ಸುಂಕದವನ ಹತ್ತಿರ ಸುಖ ದು:ಖ ಹೇಳಿದರೆ , ಕಂಕುಳಲ್ಲಿ ಇರೋದು ಏನು ಅಂದನಂತೆ.
ಹುಟ್ಟಾ ಸತ್ತಿಲ್ಲ , ಸ್ವರ್ಗ ಕಂಡಿಲ್ಲ.
ಹಾದಿ ಬಿಟ್ಟವನಿಗೆ ಹದಿನೆಂಟು ಹಾದಿ
ಹತ್ತು ಆಡಬಹುದು , ಒಂದು ಬರೆಯಲಾಗದು. ( ಆಡಿದ್ದನ್ನು ಅಲ್ಲಗಳೆಯಬಹುದು , ಬರೆದದ್ದನ್ನು ಅಲ್ಲಗಳೆಯಲಾಗದು)
ಹಂಗಿನರಮನೆಗಿಂತ ಇಂಗಡದ ಗುಡಿ ಲೇಸು.
ಸೆಟ್ಟರೇ ನಿಮ್ಮ ಮಗ ಬಿದ್ದ ಅಂದರೆ ಫಾಯದೇ ಕಾಣದೆ ಬಿದ್ದಿರಲಾರ ಅಂದರಂತೆ.
ಸೌಟು ಬಲ್ಲದೆ ಸಾರಿನ ರುಚಿಯ ?
ಸೆಟ್ಟಿ ಸಿಂಗಾರವಾಗುವದರೊಳಗೆ ಪಟ್ಟಣ ಹಾಳಾಯಿತಂತೆ.
ಸುಂಕದವನ ಹತ್ತಿರ ಸುಖ ದು:ಖ ಹೇಳಿದರೆ , ಕಂಕುಳಲ್ಲಿ ಇರೋದು ಏನು ಅಂದನಂತೆ.
ಸಿಪ್ಪೆ ತಿಂದವ ಸಿಕ್ಕೊಂಡ , ಹಣ್ಣು ತಿಂದವ ಜಾರಿಕೊಂಡ
ಸಿಡಿಲು ಹೊಡೆವಡೆ ಹಿಡಿದ ಕೊಡೆ ಕಾಯುವುದೆ?
ಸಿಟ್ಟಿನಲ್ಲಿ ಕೊಯ್ದ ಮೂಗು ಶಾಂತಿಯಲ್ಲಿ ಬಂದೀತೇ?
ಸಾವಿರ ಚಿತ್ತಾರವನ್ನು ಒಂದು ಮಸಿ ನುಂಗಿತು.

- Login or register to post comments
- 659 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಸುಂಕದವನಮುಂದೆ ಸುಖದು..
ಸುಂಕದವನಮುಂದೆ ಸುಖದು..
ಶ್ರೀಕಾಂತರಿಗೆ,
ನಮಸ್ಕಾರಗಳು. ನಾವು ಒಂದುಕಾಲದಲ್ಲಿ ಸುಂಕ ವಸೂಲಿ ಮಾದ್ತಿದ್ವಂತೆ. ಅಂದರೆ ನಮ್ಮ ತಾತಾ ಅವರ ಕಾಲದಲ್ಲಿ. ಅವರು ಊರಿನ ಶ್ಯಾನುಭೊಗರು ಕೂಡ ! ನಮ್ಮ ತಾತಾ ಅವರು ತೀರಿಹೋದ್ಮೇಲೆ, ಆ ವ್ರುತ್ತಿ ಬಂದಾಯಿತು. ನಂತರ 'ಶ್ಯಾನುಭೋಗ್ಕೆ'ಮಾತ್ರ ಉಳಿದಿತ್ತು.ನನ್ನ ತಂದೆಯವರು, 'ಲೋಕಲ್ ಆಡೀಟರ್' ಆಗಿದ್ದರು. ಶ್ಯಾನುಭೋಗರಾಗಿ ಕೂಡ.
ಈಗಲೂ ನಮ್ಮನ್ನು 'ಸುಂಕದವರು',ಶ್ಯಾನುಭೋಗರ ಮನೆಯವರು ಎನ್ನುತ್ತಾರೆ ! ನೀವು ಮಾತ್ರ ಏನಾದರೂ ಸುಖ ದುಃಖ ಹೇಳಿಕೊಳ್ಳಬಹುದು. ಅಡ್ಡಿಯಿಲ್ಲ !
ಸೌಖ್ಯನಾ ?
ವೆಂ.