ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಮಿಲಿ, ಆನಂದ್, ಗುಡ್ಡಿ ಯಂತಹ ಶ್ರೇಷ್ಟ ಹಿಂದಿ ಚಿತ್ರ ನಿರ್ಮಾಪಕ, ಹೃಷೀಕೇಶ್ ಮುಖರ್ಜಿ ನಿಧನ !

August 29, 2006 - 1:39pm — venkatesh

ಹಿಂದೀ ಚಿತ್ರರಂಗದ ಮಹಾನ್ ಹಸ್ತಿ, ಶ್ರೇ‍ಷ್ಟ ನಿರ್ದೇಶಕ, 'ಹೃಷಿದಾ', ತಮ್ಮ ೮೪ ನೆಯ ವಯಸ್ಸಿನಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ರವಿವಾರ, ೨೭ನೆ ಆಗಸ್ಟ್, ೨೦೦೬ ರಂದು ನಿಧನರಾದರು. ಅವರು ಸುಮಾರು ೩ ತಿಂಗಳಿನಿಂದ ಲೀಲಾವತಿಯಲ್ಲಿ ಚಿಕಿತ್ಸೆ ಪಡೆಯುತ್ತಲೇ ಇದ್ದರು. 'ಡಯಾಲಿಸಿಸ್' ನಿರಂತರವಾಗಿ ಮಾಡಿಸಿಕೊಳ್ಳುತ್ತಲೇ ಇದ್ದರು. ಹೋದವಾರ 'ನ್ಯುಮೋನಿಯ ಜ್ವರ'ದಿಂದ ಅವರ ಆರೋಗ್ಯ ತೀರ ಹದಗೆಟ್ಟಿತ್ತು. ಉಲ್ಬಣಗೊಂಡ ಜ್ವರ, ಈ ಬಾರಿ ಅವರ ಜೀವವನ್ನೇ ಆಹುತಿ ತೆಗೆದುಕೊಂಡಿತು. ಬಾರತೀಯ ಚಿತ್ರರಂಗಕ್ಕೆ ಸುಮಾರು ೫ ದಶಕಗಳಲ್ಲಿ ೪೬ ಮಹಾನ್ ಚಿತ್ರಗಳನ್ನು ಸಮರ್ಪಿಸಿದ ಹೃಷಿಕೇಶ್ ಮುಖರ್ಜಿಯವರಿಗೆ ಭಾರತಸರ್ಕಾರದ ಶ್ರೇಷ್ಟ ಪುರಸ್ಕಾರ, 'ಬಾಬಾಸಾಹೇಬ್ ಫಾಲ್ಕೆ ಪ್ರಶಸ್ತಿ' ೨೦೦೧ ರಲ್ಲಿ ದೊರೆಯಿತು. ಅವರು ತಯಾರಿಸಿದ 'ಝೂಟ್ ಬೊಲೆ ಕೌವ್ವ ಕಾಟೆ' ಆಂತಿಮ ಚಿತ್ರ, ಮಾತ್ರ ಹೆಚ್ಚಿನ ಯಶಸ್ಸು ಕಾಣಲಿಲ್ಲ. ಬೇರೆ ಎಲ್ಲಾ ಚಿತ್ರಗಳು ಒಂದಕ್ಕಿಂತ ಒಂದು ರಸವತ್ತಾದ "ದೃಶ್ಯ ಕಾವ್ಯ" ಗಳು ! "ಆನಂದ್" ಚಿತ್ರ ರಾಜೇಶ್ ಖನ್ನ, ಅಮಿತಾಬ್ ಬಚ್ಚನ್, ರವರನ್ನು ಯಶಸ್ಸಿನ ಶಿಖರಕ್ಕೆ ತೆಗೆದುಕೊಂಡು ಹೋಯಿತು ! ಹಾಗೆಯೆ ಕಿಶೊರ್ ಕುಮಾರ್, ಮನ್ನಾಡೆ, ಮುಖೆಶ್ ಕೂಡ ಹೆಸರುವಾಸಿಯಾದ ಗಾಯಕರಾದರು. ಅವರ ಇನ್ನು ಹೆಸರುಮಾಡಿದ ಚಿತ್ರಗಳೆಂದರೆ, ಬಾವರ್ಚಿ, ಚುಪ್ ಕೆ ಚುಪ್ ಕೆ, ಅನುರಾಧ, ಮುಸಾಫಿರ್, ಅನಾರಿ, ಸತ್ಯಕಾಮ್, ಗುಡ್ಡಿ, ನಮಕ್ ಹರಾಮ್, ಮಿಲಿ, ಇತ್ಯಾದಿ. ಮಧ್ಯಮವರ್ಗದ ಸಮಾಜದ ಜೀವನವನ್ನು, ನಿರೂಪಿಸಿ ಅದರ ತುಡಿತಗಳಿಗೆ ಸ್ಪಂದಿಸಿ, ಅದರ ನೊವು, ನಲುವಿನಲ್ಲಿ ಒಂದು ವಿಶೇಷ ಅನುಭವವನ್ನು ಉಣಬಡಿಸಿದ ಹೆಗ್ಗಳಿಕೆ ಅವರಿಗೆ ಸೇರಬೇಕು. ಚಿಕ್ಕ ಚಿಕ್ಕ ಸನ್ನಿವೇಶಗಳು ; ಉದಾಹರಣೆಗೆ, ಬಾವರ್ಚಿಯಲ್ಲಿ ರಾಜೇಶ್ ಖನ್ನ, ಪಾತ್ರೆ ತೊಳೆಯುತ್ತಾ, ಬಚ್ಚಲಿನ ಬಳಿ ಹಾಡುವ ಸನ್ನಿವೇಶದ ದೃಷೀಕರಣ, ಬಹುಶಃ ಹೃಷೀದಾ, ಒಬ್ಬರಿಗೆ ಮಾತ್ರ ಹೊಳೆಯ ಬಲ್ಲದು ! ಎಂತಹ ಅದ್ಭುತ ಸನ್ನಿವೇಶ ಅದು ! ಹೃಷೀದಾರ ತಮ್ಮ ಜೀವನದ ಕೊನೆಯಗಳಿಗೆಯಲ್ಲಿ ಅವರ ಪರಿವಾರದವರ್ಯಾರೂ ಹತ್ತಿರವಿರಲಿಲ್ಲ. ಕೊನೆಯ ಮಗನ ಸಾವಿನಿಂದ ಬಹಳ ನೊಂದಿದ್ದರು. ಒಬ್ಬ ಮಗ ಅಮೆರಿಕದಲ್ಲಿ ಇದ್ದರು. ಹೆಣ್ಣು ಮಕ್ಕಳೆಲ್ಲಾ ಅವರವರ ಕೆಲಸಗಳಲ್ಲಿ ನಿರತರಾಗಿದ್ದರು. ತಮ್ಮ ಆಪ್ತ ಕಾರ್ ಚಾಲಕ, ವಾಚ್ ಮನ್, ಮತ್ತು ೪-೫ ಸಾಕು ನಾಯಿಗಳೇ ಅವರ ಸಂಗಾತಿಗಳು ! ಮನರಂಜನೆಗೆ, ಚಾರ್ಲಿ ಚಾಪ್ಲಿನ್ ಡಿವಿಡಿ ಗಳು. ಬಾಲಿವುಡ್ ನ ಯಾವ ವ್ಯಕ್ತಿಗಳು ಬಂದು ಹೋಗುತ್ತಿರಲಿಲ್ಲ. ತಿಳಿನಗೆಯ ಹಾಸ್ಯದ ಹೊನಲನ್ನೇ ಹರಿಸಿದ, ಅಶ್ಲೀಲತೆಯ ಲೇಪವಿಲ್ಲದ, ಜೀವನ ಮೌಲ್ಯಗಳನ್ನು ಸಾರುವ ಶುದ್ಧ, 'ಚೊಕ್ಕ ಬಂಗಾರ'ವನ್ನು ಅವರ ಚಿತ್ರಗಳಲ್ಲಿ ಕಾಣುತ್ತೇವೆ. ಇಂದಿಗೂ ಅವರ ಚಿತ್ರಗಳು ಪ್ರಸ್ತುತ. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಮನರಂಜನೆ ಪಡೆಯಬಹುದಾದ ಭವ್ಯ ಪರಂಪರೆಯನ್ನು ಮತ್ತೆ ಕಾಣಲು ಸಾಧ್ಯವೇ ? ಈ ದಿನ (೨೯-೦೮-೨೦೦೬)ಮುಂಬೈನ "ಶಿವಾಜಿ ಪಾರ್ಕ್ ಸ್ಮಶಾನ" ದಲ್ಲಿ ಮಧ್ಯಾನ್ಹ ೩ ಘಂಟೆಗೆ ದಹನಕ್ರಿಯೆ ನಡೆಸಲಾಗುವುದು. ಅವರ ಆತ್ಮಕ್ಕೆ ಶಾಂತಿ ಕೊರೊಣ !! ಹೃಷೀದಾ ರವರ ಬಗ್ಗೆ ಓದ ಬಹುದು :http://hrl4venkatesh.blogspot.com

  • ಪ್ರಚಲಿತ
~.~
  • Login or register to post comments
  • 578 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈ ವರ್ಷದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ - ಶ್ಯಾಮ್ ಬೆನೆಗಲ್ !
  • "ಓದುವ ಸುಖ, ಬರೆಯುವ ಸುಖ....." - ಒಂದು ಚಿಂತನೆಗೆ ಹಚ್ಚುವ ಲೇಖನ
  • ಹಿರಿಯ ಗೌರವಾನ್ವಿತ ನಟ, ದಿಲೀಪ್ ಕುಮಾರ್ ರವರಿಗೆ ೨೦೦೭ ರ, " ದಾದಾಸಾಹೇಬ್ ಫಾಲ್ಕೆ ರತ್ನ ಪ್ರಶಸ್ತಿ".
  • ಕನ್ನಡದಲ್ಲಿ ಸೈನ್ಸ್ ಫಿಕ್ಷನ್
  • "ಮುಂಗಾರು ಮಳೆ" ಮತ್ತು "ದ್ವೀಪ"
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
  • ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
  • ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ
  • ಮರಳಿ ಬರಲಿ ಬಾಲ್ಯ

ಇತ್ತೀಚಿನ ಪ್ರತಿಕ್ರಿಯೆಗಳು

  • ಪ್ರವೀಣ್
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 7, 2008 - 9:45am
  • mahesha
    ಉ: ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
    October 7, 2008 - 9:45am
  • srinivasps
    ಉ: ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
    October 7, 2008 - 9:16am
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 8:48am
  • mahesha
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
    October 7, 2008 - 8:45am
  • savithasr
    ಉ: ಗಾಂಧೀಸ್ಮರಣೆ
    October 7, 2008 - 8:28am
  • Sunil Jayaprakash
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
    October 7, 2008 - 8:01am
  • shylaswamy
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
    October 7, 2008 - 7:58am
  • Sunil Jayaprakash
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
    October 7, 2008 - 7:57am
  • Sunil Jayaprakash
    ಉ: ಸ್ವಲ್ಪನಗಿ
    October 7, 2008 - 7:42am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 78 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator