ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಪತಂಜಲಿಯ ಯೋಗ ಭಾಗ ೩

August 19, 2005 - 4:30pm — R M Rao

ಪತಂಜಲಿಯ ಯೋಗ

ಮೂರನೆಯ ಲೇಖನ
ವೃತ್ತಿಗಳು ಮನಸ್ಸಿನಲ್ಲಿ ಏಳುವುದನ್ನು ಕಡಿಮೆ ಮಾಡಲು ಎಡಬಿಡದೆ ಮಾಡುವ ಪ್ರಯತ್ನವೇ ಅಭ್ಯಾಸ.ಯೋಗ ಸೂತ್ರ.ಪಾದ೧. ಸೂತ್ರ.೧೩
ಈ ಪ್ರಯತ್ನವನ್ನು ಧೀ‍ರ್ಘ ಕಾಲ ನಿರಂತರವಾಗಿ ಒಳ್ಳೆಯ ಮನಸ್ಸಿನಿಂದ ಮಾಡಿದಲ್ಲಿ ಕ್ರಮೇಣ ವೃತ್ತಿಗಳು ಮನಸ್ಸಿನಲ್ಲಿ ಏಳುವುದು ಕಡಿಮೆಯಾಗುತ್ತದೆ.

ಯೋಗ ಸೂತ್ರ.ಪಾದ೧. ಸೂತ್ರ.೧೪
ನಮಗಿರುವ ಅನುಭವಗಳೆಲ್ಲಾ ಪಂಚೇಂದ್ರಿಯಗಳ ಮೊಲಕ ಸಿಗುತ್ತದೆ. ಆದನ್ನು ಸ್ಮೃತಿ ನೆನಪಿನಲ್ಲಿಟ್ಟುಕೊಂಡಾಗ 'ನನ್ನತನ' ‍ಉಂಟಾಗುತ್ತದೆ. ನಾವು

ನೋಡಿದ, ಕೇಳಿದ ಮತ್ತು ಅನುಭವಿಸಿದ ವಿಷಯಗಳ ಬಗ್ಗೆ ದಾಹಪಡುವುದನ್ನು ಬಿಟ್ಟಾಗ ಮನಸ್ಸಿನಲ್ಲಿ ವೈರಾಗ್ಯ ಉಂಟಾಗುತ್ತದೆ. ವಿರಾಗದಿಂದ ವೈರಾಗ್ಯ.
ವಿರಾಗ ಎಂದರೆ ರಾಗವಿಲ್ಲದಿರುವಿಕೆ. ಸುಖಬೇಕೆನ್ನುವ ಆಶಯವೇ ರಾಗ ಎಂದು ಪತಾಂಜಲಿಯ ಯೋಗ ಸೂತ್ರ.ಪಾದ೨. ಸೂತ್ರ.೭ ಹೇಳುತ್ತದೆ. ಇಲ್ಲಿ

ನಾನು ಹೇಳಿರುವುದು ಭಾವಾ‍ರ್ಥ(ಸುಖವನ್ನು ಬೆಂಬಿಡದೆ ಬರುವುದು ರಾಗ:ವಾಕ್ಯಾ‍ರ್ಥ).
ಅಭ್ಯಾಸವನ್ನು ಪ್ರಜ್ಞಾಪೂರ್ವಕವಾಗಿ ಮಾಡಬೇಕು ಮತ್ತು ವೈರಾಗ್ಯವನ್ನು ಸಹ ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಳ್ಳಬೇಕು. ಆಗ ನಮ್ಮ ಮನಸ್ಸಿನ ಸ್ಥಿತಿಯನ್ನು

ಅವಲಂಬಿಸಿ ಕೆಲವರಿಗೆ ಬೇಗ, ಕೆಲವರಿಗೆ ಮಧ್ಯಮ, ಕೆಲವರಿಗೆ ನಿಧಾನವಾಗಿ ಸಂಪ್ರಜ್ಞಾತ ಎಂಬ ಮನಸ್ಸಿನ ಸ್ಥಿತಿ ಉಂಟಾಗುತ್ತದೆ.
ಆದರೆ ಇದೇ ಸ್ಥಿತಿ ಈಶ್ವರನ ಕರುಣೆಯಿಂದ ತಾನೇತಾನಾಗಿ ಸಿಗಬಹುದು. ಎಂದರೆ ಪೂ‍ರ್ವ ಜನ್ಮದ ಪುಣ್ಯವಿರಬಹುದು;ಇನ್ನೇನಾದರೂ ಇರಬಹುದು. ಇದು

ಏಕೆ ಹೀಗೆ ಎಂದು ಹೇಳಲಾಗದು. ಹೀಗೆ ಹೇಳಿದ ಪತಾಂಜಲಿಯ ಸೂತ್ರಗಳಲ್ಲಿ ಈಶ್ವರ ಯಾರು ಎಂಬ ಪ್ರಶ್ನೆಗೂ ಉತ್ತರ ಸೂತ್ರ.ಪಾದ೧. ಸೂತ್ರ.೨೪ರಲ್ಲಿ

ಸಿಗುತ್ತದೆ. ಕ್ಲೇಷ, ಕರ್ಮ, ವಿಪಾಕ, ಆಶಯ ಇವುಗಳಿಂದ ಹೊರತಾಗಿರುವ ವಿಷೇಷ-ಪುರುಷನೇ ಈಶ್ವರ.
ಈ ಒಂದು ಸೂತ್ರದಿಂದ ಅದೆಷ್ಟು ವಿಷಯಗಳನ್ನು ಹಿರಿಯಬಹುದು ನೋಡೋಣ!
೧.ಕ್ಲೇಷ(ಐದು ಕ್ಲೇಷಗಳು ಯಾವುವೆಂದರೆ ಅವಿದ್ಯಾ, ಅಸ್ಮಿತ, ರಾಗ, ದ್ವೇಷ ಮತ್ತು ಅಭಿನಿವೇಶ. ಇವುಗಳ ಬಗ್ಗೆ ಮುಂದೆ ಚ‍ರ್ಚಿಸಬಹುದು), ಕರ್ಮ

(ಮಾಡಿದ ಕೆಲಸದ ಫಲವೇ ಕರ್ಮ; ಮಾಡುವ ಕೆಲಸವೇ ಕರ್ಮ ಎಂದೂ ಸಂಧ‍ರ್ಭಾನುಸಾರ ಆಗಬಹುದು), ವಿಪಾಕ(ಕರ್ಮ ಮತ್ತು ಆಶಯಗಳು ಈ

ಜನ್ಮದಲ್ಲಿ ಫಲ ಕೊಡದಿದ್ದಲ್ಲಿ ವಿಪಾಕವಾಗಿ ಜನ್ಮಜನ್ಮಾಂತರಕ್ಕೆ ಮುಂದುವರೆಯುತ್ತದೆ), ಆಶಯ(ಪೂ‍ರ್ಣವಾಗದ ಆಸೆಗಳೇ ಆಶಯಗಳು;ಕರ್ಮ ಮತ್ತು

