ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಹಳೆಯ ಗೆಳೆಯ :

April 1, 2006 - 7:12pm — venkatesh

ಹಳೆಯ ಗೆಳೆಯ :

ಗೆಳೆತನ ಅಪೂರ್ವ. ಎಳೆಯಂದಿನಿಂದಿಂದಿಗೂ
ಒಂದೆ ಥರ. ಹಲವಾರು ವರ್ಷ ಉರುಳಿದಮೇಲೆ
ಮುಂಬಯಿಯಲೊಮ್ಮೆಗೇ ಸಿಕ್ಕ ಆ ಹಳೆ ಗೆಳೆಯ
ಕೇಳಿದನು: 'ನಾನು ಯಾರೆಂದು ತಿಳಿಯಿತೆ ನಿನಗೆ ?'
ಕಣ್ಣಲ್ಲಿ ಕಣ್ಣು. ಹುಡುಕಿಡೆ ಬೆನ್ನ ಹಿಂದುಗಡೆ.
ಮರಳ ಹುದುಲಲ್ಲಿ ಬಚ್ಚಿಟ್ಟ ಹೆಜ್ಜೆಗಳನ್ನು
ಬಗೆದೆ ಒಂದೊಂದಾಗಿ ಪುಟ ತೆಗೆದು. ಕತೆಗೆ ಕೊನೆ-
ಯಿರುವಂತೆಯೇ ಉಂಟು ಒಂದೆ ಗ್ರಂಥದಲ್ಲದರ
ಆರಂಭ, ಬೆಳವಣಿಗೆ. ಅಲ್ಲಲ್ಲಿ ನೆನಪಿಗೆಂ-
ದಿರಿಸಿ ಮರೆತಿರುವಂಥ ನವಿಲುಗರಿ.ಬಿಡಿಸಿ ನೋ-
ಡಿದರೆ ಈವತ್ತಿಗೂ ಜೀವಂತ ಚಿತ್ರಗಳು.
ಬೊಕ್ಕತಲೆ, ಕನ್ನಡಕ, ಸುಕ್ಕು, ನೆರೆಗೂದಲಿನ
ಈ ಹೊಸಾಮುಖವಾಡ ಕಿತ್ತು ನಕ್ಕೆನು: 'ಎಲಾ !
ಹುಡುಗು ಬುದ್ದಿಯ ನೀನು ಈಗಲೂ ಬಿಟ್ಟಿಲ್ಲ'

ಗೆಳೆಯ ಶ್ರೀ. ಎಚ್.ಎಸ್.ವೆಂಕಟೇಶಮೂರ್ತಿಯವರು ನಾನೂ ಬಹಳ ವರ್ಷದ ಮೇಲೆ ಮುಂಬೈ ನಲ್ಲಿ ಭೇಟಿಯಾದಾಗ. ಆಗ ರಚಿಸಿದ ಈ ಕವಿತೆ 'ಎಷ್ಟೊಂದು ಮುಗಿಲು,' ಎಂಬ 'ಕವನ ಸಂಗ್ರಹ'ದಲ್ಲಿ ಪ್ರಕಟವಾಗಿದೆ.(ಪುಟ 61),ಅಕ್ಷರ ಪ್ರಕಾಶನ, ಹೆಗ್ಗೋಡು. ದಿಸೆಂಬರ್, 1991.

  • ಕಾವ್ಯ ಮತ್ತು ಕವನ
~.~
  • Login or register to post comments
  • 533 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 2, 2006 - 11:50am — venkatesh

ಹಳೆಯ ಗೆಳೆಯ:

venkatesh's picture

ಹಳೆಯ ಗೆಳೆಯ:
ಶ್ರೀ.ಎಚ್.ಎಸ್. ವೆಂಕಟೇಶ್ ಮೂರ್ತಿಯವರೂ, ನಾನು ಬಾಲ್ಯ ಸ್ನೇಹಿತರು. ಹೈಸ್ಕೂಲ್ ದಿನಗಳನ್ನು ಜೊತೆಯಲ್ಲೇ ಕಳೆದೆವು. ಆಮೇಲೆ ಅವರು ಮಲ್ಲಾಡಿಹಳ್ಳಿಯಲ್ಲಿ ಅದ್ಯಾಪಕ ರಾದಾಗಲೂ ಅವರನ್ನು ಭೇಟಿಮಾಡಿದ್ದೆ.ನಂತರ ಬಹಳಕಾಲದಮೇಲೆ ಮುಂಬೈ ನಲ್ಲಿ, ಭೇಟಿ ಆಯಿತು. ಆ ಸ್ಮರಣೆಗಾಗಿ ಅವರು ತಕ್ಷಣವೇ ಮೇಲಿನ ಕವನ,"ಹಳೆಯ ಗೆಳೆಯ," ಗೀಚಿ ನನಗೆ ತೋರಿಸಿದ್ದರು. ಬೆಂಗಳೂರಿನಲ್ಲಿ ಅವರ ಮನೆಯಲ್ಲಿ ನಾನು ಮತ್ತೆ ಭೇಟಿಯಾಗಿದ್ದಾಗ ಅವರ ಕವನ ಸಂಕಲನ 'ಎಸ್ಟೊಂದು ಮುಗಿಲು' ಪುಸ್ತಕವನ್ನು ಕೊಟ್ಟರು. 'ಹಳೆಯ ಗೆಳೆಯ,' ಅದರಲ್ಲಿ ಅಚ್ಚಾದ ಕವನ; ಮೇಲೆ ಪ್ರಸ್ತುತ ಪಡಿಸಿದ್ದೇನೆ.
-ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 2, 2006 - 12:15pm — tvsrinivas41

ನಿನ್ನೆ ಏಪ್ರಿಲ್ ೧

tvsrinivas41's picture

ಸಾರ್, ಹೋಗಿ ಹೋಗಿ, ನಿನ್ನೆ ಈ ಸೂತ್ರವನ್ನು ಏರಿಸಿದ್ದೀರ. ನೀವು ಸೀರಿಯಸ್ಸಾಗಿ ಬರೆದಿದ್ದರೂ ನಿನ್ನೆ ಏಪ್ರಿಲ್ ೧ನೇ ತಾರೀಕಲ್ವೇ? ಮೂರ್ಖರನ್ನಾಗಿ ಮಾಡಲು ಬರೆದಿರ್ಬೇಕು ಅಂತ ನಾ ತಿಳಿದಿದ್ದೆ.

ನಿಮ್ಮ ನೆನಪಿನ ಪುಸ್ತಕವನ್ನು ನಮ್ಮೆದುರಿಗೆ ತೆರೆದಿಟ್ಟಿದ್ದಕ್ಕೆ ಧನ್ಯವಾದಗಳು.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 2, 2006 - 6:28pm — venkatesh

'ನಿನ್ನೆ ಅಪ್ರಿಲ್ 1'

venkatesh's picture

'ನಿನ್ನೆ ಅಪ್ರಿಲ್ 1',
ಶ್ರೀನಿವಾಸರಿಗೆ, ನಮಸ್ಕಾರಗಳು.
ಈ ಬಾರಿ ಯಾರೂ, 'ಏಪ್ರಿಲ್ ಫೂಲ್' ಬಗ್ಗೆ ಯೋಚಿಸಲೇ ಇಲ್ಲ. 'ನಾವು ಆಗ್ಲೇ ಫೂಲ್ ಆಗಿದ್ವಿ' ! ಅಂದರೆ, ನನ್ನ ಪತ್ನಿಯವರು ಮನೆಯಲ್ಲೇ ಜಾರಿ ಬಿದ್ದು 'ಕಾಲು ಮೂಳೆ' ಮುರಿದು ಶಸ್ತ್ರ ಚಿಕೆತ್ಸೆಯ ನಂತರ ಗುಣಮುಖರಾಗುತ್ತಿದ್ದಾರೆ.
ಕಂಪ್ಯುಟರ್ ತಿಳುವಳಿಕೆ ಕಡಿಮೆ. ಬರೆದು ಅಂಟಿಸುವದರಲ್ಲಿ ಸ್ವಲ್ಪ ತೊಂದರೆಯೆ ಆಗುತ್ತೆ. ತಪ್ಪು ತಲೆಗೆ ಹೋಗುವದರಲ್ಲೇ -ಅವಸರ ನೋಡಿ. ಆಮೇಲೆ ಈ ತರಹ ಸೂತ್ರ ಬಿಡ ಬೇಕಾಗುತ್ತೆ !
ಮನೆಯಲ್ಲಿ ಎಲ್ಲ ಆರೋಗ್ಯವೇ ?
ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೌನ
  • ಏಕೆ ಹೀಗೆ ಮಾಡಿದೆ ನೀನು?
  • ಒಂದು ನಿಮಿಷ ನಕ್ಕು ಬಿಡೋಣ!
  • ಹರಿ-ಗಿರಿ ಸವಿ ದಿನ
  • ಗೆಳೆಯ
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಿಡುಗಡೆಯ ನಂತರದ ಬೇಡಿಗಳು (೩)
  • ಧಾರವಾಡದಲ್ಲಿ ಹುಟ್ಟಿ ಬಾಲ್ಟಿಮೋರ್‌ನಲ್ಲಿ ಹರಿದ ನಮ್ಮೆಲ್ಲರ ಶಾಲ್ಮಲಾ!
  • ಬಿಡುಗಡೆಯ ನಂತರದ ಬೇಡಿಗಳು (೨)
  • ‘ಮನೆ ಅಂಗಳದ ಕೈತೋಟ-ವಿಶ್ವ ದಿನಾಚರಣೆ’ (ಆಗಸ್ಟ್ ೨೬) ಇಂದು!
  • ಫೈರ್ಫಾಕ್ಸಿನಲ್ಲಿ ಉದಯವಾಣಿಯನ್ನು ಓದುವ ಬಗ್ಗೆ
  • (Liberty Bell) ಸ್ವಾತಂತ್ರ್ಯದ ಕುರುಹಾದ ಘಂಟೆ !
  • ಬಿಡುಗಡೆಯ ನಂತರದ ಬೇಡಿಗಳು (೧)

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಗೆಳೆಯ
    August 29, 2008 - 12:26am
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:37pm
  • Rajeshwari
    ಉ: ಕಚೇರಿ ಎಂಬ ನರಕ-೧
    August 28, 2008 - 10:36pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 10:29pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:19pm
  • Sunil Jayaprakash
    ಉ: ಆರದ ದೀಪ
    August 28, 2008 - 10:19pm
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:18pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:12pm
  • ಸಂಗನಗೌಡ
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 28, 2008 - 10:04pm
  • uniquesupri
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 9:43pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 31 ಅತಿಥಿಗಳು ಆನ್ಲೈನ್ ಇರುವರು.


ಆಡದೆಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವ ಮಧ್ಯಮನು
ಅಧಮ ತಾನಾಡಿ ಕೊಡದವನು ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator