ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಹಕ್ಕಿಯ ಬಲೆ

ಮರದ ಪಕ್ಕದಲ್ಲೇ ಕುಳಿತೆ ತಬ್ಬಿಕೊಂಡೇ ಬಲೆಗೆ
ಸುಳಿವು ಹತ್ತಿತೇನೋ ಹಕ್ಕಿಗೆ ಓಡಿಹೋಯಿತು ಒಳಗೆ

ಸಂಜೆಯಾಗಲು ಬಲೆ ಬದಿಗಿರಿಸಿ
ಕುಳಿತೆ ಸುಮ್ಮನೆ ಧ್ಯಾನಿಸಿ
ಕೈ ಎತ್ತಿ ಕರೆದೆ ಹಕ್ಕಿಯ
ಬಂತು ಹೊರಗದು ಧಾವಿಸಿ

ಬೊಗಸೆ ಕೈಯೊಳು ಹಿಡಿದು ಮುತ್ತಿಕ್ಕಿ
ಹಾರಿ ಬಿಟ್ಟೆ ಬಾನಿಗೆ
ಆತನಿಗೆ ಆಗಾದ ಖುಷಿಯನು
ಯಾರಿಗೆ ಹೇಳಲಿ ? ಹೇಗೆ ?

ಬದಿಗೆ ಇರಿಸಿದ ಬಲೆಯು ಏತಕೋ
ಹುಳಿ ಹುಳಿ ಮುಖ ಮಾಡಿತು
ಬಾನ ಸೇರಿದ ಪುಟ್ಟ ಹಕ್ಕಿಯ
ಪಿಳಿ ಪಿಳಿ ತುಸು ನೋಡಿತು

No votes yet