ಆಶಯಗಳು ಕ್ಲೇಷಕ್ಕೆ ಕಾರಣವಾಗುತ್ತದೆ) ಇವುಗಳಿಂದ ಹೊರತಾಗಿರುವ ದೃಷ್ಟನೇ ಪುರುಷ.
೨.ಕ್ಲೇಷ, ಕರ್ಮ, ವಿಪಾಕ, ಆಶಯ ಇವುಗಳಿಂದ ಹೊರತಾಗದ ಸ್ಥಿತಿಯೇ ದೃಷ್ಟನ ವೃತ್ತಿ ಸಾರೂಪ್ಯ(ಎಂದರೆ ಸಾಮಾನ್ಯ ಸ್ಥಿತಿ-ಸಂಯೋಗ).
೩.ಯೋಗದಿಂದ ಎರಡನೆಯ ಸ್ಥಿತಿಯಿಂದ ಮೊದಲನೆಯ ಸ್ಥಿತಿಗೆ ಹೋಗಬಹುದು.
೪.ಪುರುಷ ಸ್ಥಿತಿಗೆ ಹೋದಮೇಲೆ ಮತ್ತೆ ಹುಟ್ಟುವ ಅಥವ ಸಾವಿನ ಪ್ರಶ್ನೆ ಬರುವುದಿಲ್ಲ. ಇದೇ ಕೈವಲ್ಯ. ಸತ್+ಚಿತ್+ಆನಂದದ ಸ್ಥಿತಿ.
೫.ಪುರುಷ ಸ್ಥಿತಿಯಲ್ಲಿ ಅನೇಕ ದೃಷ್ಟರು ಇರಬಹುದು. ಆದರೆ ವಿಷೇಷ-ಪುರುಷ ಒಬ್ಬನೇ.
ಈ ವಿಷೇಷ-ಪುರುಷನು ಅನಂತ(ಮೊದಲು-ಕೊನೆಯಿಲ್ಲದವನು), ಸ‍ರ್ವಜ್ಞ(ಎಲ್ಲಾ ಜ್ಞಾನವನ್ನೂ ಹೊಂದಿರುವವನು).ಯೋ.ಸೂ.ಪಾದ೧. ಸೂತ್ರ.೨೫
ಮೊದಲಿನಿಂದಲೂ ಈಶ್ವರನೇ ಗುರು-ಅವನು ಕಾಲದಿಂದ ಹೊರತಾಗಿದ್ದಾನೆ.ಯೋ.ಸೂ.ಪಾದ೧. ಸೂತ್ರ.೨೬
ಅವನನ್ನು ಪ್ರತಿನಿಧಿಸುವ ಶಬ್ದ ಓಂ.ಯೋ.ಸೂ.ಪಾದ೧. ಸೂತ್ರ.೨೭
ಅದನ್ನು ಜಪಿಸಿ ಅದರ ಅರ್ಥವನ್ನು ಮನನಮಾಡಬೇಕು.ಯೋ.ಸೂ.ಪಾದ೧. ಸೂತ್ರ.೨೮
ಅದರಿಂದ ಮನಸ್ಸು ವಿಕಾಸಹೊಂದುವುದಲ್ಲದೆ ಯೋಗಕ್ಕೆ ಬರುವ ತಡೆಗಳ ನಿವಾರಣೆಯಾಗುತ್ತದೆ.ಯೋ.ಸೂ.ಪಾದ೧. ಸೂತ್ರ.೨೯
ಯೋಗಕ್ಕೆ ಬರುವ ತಡೆಗಳು ಯಾವುವೆಂದರೆ -ವ್ಯಾಧಿ, ಸ್ತ್ಯಾನ, ಸಂಶಯ, ಪ್ರಮಾದ, ಆಲಸ್ಯ, ಅವಿರತಿ, ಭ್ರಾಂತಿದ‍ರ್ಶನ, ಅಲಭ್ದಭೂಮಿಕತ್ವ ಮತ್ತು

ಅನವಸ್ಥಿತತ್ವ.ಯೋ.ಸೂ.ಪಾದ೧. ಸೂತ್ರ.೩೦
ದುಃಖ,ದೌ‍ರ್ಮನಸ್ಯ,ಅಂಗಮೇಜಯತ್ವ,ಶ್ವಾಸ,ಪ್ರಶ್ವಾಸಗಳು ತಡೆಗಳ ಜೊತೆಗೇ ಇರುವ ಅಡ್ಡಿ-ಅಡಚಣೆಗಳು.ಯೋ.ಸೂ.ಪಾದ೧. ಸೂತ್ರ.೩೧
ಇವುಗಳ ಬಗ್ಗೆ ಹೆಚ್ಚಿನ ವಿವರಣೆ ಮುಂದಿನ ಲೇಖನದಲ್ಲಿ ನೋಡಬಹುದು.

೧೯/೮/೦೫
ಮುಂದುವರೆಯುವುದು...

  • ಅಧ್ಯಾತ್ಮ
~.~
  • Login or register to post comments
  • 741 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 19, 2005 - 6:57pm — tvsrinivas41

ಈಶ್ವರನ ಕರುಣೆ

tvsrinivas41's picture

ಪ್ರತಿ ಒಂದು ಭಾಗ ಓದಿದಾಗಲೂ ಇನ್ನೂ ಹೆಚ್ಚು ತಿಳಿದುಕೊಳ್ಳುವ ಬಯಕೆ ಆಗುತ್ತಿದೆ. ಚೆನ್ನಾಗಿ ನಿರೂಪಿಸುತ್ತಿದ್ದೀರ.

ಮೇಲೆ ಹೇಳಿದಂತೆ ಈಶ್ವರನ ಕರುಣೆ ತಾನೇ ತಾನಾಗಿ ಆಗಿರುವ ನಿದರ್ಶನವಿದೆಯೇ? ಶಂಕರಾಚಾರ್ಯರು ಬಹಳ ಚಿಕ್ಕ ವಯಸ್ಸಿನಲ್ಲೇ ಈ ಸ್ಥಾನಕ್ಕೇರಿದ್ದರು ಎಂದು ಕೇಳಿರುವೆ. ಅವರಿಗೆ ಹೀಗೆ ಆಗಿತ್ತೇ?

---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 20, 2005 - 6:52am — R M Rao

ಈಶ್ವರನ ಕರುಣೆ

R M Rao's picture

ಈಶ್ವರನ ಕರುಣೆಗೆ ಬೇಕಾದಷ್ಟು ನಿ‍ದ‍ರ್ಶನಗಳಿವೆ. ಅತ್ಯುತ್ತಮ ಉದಾಹರಣೆ ಎಂದರೆ ಕಡುಲೋಭಿ ಶ್ರೀನಿವಾಸ ನಾಯಕ ಪುರಂದರ ದಾಸರಾಗಿದ್ದು! ಹಾಗೆಯೇ ಕನಕದಾಸರು,ಮಹಿಪತಿದಾಸರು, ವಿಜಯದಾಸರ ಉದಾಹರಣೆ ಇದೆ. ಇದರಲ್ಲಿ ಪೂ‍ರ್ವಜನ್ಮದಿಂದ ಬಂದ ಪುಣ್ಯವಿದ್ದು ಒಂದು ವ್ಯಕ್ತಿ ಅಥವಾ ಘಟನೆಯೊಂದಿಗೆ ಮನಸ್ಸಿನ ಎಲ್ಲಾ ಆವರಣಗಳೂ ಒಂದೇ ಸಲಕ್ಕೆ ಅಳಿಸಿಹೋಗುತ್ತವೆ.
ನಿಜವಾದ ಗುರುಗಳೂ ಇದರಲ್ಲಿ ಪಾತ್ರ ವಹಿಸಬಹುದು.ಮೊದಲೇ ಹೇಳಿದಂತೆ ಇದು ಏಕೆ ಹೀಗೆ ಎಂದು ಹೇಳಲಾಗದು.
ಶಂಕರಾಚಾರ್ಯರ ಬಗೆಗೆ ನನಗೆ ಗೊತ್ತಿಲ್ಲ. ಬಹುಶಃ ಅವರು, ಮಧ್ವಾಚಾ‍ರ್ಯರು ಇವರೆಲ್ಲರಿಗೂ ಹುಟ್ಟಿನಿಂದಲೇ ಜ್ಞಾನವಿತ್ತೆಂದು ತೋರುತ್ತದೆ.
ಸಿದ್ಧಿಗಳು ಜನ್ಮ ಔಷಧಿ ಮಂತ್ರ ತಪಸ್ಸು ಮತ್ತು ಸಮಾಧಿಯಿಂದ ಹುಟ್ಟುತ್ತವೆ ಎಂದು ಯೋ.ಸೂ.ಪಾದ೪. ಸೂತ್ರ.೧ರಲ್ಲಿ ಹೇಳಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 20, 2005 - 6:29pm — muralihr

ಈಶ್ವರನ ಕರುಣೆ

muralihr's picture

ಅಲ್ಲಾ -- ಈ ಪತಾಂಜಲಿಯ ಯೋಗದ ಬಗ್ಗೆ ಓದುವುದೆ ಈಶ್ವರನ ಕರುಣೆಗೆ ಒ೦ದು ನಿದರ್ಶನ.
ಇರುವ ನಿದರ್ಶನವನ್ನು ಬಿಟ್ಟು ಇಲ್ಲದೆ ಇರುವ ನಿದರ್ಶನ ಏಕೆ ?
ಕರುಣೆ ಕೇವಲ ಕೆಲವರ ಮೇಲೆ ಇದ್ದಿದ್ದರೆ .. ಈಶ್ವರ ಈಶ್ವರನಾಗುತ್ತಿರಲಿಲ್ಲಾ ನಮ್ಮ ಹಾಗೆ ಮನುಷ್ಯನಾಗಿರುತ್ತಿದ್ದಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 21, 2005 - 6:21pm — R M Rao

ಈಶ್ವರನ ಕರುಣೆ

R M Rao's picture

ಯೋಗದ ಬಗ್ಗೆ ನಾವು ಇಂದು ಓದುತ್ತಿದ್ದರೆ ಅದು ಪತಂಜಲಿಯ ಕೃಪೆ/ಕರುಣೆಯಿಂದ ಎಂದೆನ್ನುವದು ಸೂಕ್ತ. ಏಕೆಂದರೆ ಯೋಗದ ಬಗ್ಗೆ ಇದ್ದ ಜ್ಞಾನವನ್ನೆಲ್ಲಾ ಸಂಗ್ರಹಿಸಿ ಸೂತ್ರಗಳಲ್ಲಿ ಹೇಳಿರದಿದ್ದರೆ ನಮಗೆ ಇಂದು ಇರುವ ಮಾಹಿತಿ ಇರುತ್ತಿತ್ತೋ ಇಲ್ಲವೋ ಯಾರಿಗೆ ಗೊತ್ತು?. ಯೋಗದಲ್ಲಿ ಆಚರಣೆ ಮುಖ್ಯ.

ಸಿಧ್ಧಾಂತವಲ್ಲ. ನನಗೆ ತಿಳಿದಂತೆ ಇಷ್ಟು ಕರಾರುವಾಕ್ಕಾಗಿ ಹೆಜ್ಜೆಹೆಜ್ಜೆಗೂ ಹೀಗೆ ಮಾಡಿದರೆ ಹೀಗಾಗುತ್ತದೆ ಎಂಬ ಆತ್ಮದ ಬಗ್ಗೆ ವಿವರೆಣೆಯುಳ್ಳ

ಜ್ಞಾನಭಂಡಾರ ಇದೂಂದೇ.
ಈಶ್ವರನ ಕರುಣೆ ಎಂಬುದು ಬೇರಾವುದರಿಂದಲೂ ಹೇಳಲಾಗದ/ವಿವರಿಸಲಾಗದ ಘಟನೆ/ಸ್ಥಿತಿಗೆ ಹೆಸರು. ಒಂದು ಸಣ್ಣ ಉದಾಹರಣೆ. ಯೋಗ

ಮಾಡುವವರಿಗೆಲ್ಲಾ ಮುಂದಿನ ಸ್ಥಿತಿ ಸಿಕ್ಕೇಸಿಗುತ್ತದೆ ಎಂದು ಹೇಳಲಾಗದು. ಒಬ್ಬ ಯೋಗಿ ಜೀವಮಾನವೆಲ್ಲಾ ಯೋಗದಲ್ಲಿ ತಲ್ಲೀನನಾಗಿದ್ದರೂ ಸಬೀಜ/ನಿ‍‍ರ್ಬೀಜ ಸಮಾಧಿ ಸ್ಥಿತಿಯನ್ನು ಸೇರದಿರಬಹುದು. ಮತ್ತೊಬ್ಬನಿಗೆ ಅದು ಸುಲಭವಾಗಿ ೭ ವ‌ರ್ಷಕ್ಕೇ ಸಿಗಬಹುದು.
ಈಶ್ವರನ ಕರುಣೆ ಇದ್ದರೆ ಮಾತ್ರ ಯೋಗದಲ್ಲಿ ಮುಂದುವರೆಯಲು ಸಾಧ್ಯ;ಇಲ್ಲದಿದ್ದರೆ ಇಲ್ಲ. ಇದೂ ಯೋಗದ (ಹೇಳದ) ನಿಯಮ.
ರಾವ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 20, 2005 - 7:54pm — pavanaja

ಪತಂಜಲಿಯೋ ಪತಾಂಜಲಿಯೋ?

pavanaja's picture

ನಿಮ್ಮ ಲೇಖನ ಚೆನ್ನಾಗಿದೆ. ನನಗೆ ಒಂದು ಚಿಕ್ಕ ಸಂದೇಹ. ಪತಂಜಲಿ, ಪತಾಂಜಲಿ -ಇವುಗಳಲ್ಲಿ ಯಾವುದು ಸರಿ? ನಾನು ಎಲ್ಲ ಕಡೆ ಪತಂಜಲಿ ಎಂದೇ ಓದಿದ ನನೆಪು. ಈಗಷ್ಟೇ ಕೆಲವು ಪುಸ್ತಕಗಳನ್ನು ತಿರುವಿ ಹಾಕಿದೆ. ಎಲ್ಲದರಲ್ಲೂ ಪತಂಜಲಿ ಎಂದೇ ಇದೆ. ಬಿ.ಕೆ.ಎಸ್. ಅಯ್ಯಂಗಾರರ ಯೋಗದೀಪಿಕಾದಲ್ಲೂ ಹಾಗೆಯೇ ಇದೆ. ಪತಂಜಲಿ ವಿರಚಿತ ಯೋಗ ಸೂತ್ರದ ಬಗ್ಗೆ ಬರೆಯುವಾಗ ಮಾತ್ರ ಪತಾಂಜಲಯೋಗ ಎಂಬುದಾಗಿ ಬರೆದಿದೆ.ಆದರೆ ಎಲ್ಲೂ ಪತಾಂಜಲಿಯ ಯೋಗ ಎಂದು ಬರೆದಿಲ್ಲ.

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 21, 2005 - 6:18pm — R M Rao

ಪತಂಜಲಿಯ ಯೋಗ

R M Rao's picture

ನಿಮ್ಮ ಅನಿಸಿಕೆ ಸರಿ. ಪಾತಂಜಲ ಯೋಗ ದ‍ರ್ಶನ ಎಂಬುದನ್ನು ಕನ್ನಡಿಸುವ ಭರದಲ್ಲಿ ತಪ್ಪಾಗಿದೆ. ಮುಂದಿನ ಸಲ ಸರಿಪಡಿಸುತ್ತೇನೆ. ತಪ್ಪನ್ನು ತೋರಿಸಿದ್ದಕ್ಕೆ ಧನ್ಯವಾದಗಳು.
ರಾವ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪತಂಜಲಿಯ ಯೋಗ : ಭಾಗ ೨
  • ಪತಂಜಲಿಯ ಯೋಗ ಭಾಗ ೪
  • ಪತಂಜಲಿಯ ಯೋಗ ಭಾಗ ೬
  • ಪತಂಜಲಿಯ ಯೋಗ ಅಂತಿಮ ಭಾಗ
  • ಪತಂಜಲಿಯ ಯೋಗ ಭಾಗ ೫
Syndicate content

ಲೇಖಕರು

R M Rao's picture

ಪರಿಚಯ

ನನ್ನ ಬಗ್ಗೆ ನಾನೇ ಹುಡುಕಾಟ ಪ್ರಾರಂಭ ಮಾಡಿ
ಈಗ ಯೋಗದ ಹಾದಿಯಲ್ಲಿ ಹುಡುಕಾಟ ಮುಂದುವರಿಸಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್
  • ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!
  • ವಿಧ್ಯಾಭ್ಯಾಸ ಮತ್ತು ಕಾಲೇಜು
  • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ

ಇತ್ತೀಚಿನ ಪ್ರತಿಕ್ರಿಯೆಗಳು

  • omshivaprakash
    ಉ: kannada kanda
    July 5, 2008 - 9:38am
  • hamsanandi
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 5, 2008 - 9:29am
  • Narayana
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:29am
  • omshivaprakash
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:20am
  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 7:09am
  • rameshbalaganchi
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 5:52am
  • ಕೇವೆಂ
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 1:42am
  • ahankari
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 12:58am
  • sushil
    ಉ: ನಿರಕ್ಷರಿ ಕವಿಯ ಅಕ್ಷರಗಾಥೆ
    July 5, 2008 - 12:48am
  • hpn
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 10:56pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 23 ಅತಿಥಿಗಳು ಆನ್ಲೈನ್ ಇರುವರು.


ಅರಿವನರಿಯದ ಗುರುವು | ಪರಿವನರಿಯದ ಶಿಷ್ಯ |
ಸಂದೆರಡು ವರ್ಗವರಿಯದಿರ್ದುಪದೇಶ |
ಕೊಂದುಕೊಂಡಂತೆ ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator