ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ನಿರಾಕಾರ

May 30, 2006 - 6:52pm — ahoratra

ನಿರಾಕಾರ.

ನಿರಾಕಾರನು ಸಾಕಾರನಾದದ್ದು
ಚಮತ್ಕಾರ,
ಸಾಕಾರನಿಗೆ ಕಂಡ ನಿರಾಕಾರವೇ
ಸಾಕ್ಷಾತ್ಕಾರ,
ವಿಕಾರನಿಗೆ ಸಾಕಾರನು ತೋರುವ ನಿರಾಕಾರವೇ
ಪರೋಪಕಾರ,
ವಿಕಾರನನ್ನು ನಿರ್ವಿಕಾರಗೊಳಿಸಿ ಸಾಕಾರನನ್ನಾಗಿಸುವ ಕ್ರಿಯೆಯೇ
ಸಂಸ್ಕಾರ.
ನಿರಾಕಾರನ
ಅಸಮಾನತೆಯೇ 'ಅ' ಕಾರ,
ಉತ್ತುಂಗವೇ 'ಉ' ಕಾರ,
ಮಮಕಾರವೇ 'ಮ' ಕಾರ.
ಈ ಮೂರರ
ಗುಣಾಕಾರವೇ
'ಓಂ'
ಕಾರ.
ಪ್ರಣವನಾದ
ಓಂಕಾರದ
ಭಾಗಾಕಾರವೇ
ಚತುರ್ವೇದದ ಜಗದಾಕಾರ.
{ಅಹೋರಾತ್ರ}

  • ಕಾವ್ಯ ಮತ್ತು ಕವನ
~.~
  • Login or register to post comments
  • 722 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 31, 2006 - 7:02am — ಮಹೇಶ ಭೋಗಾದಿ

ನಿರಾಕಾರ

ಮಹೇಶ ಭೋಗಾದಿ's picture

"ಚತುರ್ವೇದಗಳ ಜಗದಾಕಾರ" ಅಂದರೇನು?

<ಅಸಮಾನತೆಯೇ 'ಅ' ಕಾರ,
ಉತ್ತುಂಗವೇ 'ಉ' ಕಾರ,
ಮಮಕಾರವೇ 'ಮ' ಕಾರ.
ಈ ಮೂರರ
ಗುಣಾಕಾರವೇ
'ಓಂ'ಕಾರ.> ಇದನ್ನು ಕೊಂಚ ವಿವರಿಸಿ.

ಇಂತಿ,
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 31, 2006 - 9:40am — Sunil Jayaprakash

ಮೆಚ್ಚುಗೆ : ನಿರಾಕಾರ

Sunil Jayaprakash's picture

ಚಮತ್ಕಾರ, ಸಾಕ್ಷಾತ್ಕಾರ, ಪರೋಪಕಾರ, ಸಂಸ್ಕಾರ.

ಆಹಾ. ನಿರಾಕಾರ ಭಾವದಿಂದ ಇಷ್ಟೆಲ್ಲವನ್ನೂ ಸಾಧಿಸಬಹುದೇ. 'ರ'ಕಾರ ದಿಂದ ಕೊನೆಗೊಳ್ಳುವ ಪದಗಳ ಜೋಡಣೆ ನಿಜಕ್ಕೂ ಸಿಹಿಯನ್ನು ಸವಿಯುವಂತಾಗಿದೆ.
ಸವಿಯೊದಗು ನಿಮಗೆ.

ಆದರೆ ಈ 'ಓಂ' ಕಾರದ ಮರ್ಮ ಏತಕೋ ಅರ್ಥ ಮಾಡಿಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತಿದೆ.

ahoratra wrote:

ಅಸಮಾನತೆಯೇ 'ಅ' ಕಾರ,
ಉತ್ತುಂಗವೇ 'ಉ' ಕಾರ,
ಮಮಕಾರವೇ 'ಮ' ಕಾರ.

ಇಲ್ಲಿ ಕವಿಗಳ ಪ್ರಕಾರ ಅಸಮಾನತೆಯ ಭಾವ ಯಾವುದು. ಅಸಮಾನತೆಗೂ ಅಕಾರ ಕ್ಕೂ ಕೊಂಡಿ ಬೆಸೆಯುವಾಗ ಅವರ ಮನದಲ್ಲಿ ಯಾವ ಭಾವನೆಗಳಿದ್ದವು.

ನಾನು ಈ ರೀತಿ ಅರ್ಥಮಾಡಿಕೊಂಡ ಕಾರಣ ಸ್ಪಷ್ಟತೆ ಸಿಗುತ್ತಿಲ್ಲ.
ಈ ಪದ್ಯದಲ್ಲಿರುವ "ಸಮಾನತೆ" ಪದ , ನಾವು ದಿನನಿತ್ಯ ಬಳಸುವ ಸಮಾನತೆ, ಅಸಮಾನತೆ, ಮಹಳಾ ಸಮಾನತೆ, ಆರ್ಥಿಕ ಸಮಾನತೆ, ಇತ್ಯಾದಿ ಅರ್ಥದಲ್ಲಿ ಉಪಯೋಗಿಸಲ್ಪಟ್ಟಿದೆಯೇ. ನನ್ನ ಪ್ರಕಾರ ಸಮಾನತೆಯನ್ನು ಸಾಧಿಸಬೇಕು ಮತ್ತು ಅಸಮಾನತೆಯನ್ನು ಹೋಗಲಾಡಿಸಬೇಕು.

ಹಾಗಾಗಿ, ಇಲ್ಲಿ ಕವಿಗಳು ಯಾವ ಭಾವದಲ್ಲಿ ಅಸಮಾನತೆಯಲ್ಲಿ ಓಂಕಾರದ ಅ ಕಾರವನ್ನು ಕಂಡಿದ್ದಾರೆ ಎಂದು ತಿಳಿದುಕೊಳ್ಳುವ ತೀವ್ರ ಕುತೂಹಲದಲ್ಲಿದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 31, 2006 - 4:05pm — ahoratra

ಅಸಮಾನತೆ

ahoratra's picture

ಪ್ರಿಯ ಸುನಿಲಮಹೇಶರೆ, 

ವೇದ ಹೀಗೆ ಹೇಳುತ್ತದೆ, ಓಂಕಾರವಾಗಿರುವುದು 'ಅ', 'ಉ' ಮತ್ತು 'ಮ',ಕಾರಗಳಿಂದ.

ಮೊದಲು 'ಅ' ಕಾರ: ಋಗ್ವೇದ ಆರಂಭ ವಾಗುವುದು 'ಅ' ಕಾರದಿಂದ ಅಂತ್ಯ ವಾಗುವುದು 'ಇ' ಕಾರದಿಂದ,

ಯಜುರ್ವೇದದ ಆರಂಭ 'ಇ' ಕಾರದಿಂದ, ಅಂತ್ಯ 'ಉ' ಕಾರದಿಂದ.

ಮತ್ತು ಸಾಮ ವೇದ ಸಂಗೀತಮಯವಾದುದರಿಂದ 'ಮ' ಕಾರ ಪ್ರತಿನಿಧಿಸುತ್ತದೆ.

ದೇವರು ಎಲ್ಲವನ್ನು ಮೀರಿರುವ ಭಾವಕ್ಕೆ 'ಅಸಮಾನತೆ'ಯನ್ನು ಬಳಸಲಾಗಿದೆ [ ಸಮಾನವಲ್ಲದ್ದು ಅಸಮಾನ]

ದೇವರು ಎಲ್ಲಕ್ಕಿಂತ ಎತ್ತರದಲ್ಲಿರುವ ಭಾವಕ್ಕೆ ಉತ್ತುಂಗವನ್ನು ಬಳಸಿದೆ,

ದೇವರ ವಿಕಾರವಿಲ್ಲದ ಪ್ರೀತಿಗೆ  ಮಮಕಾರವೆಂದೆ.

