ಇಂದ್ರೀಯಗಳಿಗೆ ಮನವಿ
ಇಂದ್ರೀಯಗಳಿಗೆ ಮನವಿ
ಕೇಳಿ ಓ ಇಂದ್ರೀಯಗಳೆ ನಮ್ಮ ಬಿನ್ನಹ,
ಆನಂದದಿ ಧರೆಯಲಿಂದು ಜೀವಿಸಲೊಸುಗ.
ಪಂಚಾಕ್ಷರಿ ಪರಮಶಿವನ ನೋಡುವ ತನಕ,
ಅಷ್ಟಾಕ್ಷರಿ ಶ್ರೀನಿವಾಸನೊಲಿಸುವ ತನಕ.//ಪ//.
ಸಕಲ ಜೀವಕೋಟಿಗಳ ಉಸಿರನೀಗೊ ನಾಸಿಕಾ,
ಆಸ್ತಿ ಮೇಲೆ ಮೋಹ ತೊರೆದು ಆಗು ನೀನು ಆಸ್ತಿಕ.
ಗಮಗಮಿಸುವ ವೈಕುಂಟದ ಗಮ್ಯ ನೋಡು ನಾಸಿಕಾ,
ಹರಿಯ ಪಾದ ತಾಕಲೆಂದು ಆಗು ಸೌಗಂಧಿಕಾ.//೧//.
ರುಚಿಯ ಹೇಳೊ ಮಾತನಾಡೊ ಎರಡು ಗುಣದ ನಾಲಿಗೆ,
ದೇಹವನ್ನು ಆಳುತಿರುವ ಎರಡಿಂಚಿನ ನಾಲಿಗೆ,
ಅರಸನಲ್ಲ ಆಳು ನೀನು ನಿಜದಿ ಬದುಕೊ ನಾಲಿಗೆ,
ಅಡುಗೆಮನೆಯ ತೊರೆದು ಹರಿಯ ಅಡಿಗೆ ಬೀಳೊ ನಾಲಿಗೆ.//೨//.
ಖಗನ ಕಣ್ಣ ಕಿರಣದಿಂದ ಜನುಮಪಡೆದ ಕಣ್ಣು ನೀ,
ಕಾಮ ತೊರೆದು ಕಾಣಬೇಕು ಜಗದಿ ಭಗದ ರೂಪ ನೀ,
ಸಾಕ್ಷಿಭಾವ ಧಕ್ಷತನದಿ ವಿಶ್ವವೀಕ್ಷಿಸಕ್ಷಿ ನೀ,
ಕಮಲನಯನ ನಾರಾಯಣನ ನೋಡಬಯಸು ನಯನ ನೀ.//೩//.
ದಿವಿಯ ವಾಯು ಧರೆಯ ಜೀವರನ್ನು ಬೆರೆಸೊ ಚರ್ಮವೇ,
ಶೀತ ಉಷ್ಣ ಧುಃಖ ಸುಖವ ಸಮದಿ ಸ್ವೀಕರಿಸುವಾ,
ಸ್ಪರ್ಷದಾಸೆಯಿಂದ ಯಾರ ದಾಸನಾಗ ಬೇಡವೇ,
ಮಾಧವನಾ ಪಾದಪೂಜೆಗಾಗಿ ತಪಿಸೊ ಪವನವೇ.//೪//.
ಆಕಾಶದಿ ಹುಟ್ಟಿಬಂದ ಶಬ್ದಕೇಂದ್ರ ಕರ್ಣಗಳೇ,
ಶುಭಾಶುಭದ ಸುದ್ದಿಗಳನು ಸಮತೋಲನದಾಲಿಸಿರಿ,
ಸುಪ್ತಮನಕೆ ಸಪ್ತಸ್ವರದ ಸಾಮವೇದ ಶ್ರಾವಿಸಿರಿ,
ಸಪ್ತಗಿರಿಯ ಒಡೆಯ ನುಡಿವ ವಾಣಿಗಾಗಿ ಶ್ರಮಿಸಿರಿ.//೫//.
-:ಅಹೋರಾತ್ರ.

- Login or register to post comments
- 637 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಮೂಗೇ ಎಲ್ಲರ ಕೊಲೆಗಾರ !
ಅಹೋರಾತ್ರರೆ,
ಕವನದ ವಸ್ತು ಚೆನ್ನಾಗಿದೆ. ಪಂಚಭೂತಾತ್ಮಕವಾದ ಪಂಚೇಂದ್ರಿಯಗಳನ್ನು ಪ್ರಾರ್ಥಿಸುವ ಬಗೆ ಚೆನ್ನಾಗಿದೆ.
ಬಹುಶಃ ಬೆರಳಚ್ಚಿನ ತೊಂದರೆಯೋ ಎನೋ ಕೆಲವು ಪದಗಳು ತಪ್ಪಾಗಿವೆ: 'ವೈಕುಂಟ', 'ಧುಃಖ', 'ಸ್ಪರ್ಷ' ಇತ್ಯಾದಿ.
ಆದರೆ 'ಇಂದ್ರೀಯ' ಎಂಬುದಕ್ಕೆ ನೀವೇನಾದರೂ ಬೇರೆ ಅರ್ಥ ಕಲ್ಪಿಸಿದ್ದೀರೋ, ಅಥವಾ 'ಇಂದ್ರಿಯ' ದ ತಪ್ಪಚ್ಚೋ ತಿಳಿಯಲಿಲ್ಲ.
ಇಂದ್ರೀಯ = ಇಂದ್ರನಿ(ಳಿ)ಗೆ ಸಂಬಂಧಿಸಿದ(?) ಎಂಬರ್ಥ ನನಗೇನೂ ತೋರಲಿಲ್ಲ ಇಲ್ಲಿ.
ಸಕಲ ಜೀವಕೋಟಿಗಳ ಉಸಿರನೀಗೊ ನಾಸಿಕಾ ಎಂಬಲ್ಲಿ ಮೂಗೇ ಎಲ್ಲರ ಕೊಲೆಗಾರ ಎಂಬಂತೆ ಅರ್ಥವಾಗುತ್ತದೆ. ನೀವು ಹೇಳಬಯಸಿದ್ದು ಸಕಲ ಜೀವಕೋಟಿಗಳ ಉಸಿರನಾಡೋ ನಾಸಿಕಾ ಎಂದೇ?
ಸುಮ್ಮನೆ ಕುತರ್ಕಕ್ಕೆ ಹೇಳುತ್ತೇನೆ, ತಪ್ಪು ತಿಳಿಯಬೇಡಿ: ಸಕಲ ಜೀವಕೋಟಿಗಳಿಗೂ 'ನಾಸಿಕ' ಇರುವುದಿಲ್ಲ!
ನಿಮ್ಮ
ಬೆನಕ
ಧನ್ಯವಾದ ಬೆನಕರೆ.
ಬೆರಳಚ್ಚಿನ ದೋಷವಲ್ಲ ಅದು ನನ್ನ ವ್ಯಾಕರಣದ ದೋಷ.
ನಿಮ್ಮೆಲ್ಲರಿಂದ ಸ್ವಲ್ಪ ಸುದಾರಿಸಿದ್ದೇನೆ.
ಧನ್ಯವಾದ ಬೆನಕರೆ.
ಅಹೋರಾತ್ರ