ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಏನಿದೆ ಬದುಕಿನಲಿ

August 6, 2005 - 8:13pm — sinchanabhat

ಅಲೆದಾಟ ಹುಡುಕಾಟ
ಮುಗಿಯದ ಪರಿಪಾಟ
ಆಸ್ವಾದಿಸುವ ಮನಸಿಲ್ಲದಿರೆ
ಏನಿದೆ ಬದುಕಿನಲಿ...

ಮನಸಿನಾಳದಲಿ
ಕನಸ ಲೋಕದಲಿ
ಮೈಮರೆಯದಿರೆ
ಏನಿದೆ ಬದುಕಿನಲಿ...

ಜೊತೆ ನಡೆವವರಾ
ಹಿತವನು ಕಂಡು
ಖುಶಿಪಡದಿದ್ದರೆ
ಏನಿದೆ ಬದುಕಿನಲಿ...

ಭಯದ ಕತ್ತಲಲಿ
ಜೀವವ ತುಂಬುವ
ಬೆಳಕಿಲ್ಲದಿರೆ
ಏನಿದೆ ಬದುಕಿನಲಿ...

ಕಣ್ಗಳರಳುವ
ಪ್ರೇಮದ ಮಿಂಚನು
ಅಳೆಯಲಾಗದಿರೆ
ಏನಿದೆ ಬದುಕಿನಲಿ...

ಇಟ್ಟ ಹೆಜ್ಜೆಯನು
ದಿಟ್ಟಿಸಿ ನೋಡಿ
ಸಾರ್ಥಕವೆನಿಸದಿರೆ
ಏನಿದೆ ಬದುಕಿನಲಿ.....

  • ಕಾವ್ಯ ಮತ್ತು ಕವನ
~.~
  • Login or register to post comments
  • 613 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 6, 2005 - 11:19pm — hpn

ತುಂಬಾ ಚೆನ್ನಾಗಿದೆ :)

hpn's picture

ಬಹಳ ಚೆನ್ನಾಗಿ ಬರೆದಿದ್ದೀರ. ಯಾವಾಗ ಬರೆದದ್ದು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 7, 2005 - 8:05pm — sinchanabhat

ಧನ್ಯವಾದಗಳು

sinchanabhat's picture

ಧನ್ಯವಾದಗಳು...
ಕವನ,ಬರೆದು ಹಾಗೆ ಕಳಿಸಿರೋದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 7, 2005 - 5:24am — tvsrinivas41

ಉತ್ತಮ ಚಿಂತನೆ

tvsrinivas41's picture

ಸಿಂಚನ ಅವರೇ ತುಂಬಾ ಒಳ್ಳೆಯ ವಿಚಾರ. ಜೀವನದ ಹಲವು ಮಜಲುಗಳಲ್ಲಿ ಎಲ್ಲ ಇದ್ದೂ ಇರದಂತಿರುತ್ತವೆ ಅನ್ನೋದನ್ನು ತೋರಿಸಿದ್ದೀರಾ? ಇದೊಂದು ಮಾಯಾಲೋಕ. ಕೇನೋಪನಿಷತ್ ನಲ್ಲಿ ಹೇಳುವಂತೆ ಈ ಜೀವನ ಒಂದು ಕನಸು. ಕನಸಿನಲ್ಲಿರುವವರೆಗೂ ಅದರ ಅರಿವಾಗದು. ಹೊರಗೆ ಬಂದ ನಂತರ ಅದರ ಅರಿವಾಗುವುದು. ಹೊರಗೆ ಬಂದವರು ಮತ್ತೆ ಅದೇ ಕನಸಿನೊಳಗೆ ಹೋಗಲಾರರು.

