ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಇಷ್ಟ

ಜೀವದಾಗಸದಲ್ಲಿ ನಗುವಿನಾಗರದಲ್ಲಿ ನನ್ನ ನೀ ನಿನ್ನತ್ತ ಸೆಳೆಯುತಿರುವೆ
ಯಾವುದನೂ ಹೇಳದೆಯೇ ಯಾರನೂ ಕೇಳದೆಯೇ ನನ್ನ ಮನವನೆತ್ತಲೋ ನೀ ಒಯ್ಯುತಿರುವೆ .

ಏನ ಹೇಳಲಿ ಕಂದ ನಿನ್ನ ನೋಟವು ಚಂದ,
ಆಡುವಾ ಮಾತುಗಳು ಅಂದಚಂದ.

ನಿನ್ನ ನಾ ನೋಡುತಿರೆ ಜಗವೆಲ್ಲ ಅಂದ ಮನಸುಗಳ ನಡುವಿಹುದು ಕಾಣದಾ ಸಂಬಂಧ .
ಸುಮ್ಮ ಸುಮ್ಮನೆ ಬರುವೆ ನೂರು ನೆನಪನು ತರುವೆ ,ನನ್ನೇಕೆ ಹೀಗೆ ನೀ ಕಾಡುತಿರುವೆ .?

ಅಲ್ಲಿ ನೋಡಲು ನೀನೆ ,ಎಲ್ಲಿ ನೋಡಲು ನೀನೆ ,ಕಾಡುವ ವಿದ್ಯೆಯಲಿ ನೀ ಪ್ರವೀಣೆ !
ನೀ ಮನಕೆ ಬಾರದ ದಿನಗಲೊಂದೂ ಇಲ್ಲ ನಿನ್ನದೇ ನೆನಪಲ್ಲಿ ಕಳೆವೆ ನಾ ದಿನವೆಲ್ಲ.

ಕಣ್ಣೆದುರು ನೀ ನಿಂತು ,ಮನದಲ್ಲಿ ನೀ ಬಂದು ,ಯೋಚನೆಯ ಮಾಡುವುದೇ ನನಗೀಗ ಕಷ್ಟ .
ನಿನ್ನ ಸಿಹಿ ನೆನಪುಗಳು ಕಷ್ಟವಾದರೂ ಇಷ್ಟ ,ಕಾರಣವೂ ತಿಳಿದಿಲ್ಲ ನೀನನಗೆ ಇಷ್ಟ....!!!:-)

--ಅಪೂರ್ವ ಚಂದ್ರ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
Harish Athreya's picture

ಆತ್ಮೀಯ

<<ಕಣ್ಣೆದುರು ನೀ ನಿಂತು ,ಮನದಲ್ಲಿ ನೀ ಬಂದು ,ಯೋಚನೆಯ ಮಾಡುವುದೇ ನನಗೀಗ ಕಷ್ಟ .
ನಿನ್ನ ಸಿಹಿ ನೆನಪುಗಳು ಕಷ್ಟವಾದರೂ ಇಷ್ಟ ,ಕಾರಣವೂ ತಿಳಿದಿಲ್ಲ ನೀನನಗೆ ಇಷ್ಟ....!!!>>

ಏನ್ ಡಾಕ್ತ್ರೇ ಕಣ್ಣೆದುರಿಗೆ ನಿ೦ತು ಮನ್ಸಿನಲ್ಲಿ ಬ೦ದರೂ ಯೋಚನೆ ಮಾಡೋದು ಕಷ್ಟವೇ ಸಿಹಿ ನೆನಪುಗಳು ಕಷ್ಟವೇ? ಃಇಗೆ ಹೇಳಿ
ಕೊನೆ ನೀನೆನಗೆ ಇಷ್ಟ ಅ೦ದ್ರಲ್ಲ ಅದು ಚ೦ದ ಇದೆ .
ಚ೦ದ ಬರೆದಿದ್ದೀರ ಮು೦ದುವರೆಸಿಮ್ಮ.

ಹರೀಶ ಅತ್ರೇಯ