ಆದರೂ ನಿಮ್ಮಗಳ ಹಾಗೆ ವಿವರಿಸಲಾರದ ಈ ಅಜ್ಞಾನಿಯನ್ನು ಮನ್ನಿಸಿ.

ಓಂಕಾರದ ಬಗ್ಗೆ ನಿಮಗಾಗಿ ಈಗ ಒಂದು ಕವನ ಬರೆದೆ, ಅದರಲ್ಲೂ ಸ್ವಲ್ಪ ವಿವರಿಸಿದ್ದೇನೆ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 31, 2006 - 4:59pm — Sunil Jayaprakash

ಓಂಕಾರ ಮತ್ತು ಅಸಮಾನದ ಗೊಂದಲ

Sunil Jayaprakash's picture

ahoratra wrote:

ಓಂಕಾರದ
ಭಾಗಾಕಾರವೇ
ಚತುರ್ವೇದದ ಜಗದಾಕಾರ.

ahoratra wrote:

ವೇದ ಹೀಗೆ ಹೇಳುತ್ತದೆ, ಓಂಕಾರವಾಗಿರುವುದು 'ಅ', 'ಉ' ಮತ್ತು 'ಮ',ಕಾರಗಳಿಂದ.

ಪ್ರಿಯ ಅಹೋರಾತ್ರರೆ,
ಓಂ ಕಾರಕ್ಕೂ, ವೇದಗಳಿಗೂ ಇರವ ಸಂಬಂಧವನ್ನು ತಿಳಿಸಿ ಮಹದುಪಕಾರವನ್ನು ಮಾಡಿರುವಿರಿ. ಜೇನು ಸವಿದಷ್ಟೆೇ ಸಂತಸವಾಗಿದೆ ನನಗೆ. ಹೀಗೆಯೇ ಅನೇಕ ವಿಷಯಗಳನ್ನು ಕವನಗಳ ಮೂಲಕ ತಿಳಿಸಿ ಕೊಡುತ್ತಿರಿ ಎಂದು ಕೇಳುವೆೆನು.

ahoratra wrote:

ದೇವರು ಎಲ್ಲವನ್ನು ಮೀರಿರುವ ಭಾವಕ್ಕೆ 'ಅಸಮಾನತೆ'ಯನ್ನು ಬಳಸಲಾಗಿದೆ

ಬೆಳಗ್ಗೆಯಿಂದ ಈ ಅಸಮಾನದ ಗೊಂದಲದಿಂದ ಹೊರಬರಲಾಗಿರಲಿಲ್ಲ. ನೀವು ಅಸಮಾನ ಭಾವದ ವಿವರಣೆಯನ್ನು ನೀಡಿ ನನ್ನಲ್ಲಿದ್ದ ಗೊಂದಲವನ್ನು ಹೋಗಲಾಡಿಸಿದ್ದೀರಿ.
ಬಹುಶಃ ಇದು ದ್ವೈತ ಸಿದ್ಧಾಂತದ ಪ್ರಭಾವವಿರಬಹುದು. ಆತ್ಮ ಮತ್ತು ಪರಮಾತ್ಮ(ಪರಮ ಆತ್ಮ), ಆ ಪರಮ ಆತ್ಮನಲ್ಲಿ ನೀವು ಅಸಮಾನ ಶಕ್ತಿಯನ್ನು ಕಂಡಿರಲಿಕ್ಕೆ ಸಾಕು.

ಈ ಕಾರಣದಿಂದಾಗಿಯೇ ನನಗೆ ಕವನ, ಕಾವ್ಯಗಳೆಂದರೆ ಇಷ್ಟ. ಅವು ನಮ್ಮನ್ನು ಚಿಂತನೆಗೀಡುಮಾಡುತ್ತದೆ(ಚಿಂತೆಗಲ್ಲ ಮತ್ತೆ). ನೋಡಿ ನಿಮ್ಮ ನಿರಾಕಾರ ಕವನ ನಮ್ಮಲ್ಲಿ ಗೊಂದಲವನ್ನೆಬ್ಬಿಸಿತು, ಆ ಗೊಂದಲಗಳನ್ನು ನಿವಾರಿಸಲು ನೀವು ಇನ್ನೊಂದು ಕವನ (ಓಂಕಾರ) ರಚಿಸಬೇಕಾಯಿತು.

ಈ ಇಡೀ ಕವಿವರ್ಗಕ್ಕೆ ಎಷ್ಷು ಸವಿಯೊದಗೆಗಳನ್ನು ಅರ್ಪಿಸಿದರೂ ಸಾಲದು. ಇಗೋ ನನ್ನ ನಮನಗಳು ಕವಿಗಳಿಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 31, 2006 - 6:21pm — ಮಹೇಶ ಭೋಗಾದಿ

ಓಂಕಾರ ಮತ್ತು ವೇದ

ಮಹೇಶ ಭೋಗಾದಿ's picture

ಇಲ್ಲೊಂದು ಗೊಂದಲ.

ನಾಲ್ಕುವೇದಗಳ ರಚನೆಯಾದಾಗ ಅವಕ್ಕೆ ಯಾವ ಹೆಸರನ್ನು ನೀಡಲಾಗಿರಲಿಲ್ಲ. ನಂತರ ಬಂದ ವೇದವ್ಯಾಸರು ಅವನ್ನು ಕ್ರಮಬದ್ಧವಾಗಿ ಜೋಡಿಸಿದರು. ಹೀಗೆಂದು ನನ್ನರಿವು.

ಇಲ್ಲಿ ಯಾವ ವೇದದಲ್ಲಿ ಈ ರೀತಿಯಾಗಿ ಓಂಕಾರದ ಬಗ್ಗೆ ಹೇಳಲಾಗಿದೆಯೆಂದು ಉಲ್ಲೇಖಿಸಿದರೆ ಬಹಳ ಉಪಕಾರವಾಗುವುದು.

ಅಸಮಾನ್ಯ = ಸಮಾನ್ಯವಲ್ಲದವನು
ಅಸಮಾನ = ಸಮಾನರಿಲ್ಲದವನು
ಅಸಮಾನತೆ = ಸಮವಾಗಿಲ್ಲದಿರುವಿಕೆ

"ಗಣೇಶರ್ಥವಶೀರ್ಷ" (ಬೇರೆ ಉಪನಿಷತ್ತಿನಲ್ಲೂ), ಈ ವಾಕ್ಯವಿದೆ "ಸರ್ವಂ ಖಲ್ವಿದಂ ಬ್ರಹ್ಮ", ಅಂದರೆ ಎಲ್ಲವೂ ನಿಶ್ಷಯವಾಗಿ ಬ್ರಹ್ಮವೆ.

ಪುರುಷಸೂಕ್ತದಲ್ಲಿ "ಸ ಭೂಮಿಂ ವಿಶ್ವತೋ ವೃತ್ವಾsತ್ಯತಿಷ್ಠದ್ದಶಾಂಗುಲಂ". ಅವನು ಈ ಬುವಿಯನ್ನು ಎಲ್ಲದಿಕ್ಕುಗಳಿಂದಾವರಿಸಿ ಹತ್ತು ಬೆರಳುಗಳಷ್ಟರಿಂದ ಹೆಚ್ಚಾಗಿದ್ದಾನೆ. ಇಡೀ ವಿಶ್ವವನ್ನೆ ಅವನು ಆವರಿಸಿರುವಾಗ, ಅವನನ್ನು ಯಾರ ಜೊತೆ ಹೋಲಿಸಿ "ಅಸಮಾನತೆಯನ್ನು" ಹೇಳಿಲಾಗಿದೆ?

ಮುಳಿಯಬೇಡಿ. ನನಗೆ ನಿಜವಾಗಲು ನೀವು ಬರೆದಿವುದರಲ್ಲಿ, ಬಹಳ ಗೊಂದಲವಿದೆ.

ನೊಂದರೆ ಮನ್ನಿಸಿ,
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 31, 2006 - 6:25pm — ahoratra

ಗೊಂದಲ.

ahoratra's picture

ಗೊಂದಲವಿಲ್ಲದವ ಗೋವಿಂದ ಮಾತ್ರ,

ಗೊಂದಲ ಬಿಡಿಸುವ ಜ್ಞಾನಿ ಗುರುವಾಗುತ್ತಾನೆ.

ನಿಮ್ಮನ್ನು ಗೊಂದಲದಲ್ಲಿ ತಳ್ಳಿ ಕುಳಿತಿರುವ ಅಜ್ಞಾನಿ ನಾನು.

ನಿಮ್ಮ ಗೊಂದಲ ನನಗೆ ಬಿಡಿಸಲಸಾದ್ಯ.

ಮನ್ನಿಸಿ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಂತರ ಮತ್ತು ಅರಸ
  • ಓಂಕಾರ
  • ಅಕ್ಕಮಹಾದೇವಿ ವಚನದಲ್ಲಿ ನಿರಾಕಾರ ನಿರ್ಗುಣೋಪಾಸನೆ
  • ವೇದ ಸಾರ,ಬೆಲೆ ಮತ್ತು ಮಾಣಿಕ್ಯ.
  • ಪ್ರಣತಿ ಮತ್ತು ತಂತ್ರ
Syndicate content

ಲೇಖಕರು

ahoratra's picture

ಪರಿಚಯ

ನ ಅಂದರೆ ಗೊತ್ತಿಲ್ಲ,
ದಾನ ಮಾಡಲು ಧನವಿಲ್ಲ,
ಪ್ರಧಾನಿಯಾಗಲೂ ಮನವಿಲ್ಲ,
ವಿಜ್ಞಾನಿಯಾಗಲು ಜ್ಞಾನವಿಲ್ಲ,
ಜ್ಞಾನಿಯಾಗಲು ಧ್ಯಾನವಿಲ್ಲ,
ಧ್ಯಾನಿಯಾಗಲು ನಿಧಾನವಿಲ್ಲ,
ಕದನವಿಲ್ಲದೆ ನಿದನವಿಲ್ಲ,
ಭಜನೆಯಿಲ್ಲದೆ ಭೋಜನವಿಲ್ಲ,
ದುರ್ಜನರಿಂದ ವಿಭಜನೆಯಾಗಿ,
ಸಜ್ಜನ ಸಂಗದ ಮಜ್ಜನಮಾಡಿ,
ಜನಾರ್ಧನ ಸೇವೆಯ ಸಾಧನೆ ಮಾಡುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ವಾರಾಂತ್ಯ ಹೇಗಿತ್ತು?
  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 6:08pm
  • Sunil Jayaprakash
    ಉ: ಬಾಲ್ಯದ ನೆನಪುಗಳು
    September 8, 2008 - 6:07pm
  • Sunil Jayaprakash
    ಉ: ದಿನಕ್ಕೊಂದು ಪದ
    September 8, 2008 - 6:05pm
  • Shivakumar.Revadi
    ಉ: ದಿನಕ್ಕೊಂದು ಪದ
    September 8, 2008 - 6:01pm
  • Shivakumar.Revadi
    ಉ: ಬಾಳ್, ಬಾೞ್
    September 8, 2008 - 5:57pm
  • Shivakumar.Revadi
    ಉ: ಬಾಲ್ಯದ ನೆನಪುಗಳು
    September 8, 2008 - 5:42pm
  • girish.rajanal
    ಉ: ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ನೀಡುವುದರಲ್ಲಿ ವಿಳಂಬ - ಕ.ರ.ವೇ. ಪ್ರತಿಭಟನೆ
    September 8, 2008 - 5:38pm
  • girish.rajanal
    ಉ: ಸರ್ವಜ್ಞನ ಕೆಲವು ವಚನಗಳು
    September 8, 2008 - 5:35pm
  • venkatesh
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 5:15pm
  • srivathsajoshi
    ಉ: ಬಾಲ್ಯದ ನೆನಪುಗಳು
    September 8, 2008 - 5:05pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 147 ಅತಿಥಿಗಳು ಆನ್ಲೈನ್ ಇರುವರು.


ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator