ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ತೊಟ್ಟು ಕಿತ್ತ ಹೂವು

ಎಂತ ಚಂದದ ಹೂವು
ಹೀಗಿದೇತಕೆ ಬಿತ್ತು
ಮನದಲ್ಲಿ ವ್ಯಥೆಯ ಹೊತ್ತು|
ಯಾವ ಬೆರಳಿದು ಕ್ರೂರ
ಕೊಟ್ಟಿದೇತಕೆ ನೋವ
ಉಗುರಲೀ ತೊಟ್ಟ ಕಿತ್ತು||
ನಗು ನಗುತಲಿದೆ ಇನ್ನೂ
ಮುಚ್ಚಲಿಲ್ಲವೋ ಕಣ್ಣು
ಪಾಪ, ಅದಕೇನು ಗೊತ್ತು:
ತಾನೀಗ ಕಾಲರಾಯನ ತುತ್ತು||
ಮೆಲ್ಲ ಮೆಲ್ಲನೆ ಮಾಸಿ
ಬಾಡುತಲಿದೆ ನೋಡು
ಕರಗುತಿದೆ ಕೊನೆಯ ಕಂತು|
ತನ್ನ ತಾನೇ ಮರೆತು
ಕೊಡುತಲಿದೆ ನೋಡು
ತುಳಿದವರ ಕಾಲಿಗೇ ಮುತ್ತು||

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
kulkarni.mac's picture

ಸಕತ್ ಆಗಿದೆ ಕವನ,
:)
ಪ್ರೀತಿಯಿಂದ
ಗಿರಿ

gnanadev's picture

ತನ್ನನು ಕಡಿಯಲೆ೦ದು ಬ೦ದ ಮರಕಟುಕನಿಗೂ ಆಶ್ರಯ ನೀಡುವ ಮರದ ನೆನಪಾಯಿತು. ಒ೦ದು ಭಾವುಕ ಕವನ. ಒಳ್ಳೆಯ ಪ್ರಯತ್ನ ಶ್ರೀಧರ್.

ಜ್ಞಾನದೇವ್ ಮೊಳಕಾಲ್ಮುರು.

hariharapurasridhar's picture

http://www.hariharap...

ಡಾ||ಜ್ಞಾನದೇವ್ ಮೊಳಕಾಲ್ಮುರು.

ಹಲವು ಭಾರಿ ನಾನು ನನ್ನ ಮನದಲ್ಲಿ ಅಂದುಕೊಳ್ಳುವುದುಂಟು, ಯಾರಾದರೂ ನನ್ನ ಮನಸ್ಸಿಗೆ ನೋವುಂಟು ಮಾಡಿದರೂ ಅವರ ಮೇಲೆ ಸಿಟ್ಟಾಗಬಾರದೆಂದು. ಹಾಗೂ ಹೀಗೂ ಸ್ವಲ್ಪ ಸಮಯ ಸಾಧ್ಯವಾಗುತ್ತೆ. ಆದರೆ ಯಾವಾಗಲೋ ನನ್ನರಿವಿಲ್ಲದೆ ಸಿಟ್ಟಾಗಿರುತ್ತೇನೆ.ಇನ್ನು "ತುಳಿದವರ ಕಾಲಿಗೇ ಮುತ್ತು" ಆಸ್ಥಿತಿ ತಲುಪುವುದು ಕಷ್ಟ ಅಲ್ಲವೇ? ಆದರೂ ಆ ಪ್ರಯತ್ನದಲ್ಲಿ ಸಾಗುವಾಸೆ.

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