ಲೆಂಕನೆಂತಾಗುವೆನು ಕನ್ನಡಕೆ ನಾನು
( ದಾಸನೆಂತಾಗುವೆನು ಧರೆಯೊಳಗೆ ನಾನು ಎಂಬಂತೆ)
ಲೆಂಕನೆಂತಾಗುವೆನು ಕನ್ನಡಕೆ ನಾನು
ಮಂಕುಮತಿ ನಾನು ಲೇಶ ಯೋಗ್ಯತೆ ಕಾಣೆ
ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ
ಕನ್ನಡದ ಕಲ್ಲೆನಗೆ ದೇವ ಸಾಲಿಗ್ರಾಮ
ಕನ್ನಡದ ನೀರೆನಗೆ ಪಾಪನಾಶಿನಿ ಗಂಗೆ
ಕನ್ನಡದ ನುಡಿಯೆನಗೆ ಗಾಯತ್ರಿ ಮಂತ್ರ
ಹಳೆಗನ್ನಡವ ನಾನು ಕುಳಿತು ಓದಿದ್ದಿಲ್ಲ
ಹಳ್ಳಿಗರೊಡನಾಡಿ ಬೆಳೆದದ್ದೂ ಇಲ್ಲ
ಬಲ್ಲೆ ಸ್ವಲ್ಪ ದಾಸರ ನುಡಿಯ
ಪಂಪ ರನ್ನ ಕುಮಾರವ್ಯಾಸರನು ಅರಿಯೆ
ದೇಶವನು ತಿರುಗಿಲ್ಲ ಕೋಶವನು ಓದಿಲ್ಲ
ಗುಂಪು ಸೇರಿಸಲಾರೆ ರಂಪ ಮಾಡಿಸಲಾರೆ
ಒಂದು ಸಾಧನ ಕಾಣೆ ಕಂನುಡಿಯ ಸೇವೆಯಲಿ
ಜನುಮ ಸಾರ್ಥಕ ಎಂತು ನಾನು ಮಾಳ್ಪೆ?

- Login or register to post comments
- 712 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಲೆಂಕ ಅಂದರೆ ಏನು?
ಪದ್ಯ ತುಂಬಾ ಸಿಹಿಯಾಗಿದೆ.
ಅಹೋರಾತ್ರ
ಲೆಂಕ - ಸೇವಕ , ಭೋಗಾದಿ ಎಂದರೆ .....
ಲೆಂಕ ಅಂದರೆ ಸೇವಕ
ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರರ ಒಂದು ಪುಸ್ತಕವೂ ಇದೆ - ಕನ್ನಡದ ಲೆಂಕ ಹೆಸರಿನಲ್ಲಿ.
'ದಾಸ' ಶಬ್ದವನ್ನೇ ಇಟ್ಟುಕೊಳ್ಳಬಹುದಿತ್ತು . ಈ ಶಬ್ದದ ಅರಿವು ಆಸಕ್ತರಿಗಾಗಲಿ ಎಂದು ಲೆಂಕ ಉಪಯೋಗಿಸಿದ್ದೇನೆ.
ಎಲ್ಲ ಕನ್ನಡಿಗರ ಮನೆಗಳಲ್ಲಿ ಇಂಗ್ಲೀಶ್ ಡಿಕ್ಷನರಿ ತಪ್ಪದೇ ಇರುತ್ತದೆ. ಅದೇ ಕನ್ನಡದ ಶಬ್ದಕೋಶ ?
ಮತ್ತೆ ಭೋಗಾದಿ ಎಂದರೇನು ಎಂದಾರೋ ಇಲ್ಲಿ ಕೇಳಿದ್ದರು . ಮಹೇಶರು ಉತ್ತರ ಕೊಟ್ಟರೋ ಇಲ್ಲವೋ . ಕನ್ನಡ ರತ್ನಕೋಶದಲ್ಲಿ ಸಿಕ್ಕಿತು . ಭೋಗಾದಿ ಎಂದರೆ - ಅಡವು , ಗಿರವಿ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಭೋಗಾದಿ = ಅಡವು :))
ಸವಿಯೊದಗು,
ನನಗೆ ಗೊತ್ತಿರಲಿಲ್ಲ. ಹಾಗದರೆ ನಮ್ಮ ಊರನ್ನು ಯಾರು ಯಾರಿಗೆ ಅಡವಿಟ್ಟಿದ್ದರೋ ತಿಳಿಯಬೇಕು.
ಭೋಗಾದಿ v/s ಬೋಗಾದಿ
ಇತ್ತೀಚೆಗೆ ಸೂರ್ಯವಂಶ ಸಿನಿಮಾ ನೋಡುತ್ತಿದ್ದಾಗೆ, ತಾತ ಸತ್ಯಮೂರ್ತಿ(ಸೂರ್ಯವಂಶದ ಹಿರಿಯ) ತನ್ನ ಮೊಮ್ಮಗನನ್ನು ಆನೆಯ ಮೇಲೆ ಕೂಡಿಸುವಾಗ ಕಂಡದ್ದು.
ಸೂರ್ಯವಂಶದ ಮೊಮ್ಮಗ ಓದುತ್ತಿದ್ದ ಶಾಲೆಯ ಹೆಸರ ಪಕ್ಕ, ಬೋಗಾದಿ ಎಂದಿತ್ತು.
".....ಶಾಲೆ, ಬೋಗಾದಿ"
ಹಾಗಾಗಿ ನನ್ನ ಸಂದೇಹ, ಆ ಊರಿನ ಹೆಸರು ಭೋಗಾದಿಯೋ, ಬೋಗಾದಿಯೋ ತಿಳಿಯುವ ಕುತೂಹಲ ಇನ್ನು ತಣಿದಿಲ್ಲ.
ಅದು ಭೋಗಾದಿಯೆ
ಅದು ಭೋಗಾದಿಯೆ ಸ್ವಾಮಿ.
ಜನುಮ ಸಾರ್ಥಕ
ಇದು ಮಿಶ್ರಿಕೋಟಿಗಳಿಗೆ.
ಕೊರಗದಿರಿ ಕೋಟಿಗಳೆ, ಮುರುಗದಿರಿ ಮಿಶ್ರಿಗಳೆ
ನೀವರಿಯರಿ ನಿಮ್ಮ ದೊಡ್ಡಗುಣಗಣಗಳನು
ಹಣ್ಣು-ನೆರಳನು ಕೊಡುವ ಮರಕೇನು,
ಗೊತ್ತೆ ತನ್ನ ನೆರವುವೆನಿತು ಸಾಧುವೆಂದು?
ಗಾದೆಹೂಗಳ ಪೋಣಿಸಿ,
ಕತೆಗಳನೆ ನೈವೇದಿಸಿ,
ಪದ್ಯದಾರತಿ ಬೆಳಗಿ,
ಕನ್ನಡಮ್ಮನ ನಿಮ್ಮ ನಿತ್ಯ ಪೂಜೆ,
ಕನ್ನಡವನಾಡಿ, ಕನ್ನಡವನೇ ಹಾಡಿ
ಕನ್ನಡದನ್ನವ ತಿಂದು, ಕಸ್ತೂರಿಯನುಸಿರಾಡಿ,
ಕನ್ನಡಮ್ಮನ ಹೊಗಳಿ, ನೆನೆನೆನೆದು ಕುಣಿದಾಡಿ
ಬದುಕುವುದಕಿಂತ ಬೇಕೆ ಸಾರ್ಥಕ ಜನುಮ?
ನನಗೆ ಪದ್ಯಬರೆಯಲು ಬರುವಿದಿಷ್ಟೆ!
ಉ : ಜನುಮ ಸಾರ್ಥಕ
ಮಹೇಶರವರೇ,
ನೀವೇನು ಆಶುಕವಿಗಳೇ, ಶ್ರೀಕಾಂತರ ಮೇಲೆ ಪದ್ಯವನ್ನೇ ಕಟ್ಟಿದ್ದೀರಲ್ಲಾ..ಇರಲಿ ವಿಷಯಕ್ಕೆ ಬರೋಣ,
ಇಷ್ಟು ಚೆನ್ನಾಗಿ ಕನ್ನಡ/ಸಂಸ್ಕೃತ ಪದಗಳ ಮೇಲೆ ಹಿಡಿತ ಹಾಗು ಆಸಕ್ತಿಯಿರುವ ನೀವೇಕೆ, ಬಿಡುವಾದಾಗ ಕವನಗಳನ್ನು ರಚಿಸಿ ನಮಗೆ ಏಕೆ ಉಣಬಡಿಸಬಾರದು. ಒಮ್ಮೆ ಪ್ರಯತ್ನಿಸಿ ನೋಡಿ. ನಮಗಂತೂ ಬಹಳ ಸಂತೋಷವಾಗುವುದು.
ನಿಮ್ಮವ,
ಆಶುಕವಿ
ಬರೆವುದಕಿಂತ ನಲಿವೆನಗೆ
ಅರಿತು ಕಲಿಯುವುದರಲಿ,
ಅಡುಗೆ ಶ್ರಮಕಿಂತ ಹುರಪೆನಗೆ
ಕುಳಿತು ತಿನ್ನುವುದರಲಿ.
ಲೆ೦ಕ...
ತಮ್ಮ ಕನ್ನಡಾಭಿಮಾನ ಬಹಳ ದೊಡ್ಡದು. ತಮ್ಮ೦ತಹವರ ಸ೦ಖ್ಯೆ ವೃಧ್ಧಿಸಲಿ.