ನಿಮಗೆ ಒಂದು ವೇಳೆ ಒಳ್ಳೆಯ ಸಲಹೆ ದೊರೆತರೆ ಅದನ್ನು ಕೂಡಲೆ ಬೇರೆಯವರಿಗೆ ತಲುಪಿಸಿ. ಅದರಿಂದ ನಿಮಗೆ ಉಪಯೋಗವಾಗುವುದು ಅಷ್ಟರಲ್ಲೇ ಇದೆ ಬಿಡಿ.
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಶ್ರೀಕಾಂತ ಮಿಶ್ರಿಕೋಟಿ
ಪರಿಚಯ
ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.
ಆಯ್ದ ಗಾದೆಮಾತುಗಳು : (೧೧-೨೦)
ನಾವು ತಿಳಿಯದ ಎಷ್ಟೋ ಗಾದೆ ಮಾತುಗಳು ಇರುತ್ತವೆ. ಈ ಗಾದೆಗಳಲ್ಲಿ ಹೊಸ ವಿಚಾರಗಳು , ಹೊಸ ನುಡಿಗಟ್ಟುಗಳು ಸಂಪದ ಓದುಗರಿಗೆ ಸಿಕ್ಕಾವು ಎಂಬ ಆಸೆಯಿಂದ ಕಂತುಗಳಲ್ಲಿ ನನಗೆ ವಿಶಿಷ್ಟವೆನಿಸಿದ ಗಾದೆಮಾತುಗಳನ್ನು ಇಲ್ಲಿ ಕಂತುಗಳಲ್ಲಿ ಕೊಡುತ್ತಿದ್ದೇನೆ.
೧೧. ಅಂಟು ತಪ್ಪಿದರೆ ನಂಟು ತಪ್ಪೀತೆ? ( ಬಳಕೆ ತಪ್ಪಿದರೂ ನೆಂಟತನ ತಪ್ಪುವದಿಲ್ಲ)
೧೨. ಅಂಬಲಿ ಕುಡಿದರೂ ಇಂಬಾಗಿ ಕುಡಿಯಬೇಕು .
೧೩. ಅಗಸನಿಗೊಂದು ಎದ್ದ ಕಲ್ಲು , ಪೂಜಾರಿಗೊಂದು ಬಿದ್ದ ಕಲ್ಲು.
೧೪. ಅಚ್ಚಕ್ಕಿ ಇದ್ದಾಗ ನುಚ್ಚಕ್ಕಿ ಹಂಗೇನು?
೧೫. ಅಜ್ಜಿಗೆ ಅರಿವೆ ಚಿಂತೆ ; ಮೊಮ್ಮಗಳಿಗೆ ಮಿಂಡನ ಚಿಂತೆ.
೧೬. ಅಜ್ಜಿಗೆ ಮೊಮ್ಮಗ ಕೆಮ್ಮಲು ಕಲಿಸಿದನಂತೆ
೧೭. ಅಡಿಗೆ ಬಲ್ಲವನ ಹೆಂಡತಿಯಾಗಬಾರದು ; ಕೆಲಸ ಬಲ್ಲವನ ಆಳಾಗಬಾರದು.
೧೮. ಅತ್ತೆ ಒಡೆದ ಪಾತ್ರೆಗೆ ಬೆಲೆಯಿಲ್ಲ .
೧೯. ಅತ್ತೆ ಸತ್ತು ಆರು ತಿಂಗಳಿಗೆ ಸೊಸೆ ಕಣ್ಣಲ್ಲಿ ನೀರು ಬಂತು. (ಅತ್ತೆ ಒಳ್ಳೆಯ ಗುಣ ಅರಿವಾಯಿತು ಎಂದರ್ಥ).
೨೦.ಅಧಿಕಾರಕ್ಕೆ ತಕ್ಕ ಬುದ್ಧಿಯಿಲ್ಲ ; ಸಂಬಳಕ್ಕೆ ತಕ್ಕ ದುಡಿಮೆಯಿಲ್ಲ; ( ಸರಕಾರೀ ಅಧಿಕಾರಿಗಳ ಕುರಿತು?)
೨೦. ಅಮ್ಮನವರು ಪಟ್ಟಕ್ಕೆ ಬಂದಾಗ ಅಯ್ಯನವರು ಕೈಲಾಸಕ್ಕೆ ಹೋದರು . ( ಮುದುಕನೊಡನೆ ಎಳೆ ಯುವತಿಯ ಮದುವೆಯ ಫಲ.)
- Login or register to post comments
- 872 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS: