ಈಗಿನಂತೆ 3 ಸದಸ್ಯರು ಮತ್ತು 77 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಅನನ್ಯ ಅಲ್ಲಮ ೫ (೨)
csomsekraiah's picture
ಸಿ ಸೋಮಶೇಖರಯ್ಯ
26
Jun
2010
ಪುಟ

 

...
ಪ್ರತಿಕ್ರಿಯೆಗಳು: 0
ಹಿಟ್ಸ್ : 794
‘ಆಪರೇಷನ್ ಕಾಮನ್ ಕೋಬ್ರಾ’ ಯಶಸ್ವಿ! ಬದುಕುಳಿದ ‘ಗೋದಿ ನಾಗರ’.
harshavardhan v.sheelavant's picture
harshavardhan v. sheelavant
29
Jun
2010
ಪುಟ

...

ಪ್ರತಿಕ್ರಿಯೆಗಳು: 12
ಹಿಟ್ಸ್ : 1,712
ಕಾಲಕ್ಕೆ ಸರಿದ ಥ್ರಿಲ್ಲಿಂಗ್ ಘಟನೆಗಳು....
rashmi_pai's picture
Rashmi Pai
30
Dec
2010
ಬ್ಲಾಗ್ ಬರಹ

ತ್ತೆ ಬಂದಿದೆ ಹೊಸ ವರುಷ. ಎಷ್ಟು ಬೇಗ ವರ್ಷ ಕಳೆದು ಹೋಯಿತಲ್ಲಾ ಎಂದು ಹೇಳುವುದು ಸಾಮಾನ್ಯವೇ. ಇನ್ನು ಮುಂದಿನ ವರ್ಷ ಏನೇನು ಮಾಡಬೇಕೆಂಬುದರ ಬಗ್ಗೆ...

ಪ್ರತಿಕ್ರಿಯೆಗಳು: 8
ಹಿಟ್ಸ್ : 929
ನಮ್ಮ ನಮ್ಮಲ್ಲೇ ಹೋರಾಟ?
bhalle's picture
ಶ್ರೀನಾಥ್ ಭಲ್ಲೆ
24
May
2011
ಲೇಖನ

 

ಜಗತ್ತನ್ನೇ ಗೆಲ್ಲುವ ಆತ್ಮ ವಿಶ್ವಾಸದ ಪ್ರತೀಕನಾದ ಅವನು, ಆಯುಧವನ್ನು ಹೊತ್ತು ಕಣ್ಮುಚ್ಚಿ ಧ್ಯಾನಿಸಿ ಕಣ್ ತೆರೆದ ... ತನ್ನನ್ನು ಅಡ್ಡಗಟ್ಟಲು

ನಿಂತಿರುವ...

ಪ್ರತಿಕ್ರಿಯೆಗಳು: 10
ಹಿಟ್ಸ್ : 692
ಸತ್ಯ ಹೇಳುವುದು ಕಷ್ಟ, ಹೇಳದಿರುವುದು ಇನ್ನೂ ಕಷ್ಟ
Chamaraj's picture
ಚಾಮರಾಜ ಸವಡಿ
18
Nov
2009
ಪುಟ

ಹಲವಾರು ಬಾರಿ ಹಾಗನ್ನಿಸಿದೆ.

ಸತ್ಯ ಏನೆಂಬುದು ಗೊತ್ತಿರುತ್ತದೆ. ಆದರೆ, ಹೇಳಲಾಗುವುದಿಲ್ಲ. ಭಂಡತನದಿಂದ ತನ್ನ ನಿರ್ಣಯವನ್ನು ಜಾರಿಗೊಳಿಸುವ ವ್ಯಕ್ತಿ ತಪ್ಪು...

ಪ್ರತಿಕ್ರಿಯೆಗಳು: 16
ಹಿಟ್ಸ್ : 1,499
ಬೆಂಕಿ ಬಿದ್ದ ಹುಲ್ಲಿನ ದಾರಿಯಲ್ಲಿ: ಕುಂತಿಬೆಟ್ಟ
olnswamy's picture
ಓ. ಎಲ್. ನಾಗಭೂಷಣ ಸ್ವಾಮಿ
16
Jan
2006
ಬ್ಲಾಗ್ ಬರಹ

[೧೩ ಚಿತ್ರ ಮತ್ತು ಎರಡು ವೀಡಿಯೋ ಇವೆ. ನೋಡಿ. ಇವನ್ನು ನಾನೇ ಸೇರಿಸುವಷ್ಟು ಕೌಶಲ ಇಲ್ಲ. ಗೆಳೆಯ ನಾಡಿಗ್ ಅವನ್ನೆಲ್ಲ ಸೇರಿಸುತ್ತೇನೆ ಅಂದಿದ್ದಾರೆ.]


ನಿನ್ನೆ, ೧೫...

ಪ್ರತಿಕ್ರಿಯೆಗಳು: 1
ಹಿಟ್ಸ್ : 2,113
ಮೋಹಿನಿ-ಭಸ್ಮಾಸುರರ ಕಥೆ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
22
May
2010
ಪುಟ

ಪೃಥಿವೀ ರತ್ನಸಂಪೂರ್ಣಾ ಹಿರಣ್ಯಂ ಪಶವ ಸ್ತ್ರಿಯಃ
ನಾಲಮೇಕಸ್ಯ ತತ್‌ಸರ್ವಮಿತಿ ಮತ್ವಾ ಶಮಂ ವ್ರಜೇತ್
(ಮಹಾಭಾರತ, ಆದಿಪರ್ವ, ೭೫-೫೧)

(ರತ್ನಪೂರ್ಣವಾದ ಈ...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,064
ಪಕ್ಷಿನೋಟ - ಜುಲೈ ಮಾಸದಲ್ಲಿ ಸಂಪದ
partha1059's picture
ಪಾರ್ಥಸಾರಥಿ
01
Aug
2011
ಲೇಖನ

ಜುಲೈ ತಿಂಗಳಲ್ಲಿ 'ಸಂಪದ' ದಲ್ಲಿ  ಸಂಭ್ರಮಗಳ ಸಾಲು ಸಾಲು.

ಹಲವು ಸಂಪದಿಗರ ಹುಟ್ಟುಹಬ್ಬದ ಆಚರಣೆ ಈ ಮಾಸದಲ್ಲಿ!
ಜು-...

ಪ್ರತಿಕ್ರಿಯೆಗಳು: 30
ಹಿಟ್ಸ್ : 372
ಆಧುನಿಕ ಜೀವನದ ಪರಿಪಕ್ವತೆಗೆ ಬೇಕಾದ ಪರಿಕರಗಳು ಜಾನಪದ ಗೀತೆಗಳಲ್ಲಿ ಹೇರಳವಾಗಿವೆ
manjunathsinge's picture
ಮಂಜುನಾಥ ಸಿಂಗೆ
21
Nov
2009
ಪುಟ
ಸಾಮಾನ್ಯ ಜೀವನದಲ್ಲಿ ಕಾಣುವಂತಹ ಹಿಗ್ಗು ಶಿಷ್ಟ ಜೀವನದಲ್ಲಿ ಕಾಣುವುದು ಕಷ್ಟ. ಬಾಹ್ಯ ಜಗತ್ತಿನ ಚಿಂತೆಯಿಂದ ಮುಕ್ತವಾಗಿ, ಜೀವನದ ಪ್ರತಿಯೊಂದು ಕ್ಷಣಗಳನ್ನು ನಮ್ಮದೇ...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,730
ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ.
gopinatha's picture
ಬೆಳ್ಳಾಲ ಗೋಪೀನಾಥ ರಾವ್
27
Feb
2011
ಲೇಖನ

ಇಂದಿನ  ಕುಮಾರ ವ್ಯಾಸ ಭಾರತದ ಮೂರನೆಯ ಹಾಗೂ ಕೊನೆಯ ಕಂತಿನ "೯ ನೆಯ ಅಭ್ಯಾಸ " ಸಂಪದಿಗರೇ ಆದ ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿಯಾಗಿತ್ತು. ತಾಯಿ ಅಜ್ಜಿ ಹಾಗೂ ಮಗಳು ಪಾವನಿ...

ಪ್ರತಿಕ್ರಿಯೆಗಳು: 12
ಹಿಟ್ಸ್ : 512

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಯಕ್ಷಲೋಕದ ಅನರ್ಘ್ಯ ರತ್ನ

ಯಕ್ಷಲೋಕದ ಅನರ್ಘ್ಯ ರತ್ನ

ಶೇಣಿಯವರು ಕಾಲವಾದಾಗ ಕಡೇಪಕ್ಷ ಮುಖ್ಯಮಂತ್ರಿಗಳ ಕಚೇರಿಯಿಂದ ಒಂದು ಸಂತಾಪ ಸಂದೇಶ ಕೂಡ ಬರಲಿಲ್ಲ. ಅಗಲಿದ್ದು ಸಾಮಾನ್ಯ ವ್ಯಕ್ತಿತ್ವವಲ್ಲ. ಕರ್ನಾಟಕ ಮತ್ತು ಕೇರಳ ಸರ್ಕಾರಗಳಿಂದಲೂ ರಾಜ್ಯ ಪ್ರಶಸ್ತಿ ಪುರಸ್ಕೃತ, ಎರಡು ಡಾಕ್ಟರೇಟ್‌ ಪ್ರಬಂಧಗಳ ಸೃಷ್ಟಿಗೆ ವಸ್ತುವಾದ ಸಾಧಕ, ಜೊತೆಗೆ ಸ್ವತಃ ವಿಶ್ವ ವಿದ್ಯಾಲಯವೊಂದರಿಂದ ಗೌರವ ಡಾಕ್ಟರೇಟ್‌ ಪಡೆದ ಪ್ರತಿಭೆ. ಆದರೂ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿಯಾದಿಯಾಗಿ ಯಾರೊಬ್ಬರಿಂದಲೂ ಒಂದು ಪ್ರತಿಕ್ರಿಯೆ ಬರಲಿಲ್ಲ!

