Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಕನ್ನಡಂಗಳ್: ಪದ್ಯ ಹೀಗಿದೆ

August 9, 2006 - 5:39pm — olnswamy

ಸಂಪದದ ಗೆಳೆಯರೊಬ್ಬರು ಕನ್ನಡಂಗಳ್ ಅನ್ನುವ ಮಾತು ಕವಿರಾಜಮಾರ್ಗದಲ್ಲಿದೆಯೇ ಎಂದು ಸಂದೇಹ ವ್ಯಕ್ತಪಡಿಸಿದ್ದರು. ಆ ಮಾತು ಬರುವ ಜಾಗ ಆಶ್ವಾಸ ೧, ಪದ್ಯ ೪೬.

"ದೋಸಂ ಇನಿತು ಎಂದು ಬಗೆದು ಉದ್ಭಾಸಿಸಿ ತರಿಸಂದು ಕನ್ನಡಂಗಳೊಳ್ ಎಂದುಂ ವಾಸುಗಿಯುಂ ಅರಿಯಲಾರದೆ ಬೇಸರಿಸುಗುಂ ದೇಸಿ ಬೇರೆಬೇರಪ್ಪುದರಿಂ"
ಅರ್ಥ: "ದೇಸಿ ನುಡಿಗಳು ಬೇರೆ ಬೇರೆಯಾಗಿರುವುದರಿಂದ ಈ ಹಲವು ಕನ್ನಡಗಳಲ್ಲಿ ದೋಷಗಳು ಎಷ್ಟಿವೆ ಎನ್ನುವುದನ್ನು ನಿಶ್ಚಯಿಸಿ ಕಾಣಿಸಿ ಹೇಳಲು ಹಲವು ನಾಲಗೆಯುಳ್ಳ ವಾಸುಕಿಯೂ ಬೇಸರಿಸಿಯಾನು" ಇದು ಶ್ರೀ ಕೆ.ವಿ. ಸುಬ್ಬಣ್ಣ ಅವರು ತಮ್ಮ ಲೇಖನದಲ್ಲಿ (ಅರೆ ಶತಮಾನದ ಅಲೆಬರಹಗಳು, ಪುಟ ೪೫೨, ಅಕ್ಷರಪ್ರಕಾಶನ) ವಿವರಿಸಿರುವ ರೀತಿ.
ದೇಸಿಯಲ್ಲಿ ವೈವಿಧ್ಯ ಅಪಾರವಾಗಿ ಇರುವುದರಿಂದಲೇ ಒಂದು ಶಿಷ್ಟ ಭಾಷೆಯ ರೂಪವನ್ನು ನಿರ್ಮಿಸಿಕೊಳ್ಳುವ ಅಗತ್ಯ ಕಂಡುಬರುತ್ತದೆ. ಹಾಗೆ ಆಗುವುದಕ್ಕೆ ರಾಜಕೀಯ ಬೆಂಬಲವೂ ಬೇಕು. ಆದ್ದರಿಂದಲೇ ಕವಿ ಮತ್ತು ರಾಜ ಇಬ್ಬರೂ ಸೇರಿ ನಿರ್ಮಿಸಿದ್ದು ಕವಿರಾಜಮಾರ್ಗ ಅನ್ನುವುದು ಅವರ ವಿವರಣೆ.
ಇನ್ನು ಕಳಿಸು ಎಂಬ ಪದದ ಬಗ್ಗೆ:
ವ್ಯಾಕರಣದ ನಿಯಮಗಳು ಎಲ್ಲ ಪದಗಳ ರೂಪವನ್ನೂ ವಿವರಿಸಲಾರವು ಅನ್ನುವುದಕ್ಕೆ ಉದಾಹರಣೆಯಾಗಿ ಇದನ್ನು ಹೇಳಿದ್ದೆ.
ನೋಡಿ, ಇಸು ಮಾತ್ರವಲ್ಲ, ಪು, ಹು, ಇವು ಕೂಡ ಪ್ರತ್ಯಯಗಳೇ. ಮುಡುಹು, ಮುಡಿಪು ಇತ್ಯಾದಿಗಳಲ್ಲಿ ಮುಡಿ ಎಂಬ ರೂಪಕ್ಕೆ ಪು, ಹು, ಇತ್ಯಾದಿ ಸೇರಿವೆ. ಕಳುಹು ಅನ್ನುವುದನ್ನು ಮೂಲ ರೂಪ ಅನ್ನುವುದು ಸರಿಯಾಗದು. ಕಳುಹಿಸು ಅನ್ನುವುದರಲ್ಲಿ ಕಳುಹು ಮತ್ತು ಇಸು ಮಾತ್ರ ಅಲ್ಲ, ಮೊದಲಿನ ಹು (ನಡುಗನ್ನಡದಲ್ಲಿ ಪು) ಕೂಡ ಇದೆ. ಹಾಗಿದ್ದರೆ ಕಳ್ ಅನ್ನುವುದು ಮೂಲವೆನ್ನೋಣವೇ? ಧಾತುಗಳಿಗೆ, ಅಂದರೆ ಕ್ರಿಯಾಪದದ ಮೂಲರೂಪಕ್ಕೆ ಎರಡು ಅರ್ಥಗಳು ಸಾಮಾನ್ಯವಾಗಿ ಇರುವುದಿಲ್ಲ. ಕಳವು ಅನ್ನುವ ಪದದಲ್ಲಿ ಕೂಡ ಕಳ ಅನ್ನುವ ಮೂಲರೂಪಕ್ಕೆ ವು ಎಂಬ ಪ್ರತ್ಯಯ ಸೇರಿ ನಾಮಪದ ಹುಟ್ಟಿದೆ. ಭಾಷೆಯಲ್ಲಿ ಇಂಥ ಸ್ವಾರಸ್ಯದ ತೊಡಕುಗಳು ಅನೇಕವಿವೆ. ಅವುಗಳದೇ ಬೇರೆ ಲೋಕ. ಕೊಂಚ ಯೋಚಿಸಿದರೆ ಕನ್ನಡದ ಸಾಮಾನ್ಯ ಪದ "ಆದರೆ" ಕೂಡ ಸಮಸ್ಯಾತ್ಮಕವೇ. ಅದರಲ್ಲಿ ಆಗು ಅನ್ನುವುದು ಮೂಲ ರೂಪ. ಹಿಂದೆ ಒಡೆ ಎಂಬ ಪ್ರತ್ಯಯವಿತ್ತು. ಆದೊಡೆ ಅನ್ನುವುದು ಹಳಗನ್ನಡ ನಡುಗನ್ನಡದಲ್ಲಿ ಸಿಗುತ್ತದೆ. ಒಡೆ ಅನ್ನುವುದು ಅರೆ ಎಂದು ಬದಲಾಗಿದ್ದು ನಡುಗನ್ನಡ ಕಾಲದಲ್ಲಿ. ಸುಮಾರು ೧೪ನೆಯ ಶತಮಾನ. ಆದರೆ (!) ಆದೊಡೆ ಅನ್ನುವುದು ಭೂತಕಾಲ ಸಂಬಂಧಿಯಾಗಿತ್ತು. ನುಡಿದೊಡೆ ಮುತ್ತಿನ ಹಾರ ಇತ್ಯಾದಿ. ಹೊಸಗನ್ನಡದಲ್ಲಿ ಭೂತವಲ್ಲದ (ನಾನ್ ಪಾಸ್ಟ್) ಎಂಬ ಅರ್ಥದಲ್ಲಿ ಬಳಕೆಯಾಗುತ್ತಿದೆ. ಯಾಕೆ, ಹೇಗೆ, ಬಲು ದೊಡ್ಡ ಪ್ರಶ್ನೆಗಳು.
ಕೇವಲ ಸರಿ ಮತ್ತು ತಪ್ಪು ರೂಪಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ವ್ಯರ್ಥ. ಜನಕ್ಕೆ ಅರ್ಥವಾಗುವ, ಜನ ಬಳಸುತ್ತಿರುವ ರೂಪಗಳೆಲ್ಲವೂ ಸರಿಯೇ. ಶಿಷ್ಟರೂಪ ಯಾರೊಬ್ಬರ ಇಚ್ಛೆಯಿಂದ ನಿರ್ಧಾರಿತವಾಗುವುದಿಲ್ಲ. ವ್ಯಾಕರಣ ಅಂಕುಶವಲ್ಲ, ಭಾಷಾ ಸತ್ಯದ ವಿವರಣೆಯ ಪ್ರಯತ್ನ, ಅಷ್ಟೆ.

  • ಪ್ರಬಂಧ
Ornamental seperator
  • Login or register to post comments
  • 834 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 11, 2006 - 9:41am — ಮಹೇಶ ಭೋಗಾದಿ

ಸವಿಯೊದಗು

ಮಹೇಶ ಭೋಗಾದಿ's picture

ನಿಮ್ಮ ಈ ವಿವರಣೆಗೆ ಸವಿಯೊದಗು.

"ಕಳುಹಿದನು, ಕಳುಹಿಸಿದನು" ಇವೆರಡರ ಅರ್ಥ-ವ್ಯತ್ಯಾಸವನ್ನು ದಯವಿಟ್ಟು ತಿಳಿಸಿರಿ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪದಬೆಳಗು:೨: ಬದುಕು!
  • ಭಾಷೆಯಲ್ಲಿ ಸರಿ ಮತ್ತು ತಪ್ಪು
  • Thanks , ನನ್ನಿ ಮತ್ತು ಸವಿಯೊದಗು
  • ಮಡಿ ಭಾಷೆ, ಮಡಿ ಭಾಷೆ
  • ವಚನ ಚಿಂತನ: ೭: ಮನಸ್ಸು – ಆಸೆ - ಮಾಯೆ
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 1:29pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.

ಅನುಭವದ ಪಾಲೊಳು ವಿಚಾರ ಮಂಥನವಾಗೆ |
ಜನಯಿಕುಂ ಜ್ಞಾನನವನೀತವೆ ಸುಖದಂ ||
ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ |
ನಿನಗೆ ಧರುಮದ ದೀಪ -- ಮಂಕುತಿಮ್ಮ ||

— ಡಿ ವಿ ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator