ಸಮಸ್ಯೆ
ನಾನು ಪೋಸ್ಟಿಸಿದ ಒಗಟನ್ನು ಯಾರೂ ಬಿಡಿಸಲಿಲ್ಲ. ಸ್ವಲ್ಪ ಸುಲಭವಾಗಿರುವ ಇದನ್ನು ಪ್ರಯತ್ನಿಸಿ-
[ಇದನ್ನು ಒಗಟು ಎನ್ನುವುದಕ್ಕಿಂತಲೂ ಸಮಸ್ಯೆ ಎನ್ನುವುದೇ ಸೂಕ್ತ]
ಈ ಸಮಸ್ಯೆಯನ್ನು ಪರಿಹರಿಸಿ-
ಪರ್ವತ ಸುತ್ತಲು
ಶಿಲೆ ಪಾಲ್ಗರೆಯಲು
ಹೆಂಗಸು ಹೇರನೆತ್ತಲು
ಕತ್ತೆ ವೇದವನೋದಲು
ವಿಪ್ರನು ಕಾಗೆ ಮಾಂಸವ ತಿಂಬುದ ಕಂಡೆ.
-ಇವು ಹೇಗೆ ಸಾಧ್ಯ?
ಸಿಗೋಣ,
ಪವನಜ

- Login or register to post comments
- 798 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಸಮಸ್ಯೆಗೆ ಉತ್ತರ
ಪರ್ವತ ಸುತ್ತಲು ಶಿಲೆ
ಪಾಲ್ಗರೆಯಲು ಹೆಂಗಸು
ಹೇರನೆತ್ತಲು ಕತ್ತೆ
ವೇದವನೋದಲು ವಿಪ್ರನು
ಕಾಗೆ ಮಾಂಸವ ತಿಂಬುದ ಕಂಡೆ
ಎಲ್ಲವೂ ಸರಿಯಾಗಿಯೇ ಇವೆಯಲ್ಲ? ಸಮಸ್ಯೆ ಎಲ್ಲಿದೆ?
ಸಿಗೋಣ,
ಪವನಜ
-----------
Vishva Kannada
Think globally, Act locally
ಉ: ಸಮಸ್ಯೆಗೆ ಉತ್ತರ
ಬಹಳ ಚೆನ್ನಾಗಿದೆ.
ಇದು ನೀವು ಬರೆದದ್ದೆ? ಅಥವಾ ಉದ್ಧರಿಸಿದ್ದೆ.
ಧನ್ಯವಾದ
Re: ಸಮಸ್ಯೆಗೆ ಉತ್ತರ
ಉದ್ಧರಿಸಿದ್ದು. ನಾನು 1995-96ರಲ್ಲಿ ತೈವಾನಿನಲ್ಲಿ ಇದ್ದಾಗ, ಇಡೀ ತೈವಾನಿನಲ್ಲಿ ಕನ್ನಡ ಮಾತನಾಡುವವ ನಾನೊಬ್ಬನೇ ಇದ್ದದ್ದು. ಆ ಸಮಯದಲ್ಲಿ soc.culture.inddian.karnataka (SCIK) ಮೂಲಕ ಹಲವು ಕನ್ನಡಿಗರ ಪರಿಚಯ ಮಾಡಿಕೊಂಡಿದ್ದೆ. ಈ SCIKನಲ್ಲಿ ಈಗ ಸಂಪದದಲ್ಲಿ ನಡೆಯುವ ರೀತಿಯಲ್ಲೇ ಚರ್ಚೆಗಳು ನಡೆಯುತ್ತಿದ್ದವು. ಆದರೆ ಲಿಪಿ ಇಂಗ್ಲೀಷ್. ದಿನೇಶ್ ನೆಟ್ಟಾರ್ ಎಂಬವರು ಇದೇ ಸಮಸ್ಯೆಯನ್ನು ಅಲ್ಲಿ ಪೋಸ್ಟಿಸಿದಾಗ ನಾನು ಅದನ್ನು ಪರಿಹರಿಸಿದ್ದೆ (ಸ್ವಲ್ಪ ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳುತ್ತಿದ್ದೇನೆ
). ಈಗಲೂ ಗೂಗ್ಲ್ನ ಸಂಚಯದಲ್ಲಿ ಈ ಸಮಸ್ಯೆ-ಉತ್ತರದ ಸರಪಳಿ ಓದಬಹುದು. ನನಗೆ ಆಗ ಹೊಳ್ಳ ಎಂಬವರು ಪಂಡಿತ ಎಂಬ ಬಿರುದಿತ್ತಿದ್ದರು. ಈಗ ಹೊಳ್ಳ, ದಿನೇಶ್ ಎಲ್ಲಿದ್ದಾರೊ ಗೊತ್ತಿಲ್ಲ.
ದಿನೇಶ್ ನೆಟ್ಟಾರ್ ಬಗ್ಗೆ ಇನ್ನಷ್ಟು: ಗೂಗ್ಲ್ನಲ್ಲಿ dinesh nettar ಎಂದು ಹುಡುಕಿ ನೋಡಿ. ತುಂಬ ಸ್ವಾರಸ್ಯಕರವಾದ ಒಂದು ಹಾಸ್ಯ ಲೇಖನ ಸಿಗುತ್ತದೆ. ಅದನ್ನು ಓದಿ ಹೊಟ್ಟೆ ಹುಣ್ಣಾಗುವಂತೆ ನಕ್ಕರೆ ನಾನು ಹೊಣೆಯಲ್ಲ.
ಸಿಗೋಣ,
ಪವನಜ
ಅರ್ಥಚಮತ್ಕಾರದ ಸಮಸ್ಯೆಗಳು...
ನಾನು ಈ ರೀತಿಯ ಸಮಸ್ಯೆಗಳನ್ನು ಸಂಸ್ಕೃತದಲ್ಲಿ ಓದಿದ ನೆನಪು...
ಪವನಜರು ಕನ್ನಡದಲ್ಲಿಯು ಇಂಥ ಅರ್ಥಚಮತ್ಕಾರದ ಸಮಸ್ಯೆಗಳು ಇವೆಯೆಂದು, ತೋರಿಸಿಕೊಟ್ಟಿದ್ದಾರೆ...
ಧನ್ಯವಾದ!!
Re: ಸಮಸ್ಯೆಗೆ ಉತ್ತರ
ದಿನೇಶ್ ನೆಟ್ಟಾರ್ ಬಗ್ಗೆ ಇನ್ನಷ್ಟು: ಗೂಗ್ಲ್ನಲ್ಲಿ dinesh nettar ಎಂದು ಹುಡುಕಿ ನೋಡಿ. ತುಂಬ ಸ್ವಾರಸ್ಯಕರವಾದ ಒಂದು ಹಾಸ್ಯ ಲೇಖನ ಸಿಗುತ್ತದೆ. ಅದನ್ನು ಓದಿ ಹೊಟ್ಟೆ ಹುಣ್ಣಾಗುವಂತೆ ನಕ್ಕರೆ ನಾನು ಹೊಣೆಯಲ್ಲ.
ಸಿಗೋಣ,
ಪವನಜ
ದಿನೇಶ್ ನೆಟ್ಟಾರ್ ಈಗ ನ್ಯೂಜೆರ್ಸಿಯಲ್ಲಿದ್ದಾರೆ, ಟೆಲಿಕಾಂ ಫರ್ಮ್ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿ. (ಅವರ ಪಿ.ಎಚ್.ಡಿ ಕ್ಷೇತ್ರ ರಾಸಾಯನಶಾಸ್ತ್ರ; ಎತ್ತಣ ಕೆಮೆಸ್ಟ್ರಿ ಎತ್ತಣ ಟೆಲಿಕಾಂ...)
ದಿನೇಶ್ ಅವರ ಹಾಸ್ಯಪ್ರಜ್ಞೆ ಈಗಲೂ ಅದೇ ಪ್ರಮಾಣದಲ್ಲಿದೆ. ವಿಚಿತ್ರಾನ್ನದ ಕಾಯಂ ಗಿರಾಕಿಯಾಗಿರುವ ಅವರು ಬಹಳ ಹಾಸ್ಯಮಯ ಪ್ರತಿಕ್ರಿಯೆಗಳನ್ನು ಬರೆದು ಕಳಿಸುತ್ತಾರೆ. ಇವತ್ತು ಪ್ರಕಟವಾಗಿರುವ ಪ್ರತಿಕ್ರಿಯೆ(http://thatskannada.oneindia.in/column/vichitranna/220306chakara_resp.ht...) ಗಳಲ್ಲಿ ದಿನೇಶ್ ಅವರ ಪತ್ರವೂ ಇದೆ. ದಿನೇಶ್ ಅವರೊಡನೆ ಸಂಪರ್ಕ ಸಾಧಿಸಬೇಕೆಂದಿದ್ದವರಿಗೆ ಅವರ ವಿ-ಅಂಚೆ ವಿಳಾಸವನ್ನು ಕೊಡಬಲ್ಲೆ.
ಇತಿ
ಶ್ರೀವತ್ಸ ಜೋಶಿ