`ಗದಾಯುದ್ಧ'ದ ಪ್ರಸಂಗದಲ್ಲಿ ಸರ್ವಸ್ವವನ್ನೂ ಕಳೆದುಕೊಂಡು ವೈಶಂಪಾಯನ ಸರೋವರಕ್ಕೆ ಧಾವಿಸುವ ಮುನ್ನ ಧುರ್ಯೋಧನನಾಗಿ ಶೇಣಿಯವರು ಆಡುವ ಮಾತು:


`ಪಾಂಡವರೇ ಗೆದ್ದುಕೊಳ್ಳಲಿ ರಾಜ್ಯವನ್ನು. ಆದರೆ ರಾಜ ಸಭೆಗೆ ಭೀಷ್ಮರಂಥ ಹಿರಿಯರನ್ನು ಎಲ್ಲಿಂದ ತಂದಾರು? ದ್ರೋಣನಂಥ ಆಚಾರ್ಯರನ್ನು ಎಲ್ಲಿಂದ ತಂದಾರು?... ಎಲ್ಲಾ ಅನರ್ಘ್ಯ ರತ್ನಗಳು. ನನ್ನ ಕಾಲದಲ್ಲಿ ಮಾತ್ರ ಇದ್ದವುಗಳು.'


ಒಂದೆಡೆ ಸಂತಾಪ. ಇನ್ನೊಂದೆಡೆ ರಾಜ್ಯ ಪಾಂಡವರ ಪಾಲಾದರೂ ಅವರ ರಾಜಸಭೆಗೆ ಹಿಂದಿನ ವೈಭವ ಇರುವುದಿಲ್ಲ ಎಂಬ ಖಳನಾಯಕನ ಸಂತೃಪ್ತಿ.


ಶೇಣಿಯವರನ್ನು ಕಳೆದುಕೊಂಡ ಯಕ್ಷಗಾನವೂ ಹಾಗೆಯೇ. ಯಕ್ಷರಂಗ ಮುಂದಿನ ಜನಾಂಗಕ್ಕೂ ಉಳಿದೀತು. ಅದು ಎಲ್ಲಾ ಸವಾಲುಗಳನ್ನೂ ಎದುರಿಸಿ ಉಳಿದಿದೆ. ಆದರೆ ಅಲ್ಲಿ ಶೇಣಿಯವರಂಥ ಭೀಷ್ಮರು ಇರುವುದಿಲ್ಲ. ಅವರು ನಮ್ಮ ಕಾಲಕ್ಕೆ ಮಾತ್ರ ಇದ್ದ ಅನರ್ಘ್ಯ ರತ್ನ.


ನಾವೆಲ್ಲ ಯಕ್ಷಗಾನವನ್ನು ನೋಡಿ ಅರ್ಥೈಸುವ ವೇಳೆಗಾಗಲೇ ಶೇಣಿಯವರು ಮೇಳದಿಂದ ನಿವೃತ್ತಿ ಪಡೆದಿದ್ದರು. ಯಕ್ಷಗಾನದಂಥ ಸಾಂಪ್ರದಾಯಿಕ ಮನರಂಜನಾ ಮಾಧ್ಯಮಗಳಿಂದ ವಿಮುಖರಾಗುತ್ತಿ ರುವ ತಲೆಮಾರೊಂದರಲ್ಲೂ ಆ ಕಲೆಯಲ್ಲಿ ಆಸಕ್ತಿ ಉಳಿಸಿಕೊಂಡಿರುವ ನಾವು ಶೇಣಿಯವರ ಮಾತುಗಾರಿಕೆಯನ್ನು ಕೇಳಿದ್ದು ಬಹುತೇಕ ಯಕ್ಷಗಾನ ಕ್ಯಾಸೆಟ್‌ಗಳ ಮೂಲಕ. ಶೇಣಿಯವರನ್ನು ಹಾಗೆಯೇ ಪೌರಾಣಿಕ ಪಾತ್ರಗಳನ್ನು ಅವರ ಮಾತುಗಾರಿಕೆಯ ಮೂಲಕವೇ ಕಂಡೆವು ಮತ್ತು ಅಭಿಮಾನಿಗಳಾದೆವು.
***

ಶೇಣಿಯವರ ಮಾತುಗಾರಿಕೆ ನೀಡುವ `ಕಿಕ್‌' ಅದನ್ನು ಅನುಭವಿಸಿ ದವರಿಗೆ ಮಾತ್ರ ತಿಳಿದೀತು. ಬಹುಶಃ ಅದನ್ನು ಯಕ್ಷಗಾನಾಸಕ್ತರಿಗೆ ಮಾತ್ರ ಅನುಭವಿಸಲು ಸಾಧ್ಯವಾಗುವುದು. ಕೇಳುವವರ ಆಸಕ್ತಿಗೆ ಅನುಗುಣವಾಗಿ ಶೇಣಿಯವರ ಅರ್ಥಗಾರಿಕೆಯಿಂದ ಅರ್ಥಶಾಸ್ತ್ರ, ತತ್ವ ಶಾಸ್ತ್ರ, ಮಾನವತಾವಾದ, ಕಾವ್ಯ ಮೀಮಾಂಸೆಗಳನ್ನೆಲ್ಲ ಬಗೆದು ತೆಗೆಯಬಹುದು. ಒಟ್ಟಾಗಿ ಅರ್ಥ ಕೇಳುತ್ತಿದ್ದರೆ ಒಬ್ಬೊಬ್ಬ ಸ್ನೇಹಿತರು ಒಂದೊಂದು ವಿಚಾರ ಗುರುತಿಸುತ್ತಿದ್ದುದುಂಟು.
ಬಪ್ಪ ಬ್ಯಾರಿಯಾಗಿ ಶೇಣಿಯವರಾಡುವ ಮಾತು: `ಏಲೆನ್ಮ ಮಂಜಿ ಉಂಡಪ್ಪ ಎನ್ನಡ. ಆಂಡಲಾ ನನೊಂಜಿ ಕಟ್ಟಾದೆ. ದಾಯೆ? ನಾಲ್‌ ಪಾಪದಪ್ಪೆ ಜೋಕ್ಲೆಗ್‌ ಬೇಲೆ ಆಪುಂಡತ್ತ ಅಯ್ಕೆ' (ನನ್ನ ಬಳಿ ಏಳೆಂಟು ಹಡಗುಗಳು ಇವೆ. ಆದರೂ ಇನ್ನೊಂದು ಕಟ್ಟಿಸಿದ್ದೇನೆ. ಯಾಕೆ? ಒಂದಷ್ಟು ಬಡತಾಯಿ ಮಕ್ಕಳಿಗೆ ಉದ್ಯೋಗ ಸಿಗುತ್ತದಲ್ಲ, ಅದಕ್ಕೆ).


ಹಾಗೆಯೇ `ಕರ್ಣಾವಸಾನ' ಪ್ರಸಂಗದ ಕರ್ಣನಾಗಿ ಅವರ ಸ್ವಗತದ ಮಾತು: `ಬಂಗಾರ ಸಮೇತ ನನ್ನಮ್ಮ ನನ್ನನ್ನು ನೀರಿಗೆಸೆದಿದ್ದು ಯಾಕೆ? ಚಿನ್ನದಾಸೆಗಾಗಿಯಾದರೂ ಯಾರಾದರೂ ನನ್ನನ್ನು ಬದುಕಿಸಲಿ ಅಂತಲೇ.'
`ಸೀತಾಪಹರಣ'ದ ಮಾಯಾ ರಾವಣನಾಗಿ ಹೇಳುತ್ತಾರೆ: `ಜೇಡನ ಬಲೆಯಾಗ ಬೇಕಮ್ಮ. ಜೇಡನ ಬಲೆಯಾಗಬೇಕು. ಒಳಗಿದ್ದವರಿಗೆ ಸ್ವಾತಂತ್ರ್ಯ ಇರಬೇಕು. ರೇಷ್ಮೆಯ ಗೂಡಾಗಬಾರದು.'
ಹೀಗೆ ಸರಳವಾದ ವಾಕ್ಯಗಳಲ್ಲಿ ಅರ್ಥಶಾಸ್ತ್ರೀಯ ಮಾತು, ತಾತ್ವಿಕ ಹೊಳಹುಗಳನ್ನು ನೀಡುವುದರಲ್ಲಿ ಅವರು ನಿಸ್ಸೀಮರು.


ದಿವಂಗತ ವೆಂಕಪ್ಪ ಶೆಟ್ಟರು `ಕರ್ಣಾವಸಾನ'ದ ಕರ್ಣನ ಪಾತ್ರದಲ್ಲಿ ಅರ್ಥ ಹೇಳುತ್ತಿದ್ದರೆ ಸಭೆಗೆ ಸಭೆಯೇ ಕಣ್ಣೀರಿಟ್ಟಿತು ಎಂದು ಕಯ್ಯಾರ ಕಿಂಞಣ್ಣ ರೈ ತಮ್ಮ `ದುಡಿತವೇ ನನ್ನ ದೇವರು' ಪುಸ್ತಕದಲ್ಲಿ ದಾಖಲಿಸಿದ್ದಾರೆ. ವೆಂಕಪ್ಪ ಶೆಟ್ಟರ ಕರ್ಣನ ಅರ್ಥಗಾರಿಕೆ ನಮ್ಮ ತಲೆಮಾರಿಗೆ ಲಭ್ಯವಿರಲಿಲ್ಲ. ನಮಗೆ ಲಭಿಸುವ ಶ್ರೇಷ್ಠವಾದ ಕರ್ಣನ ಪಾತ್ರದ ಅರ್ಥಗಾರಿಕೆ ಶೇಣಿಯವರದ್ದು. ಭಾವನಾತ್ಮಕ ಮತ್ತು ವೈಚಾರಿಕವಾಗಿ ತಟ್ಟುವ ಅರ್ಥಗಾರಿಕೆಯನ್ನು `ಕರ್ಣಾವಸಾನ' ಪ್ರಸಂಗದಲ್ಲಿ ಶೇಣಿ ನೀಡುತ್ತಾರೆ: `ಶಿವ ಶಿವಾ, ಸಮರದಲ್ಲೂ ಕೈ ಸೋತೆನಲ್ಲಾ...',

`ಹೀನನಾದನು ಕೌರವೇಶ್ವರ...' ಮುಂತಾದ ಪದ್ಯಗಳಿಗೆ ಅವರು ನೀಡುವ ಸುದೀರ್ಘ ಅರ್ಥದ ಕೆಲವು ತುಣುಕುಗಳು:
`ಇನ್ನೊಂದು ಹುಟ್ಟು ನನಗೆ ಬೇಡ ಕೃಷ್ಣ. ಹುಟ್ಟಿದರೂ ಭವ್ಯವೂ ದಿವ್ಯವೂ ಆದ ಬದುಕು ನನಗೆ ಬೇಡ. ಅದಕ್ಕೆ ಅನುಗುಣವಾಗಿ ಮರಣಾನಂತರ ಧರ್ಮರಾಯನ ಕೈಯಿಂದ ಎಳ್ಳು-ನೀರು ಬಿಡಿಸು ಕೃಷ್ಣ.'
`ಕೌರವನಿಗಿಂತ ಒಂದು ನಿಮಿಷವಾದರೂ ಮೊದಲು ಈ ದೇಹವನ್ನು ಗಂಧದ ಕೊರಡಿನಂತೆ ತೇದು ತೇದು ಮುಗಿಸಿಬಿಡುತ್ತೇನೆ.'
`ಕೌರವೇಶ್ವರ ನನಗೆ ಸ್ಥಾನವಾಗಲೀ ಮಾನವಾಗಲೀ ನೀಡಿದ್ದು ಕೇವಲ ಆಪತ್ತಿಗಾದಾನು ಕರ್ಣ ಎಂದು.'
ಕೆಲವೊಮ್ಮೆ ಒಂದೇ ಒಂದು ವಾಕ್ಯದ ಅರ್ಥ ಮತ್ತೆ ಮತ್ತೆ ಕೇಳುಗರನ್ನು ತಟ್ಟಿರುತ್ತದೆ: `ವೃದ್ಧನಾದೆ ವೃದ್ಧನಾದೆ. ವ್ಯರ್ಥನಾದೆ ವ್ಯರ್ಥನಾದೆ' (`ವಜ್ರದುಂಬಿ' ಪ್ರಸಂಗದಲ್ಲಿ ಪರಶುರಾಮನಾಗಿ).
`ಹಾವು ಕಚ್ಚಿದರೆ ಔಷಧಿ ಉಂಟು. ಮಣ್ಣು ಕಚ್ಚಿದರೆ?' (`ಕರ್ಣಾವಸಾನ'ದಲ್ಲಿ ರಥ ಹೂತು ಹೋದಾಗ ಆಡುವ ಮಾತು).
`ಧೀರ ಶೂರ ಲಾಲಿತ ಗಾತ್ರ ರಾಮಾ... ಏನು? ಹೆಂಡತಿಯನ್ನು ಕಳೆದು ಕೊಂಡಾಗ ಎಲ್ಲವನ್ನೂ ಕಳೆದುಕೊಂಡೆಯೇನೂ?' (`ವಾಲಿ ವಧೆ'ಯಲ್ಲಿ ವಾಲಿ).
`ನಿಮ್ಮನ್ನು ಕಾಯಬೇಕು. ಅಂದರೆ ನಿಮಗೆ ಈ ಕಾಯ ಬೇಕು' (ಪಾಂಡವರ ಗುಟ್ಟಿನ ಒಪ್ಪಂದಕ್ಕೆ ಬಂದ ಭೀಷ್ಮ ಹೇಳುವ ಮಾತು).


ಶೇಣಿಯವರ ಪೌರಾಣಿಕ ಪಾತ್ರಗಳ ನಿರೂಪಣೆಯಲ್ಲಿ ಸಿಗುವ ಒಳನೋಟಗಳು ಯಾವುದೇ ಶ್ರೇಷ್ಠ ಸಾಹಿತ್ಯ ಕೃತಿಗಳಲ್ಲಿ ಸಿಗುವ ಒಳನೋಟಗಳಿಗಿಂತ ಕಡಿಮೆ ಯೇನಲ್ಲ. ಆ ಒಳನೋಟಗಳ ಮೂಲಕ ಕೇಳುಗರ ಚಿಂತನೆಯನ್ನು ಅವರು ರೂಪಿಸಿ ದ್ದಾರೆ. ಯಕ್ಷಗಾನದ ಮೂಲಕ ಸಾಮಾಜಿಕ ಸಂದೇಶವನ್ನು ನೀಡುವ ಪ್ರಯತ್ನಗಳು ಆಗಾಗ ನಡೆದಿವೆ. ಅದಕ್ಕಾಗಿ ಪ್ರತ್ಯೇಕ ಪ್ರಸಂಗಗಳನ್ನೂ ರಚಿಸಲಾಗಿದೆ. ಅವುಗಳ ಯಶಸ್ಸು ಮತ್ತು ಔಚಿತ್ಯ ಮಾತ್ರ ಇನ್ನೂ ಪ್ರಶ್ನಾರ್ಹ. ಆದರೆ ಬಪ್ಪ ಬ್ಯಾರಿ ಪಾತ್ರದ ಮೂಲಕ ಶೇಣಿಯವರು ನೀಡಿದ ಮತೀಯ ಸಾಮರಸ್ಯದ ಸಂದೇಶ ಬಹುಶಃ ಯಕ್ಷಗಾನದ ಮೂಲಕ ಪ್ರಸಾರವಾದ ಸಾಮಾಜಿಕ ಸಂದೇಶಕ್ಕೊಂದು ಅತ್ಯುತ್ತಮ ಉದಾಹರಣೆ. ಅದು ಅರ್ಥವಾಗಬೇಕಾದರೆ ಆ ಪ್ರಸಂಗದ ಸಂಪೂರ್ಣ ಮಾತುಗಾರಿಕೆಯನ್ನು ಕೇಳಬೇಕು. ಒಟ್ಟು ಸಂದೇಶ ಅಲ್ಲಿ ಶೇಣಿಯವರು ಮಲಯಾಳಂ ಭಾಷೆಯಲ್ಲಿ ಆಡುವ ಒಂದು ವಾಕ್ಯದಲ್ಲಿ ಅಡಗಿದೆ: `ಮತಮೇದಾಯಾಲುಂ ಮನುಷ್ಯರೊನ್ನಾಗಣಂ' (ಧರ್ಮ ಯಾವುದೇ ಇರಲಿ, ಮನುಷ್ಯರೆಲ್ಲಾ ಒಂದೇ).


ನಿರ್ಧಾರ ತೆಗೆದು ಕೊಳ್ಳುವಲ್ಲಿ ನೈತಿಕ ಅಥವಾ ವ್ಯಾವಹಾರಿಕ ದ್ವಂದ್ವಗಳನ್ನು ಎದುರಿಸುತ್ತಿದ್ದರೆ ಶೇಣಿಯ ವರ ಭೀಷ್ಮನ ಮಾತುಗಳನ್ನು ಕೇಳಬೇಕು. ವಿಧಿ ಇಲ್ಲದೆ ಸಂದರ್ಭವನ್ನು ಒಪ್ಪಬೇಕಾದ ಪರಿಸ್ಥಿತಿಯಲ್ಲಿ ಮನಸ್ಸು ವಿಚಲಿತವಾಗಿದ್ದರೆ ಶೇಣಿಯವರ ಕರ್ಣನ ಮಾತುಗಳನ್ನು ಕೇಳಬೇಕು. ತಮ್ಮ ಮನೋಭಾವಗಳಿಗೆ ಅನುಗುಣವಾಗಿ ಸಂಗೀತ ಪ್ರೇಮಿಗಳು ವಿವಿಧ ರಾಗಗಳನ್ನು ಆಲಿಸುತ್ತಾರಂತೆ. ಶೇಣಿಯವರ ಅರ್ಥ ಧಾರಾಮೃತವೂ ಹಾಗೆ. ನಮ್ಮ ಭಾವನೆಗಳ ಕಗ್ಗಂಟನ್ನು ಸಡಿಲಿಸಬಲ್ಲ ರಸ ತೈಲ.

***

ಶೇಣಿಯವರು ಕಾಲವಾದಾಗ ಕಡೇಪಕ್ಷ ಮುಖ್ಯಮಂತ್ರಿಗಳ ಕಚೇರಿಯಿಂದ ಒಂದು ಸಂತಾಪ ಸಂದೇಶ ಕೂಡ ಬರಲಿಲ್ಲ. ಅಗಲಿದ್ದು ಸಾಮಾನ್ಯ ವ್ಯಕ್ತಿತ್ವವಲ್ಲ. ಕರ್ನಾಟಕ ಮತ್ತು ಕೇರಳ ಸರ್ಕಾರಗಳಿಂದಲೂ ರಾಜ್ಯ ಪ್ರಶಸ್ತಿ ಪುರಸ್ಕೃತ, ಎರಡು ಡಾಕ್ಟರೇಟ್‌ ಪ್ರಬಂಧಗಳ ಸೃಷ್ಟಿಗೆ ವಸ್ತುವಾದ ಸಾಧಕ, ಜೊತೆಗೆ ಸ್ವತಃ ವಿಶ್ವ ವಿದ್ಯಾಲಯವೊಂದರಿಂದ ಗೌರವ ಡಾಕ್ಟರೇಟ್‌ ಪಡೆದ ಪ್ರತಿಭೆ. ಆದರೂ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿಯಾದಿಯಾಗಿ ಯಾರೊಬ್ಬ ರಿಂದಲೂ ಒಂದು ಪ್ರತಿಕ್ರಿಯೆ ಬರಲಿಲ್ಲ!

ಮುಂಬೈ ಮೂಲದ `ಟೈಂಸ್‌ ಆಫ್‌ ಇಂಡಿಯಾ' ಪತ್ರಿಕೆಯ ಬೆಂಗಳೂರು ಆವೃತ್ತಿಯಲ್ಲಿ ಶೇಣಿಯವರ ನಿಧನ ಮುಖಪುಟದ ಸುದ್ದಿ. ಚೆನ್ನೈ ಮೂಲದ `ಹಿಂದೂ' ಪತ್ರಿಕೆಗೆ ಅದು ಎಲ್ಲ ದಕ್ಷಿಣ ರಾಜ್ಯಗಳ ಪ್ರಮುಖ ಸುದ್ದಿ. ಆದರೆ ಕರ್ನಾಟಕ ಮೂಲದ ಇಂಗ್ಲಿಷ್‌ ದೈನಿಕ `ಡೆಕ್ಕನ್ ಹೆರಾಲ್ಡ್' ಗೆ ಅದು ಒಳಪುಟ ಗಳಲ್ಲೆಲ್ಲೋ ಸಾಮಾನ್ಯ ನಿಧನ ವಾರ್ತೆಗಳ ಪೈಕಿ ಎರಡು ಪ್ಯಾರಾಗಳ ಸುದ್ದಿ.

ಸಾವಿರಾರು ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದ ಶೇಣಿಯವರಂತಹ ಕಲಾವಿದರ ಸಾಧನೆಗೆ ಸರ್ಕಾರ ಯಾಂತ್ರಿಕವಾಗಿ ನೀಡುವ ಸಂತಾಪ ಸೂಚನೆ ಅಥವಾ ಪತ್ರಿಕೆಯೊಂದು ನೀಡುವ ಪ್ರಾಮುಖ್ಯ ಸರ್ಟಿಫಿಕೇಟ್‌ ಅಲ್ಲ, ನಿಜ. ಆದರೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಕಾಪಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಒಂದು ಕಲೆ ಮತ್ತು ಅದರ ಅಭಿಜಾತ ಕಲಾವಿದನೊಬ್ಬನ ಬಗ್ಗೆ ಕರಾವಳಿಯೇತರ ಕರ್ನಾಟಕಕ್ಕೆ ಇದ್ದ ಕಳಕಳಿ ಮತ್ತು ಪರಿಜ್ಞಾನ ಎಷ್ಟು ಎಂಬುದು ಶೇಣಿಯವರ ಮರಣದಲ್ಲಿ ಇನ್ನೊಮ್ಮೆ ಬೆಳಕಿಗೆ ಬಂತು-ಅವರ ಅರ್ಥಗಾರಿಕೆ ಯಾವತ್ತೂ ಸಮಕಾಲೀನ ವಾಸ್ತವಗಳಿಗೆ ಕನ್ನಡಿ ಹಿಡಿಯುತ್ತಿದ್ದಂತೆ.

-ನಾರಾಯಣ ಎ.

No votes yet
1712 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
rajeshnaik111's picture
22
Jul
2006
10:59

ಶೇಣಿಯವರ ಮರಣ ಇನ್ನೂ ಸರಕಾರದ ಗಮನಕ್ಕೆ ಬಂದಿಲ್ಲ ಅನ್ಸುತ್ತೆ ಅಥವ ಸರಕಾರದ ಪ್ರಕಾರ ಶೇಣಿಯವರಿನ್ನೂ ಬದುಕಿದ್ದಾರೆ, ಹಾಗಾಗಿ ಸಂತಾಪ ಸೂಚಿಸುವ ಅವಶ್ಯಕತೆ ಇಲ್ಲ ! ಇನ್ನು ಡೆಕ್ಕನ್ ಹೆರಾಲ್ಡ್ ವಿಷಯ...ಇದೇ ಕಾರಣಕ್ಕಾಗಿ ಅಲ್ಲವೇ ಅದರ ಪ್ರಸಾರ ಸಂಖ್ಯೆ ಪ್ರಪಾತಕ್ಕೆ ಇಳಿಯುತ್ತಿರುವುದು? ಯಾವ ಸುದ್ದಿ ಎಲ್ಲಿ ಬರಬೇಕು ಎಂಬುದೇ ಈ ಪತ್ರಿಕೆಗೆ ಇತ್ತೀಚೆಗೆ ಅರ್ಥವಾಗುತ್ತಿಲ್ಲ.

Gopinath Rao's picture
24
Jul
2006
11:59
ದಿವಂಗತ ಶೇಣಿಯವರ ಬಗೆಗಿನ ಲೇಖನ ಅತ್ಯಂತ ಸಕಾಲಿಕ. ಸರಕಾರಕ್ಕೆ ಒಂದು ಹಿಡಿ ಮಣ್ಣು ಹಾಕಿ. ಯಕ್ಷಗಾನಕ್ಕೆ ಕರಾವಳಿಯ ಹೊರಗೆ ಮತ್ತು ದಕ್ಷಿಣೋತ್ತರ ಕನ್ನಡಿಗರ ಹೊರತು ಇತರ ಕನ್ನಡಿಗರಲ್ಲಿ ಹೆಚ್ಚು ಅಭಿಮಾನಿಗಳಿಲ್ಲ ಅನ್ನುವುದು ವಾಸ್ತವ ಸಂಗತಿ. ಸಂಪದದ ಸದಸ್ಯರಲ್ಲಿಯೂ ಯಕ್ಷಗಾನದ ಬಗೆಗೆ ಹೆಚ್ಚಿನ ಮಾಹಿತಿ ಇಲ್ಲದವರು ಹಲವರಿದ್ದಾರೆ. ನಾರಾಯಣರು ಯಕ್ಷಗಾನದ ಒಳ ತಿರುಳನ್ನು ತಿಳಿಸುವ ಪ್ರಬುದ್ಧ ಲೇಖನಗಳನ್ನು ಆಗಾಗ ಬರೆಯಬೇಕು. ಯಕ್ಷಗಾನದ ಬಗ್ಗೆ ಸಂಪದದ ಸದಸ್ಯರಲ್ಲಿ ಹೆಚ್ಚಿನ ಆಸಕ್ತಿ ತನ್ನಿಂದ ತಾನಾಗಿ ಮೂಡುತ್ತದೆ. ಅಗಲಿದ ದಿವ್ಯಾತ್ಮಕ್ಕೆ ಸಂಪದದ ಶ್ರದ್ಧಾಂಜಲಿಯಾಗಿ ಮೂಡಿಬಂದ ಈ ಲೇಖನ ಬರೆದುದಕ್ಕೆ ನಾರಾಯಣರು ಅಭಿನಂದನಾರ್ಹರು. ಗೋಪೀನಾಥ ರಾವ್
keshavamurali's picture
24
Jul
2006
4:16

ನಾನು ಯಕ್ಷಗಾನದ ಕೇಳುಗನಾಗಿ, ಬಹಳವಾಗಿ ಮೆಚ್ಚಿಕೊಂಡದ್ದು ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥಗಾರಿಕೆಯನ್ನು. ಸುಮಾರು ೭ ವರ್ಷಗಳ ಹಿಂದೆ ನನ್ನ ಊರಿನ ಸಮೀಪದ ಹಳ್ಳಿಯೊಂದರಲ್ಲಿ ತಾಳಮದ್ದಳೆಯೊಂದಕ್ಕೆ ಕೇಳುಗನಾಗಿ ಹೋಗಿದ್ದೆ. "ಕರ್ಣಾರ್ಜುನ" ಆವತ್ತಿನ ಪ್ರಸಂಗ. ಶ್ರೀ ಪೆರ್ಲ ಕೃಷ್ಣ ಭಟ್ಟರು ಕೃಷ್ಣ, ಶೇಣಿಯವರು ಕರ್ಣ. ಸುಮಾರು ೫ ಘಂಟೆಗಳ ಕಾಲ ನಡೆದ ಈ ತಾಳಮದ್ದಳೆಯಲ್ಲಿ ಅವರಿಬ್ಬರ ಮಾತುಗಾರಿಕೆಯ ವೈಭವವನ್ನು ಸವಿಯುವ ಸದವಕಾಶ ನಮಗೆ ಒದಗಿ ಬಂದಿತ್ತು. ಇದಲ್ಲದೆ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನವನ್ನೂ ಒಂದು ಬಾರಿ ನೋಡಿದ್ದೆ. ಅದು ಪ್ರಾಯಶಃ ಅವರ ಕೊನೆಯ ವೇಷಗಾರಿಕೆಯಾಗಿರಬೇಕು.
ಬಹಳ ಭೋದಪ್ರದವಾದ, ನವಿರಾದ ಹಾಸ್ಯವುಳ್ಳ ಪ್ರಾದೇಶಿಕ ಕಾಸರಗೋಡು ಕನ್ನಡದ ಅರ್ಥಗಾರಿಕೆ ಅವರದು. "ಗಧಾಯುದ್ಧ" ದ ದುರ್ಯೋಧನ, "ಮಾಗಧ ವಧೆ" ಯ ಮಾಗಧ, ಕರ್ಣಾರ್ಜುನದ ಕರ್ಣನಾಗಿ, "ಕವಿರತ್ನ ಕಾಳಿದಾಸ"ದ ಕಾಳಿದಾಸನಾಗಿ ಅವರ ಮಾತುಗಾರಿಕೆ ಒಂದು ವಿಶಿಷ್ಟ ಛಾಪನ್ನು ಉಳಿಸುವಂತಹುದು. ಕರ್ಣಾರ್ಜುನದ "ಏನು ಸಾರಥಿ ಸರಳು ಪಾಂಡವ ಸೇನೆಯನು ಗೆಲಲಹುದೆ......" ಎಂಬ "ಪದ" ವೊಂದರ ನಂತರದ ಅರ್ಥ ನನಗೆ ಈಗಲೂ ಅಚ್ಚಳಿಯದೆ ನೆನಪಿನಲ್ಲಿದೆ.
ಒಳ್ಳೆ ಅರ್ಥಧಾರಿ ಮಾತ್ರವಲ್ಲದೆ ಶೇಣಿಯವರು ಹರಿಕಥೆಗಳನ್ನೂ ಅದ್ಭುತವಾಗಿ ನಡೆಸಬಲ್ಲವರಾಗಿದ್ದರು. ಹೀಗೆ ಬಹುಮುಖ ಪ್ರತಿಭೆಯುಳ್ಳಮಹಾನುಭಾವರ ಅಗಲಿಕೆ ನಿಜಕ್ಕೂ ತುಂಬಲಾರದ ನಷ್ಟ.
ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ.

ಕೇಶವ ಮುರಳಿ