ಉತ್ತಮ ಆಧ್ಯಾತ್ಮಿಕ ಚಿಂತನೆ

ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 8, 2005 - 4:02pm — sinchanabhat

ಧನ್ಯವಾದಗಳು

sinchanabhat's picture

ಧನ್ಯವಾದಗಳು...
ಇದು ವಸ್ತವಿಕತೆಯನ್ನು ಅರಿತು ಅದರೊಡನೆ ಬೆರೆತು ಸಂತಸದಿ ಬಾಳುವ ಕಲೆ.ಇದನ್ನು ಆಧ್ಯಾತ್ಮ ಚಿಂತನೆ ಎನ್ನುತ್ತೀರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 8, 2005 - 7:31pm — tvsrinivas41

ಚಿಂತನೆ

tvsrinivas41's picture

ಅಧ್ಯಾತ್ಮ ಚಿಂತನೆ ಅಂದರೆ ತಲೆಯ ಮೇಲೆ ಹೋಗೋ ವಿಷಯಗಳು ಅಂತ ಅಲ್ಲ. ವಿನೋಭಾ ಅವರ ಪ್ರಕಾರ ಅಧ್ಯಾತ್ಮ ಚಿಂತನೆ ಪ್ರಾರಂಭವಾಗುವುದು ಉಪನಿಷತ್ತುಗಳ ಸಾರ ತಿಳಿದ ಮೇಲೆ. ಉಪನಿಷತ್ತಿನಲ್ಲಿ ಜೀವನ ಮಾಡುವ ಕಲೆಯನ್ನೇ ಹೇಳುವುದು. ನೀವು ಹೇಳ್ತಿರೋದೂ ಅದೇ. ಬಹುಶ: ನಿಮಗೆ ತಿಳಿಯದೇ ನಿಮ್ಮ ಅಂತರಾಳದಿಂದ ಬಂದಿರೋ ಮಾತುಗಳು. ಇದಕ್ಕೆ ಪುಸ್ತಕ ಓದಿಯೇ ಜ್ಞಾನ ಬಂದಿರಬೇಕು ಅಂತೇನೂ ಇಲ್ಲ. ಗೋರಾ ಕುಂಬಾರನೂ, ಕನಕದಾಸರೂ, ಅಧ್ಯಾತ್ಮ ಚಿಂತಕರೇ. ಇದೇ ದಿಕ್ಕಿನಲ್ಲಿ ನಿಮ್ಮ ಬರವಣಿಗೆಗಳು ಸಾಗಲಿ. ನಮ್ಮಂತಹವರಿಗೆ ಜೀವನ ಮಾಡುವ ದಾರಿ ತೋರಿಸಿ.

ಆ ಸರ್ವಶಕ್ತನ ಕರುಣೆ ನಿಮ್ಮ ಮೇಲೆ ಸದಾ ಇರಲಿ.

ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 7, 2005 - 7:59am — olnswamy

ಚೆನ್ನಾಗಿದೆ, ಆದರೆ

olnswamy's picture

ಕವಿತೆಯ ಐಡಿಯಾ ಇಷ್ಟ ಆಯಿತು. ನೀವು ವಿಚಾರಗಳನ್ನು ರೂಪಕಗಳ ಮುಖಾಂತರ ಹೇಳುವುದಕ್ಕೆ ಪ್ರಯತ್ನಿಸಿದರೆ ಇನ್ನೂ ಉತ್ತಮವಾಗುತ್ತದೆ. ಈಗಿರುವಂತೆ ಕೇವಲ ಅಮೂರ್ತ ಹೇಳಿಕೆಗಳಿಗೆ ಪ್ರಾಮುಖ್ಯ ದೊರೆತಿದೆ. ನಾಲ್ಕನೆಯ ಸ್ಟಾಂಜಾದ ಕತ್ತಲು-ಬೆಳಕು ಥರ ನಿಮ್ಮ ಐಡಿಯಾಗಳು ರೂಪಕದ ರೂಪತಳೆದರೆ ಕವಿತೆ ಸದೃಢವಾಗುತ್ತದೆ. ಅಂದಹಾಗೆ ಎರಡನೆಯ ಸಾಲಿನ "ಪರಿಪಾಟ" ಎಂಬ ಪದವನ್ನು ಕುರಿತು ಕೊಂಚ ಯೋಚಿಸಿನೋಡಿ. ಯಾಕೋ ಅದು ಸರಿಯಾಗಿ ಹೊಂದುವಂತೆ ತೋರುತ್ತಿಲ್ಲ.
ನಾಗಭೂಷಣ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 7, 2005 - 11:23pm — hpn

:)

hpn's picture

ಒಳ್ಳೆಯ ಬೆಳವಣಿಗೆಗಳನ್ನು ಸೂಚಿಸುವ (constructive) ಕಾಮೆಂಟ್ ನಿಮ್ಮದು. ಸಾಹಿತ್ಯ ಜಗತ್ತಿನ ಪ್ರಮುಖರೊಬ್ಬರು ಜೊತೆಗಿದ್ದರೆ ಆಗಬಹುದಾದ "Difference"ಗೆ ಅತ್ಯುತ್ತಮ ಉದಾಹರಣೆಯಿದು. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 8, 2005 - 3:50pm — sinchanabhat

ಧನ್ಯವಾದಗಳು

sinchanabhat's picture

ಧನ್ಯವಾದಗಳು...
"ಪರಿಪಾಟ" ಎನ್ನುವ ಶಬ್ಧದ ಬಳಕೆ ನಿಮಗುಂಟುಮಾಡಿದ ಗೊಂದಲ ನನಗೆ ತಿಳಿಯಲಿಲ್ಲ.
'ಪರಿಪಾಟ' ಅಂದರೆ ರೂಢಿ, ಹಿಂದಿನಿಂದ ನಡೆದು ಬಂದ ಪಧ್ದತಿ.ನಮ್ಮ ಬದುಕಿನಲ್ಲಿ ಅವುಗಳ ಪಾತ್ರವೂ ಮುಖ್ಯವಾಗಿದೆ.ನಾವು ಜೀವಿಸುತ್ತಿದ್ದೇವೆ ಅಂದರೆ ಪ್ರತಿ ಕ್ಷಣದಲ್ಲೂ ಏನನ್ನೋ ಪಡೆದುಕೊಳ್ಳುತ್ತೇವೆ,ಕಳೆದುಕೊಳ್ಳುತ್ತೇವೆ.ಹೇಗೆ ಪ್ರತಿಕ್ಷಣವೂ ಕಾರ್ಯನಿರತವಾಗಿರುತ್ತದೆ.ಅಲೆದಾಟ ಹುಡುಕಾಟಗಳು ನಿತ್ಯದ ದಿನಚರಿ.ಇವುಗಳೊಂದಿಗೆ ಅದೆಷ್ಟೊ ಸಂಪ್ರದಾಯಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ರೂಢಿಯಲ್ಲಿವೆ. ಇವೆಲ್ಲವುಗಳನ್ನು ನಾವು ಅಂಟಿಕೊಂಡಿರುವ ಅನಿಶ್ಟವೆಂಬಂತೆ ಚಿತ್ರಿಸಿಕೊಂಡು ಕುರುಡರಾಗಿ ಅನುಸರಿಸುವುದಕ್ಕಿಂತ ಅದರ ಆಳಕ್ಕಿಳಿದು ಅವುಗಳ ಅರ್ಥ ಅರಿತು ಅನುಸರಿಸಿದರೆ ಬದುಕು ಸುಂದರವಾಗುವುದೆಂಬ ಅರ್ಥದಲ್ಲಿ ನಾನು ಇಲ್ಲಿ 'ಪರಿಪಾಟ' ಎಂಬ ಶಬ್ಧವನ್ನು ಬಳಸಿದ್ದೇನೆ.

ಸಿಂಚನಾ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 8, 2005 - 7:53pm — olnswamy

ಪರಿಪಾಟ, ಪರಿಪಾಠ

olnswamy's picture

ಪರಿಪಾಟ, ಪರಿಪಾಟಲು ಈ ಪದಗಳನ್ನು ಅನಗತ್ಯವಾದ ಗೋಜಲು ಅನ್ನುವ ಅರ್ಥದಲ್ಲಿ ಬಳಸುವ ಪರಿಪಾಠವಿದೆ. ನೀವು ಹೇಳುವ ಹ್ಯಾಬಿಟ್ ಅನ್ನುವ ಅರ್ಥದಲ್ಲಿ ಪರಿಪಾಠ ಇರಬೇಕಲ್ಲವೆ? ಪರಿಪಾಠಗಳನ್ನು ಪರೀಕ್ಷಿಸಿಕೊಳ್ಳುವುದು ತೀರ ಅಗತ್ಯವೇ ಸರಿ. ಆ ಮಟ್ಟಿಗೆ ನಿಮ್ಮ ಮಾತು ನಿಜ. ಈಗಿರುವಂತೆ ಮೊದಲ ಸಾಲಿನ ಕೊನೆಯ ಪದದ ಅರ್ಥದೊಡನೆ ಪರಿಪಾಟ ಎಂಬ ಮಾತಿನ ಅರ್ಥ ಯಾಕೋ ಹೊಂದುತ್ತಿಲ್ಲ ಅನ್ನಿಸಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 8, 2005 - 8:16pm — tvsrinivas41

ಪರಿಪಾಠ

tvsrinivas41's picture

ನನಗನ್ನಿಸಿದಂತೆ ಪರಿಪಾಠವೇ ಸರಿ. ಪರಿಪಾಠ ಅಂದರೆ ರೂಢಿ, ಪದ್ಧತಿ. ಇದು ಸಂಸ್ಕೃತ ಮೂಲದ ಪದ. ಪರಿ ಅಂದರೆ ಸುತ್ತಲು ಮತ್ತು ಪಾಠ ಅಂದರೆ ಕಲಿಯುವಂಥದ್ದು, ಮತ್ತೆ ಮತ್ತೆ ರೂಢಿಸುವುದು. ಮಾಡಿದ್ದನ್ನೇ ಮತ್ತೆ ಮತ್ತೆ ಚಕ್ರ ಸುತ್ತಿದಂತೆ ಮಾಡುತ್ತಿರುವುದು ಎಂದರ್ಥ. ಇದರ ಪ್ರಕಾರ ಪರಿಪಾಠವೇ ಸರಿ ಅಲ್ಲವೇ?

-----
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಓದಿದ್ದು
  • ಮ್ಯಾಜಿಕ್ ಡಬ್ಬದಲ್ಲಿ ಏನಿದೆ, ನೋಡಲು ಬನ್ನಿ
  • ನನ್ನ ಹಾಡು ನನ್ನದು....
  • ನಾನು- ನೀನು
  • ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
Syndicate content

ಲೇಖಕರು

sinchanabhat's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಸ್ಪೇಸ್ ಮೌಂಟೆನ್”, ’ಡಿಸ್ನಿ ಲ್ಯಾಂಡ್” ನ ಮತ್ತೊಂದು ರೋಮಾಂಚಕ ತಾಣ ; ’ರೋಲರ್ ಕೋಸ್ಟರ್,’ ನಲ್ಲಿ ರಮಿಸುವುದೇ ಇಲ್ಲಿನ ವಿಶೇಷತೆ !
  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 10:25am
  • kannadakanda
    ಉ: 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
    July 25, 2008 - 9:48am
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 42 ಅತಿಥಿಗಳು ಆನ್ಲೈನ್ ಇರುವರು.


ಕನ್ನಡಕ್ಕೆ ಇಂಗ್ಲೀಷು ಕಿಂಚಿತ್ತು ಬೆರಸಲದ ಸಿನ್ನುಗಳ ಲಿಸ್ಟಿನಲಿ ಹೈಯೆಸ್ಟು ಅದರಿಂದ ಫನ್ನಿಗೂ ಮಿಕ್ಸದಿರು ಸರ್ವಜ್ಞ.

— ನಾ. ಕಸ್ತೂರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator