ ಸ್ವಲ್ಪ ಮಟ್ಟಿಗೆ ಶಮನವಾಗುವುದು. ಅದಕ್ಕೇ ಅಲ್ವೇ ಹೆಚ್ಚಿನ ದು:ಖವಾದಾಗ ಇನ್ನೊಬ್ಬರೊಂದಿಗೆ ಹೇಳಿಕೊಂಡರೆ ಮನಸ್ಸಿಗೆ ಸಮಾಧಾನವಾಗುವುದು. ಅದೂ ಅಲ್ಲದೇ ಹೀಗೆ ಇತರರೊಂದಿಗೆ ಮಾತನಾಡುವಾಗ ಉತ್ತರ ಸಿಗದ ಎಷ್ಟೋ ಪ್ರಶ್ನೆಗಳಿಗೆ ಉತ್ತರವೂ ಸಿಗುವುದು.

ನೀವು ಹೇಳಿದಂತೆ ಕೆಟ್ಟದ್ದು ಒಳ್ಳೆಯದು ವ್ಯಾಖ್ಯಾನಿಸುವುದು ಕಷ್ಟ. ಒಬ್ಬರಿಗೆ ಒಳ್ಳೆಯದಾದ್ದದ್ದು ಇನ್ನೊಬ್ಬರಿಗೆ ಕೆಟ್ಟದ್ದಿರಬಹುದು.

ನಾನು ಸುಮ್ಮನೆ ನನ್ನ ಪತ್ನಿಯನ್ನು ಕೆಣಕಲು ಬರೆದದ್ದಷ್ಟೇ. ಆಗಾಗ ಮನೆಯವರ ಕಡೆಯೂ ಗಮನ ಹರಿಸಬೇಕಲ್ವೇ? ಊರೋರ ಉಸಾಬರಿ ಬಗ್ಗೆನೇ ಬರೀತೀರ ನಮ್ಮಗಳ ಬಗ್ಗೆ ನಿಮಗೆ ಯೋಚನೆಯೇ ಇಲ್ಲ ಅಂತ ಅನ್ನಬಾರದೆಂಬ ದೂರಾಲೋಚನೆ (ದುರಾಲೋಚನೆ ಅಂದರೂ ತಪ್ಪಲ್ಲ) (ಹಾ ಹಾ ಹಾ!)

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೆಟ್ ನೆಂಟಸ್ಥಿಕೆ
  • ಮಾತು - ಊಟ
  • ಮೌನ
  • ಈ ಹುಡುಗರೇಕೆ ಹೀಗೆ
  • ಅಂತರಾಳದ ಮಾತು......
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
  • cmariejoseph
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:54pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:13pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 165 ಅತಿಥಿಗಳು ಆನ್ಲೈನ್ ಇರುವರು.


ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator