ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ದೇಣಿಗೆ

June 1, 2006 - 10:53pm — tvsrinivas41

ಭಾಷೆಯ ಉಳಿವು ಬೆಳೆವಿಗೆ ಅದೇ ಭಾಷೆಯನ್ನು ಉಪಯೋಗಿಸುವವರ ಸಹಾಯ ಹೆಚ್ಚಿಗೆ ಬೇಕಿರುವುದು. ಆ ಭಾಷೆಯವರಲ್ಲದೇ ಬೇರೆ ಭಾಷೆಯವರು ಅದರ ಉಳಿವಿಗೆ ಅಥವಾ ಉನ್ನತಿಗೆ ಹೆಚ್ಚಿನ ಶ್ರಮವಹಿಸಲಾರರು. ಆದ್ದರಿಂದ ಆ ಭಾಷೆಯ ಉನ್ನತಿಗೆ ಅದರದ್ದೇ ಜನಗಳು ತನು, ಮನ, ಧನಗಳನ್ನು ಅರ್ಪಿಸಬೇಕಾಗಿರುವುದು ಅವಶ್ಯ. ಕನ್ನಡ ಭಾಷೆ ಇದಕ್ಕೆ ಹೊರತಲ್ಲ.

ಕನ್ನಡದ ಉಳಿವಿಗೆ ಧಕ್ಕೆ ಬರುತ್ತಿದೆ ಎಂದು ಎಲ್ಲ ಕಡೆಯೂ ಕೂಗು ಕೇಳಿಬರುತ್ತಿದ್ದು, ಇದಕ್ಕಾಗಿ ಬಹಳಷ್ಟು ಸಂಘ, ಸಂಸ್ಥೆಗಳು, ವೇದಿಕೆಗಳು, ಗುಂಪುಗಳು ಇತ್ಯಾದಿ ನಿರ್ಮಿತವಾಗುತ್ತಿವೆ. ಕನ್ನಡಿಗರು ಒಂದೆಡೆ ಸೇರಿ ಚರ್ಚಿಸುತ್ತಿದ್ದಾರೆ. ಕನ್ನಡವನ್ನು ಉಳಿಸಿ ಬೆಳೆಸಲು ಮುಂಚೂಣಿಯಲ್ಲಿರುವ ರೂವಾರಿಗಳು ಇತರ ಸದಸ್ಯರುಗಳಿಂದ ತನು, ಮನ, ಧನಗಳ ಸಹಾಯ ಕೇಳುವುದೂ ಸಾಮಾನ್ಯದ ಸಂಗತಿ.

ಅಂತರ್ಜಾಲದಲ್ಲಿ ಮೊದ ಮೊದಲು ಕನ್ನಡಿಗರು ಆಂಗ್ಲ ಭಾಷೆಯಲ್ಲಿ ಚರ್ಚಿಸುತ್ತಿದ್ದರು. ನಂತರ ಕನ್ನಡವನ್ನು ಆಂಗ್ಲ ಲಿಪಿಯಲ್ಲಿ ಬರೆದು ಚರ್ಚಿಸಹತ್ತಿದರು. ಇದನ್ನು ಕಂಗ್ಲೀಷ್ ಎಂದು ಕರೆದರು. ಮುಂದೆ ಕೆಲ ಉತ್ಸಾಹೀ ತರುಣರ ಕಷ್ಟದ ಫಲವಾಗಿ ಯೂನಿಕೋಡ್ ಸಹಾಯದಿಂದ ಕನ್ನಡದಲ್ಲೇ ಬರೆಯುವುದು, ವ್ಯವಹರಿಸುವುದು, ಚರ್ಚಿಸುವುದು ನಡೆಯುತ್ತಿದೆ. ಈ ಕೆಲ ಉತ್ಸಾಹೀ ತರುಣರನ್ನು ಹೆಸರಿಸಬೇಕೆಂದರೆ ಮೊದಲು ನೆನಪಾಗುವುದು ಬರಹದ ಕರ್ತೃ ಶೇಷಾದ್ರಿ ವಾಸು. ನಂತರ ಕನ್ನಡದಲ್ಲಿಯೇ ಪೂರ್ಣ ಪ್ರಮಾಣದ ಅಂತರ್ಜಾಲ ನಿರ್ಮಿಸಿ ಮನೆ ಮನೆ ಮಾತಾಗುತ್ತಿರುವ ಹರಿಪ್ರಸಾದ ನಾಡಿಗರು. ಇವರೆಲ್ಲರ ಹಿಂದೆ ಇರುವ ಹಿರಿಯರುಗಳ ಕಾಣಿಕೆಯೇನೂ ಕಡಿಮೆಯೇನಲ್ಲ. ಶ್ರೀ ಪವನಜ ಅವರ ಕಾಣಿಕೆ ಯಾರಿಗೆ ತಿಳಿಯದು. ಮೈಕ್ರೋಸಾಫ್ಟಿನ ಮೂಲಕ ಕಂಪ್ಯೂಟರ್‍‍ಗಳಲ್ಲಿ ಕನ್ನಡದ ಬಳಕೆಗೆ ಅನುವು ಮಾಡಿಕೊಟ್ಟ ಮಹನೀಯರು. ಇಂತಹ ಇನ್ನೂ ನೂರಾರು ಜನಗಳು ಇದ್ದಾರೆ. ಇವರೆಲ್ಲರಲ್ಲಿ ಕಂಡು ಬರುವ ಒಂದು ಅಂಶವೆಂದರೆ, ಇವರು ಎಂದಿಗೂ ತಮಗೆ ಹಣ ಮಾಡಿಕೊಳ್ಳುವುದಕ್ಕೆ ಇದನ್ನು ಉಪಯೋಗಿಸಿಕೊಳ್ಳುತ್ತಿಲ್ಲ. ಹೊಟ್ಟೆ ಬಟ್ಟೆಯ ಮರೆತು ಕಂಪ್ಯೂಟರ್‍‍ಗಳಲ್ಲಿ ಕನ್ನಡದ ಉಪಯೋಗಕ್ಕಾಗಿ ಅಹರ್ನಿಶಿ ಶ್ರಮಿಸುತ್ತಿರುವ ಮಹನೀಯರು ಕೊಟ್ಟಿದ್ದೇ ಹೆಚ್ಚು, ತೆಗೆದುಕೊಂಡಿರುವುದು ಬಹಳ ಬಹಳ ಅಲ್ಪ.

ಇಂತಹ ಮಹನೀಯರ ಕೈ ಭದ್ರ ಪಡಿಸುವುದು ಇನ್ನಿತರ ಕರ್ತವ್ಯವಲ್ಲವೇ?
ಕೈಲಾದದ್ದನ್ನಾದರೂ ಕೊಡಬೇಕಲ್ಲವೇ? ಸಂಪದದಲ್ಲಿ ಇದೀಗ ಸದಸ್ಯರ ಸಂಖ್ಯೆ ೧೦೦೦ ದಾಟಿದೆ. ಸರ್ವರ್ ಕಂಪನಿಯವರು ತಗಾದೆ ತೆಗೆಯುತ್ತಿದ್ದಾರೆ. ಇದಕ್ಕಾಗಿ ಸಂಪದಕ್ಕೆ ಒಂದು ಸರ್ವರ್ ಅನ್ನು ಬಾಡಿಗೆಗೆ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ಒಂದು ವರ್ಷಕ್ಕೆ ಒಂದು ಸರ್ವರ್ ಸೌಲಭ್ಯವನ್ನು ಉಪಯೋಗಿಸಿಕೊಳ್ಳಲು ೨೦೦೦ ಡಾಲರುಗಳ ಅವಶ್ಯಕತೆ ಇದೆ. ೧೦೦೦ ಸದಸ್ಯರು ಒಂದು ವರ್ಷಕ್ಕೆ ತಲಾ ೨ ಡಾಲರುಗಳನ್ನು ಕೊಟ್ಟರೂ ಸಾಕು - ಒಂದು ಸರ್ವರ್ ಅನ್ನು ಬಾಡಿಗೆಗೆ ಪಡೆದುಕೊಳ್ಳಬಹುದು. ಅಂದರೆ ಒಂದು ವರ್ಷಕ್ಕೆ ಒಬ್ಬ ಸದಸ್ಯರು ಕೇವಲ ೧೦೦ ರೂಪಾಯಿಗಳನ್ನು ನೀಡಿದರೆ ಸಾಕಷ್ಟೆ.

ಇಂತಹ ಸಂದರ್ಭದಲ್ಲಿ ನನ್ನದೊಂದು ಕಳಕಳಿಯ ಮನವಿ. ಇಂತಹ ಸುಂದರ ಹೂದೋಟವನ್ನು ನಿರ್ಮಿಸಿದವರೇ ಇದರ ಹೊರೆ ಹೊರಬೇಕೆನ್ನುವುದು ಸರಿಯಲ್ಲ. ಹೂದೋಟದಿಂದ ಆನಂದ ಪಡೆಯುವವರೂ ಸ್ವಲ್ಪ ಕಾಣಿಕೆಯನ್ನು ಕೊಡುವುದು ಸೂಕ್ತ. ಕನ್ನಡಾಭಿಮಾನಿ ಸಹೃದಯರು ಒಂದು ಸುಂದರ ಸಂಸ್ಥೆಯನ್ನು ಉಳಿಸಿ, ಬೆಳೆಸಿ, ಇತರರನ್ನೂ ಬೆಳೆಯುವಂತೆ ಮಾಡಿರೆಂದು ಕೇಳಿಕೊಳ್ಳುವೆ.

ಶ್ರೀಕಾಂತರು ತಿಳಿಸಿದ ಮಯೂರ ಮಾಸಪತ್ರಿಕೆಯಲ್ಲಿ ಬಂದಿರುವ ಸೇಡಿಯಾಪು ಕೃಷ್ಣ ಭಟ್ಟರ ಒಂದು ಕವನ ಸಮಯೋಚಿತವಾಗಿದೆ.

ಎಣ್ಣೆ ಹೊಯ್ಯಮ್ಮ ದೀಪಕ್ಕೆ!
ಬತ್ತಿಯೊಣಗುತಿದೆ, ಬೆಳಕು ಬಾಡುತ್ತಿದೆ
ಕತ್ತಲೆ ಮುಂದೆ ಮೊಂದೊತ್ತುತಿದೆ
ಅತ್ತಲಿಂದತ್ತಲು ಕಂಡಿಯೊಳಗೆ ನುಗ್ಗಿ
ಒತ್ತರದಲಿ ಗಾಳಿ ಬೀಸುತ್ತಿದೆ

- ಎಣ್ಣೆ ಹೊಯ್ಯಮ್ಮ ದೀಪಕ್ಕೆ

ಎಲ್ಲರಿಗೂ ಒಳ್ಳೆಯದಾಗಲಿ.

  • ಚಿಂತನೆ
~.~
  • Login or register to post comments
  • 1058 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 2, 2006 - 7:35am — venkatesh

ದೇಣಿಗೆ

venkatesh's picture

ಶ್ರೀನಿವಾಸರ ಅನಿಸಿಕೆಗಳು ಬಹಳ ಅರ್ಥವತ್ತಾಗಿವೆ. ಸ್ವಲ್ಪ ಸ್ವಲ್ಪ ಕಿರು ಕಾಣಿಕೆಗಳೇ ಸಹಾಯದ ಕೊಂಡಿಗಳಾಗುವುದರಲ್ಲಿ ಆಶ್ಚರ್ಯವಿಲ್ಲ.ಕನ್ನಡವನ್ನು ಬೆಳೆಸುವ ದೆಶೆಯಲ್ಲಿ ಬಹುಶಃ ಇದು ಒಂದು ಪ್ರಥಮ ಹೆಜ್ಜೆ ಅಲ್ಲವೇ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2006 - 3:43pm — tvsrinivas41

ಕಾಪುಸ್

tvsrinivas41's picture

ಹೌದು ಸಾರ್, ಕೊಂಡಿಗಳು ಬೆಸೆದುಕೊಂಡರೆ ಸರಪಳಿ ಗಟ್ಟಿಯಾಗಿ ಯಾವ ರಥವನ್ನೂ ಎಳೆಯಬಲ್ಲದು.

ಅಂದಹಾಗೆ ಅಂತಹ ಸುಂದರ ಬ್ಲಾಗ್ ಕಾಪುಸ್‍ನಲ್ಲಿ ಪ್ರತಿಕ್ರಿಯಿಸಲು ಅವಕಾಶವೇ ಇಲ್ಲವಲ್ಲ. ಸಾರ್ ಪ್ರತಿಕ್ರಿಯೆ ಹಾಕಲು ಅವಕಾಶ ಮಾಡಿಕೊಡಿ. ತುಂಬಾ ಉಪಯುಕ್ತ ವಿಷಯಗಳನ್ನು ತಿಳಿಸಿದ್ದೀರಿ. ಕಾಪುಸ್ ಅನ್ನು ಪೂರ್ಣವಾಗಿ ಓದಿರುವೆ. ಆದರೆ ಪ್ರತಿಕ್ರಿಯಿಸಲಾಗಲಿಲ್ಲವಲ್ಲ ಎನ್ನುವುದೇ ಬೇಜಾರಿನ ಸಂಗತಿ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಣ್ಣೆ ಹೊಯ್ಯಮ್ಮ ದೀಪಕ್ಕೆ!
  • ಭಾಷೆಯ ಅವಶ್ಯಕತೆ
  • ಸಂಪದ *ಏನಲ್ಲ* - What Sampada is *not*
  • ಕನ್ನಡ ಭಾಷೆಯ ಅಳಿವು ಉಳಿವು
  • ಶುಭವಾಗಲಿ
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
  • vikashegde
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:53pm
  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:52pm
  • Jayalaxmi.Patil
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:37pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:30pm
  • kannadakanda
    ಉ: ಮುರಿ, ಮುಱಿ
    September 8, 2008 - 2:26pm
  • girish.rajanal
    ಉ: ನೀನು ನಾನು ಜೋಡಿ
    September 8, 2008 - 2:21pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 138 ಅತಿಥಿಗಳು ಆನ್ಲೈನ್ ಇರುವರು.


ಅತ್ಮದ ಸತ್ಯವು ಪರಮ ಸತ್ಯದೊಡನೆ ನೆಡೆಸುವ ಸಂಭಾಷಣೆಯೇ ಪ್ರಾರ್ಥನೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator