ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಕುವೆಂಪುರವರ ಒಂದು ಪ್ರಬಂಧ - ಬೇಟೆಗಾರರು ಕಬ್ಬಿಗರಾದ ಪ್ರಸಂಗ

September 20, 2006 - 11:59pm — hpn

ಕಾಡಿನಲ್ಲಿ ಒಂದು ರಾತ್ರಿ ಕಳೆಯುವ ಸೌಭಾಗ್ಯ ದೊರೆತರೆ ಆ ಅನುಭವವನ್ನು ಹೇಗೆ ಹಂಚಿಕೊಳ್ಳುತ್ತೀರಿ? ಅಲ್ಲಿ ನೀವು ಅನುಭವಿಸಿದ ಪ್ರಕೃತಿಯ ಸಿರಿ, ಮನದ ವಿಕೃತಿ, ಭಯ, ಇವೆಲ್ಲವನ್ನೂ ಹೇಗೆ ಬಣ್ಣಿಸುತ್ತೀರಿ? ಕುವೆಂಪು ಬರೆದ "ಕಾಡಿನಲ್ಲಿ ಕಳೆದ ಒಂದಿರುಳು" ಬಹುಶಃ ಈ ದಿಶೆಯಲ್ಲಿ ಒಳ್ಳೆಯ ಓದು.

ಮೊನ್ನೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೊಂಡು ತಂದ ಒಂದು ಪುಸ್ತಕದಲ್ಲಿ ಕುವೆಂಪುರವರು ಬರೆದ ಈ ಪ್ರಬಂಧವೂ ಇತ್ತು. ಕುವೆಂಪು ಬರೆದದ್ದು ಎಂದ ಮೇಲೆ ಸಹಜವಾಗಿ ಉಳಿದ ಪ್ರಂಬಂಧಗಳಿಗಿಂತ ಹೆಚ್ಚು ಆಸಕ್ತಿ ಮೂಡುತ್ತದೆ. ಸಾಯಂಕಾಲ ಬೇಟೆಗಾರರಾಗಿ ಅರಣ್ಯ ಹೊಕ್ಕ ಮೂರು ಸ್ನೇಹಿತರು ಮುಂಜಾನೆ ಕಬ್ಬಿಗರಾಗಿ ಮನೆಗೆ ಮರಳಿದ್ದುದರ ವ್ಯಾಖ್ಯಾನ ಕಾವ್ಯಭರಿತವಾಗಿ, ಸ್ವಾರಸ್ಯಕರವಾಗಿ ಬರೆಯಲ್ಪಟ್ಟಿದೆ.

ಕುವೆಂಪು ಬರೆದದದ್ದನ್ನು ನಾನು ಹೆಚ್ಚು ಓದಿಲ್ಲ, ಆದರೆ ಅವರಿಗೆ ಬೆಳ್ದಿಂಗಳು ಎಷ್ಟು ಪ್ರಿಯವಾದುದು ಎಂಬುದಕ್ಕೆ ಇದೊಂದು ಪ್ರಬಂಧವೇ ಸಾಕು. ಬೆಳ್ದಿಂಗಳಿನ ರಸಾಸ್ವಾದ ಕಾವ್ಯಮಯವಾಗಿ ಗದ್ಯದಲ್ಲೇ 'embed' ಆಗಿದೆ, ಈ ಪ್ರಬಂಧದಲ್ಲಿ.

ನಮ್ಮಲ್ಲಿ ಹಲವರು ಕಾಡಿನಲ್ಲಿ 'ಟ್ರೆಕ್' ಮಾಡಿದ್ದುಂಟು, ಆದರೆ ಬೇಟೆಯಾಡಿದವರು ಇಲ್ಲವೇ ಇಲ್ಲ ಎಂಬುದು ಹೆಚ್ಚು ತಲೆಕೆಡಿಸಿಕೊಳ್ಳದೆ ಹೇಳಬಹುದು. ಹೀಗಾಗಿ ಬೇಟೆಯ ವಿವರ ಹೆಚ್ಚು ಆಸಕ್ತಿದಾಯಕವೂ, appealing ಆಗಿಯೂ ಕಾಣುವ ಸಂದರ್ಭ ಹೆಚ್ಚು.

ಕೋವಿಯಲ್ಲಿದ್ದ ತೋಟಾಗಳನ್ನು ತೆಗೆದು ಜೀಬಿಗೆ ಹಾಕಿಕೊಂಡು, ಬಂದೂಕನ್ನು ಕುತ್ತಿಗೆ ಕಂಕುಳುಗಳ ಸಹಾಯದಿಂದ ಭದ್ರವಾಗಿ ಹಿಡಿದುಕೊಂಡು, ಮರವನ್ನೂ ಜೀವವನ್ನೂ ಕೈಯಲ್ಲಿ ಹಿಡಿದು ಅಟ್ಟಣಿಗೇರಿದೆ.

