ಸಂಪದ Podcasts: ಮುಂದಿನ ಸಂಚಿಕೆ ನಾಗೇಶ್ ಹೆಗಡೆಯವರೊಂದಿಗೆ
ಕನ್ನಡದಲ್ಲಿ ವಿಜ್ಞಾನ ಕುರಿತ ಬರಹಗಳನ್ನೋದುವ ಹವ್ಯಾಸ ಬೆಳೆಸಿಕೊಂಡವರಿಗೆ ನಾಗೇಶ್ ಹೆಗಡೆಯವರ ಪರಿಚಯ ಇಲ್ಲದಿರುವುದಿಲ್ಲ. ಇವರ ಕೃತಿ 'ಇರುವುದೊಂದೇ ಭೂಮಿ' ಕನ್ನಡದ ಮಹತ್ವದ ಕೃತಿಗಳಲ್ಲೊಂದು.
ಸಂಪದ Podcastನ ಮುಂದಿನ ಸಂಚಿಕೆಯಲ್ಲಿ ಇವರೊಂದಿಗೆ "ಕನ್ನಡದಲ್ಲಿ ವಿಜ್ಞಾನ ಬರಹ" ವಿಷಯದ ಸುತ್ತ ಮಾತುಕತೆ. ಈ ಸಂಚಿಕೆಯಲ್ಲಿ ಹಿಂದಿನ ಸಂಚಿಕೆಯಂತೆ ನೀವೂ ಪ್ರಶ್ನೆಗಳನ್ನು ಕಳುಹಿಸಬಹುದು. ಆಯ್ದ ಪ್ರಶ್ನೆಗಳನ್ನು ಸಂದರ್ಶನದ ಸಮಯದಲ್ಲಿ ನಾಗೇಶ ಹೆಗಡೆಯವರ ಮುಂದಿಡಲಾಗುವುದು.
* ಪ್ರಶ್ನೆ ಕನ್ನಡದಲ್ಲಿರಲಿ.
* ಪ್ರಶ್ನೆ ಸ್ಪಷ್ಟವಾಗಿರಲಿ.
* ನಿಮ್ಮ ಪ್ರಶ್ನೆಗೆ ಸ್ಪಷ್ಟವಾದ ಹಿನ್ನೆಲೆಯಿದ್ದಲ್ಲಿ ಅದನ್ನು ವಿವರಿಸುವುದನ್ನು ಮರೆಯಬೇಡಿ.
* ಪ್ರಶ್ನೆಯೊಂದಿಗೆ ನಿಮ್ಮ ಪೂರ್ಣ ಹೆಸರನ್ನು ತಿಳಿಸುವುದು ಮರೆಯಬೇಡಿ.
ಧನ್ಯವಾದಗಳು,
(ಪ್ರಶ್ನೆಗಳನ್ನು ಮೇಲೆ ಲಿಂಕ್ ಮಾಡಿರುವಂತೆ feedback ಫಾರ್ಮ್ ಮೂಲಕ ನಮಗೆ ಕಳುಹಿಸಬಹುದು)

- 1348 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ವಿಜ್ಞಾನದ ಪ್ರಚಾರ....
ನಾಗೇಶ್ ಹೆಗ್ಗಡೆಯವರಿಗೆ,
ನಮಸ್ಕಾರಗಳು.
ನೀವು ವಿಜ್ಞಾನದ ಬಗ್ಗೆ ರುಚಿಹುಟ್ಟಿಸಲು ಮಾಡುತ್ತಿರುವ ಸೇವೆಗೆ ಧನ್ಯವಾದಗಳು.ನಾನು ಬೆಂಗಳೂರು 'Science Forum' ನ ಕಾರ್ಯಕ್ರಮಗಳಲ್ಲಿ ಬೆಂಗಳೂರಿನಲ್ಲಿದ್ದಾಗ, ತಪ್ಪದೆ ಭಾಗವಹಿಸುತ್ತೇನೆ.
'ಸಾಯ್ನನ್ಸ್ ಫೋರಮ್' ಸ್ಥಾಪನೆ ಬಹಳ ಹಿಂದೆಯೇ ಅವರು ಮಾಡಿದ್ದರು.ಇದು ಎಚ್.ಎನ್ ರವರ ಮರೆಯಲಾರದ ಕೊಡುಗೆ ! ಬೆಂಗಳೂರಿಗೆ ಬಂದ ಎಲ್ಲಾ ಗಣ್ಯ, ವಿಜ್ಞಾನಿಗಳು, ದೊಡ್ಡ ಸಂಸ್ಥೆಯ ನಿದೇಶಕರುಗಳು ಇದರಲ್ಲಿ ತಮ್ಮ ಭಾಷಣಕೊಡುವುದನ್ನು ಒಂದು 'ಗೌರವ'ವೆಂದು ಪರಿಗಣಿಸುತ್ತಾರೆ !ಇನ್ನೊಬ್ಬ ಕಳಕಳಿಯ ವ್ಯಕ್ತಿ,ಪ್ರೊಫೆಸರ್ ರಾಮಕೃಷ್ಣರಾಯರು ! ಅವರ'ಗ್ರಹಗಳನ್ನು ವೀಕ್ಷಿಸುವ ವಿಷಯ,' ನಮಗೆಲ್ಲಾ ಪ್ರಿಯವಾದ ವಿಷಯ ! ಅವರ ಟಿ.ವಿ ಸಂದರ್ಶನವೂ ಚೆನ್ನಾಗಿರುತ್ತೆ ! ಹಂಪೆ ವಿಶ್ವವಿದ್ಯಾನಿಲಯದ, ಕನ್ನಡ ಪುಸ್ತಕಗಳನ್ನು ನೋಡಿದಾಗಲಂತೂ, 'Science' ನ ಎಲ್ಲಾ ಮಗ್ಗಲುಗಳನ್ನೂ ಕನ್ನಡದಲ್ಲಿ ತಿಳಿಸಲು, ಎಷ್ಟು ಸುಲಭ ಎನ್ನಿಸುತ್ತಿತ್ತು !
ಮುಂಬೈನಲ್ಲಿ,'BARC, Kannada Sangha' ಕನ್ನಡ ವಿಭಾಗದವರು, 'ಜೀವ ವಿಜ್ಞಾನದ'ವಿಷಯದ ಮೇಲೆ ಒಂದು 'ಕಾರ್ಯಾಗಾರ' ಎರ್ಪಡಿಸಿದ್ದರು.ಬಹಳ ಸೊಗಸಾಗಿತ್ತು.ಇದರ ಬಗ್ಗೆಯೂ ನಿಮ್ಮ ಅಭಿಪ್ರಾಯ ತಿಳಿಸಿ.ಇನ್ನೂ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ 'ಎಲೆಮರೆಕಾಯಿಗಳಿ'ಗೆ ನಿಮ್ಮ ಸಲಹೆ ಏನು ?