January 6, 2009 - 5:51pm - ಹರಿಹರಪುರಶ್ರೀಧರ್
ಎಂತ ಚಂದದ ಹೂವು
ಹೀಗಿದೇತಕೆ ಬಿತ್ತು
ಮನದಲ್ಲಿ ವ್ಯಥೆಯ ಹೊತ್ತು|
ಯಾವ ಬೆರಳಿದು ಕ್ರೂರ
ಕೊಟ್ಟಿದೇತಕೆ ನೋವ
ಉಗುರಲೀ ತೊಟ್ಟ ಕಿತ್ತು||
ನಗು ನಗುತಲಿದೆ ಇನ್ನೂ
ಮುಚ್ಚಲಿಲ್ಲವೋ ಕಣ್ಣು
ಪಾಪ, ಅದಕೇನು ಗೊತ್ತು:
ತಾನೀಗ ಕಾಲರಾಯನ ತುತ್ತು||
ಮೆಲ್ಲ ಮೆಲ್ಲನೆ ಮಾಸಿ
ಬಾಡುತಲಿದೆ ನೋಡು
ಕರಗುತಿದೆ ಕೊನೆಯ ಕಂತು|
ತನ್ನ ತಾನೇ ಮರೆತು
ಕೊಡುತಲಿದೆ ನೋಡು
ತುಳಿದವರ ಕಾಲಿಗೇ ಮುತ್ತು||
0

- Login or register to post comments
- 200 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹರಿಹರಪುರಶ್ರೀಧರ್
ಪರಿಚಯ
ನಾನೊಬ್ಬ ಭಾವಜೀವಿ.ಇಷ್ಟು ಸಾಕು.
ನನ್ನ ಬರಹಗಳಿಗಾಗಿ ಕೊಂಡಿ.
http://sampada.net/user/hariharapurasridhar/content
www.hariharapurasridhar.wordpress.com
www.hariharapurasridhar.blogspot.com
ಇತ್ತೀಚಿನ ಪ್ರತಿಕ್ರಿಯೆಗಳು
ಈಗಿನಂತೆ ಆನ್ಲೈನ್ ಇರುವವರು...
ಈಗಿನಂತೆ 3 ಸದಸ್ಯರು ಮತ್ತು 111 ಅತಿಥಿಗಳು ಆನ್ಲೈನ್ ಇರುವರು.



RSS:
ಉ: ತೊಟ್ಟು ಕಿತ್ತ ಹೂವು
ಸಕತ್ ಆಗಿದೆ ಕವನ,

ಪ್ರೀತಿಯಿಂದ
ಗಿರಿ
ಉ: ತೊಟ್ಟು ಕಿತ್ತ ಹೂವು
ತನ್ನನು ಕಡಿಯಲೆ೦ದು ಬ೦ದ ಮರಕಟುಕನಿಗೂ ಆಶ್ರಯ ನೀಡುವ ಮರದ ನೆನಪಾಯಿತು. ಒ೦ದು ಭಾವುಕ ಕವನ. ಒಳ್ಳೆಯ ಪ್ರಯತ್ನ ಶ್ರೀಧರ್.
ಜ್ಞಾನದೇವ್ ಮೊಳಕಾಲ್ಮುರು.
ಉ: ತೊಟ್ಟು ಕಿತ್ತ ಹೂವು
http://www.hariharapurasridhar.blogspot.com
ಡಾ||ಜ್ಞಾನದೇವ್ ಮೊಳಕಾಲ್ಮುರು.
ಹಲವು ಭಾರಿ ನಾನು ನನ್ನ ಮನದಲ್ಲಿ ಅಂದುಕೊಳ್ಳುವುದುಂಟು, ಯಾರಾದರೂ ನನ್ನ ಮನಸ್ಸಿಗೆ ನೋವುಂಟು ಮಾಡಿದರೂ ಅವರ ಮೇಲೆ ಸಿಟ್ಟಾಗಬಾರದೆಂದು. ಹಾಗೂ ಹೀಗೂ ಸ್ವಲ್ಪ ಸಮಯ ಸಾಧ್ಯವಾಗುತ್ತೆ. ಆದರೆ ಯಾವಾಗಲೋ ನನ್ನರಿವಿಲ್ಲದೆ ಸಿಟ್ಟಾಗಿರುತ್ತೇನೆ.ಇನ್ನು "ತುಳಿದವರ ಕಾಲಿಗೇ ಮುತ್ತು" ಆಸ್ಥಿತಿ ತಲುಪುವುದು ಕಷ್ಟ ಅಲ್ಲವೇ? ಆದರೂ ಆ ಪ್ರಯತ್ನದಲ್ಲಿ ಸಾಗುವಾಸೆ.