ಎಂಬುದನ್ನು ಓದುವಾಗ ಹೊಸತೊಂದು ಅನುಭವದ ರಸಾಸ್ವಾದವಾಗುತ್ತದೆ.

ಕಡೆಗೆ ತಡೆದಷ್ಟೂ ಪ್ರಬಲವಾಗಿ ಟಗರಿನಂತೆ ಸೀನಿ, ಕೆಮ್ಮಿಯೂ ಬಿಟ್ಟೆ! ಕಾಡಿನಲ್ಲಿ ಕಡ್ಡಿ ಮುರಿದರೂ ದೊಡ್ಡ ಸದ್ದಾಗುತ್ತದೆ. ಮೌನ ಸರೋವರಕ್ಕೆ ಸ್ವನಮಹಿಷವು ದುಮ್ಮಿಕ್ಕಿದಂತಾಗಿ ಒಂದು ಸಾರಿ ಕಾಡೆಲ್ಲ ಅಲ್ಲೋಳ ಕಲ್ಲೋಲವಾದಂತಾಯಿತು.

ಕಾಡಿನ ಮೌನವನ್ನು, ಕಾಡಿನ ದಟ್ಟಣೆಯನ್ನು ಇವರು ವಿವರಿಸುವ ಸೊಬಗು ಎಷ್ಟು ಚೆಂದವಾದುದೆಂದರೆ ಚಿತ್ರಪಟ ಓದುಗನ ಸಂವೇದನೆಗನುಸಾರ ಕಣ್ಣಮುಂದೆ ತೆರೆದುಕೊಳ್ಳುತ್ತದೆ.

ಬೆಳ್ದಿಂಗಳನ್ನು ಕಾವ್ಯಮಯವಾಗಿ ಅವರು ಬಣ್ಣಿಸುವ ರೀತಿ ಅಪೂರ್ವವಾದದ್ದು:

ಸ್ವಲ್ಪ ಹೊತ್ತಿನಲ್ಲಿಯೇ ಆಕಾಶ ಪಟಸ್ಥ ಸ್ವಲ್ಪ ವಿರಳ ವೃಕ್ಷಮಾಲೆಗಳ ಹಿಂಗಡೆಯಲ್ಲಿ ಸುಂದರ ಶಶಾಂಕನು ಗೋಚರವಾದನು. 'ಜೊನ್ನದ ಬಣ್ಣದಿ ತುಂಬಿದ ಬಿಂಬದ ಹೊನ್ನಿನ ಸೊನ್ನೆಯು ಮೂಡಿದುದು'. ಹೊಂಗದಿರುಗಳು ಒಯ್ಯೊಯ್ಯನೆ ಅರಣ್ಯ ಪ್ರವೇಶ ಮಾಡಿದುವು. ಕತ್ತಲು ನಿಬಿಡ ವೃಕ್ಷವಾಟಿಕೆಗಳಲ್ಲಿ ಅವಿತುಕೊಂಡಿತು. ಆದರೆ ಮೌನವು ಎಂದಿನಂತೆ ಗಂಭೀರವಾಗಿತ್ತು. ಚಂದ್ರನು ಆಕಾಶಮಾರ್ಗದಲ್ಲಿಡುವ ಹೆಜ್ಜೆಗಳ ಸದ್ದು ಕೂಡ ಕೇಳಿಸುವಂಟಿತ್ತು. ಘೋರ ವಿಷಣ್ಣಳಾಗಿದ್ದ ನಿಶಾವನಿತೆ ಮಧುರ ಪ್ರಸನ್ನಳಾದಳು.

ಇನ್ನು ಕಗ್ಗತ್ತಲೆಗೆ ಚಂದ್ರನ ಪ್ರವೇಶ ತಂದೊಡ್ಡುವ ಜ್ಯೋತ್ಸ್ನೆಯನ್ನು ಬಣ್ಣಿಸುವ ರೀತಿ ಕೇವಲ ಸಚಿನ್ ತೆಂಡೂಲ್ಕರ್ ಹೊಡೆಯಬಲ್ಲ ಸ್ಕ್ವೇರ್ ಡ್ರೈವ್ (square drive) ಮಾದರಿಯದ್ದು:

ತಿಂಗಳು ಮೂಡಿಬರುವನೆಂದು ನನ್ನೆದೆ ಹಿಗ್ಗಿತು. ಆ ಮೌನತಿಮಿರಗಳ ಗುರುಭಾರದಿಂಡ ಕುಗ್ಗಿ ನೆಲಸಮವಾಗಿದ್ದ ಮನಸ್ಸು ನಿಟ್ಟುಸಿರೆಳೆದು, ನಸು ತೆಲೆಯೆತ್ತಿತ್ತು. ನೋಡುತ್ತಿದ್ದ ಹಾಗೆಯೇ ಕನಸುನನೆಕೊನೆಯೇರಿತು. ಕಾಂತಿ ಹೆಚ್ಚಿತು. ಹೊಂಬಣ್ಣವಾಯಿತು. ಬಣ್ಣಕ್ಕೆ ಬಣ್ಣವೇರಿತು. ಪರ್ವತಶಿಖರ ಶಿರೋರೇಖೆಯಲ್ಲಿ ಬೆಳೆದಿದ್ದ ಭೀಮ ಭೂರುಹ ರಾಜಿಗಳು ಜ್ಯೋತ್ಸ್ನಾಪ್ರದೀಪ್ತವಾದ ನೀಲಾಕಾಶಪಟದಲ್ಲಿ ಚಿತ್ರಿತವಾದಂತೆ ತೋರಿದವು. ಉತ್ಕಂಠಿತ ಭಾವದಿಂಡ ಅತ್ತ ಕಡೆ ಉನ್ಮೀಲಿತ ನಯನನಾಗಿ ದೃಷ್ಟಿಸಲಾರಂಭಿಸಿದೆ. ದೃಶ್ಯವು ಅತ್ಯಂತ ರಮಣೀಯವಾಗಿತ್ತು. ಬೇಟೆಗಾರನು ಕಬ್ಬಿಗನಾಗಿ ನೋಡಿದನು

  • ವಿಮರ್ಶೆ
~.~
  • Login or register to post comments
  • 818 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 21, 2006 - 11:35am — shreenidhi

ಮಲೆನಾಡಿನ ಚಿತ್ರಗಳು

shreenidhi's picture

ಧನ್ಯವಾದಗಳು hpn,
ಕುವೆಂಪು ರವರ "ಮಲೆನಾಡಿನ ಚಿತ್ರಗಳು" ಸಂಕಲನದಲ್ಲಿ ಇಂತಹ ಹಲವು ಘಟನೆಗಳನ್ನ ಬಹಳ ರಸವತ್ತಾಗಿ ವರ್ಣಿಸಿದ್ದಾರೆ. ಪ್ರಕೃತಿ ಪ್ರಿಯರ ಬಳಿ ಇರಲೇ ಬೇಕಾದ ಪುಸ್ತಕ ಅದು. ತಮ್ಮ ಶಿಕಾರಿ ಅನುಭವಗಳನ್ನ ಬಹು ಚೆನ್ನಾದ ಶೈಲಿಯಲ್ಲಿ ಬರೆದಿದ್ದಾರೆ, ಕುವೆಂಪುರವರು. ನನಗೆ ಓದಿನ ಹುಚ್ಚು ಹಿಡಿಸಿದ್ದೆ, ಆ ಪುಸ್ತಕ.. ತಾವು ಮೇಲೆ ಹೇಳಿದ ಪ್ರಬಂಧ ಕೂಡ ಅದೇ ಸಂಕಲನದ್ದು. ಆ ಕೃತಿ ಹಲವು ಬಾರಿ ಮರು- ಮುದ್ರಣಗೊಂಡಿದೆ. ಒಮ್ಮೆ ಓದಿ ನೋಡಿ. ಮತ್ತೆ 4-8 ಬಾರಿ ಅದೇ ನಿಮ್ಮನ್ನು ಓದಿಸುತ್ತದೆ.

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ.
http://shree-lazyguy.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾಲೇಜು ಹುಡುಗರ ಕವನಗಳು
  • ಪ್ರಜಾವಾಣಿಯಲ್ಲಿ ನಾ ಕಸ್ತೂರಿಯವರ ಬಗ್ಗೆ ಲೇಖನ
  • ಕನ್ನಡಕ್ಕಿಂದು ಬೇಕಾಗಿರುವುದು...
  • ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ
  • ಬಿ ಜಿ ಎಲ್ ರ ಪುಸ್ತಕಗಳು
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
  • ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
  • ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ
  • ಮರಳಿ ಬರಲಿ ಬಾಲ್ಯ

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
    October 7, 2008 - 9:16am
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 8:48am
  • mahesha
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
    October 7, 2008 - 8:45am
  • savithasr
    ಉ: ಗಾಂಧೀಸ್ಮರಣೆ
    October 7, 2008 - 8:28am
  • Sunil Jayaprakash
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
    October 7, 2008 - 8:01am
  • shylaswamy
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
    October 7, 2008 - 7:58am
  • Sunil Jayaprakash
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
    October 7, 2008 - 7:57am
  • Sunil Jayaprakash
    ಉ: ಸ್ವಲ್ಪನಗಿ
    October 7, 2008 - 7:42am
  • venkatesh
    ಉ: ರಾಜ್ಯೋತ್ಸವ ಓಟ ೨೦೦೮
    October 7, 2008 - 7:34am
  • Sunil Jayaprakash
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 7, 2008 - 7:27am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 71 ಅತಿಥಿಗಳು ಆನ್ಲೈನ್ ಇರುವರು.


ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator