"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "
ಸಂಪದದಲ್ಲಿ...
ದೋನಿ v/s ಅಭಿಮಾನಿ
’ಟ್ವೆಂಟಿ20 ಸೋಲಿಗೆ ಗಾಯದ್ದೇ ಸಮಸ್ಯೆ’
ಅಭಿಮಾನಿಗಳ ಎದೆಗೂ ಗಾಯದ್ದೇ ಸಮಸ್ಯೆ!
’ಐಪಿಎಲ್ ಬಳಲಾಟ ಸೋಲಿಗೆ ಕಾರಣವಲ್ಲ’
ಅಭಿಮಾನಿಗಳ ತೊಳಲಾಟ ದಾರುಣವಾಗಿದೆಯಲ್ಲ!
’ಆಟಗಾರರಿಗೆ ವಿಶ್ರಾಂತಿ ಇರಲಿಲ್ಲ’
ಅಭಿಮಾನಿಗಳ ಮನಸ್ಸಿಗೆ ಶಾಂತಿ ಇಲ್ಲ!
’ಫಿಟ್ಟಾಗಿಲ್ಲದವರು ಆಟವಾಡಿದರು’
ಸಿಟ್ಟಾಗಿ ಅಭಿಮಾನಿಗಳು ಗಲಾಟೆಮಾಡಿದರು!
’ವೆಸ್ಟ್ ಇಂಡೀಸ್ನಲ್ಲಿ ನೋಡಿ, ಗೆಲುವಿನ ಓಟ’
’ಬೆಸ್ಟ್ ಲಕ್’ ಅನ್ನುತ್ತೆ ಅಭಿಮಾನಿ ಕೂಟ
- Login or register to post comments
- 222 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS: