ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಝೆನ್ ಕತೆಗಳು - ಓ ಎಲ್ ಎನ್ ಸ್ವಾಮಿ

ಝೆನ್ ೧೦ : ಇನ್ನೂ ಮೂರು ದಿನ

August 18, 2005 - 12:30am — olnswamy

ಹಕು-ಇನ್ನ ಶಿಷ್ಯ ಸುಯಿಒ ಒಳ್ಳೆಯ ಗುರುವೆಂದು ಖ್ಯಾತನಾಗಿದ್ದ. ಬೇಸಗೆಯಲ್ಲಿ ಗುರು ಶಿಷ್ಯರೆಲ್ಲ ಏಕಾಂತ ಧ್ಯಾನವನ್ನು ಮಾಡುವ ಕಾಲದಲ್ಲಿ ಜಪಾನಿನ ದಕ್ಷಿಣ ದ್ವೀಪಗಳಿಂದ ಒಬ್ಬ ಶಿಷ್ಯ ಅವನನ್ನು ಹುಡುಕಿಕೊಂಡು ಬಂದ.
"ಒಂದೇ ಕೈಯಿಂದ ಹುಟ್ಟುವ ಸದ್ದನ್ನು ಕೇಳಿಸಿಕೊ" ಎಂಬ ಮುಂಡಿಗೆಯನ್ನು ಗುರು ಅವನಿಗೆ ನೀಡಿದ. ಧ್ಯಾನದ ಮೂಲಕ ಉತ್ತರವನ್ನು ಕಂಡುಕೋ ಎಂದ.
ಶಿಷ್ಯ ಮೂರು ವರ್ಷಗಳನ್ನು ಗುರುವಿನೊಡನೆ ಕಳೆದ. ಆದರೂ ಅವನಿಗೆ ಉತ್ತರ ದೊರೆಯಲಿಲ್ಲ, ಗುರು ನೀಡಿದ್ದ ಪರೀಕ್ಷೆಯನ್ನು ದಾಟಲಿಲ್ಲ.
ಅವತ್ತು ರಾತ್ರಿ, ಕಣ್ಣಿನ ತುಂಬ ನೀರು ತುಂಬಿಕೊಂಡು, ನಾಚಿಕೆಯಿಂದ ತಲೆ ತಗ್ಗಿಸಿಕೊಂಡು, ಗುರುವಿಗೆ ಹೇಳಿದ-"ಗುರುವೇ, ನೀವು ಇತ್ತ ಸಮಸ್ಯೆಯನ್ನು ಪರಿಹರಿಸಲು ಆಗಲಿಲ್ಲ. ಸೋತು ನಮ್ಮೂರಿಗೆ ಹಿಂದಿರುಗುತ್ತಿದ್ದೇನೆ".
"ಇನ್ನೊಂದು ವಾರ ಇರು. ಸತತವಾಗಿ ಧ್ಯಾನ ಮಾಡು" ಎಮದ ಸುಯಿಒ.
ಅದೂ ಆಯಿತು. ಆದರೂ ಶಿಷ್ಯನಿಗೆ ಯಾವ ಸಾಕ್ಷಾತ್ಕಾರವೂ ಆಗಲಿಲ್ಲ.
"ಇನ್ನೊಂದು ವಾರ ಇರು" ಎಂದ ಗುರು.
ವಿಧೇಯತೆಯಿಂದ ಇನ್ನೂ ಒಂದು ವಾರ ಕಳೆದ ಶಿಷ್ಯ. ಫಲವೇನೂ ಸಿಗಲಿಲ್ಲ.
"ಇನ್ನೂ ಒಂದು ವಾರ ನೋಡು" ಎಂದ ಗುರು. ಮತ್ತೆ ಅದೇ ವಿಫಲತೆ. ದಯವಿಟ್ಟು ನನ್ನನ್ನು ಬಿಟ್ಟು ಬಿಡಿ, ಕಳಿಸಿಬಿಡಿ ಎಂದು ಶಿಷ್ಯ ಗೋಗರೆದ.
ಇನ್ನೈದು ದಿನ ಧ್ಯಾನಮಾಡಿ ನೋಡು ಎಂದ ಗುರು. ಮತ್ತೆ ಅದೇ ಹಾಡು.
ಗುರು ಹೇಳಿದ. "ಇನ್ನು ಮೂರು ದಿನ ಧ್ಯಾನಮಾಡು. ನಿನಗೆ ಸಾಕ್ಷಾತ್ಕಾರವಾಗದಿದ್ದರೆ ಹೋಗಿ ಪ್ರಾಣಕಳೆದುಕೋ".
ಎರಡನೆಯ ದಿನ ಶಿಷ್ಯನಿಗೆ ಸಾಕ್ಷಾತ್ಕಾರವಾಗಿತ್ತು.

‹ ಝೆನ್ ೧: ನಗುವ ಬುದ್ಧಮೇಲಿನ ಪುಟಕ್ಕೆಝೆನ್ ೧೧: ವಾದದಲ್ಲಿ ಗೆದ್ದಿದ್ದು ಹೀಗೆ ›
  • ಝೆನ್ ಕಥೆಗಳು (ಕಥಾ ಮಾಲಿಕೆ)
~.~
  • Printer-friendly version
  • Login or register to post comments
  • 1407 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 18, 2005 - 9:46am — tvsrinivas41

ಮುಂಡಿಗೆ

tvsrinivas41's picture

ಸರ್, ಮುಂಡಿಗೆ ಪದದ ಅರ್ಥವೇನು? ಮುಂಡಾಸು ಅಥವಾ ರುಮಾಲು ಎನ್ನುವ ಅರ್ಥವೇ?

ಇಲ್ಲಿ ಶಿಷ್ಯನಿಗೆ ಸಾಕ್ಷಾತ್ಕಾರ ಮೊದಲು ಏಕಾಗಲಿಲ್ಲ. ಅವನಲ್ಲಿ ಏಕಾಗ್ರತೆಯಲ್ಲಿ ಲೋಪವಿತ್ತೇ? ಅಥವಾ ಗುರುವಿನ ಅನುಗ್ರಹವಾಗಿರಲಿಲ್ಲವೇ?

ನಿಮ್ಮ ಚಿಂತನೆಗಳ ಸರಮಾಲೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.

---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 18, 2005 - 11:44am — Rohit

ಮುಂಡಿಗೆ- ಅರ್ಥ

Rohit's picture

ಮುಂಡಿಗೆ ಎಂದರೆ ಕಂಬ ಎಂದರ್ಥ. ಅದರೆ ಈ ಮೇಲಿನ ಸಂದರ್ಭದಲ್ಲಿ ಏನೆಂದು ನನಗೂ ಸ್ಪಷ್ಟವಾಗಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 21, 2005 - 8:55am — olnswamy

ಮುಂಡಿಗೆ ಅಂದರೆ ಒಗಟು

olnswamy's picture

ಮುಂಡಿಗೆ ಅಂದರೆ ಒಗಟಿನಂಥ ಮಾತು. ಕನಕ ದಾಸರ ಮುಂಡಿಗೆಗಳು ಪ್ರಸಿದ್ಧವಾಗಿವೆ. ಮೇಲು ನೋಟಕ್ಕೆ ಅಪಾರ್ಥ ಅಥವ ಅರ್ಥವಿಲ್ಲ ಅನ್ನಿಸುವ ಮಾತು ಯೋಚನೆ ಮಾಡಿದಂತೆ ಅರ್ಥಪೂರ್ಣ ಅನ್ನಿಸುವಂತೆ ಇರುವುದು ಮುಂಡಿಗೆ. "ಮನೆಯೊಳಗೆ ಒಬ್ಬ ಗಂಡ, ಹೊರಗೆ ಒಬ್ಬ ಮಿಂಡ" ಅನ್ನುವಂಥ ಮಾತನ್ನು ಅನೇಕ ಅನುಭಾವಿಗಳು ಹೇಳುತ್ತಾರೆ. ಶಿವನ ಕೂಡೆ ಹಾದರ ಮಾಡಿದೆ ಅನ್ನುವವರೂ ಇದ್ದಾರೆ. ಲೋಕದಲ್ಲಿ ಲೋಕದವರಂತೆ ಇದ್ದೂ ತಮ್ಮ ಆಧ್ಯಾತ್ಮಿಕ ಅನುಭವವನ್ನು ಬಿಡದೆ ಉಳಿಸಿಕೊಂಡಿರುವುದನ್ನು ಇಂಥ ಮಾತುಗಳು ಸೂಚಿಸುತ್ತವೆ. ಒಂದು ಕೈ ಚಪ್ಪಾಳೆ "ಮೌನ"ವನ್ನು ಕುರಿತದ್ದು, ಶಿಷ್ಯ "ಚಪ್ಪಾಳೆ"ಯನ್ನು ಮಾತ್ರ ಗಮನಿಸಿ ಆ ಸದ್ದನ್ನು ಹುಡುಕುತ್ತಾನೆ. ನಿಜವಾಗಿ ಮೌನವು ಗುರು ಹೇಳಿದ ಮಾತಿನ ಅರ್ಥ ಎಂದು ಅರಿವಾದಾಗ ಅವನಿಗೆ ಧ್ಯಾನದ ಸ್ಥಿತಿ ದೊರೆಯುತ್ತದೆ. ಈ ಕತೆಯ ಮುಂಡಿಗೆ ಇಂಟೆನ್ಸಿಟಿಯನ್ನು ಕುರಿತದ್ದು. ಸುಮ್ಮನೆ ಹುಡುಕುತ್ತೇವೆ ಎಂದುಕೊಳ್ಳುವುದು ಒಂದು ಬಗೆಯ ಪಲಾಯನ ವಾದ. ನನ್ನನ್ನು ಕಾಡುವ ಪ್ರಶ್ನೆ ಜೀವನ್ಮರಣದ ಪ್ರಶ್ನೆ ಎಂಬಂಥ ತೀವ್ರತೆ ಇದ್ದಾಗ ಆಧ್ಯಾತ್ಮದ ಸಾಧನೆಗೂ ಅರ್ಥ. ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಆಗದೆ ಇದ್ದರೆ ಸಾಯುವುದೇ ಒಳ್ಳೆಯದು ಎಂದಾಗ ಶಿಷ್ಯನಿಗೆ ಅನ್ವೇಷಣೆಗೆ ಬೇಕಾದ ಮೊನಚು ದೊರೆಯುತ್ತದೆ. ಝೆನ್ ಕತೆಗಳು ಮತ್ತು ವಡ್ಡಾರಾಧನೆ ಎಂಬ ಪ್ರಾಚೀನ ಕನ್ನಡದ ಕಥೆಗಳು ಸಾಕ್ಷಾತ್ಕಾರವು ತಟ್ಟನೆ ಆಗುವ ಸಂಗತಿ ಎಂಬುದನ್ನೇ ಹೇಳುತ್ತವೆ. ಸೂಕ್ತ ಮನೋಧರ್ಮ ಮೂಡಿದ ಕ್ಷಣದಲ್ಲಿ ತಟ್ಟನೆ ಅರಿವು ಹೊಳೆಯುತ್ತದೆ. ಗುರುವಿನ ಮಾತಿನ ಬಿಸಿ ಶಿಷ್ಯನ ಮನೋಧರ್ಮದಲ್ಲಿ ತರುವ ಪರಿವರ್ತನೆ ಮತ್ತು ಅದರಿಂದ ಪಡೆಯುವ ಅನುಭವ ಈ ಕಥೆಯ ಮುಖ್ಯ ಸಂಗತಿ. ಶಿಷ್ಯನ ಧ್ಯಾನದಲ್ಲಿ ತೀವ್ರತೆ ಇರದಿದ್ದುದರಿಂದಲೇ ಅವನಿಗೆ ಯಾವ ಅನುಭವವೂ ಅಗಿರಲಿಲ್ಲ. ಸಾಕ್ಷಾತ್ಕಾರವಾಗದಿದ್ದರೆ ಪ್ರಾಣ ಕಳೆದುಕೊಳ್ಳುವುದೇ ಉಳಿದ ದಾರಿ ಎಂದಾಗ ಆ ಆಘಾತವೇ ಸಾಕ್ಸಾತ್ಕಾರದ ಸಡನ್‌ನೆಸ್ ಗೆಕಾರಣವಾಗುತ್ತದೆ. "ಅಗುವ ಅನುಭವ ಈ ಕ್ಷಣವೇ ಅಗಬೇಕು, ಮುಂದೆ ಎಂದೋ ಅಲ್ಲ. ಹಾಗೆ ನಿಧಾನವಾಗಿ ಸಕ್ಷಾತ್ಕಾರ ಪಡೆಯುತ್ತೇನೆ ಅನ್ನುವುದಕ್ಕೆ ನೀವೇನು ಅಮರರೆ?" ಎಂದು ಕೆಲವು ವಚನಕಾರರು ಕೇಳಿರುವುದೂ ಉಂಟು. ಇಲ್ಲೇ, ಈಗಲೇ ಎಂಬುದು ಝನ್ ನ ಇನ್ನೊಂದು ತತ್ವ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 21, 2005 - 9:15am — tvsrinivas41

ಧನ್ಯವಾದಗಳು

tvsrinivas41's picture

ಧನ್ಯವಾದಗಳು ಸರ್. ಈ ಪದ ನನಗೆ ಗೊತ್ತಿರ್ಲಿಲ್ಲ. ನಿಮ್ಮ ವಿವರಣೆ ತುಂಬಾ ಸರಳವಾಗಿದೆ.

ಇದೇ ತರಹದ ಒಗಟಿನ ಪದಗಳನ್ನು ಶಿಶುವಿನಾಳ ಷರೀಫರ ಗೀತೆಗಳಲ್ಲೂ ಕಾಣಬಹುದು.

---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತಗೋ ಬೆಳಕು
  • ಝೆನ್: ೩: ಒಂದು ಹನಿ
  • ನಶ್ವರತೆ-ಝೆನ್ ಕಥೆ
  • ಝೆನ್ ಕತೆ: ೨೩: ಕೋಪ
  • ಝೆನ್ ಕತೆ: ೪: ಪ್ರಥಮ ಸೂತ್ರ
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಸ್ಪೇಸ್ ಮೌಂಟೆನ್”, ’ಡಿಸ್ನಿ ಲ್ಯಾಂಡ್” ನ ಮತ್ತೊಂದು ರೋಮಾಂಚಕ ತಾಣ ; ’ರೋಲರ್ ಕೋಸ್ಟರ್,’ ನಲ್ಲಿ ರಮಿಸುವುದೇ ಇಲ್ಲಿನ ವಿಶೇಷತೆ !
  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 10:25am
  • kannadakanda
    ಉ: 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
    July 25, 2008 - 9:48am
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 46 ಅತಿಥಿಗಳು ಆನ್ಲೈನ್ ಇರುವರು.


ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator