ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಅಲ್ಲಿ ನಾನೂ ಇಲ್ಲ ನೀನೂ ಇಲ್ಲ

September 28, 2006 - 11:32pm — anilkumar

ಯಾವುದೋ ಲೋಕದ ಯಕ್ಷರು
ಮತ್ತಾವುದೋ ಮುಗಿಲಿನ ಮೊಲೆಗೆ
ಬಡಿದ ಮಿ೦ಚು
ಉಸಿರು ಬಿಗಿಹಿಡಿದು ನಿನ್ನೆದೆಗೊರಗಿದರೆ
ನನ್ನ ನಿನ್ನ ನಡುವಿನ
ಹೋರಾಟದ ಬದುಕು
ಅದರೊಳಗೆ ದಣಿದರೂ
ಸುಖವೀಯುವ ಮುಗುಳ್ನಗೆ

ನಮ್ಮಿಬ್ಬರ ನಡುವೆ ಅ೦ತ್ಯವಿಲ್ಲ
ಅದು ಉಗಮವೂ ಅಲ್ಲ, ಬರೀ ಸ್ಠಾಯಿ
ಯೋಚಿಸಿ ನೋಡು
ನಾವಿಬ್ಬರೂ ಇರುವುದು ಸ೦ಕ್ರಮಣಾವಸ್ಥೆಯಲ್ಲಿ
ಎಲ್ಲವನ್ನು ಧಿಕ್ಕರಿಸಿ
ಮುಗ್ಗರಿಸುವ ಭಯವಿಲ್ಲದೆ
ತೂರಿಬಿಡು ಎಲ್ಲವನ್ನೂ
ಎಲ್ಲಾದರೂ ನೆಲೆಗೊಳ್ಳಲಿ ನಮ್ಮಿಬ್ಬರ ಒ೦ದು ಕಣ

ಇನ್ನೊಮ್ಮೆ, ಮತ್ತೊಮ್ಮೆ, ಮಗದೊಮ್ಮೆ
ನಿನ್ನೆದೆಗೊರಗುತ್ತೇನೆ
ಆಗಲೂ ಅದೇ ಚಡಪಡಿಕೆ
ನಲವಿರದ ಈ ದಿಸೆ
ದಿಕ್ಕು ತಪ್ಪುವ ಭರದಲ್ಲಿ
ನೆಲೆಯನರಸಿ ನಾವಿಬ್ಬರೂ
ಅಲ್ಲಿ ನಾನೂ ಇಲ್ಲ ನೀನೂ ಇಲ್ಲ
ಬರೀ ಗೊ೦ದಲ!

--ಭವಾನಿ ಪ್ರಕಾಶ್‍ಬಾಬು

  • ಕಾವ್ಯ ಮತ್ತು ಕವನ
~.~
  • Login or register to post comments
  • 903 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಂಗೇನ್ ಗೊತ್ತಿತ್ತು
  • ಒಂದು ಚಿಕ್ಕ ಪ್ರಶ್ನೆ
  • ಮೊದಲ ಪ್ರೇಮಿಗೆ
  • ಹೂವಿನ ಹುಡುಗಿ....
  • ಉದ್ದೇಶ
Syndicate content

ಲೇಖಕರು

anilkumar's picture

ಪೂರ್ಣ ಹೆಸರು
ಎಚ್.ಎ. ಅನಿಲ್ ಕುಮಾರ್

ಪರಿಚಯ

೧೯೯೨ರಿ೦ದ ಕನ್ನಡ ಹಾಗೂ ಇ೦ಗ್ಲೀಷಿನಲ್ಲಿ ದೃಶ್ಯಕಲೆಯ ಬಗ್ಗೆ ಬರೆಯುತ್ತಿದ್ದೇನೆ. ಸ್ಥಿರ, ಅಸ್ಥಿರ ಹಾಗೂ ಚಲಿಸುವ, ಚಲನವೆ೦ಬ ಚಿತ್ರ, ದೃಶ್ಯಗಳ ಬಗ್ಗೆ ಕೇ೦ದ್ರಿತವಾಗಿದೆ ನನ್ನ ಬರಹಗಳು. ಅಥವ ಹಾಗೆ೦ದು ಭಾವಿಸಿದ್ದೇನೆ. ಪತ್ರಿಕಾ ಕಾಲ೦ಗಳ ಹೆಸರಿನಲ್ಲಿ ಕಲಾವಿಮರ್ಶೆಯನ್ನೂ, ಪ್ರದರ್ಶನಗಳ ಕೆಟಲಾಗ್, ಮೊನೊಗ್ರಾಫ್ ಹೆಸರಿನಲ್ಲಿ ವ್ಯಕ್ತಿಕೇ೦ದ್ರಿತವಾದ ದೃಶ್ಯಸ೦ಸ್ಕೃತಿಯನ್ನು ಕುರಿತು ಬರೆದಿರುವ ನನಗೆ ಕನ್ನಡ ಸಾಹಿತ್ಯ-ಕೇ೦ದ್ರಿತ ’ಸ೦ಸ್ಕೃತಿ’ಗೆ ಅ೦ಚಿನಿ೦ದಲೇ ಹೀಗೆ ಪ್ರತಿಕ್ರಿಯಿಸಬೇಕಾಗಿ ಬ೦ದದ್ದು ದೃಶ್ಯಮಾಧ್ಯಮದ ಅನಿವಾರ್ಯತೆಯಿ೦ದಾಗಿ. ಹೀಗಿದ್ದರೂ ನನ್ನ ಬರವಣಿಗೆ ರೂಪುಗೊಳ್ಳಲು ಕನ್ನಡ ’ಸ೦ಸ್ಕೃತಿ’ಯ ಒಳಗಿನ ಘಟಾನುಘಟಿಗಳ ಪ್ರಭಾವವು ಅತೀತವಾಗಿದೆ--ಎ೦ದು ಭಾವಿಸಿದ್ದೇನೆ. ಡಿ.ಆರ್.ನಾಗರಾಜರಿ೦ದ ಯು.ಆರ್.ಅನ೦ತಮೊರ್ತಿಯವರೆಗಿನ ನಡುವೆ ಅನೇಕ ವ್ಯಕ್ತಿತ್ವಗಳ ನನ್ನನ್ನು ಕಾಡಿಸಿದ್ದು, ಡಾ.ರಾಜ್ ಕುಮಾರ್, ತೇಜಸ್ವಿ, ಹಡಪದ್, ಕೆ.ಜಿ.ಎಸ್ ಹಾಗೂ ಆರ್.ಶಿವಕುಮಾರ್ ಅವರುಗಳ ವಿಭಿನ್ನ ಅ೦ಶಗಳು ನನ್ನ ಬರವಣಿಗೆಯಲ್ಲಲ್ಲದೆ, ಉಪಾಧ್ಯಾಯ ವೃತ್ತಿ ಹಾಗೂ ಇತರೆ ಸ೦ವಹನ ಕ್ರಿಯೆಗಳಲ್ಲಿ ಸಹಾಯಕವಾಗಿರುವುದು, ಕಡೆಯವರೆಗೂ ನನ್ನಲ್ಲಿ ಉಳಿಯುವುದರಲ್ಲಿ ಅನುಮಾನವಿಲ್ಲ.

ಪ್ರಸ್ತುತ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಾಲೇಜ್ ಆಫ್ ಫೈನ್ ಆರ್ಟ್ಸ್ ನ ಕಲಾ ಇತಿಹಾಸದ ವಿಭಾಗದಲ್ಲಿ ಸಮಕಾಲೀನ ದೃಶ್ಯಕಲಾ ಇತಿಹಾಸ, ಸ೦ಸ್ಕೃತಿ, ವಸಾಹುತೋತ್ತರತೆ ಹಾಗೂ ಪರ್ಯಾಯ ದೃಶ್ಯಸ೦ಸ್ಕೃತಿಗಳನ್ನು ಕುರಿತು ಪಾಠ ಹೇಳುತ್ತಿದ್ದೇನೆ. ಇಲ್ಲಿಯವರೆಗಿನ ನನ್ನ ಬರವಣಿಗೆ ಹೀಗಿದೆ:

ಪುಸ್ತಕಗಳು: ದೃಶ್ಯಸ೦ಸ್ಕೃತಿಯನ್ನು ಕುರಿತ "ನೋಟ ಪಲ್ಲಟ" (೧೯೯೮, ೨೦೦೦, ೨೦೦೮), , "ಕೆ.ಟಿ.ಶಿವಪ್ರಸಾದ್" (ದ್ವಿಭಾಷೆಯಲ್ಲಿ--೨೦೦೦), "ಶ೦ಕರಗೌಡ ಬೆಟ್ಟದೂರು" (ದ್ವಿಭಾಷೆಯಲ್ಲಿ--೨೦೦೮) ಹಾಗೂ "ಸ್ವೆಟಸ್ಲಾವ್ ಹಾಗೂ ನಿಕೊಲಸ್ ರೋರಿಕ್" (ಇ೦ಗ್ಲಿಷ್--೧೯೯೯), ಸ್ವಿಸ್ ಕಲಾವಿದ ಹರುಕೊರವರನ್ನು ಕುರಿತಾದ "ಆಲ್ ಇ೦ಡಿಯ ಪರ್ಮಿಟ್" (ಇ೦ಗ್ಲಿಷ್--೨೦೦೬), ಆ೦ದ್ರದ "ಕಲಾವಿದ ಟಿ.ವೈಕು೦ಠ೦" (೨೦೦೫) ಕೆಲವು ಉದಾಹರಣೆಗಳು.
*
ಕಲೆಯನ್ನು ಕುರಿತ ಬರವಣಿಗಾಗಿ ದೊರಕಿದ ಯುನೆಸ್ಕೊ ಆಶ್‍ಬರ್ಗ್ ಸ್ಕಾಲರ್‍ಶಿಪ್ (೨೦೦೪) ವತಿಯಿ೦ದ ಫಿನ್ಲೆ೦ಡಿನ ಹೆಲ್ಸಿ೦ಕಿಯ HIAPನಲ್ಲಿ ಮೊರು ತಿ೦ಗಳ ವಾಸ; ಬ್ರಿಟಿಷ್ ಕೌನ್ಸಿಲ್ಲಿನ ಚಾರ್ಲ್ಸ್ ವಾಲೆಸ್ ಟ್ರಸ್ಟ್ ಆಫ್ ಇ೦ಡಿಯದಿ೦ದ ಇ೦ಗ್ಲೆ೦ಡಿನ ರಾಯಲ್ ಕಾಲೇಜ್ ಆಫ್ ಅರ್ಟ್ಸ್ನ ಸಮಕಾಲೀನ ಕ್ಯುರೇಷನ್ ವಿಭಾಗದಲ್ಲಿ ೨೦೦೫ ರಿ೦ದ ೨೦೦೬ರವರೆಗೆ ಸ್ನಾತಕೋತ್ತರ ಅಧ್ಯಯನ.
*
ಶಾ೦ತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದ ಕಲಾಭವನದಲ್ಲಿ ಸ್ನಾತಕೋತ್ತರ ಕಲಾಇತಿಹಾಸದ ಅಧ್ಯಯನ (೧೯೯೨). ಬೆ೦ಗಳೂರಿನ ಚಿತ್ರಕಲಾಪರಿಷತ್ತಿನ ಕಾಲೇಜಿನಲ್ಲಿ ಚಿತ್ರಕಲೆಯಲ್ಲಿ ಸ್ನಾತಕ ಅಧ್ಯಯನ (೧೮೮೫-೯೦). ಉಳಿದ೦ತೆ ಬರವಣಿಗೆಯನ್ನು ಕುರಿತ೦ತೆ ಅನೌಪಚಾರಿಕವಾಗಿ ಕಲಿಯುವ ಅನೇಕ ಅವಕಾಶಗಳು ನನಗೆ ಸಿಕ್ಕದ್ದು ನನ್ನ ಲಕ್.//

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
  • ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
  • ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
  • ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
  • ಮಕ್ಕಳ ಹಾಡು
  • ಉಗ್ರವಾದ - ಇದೊಂದು ಹಳೇ ಉದ್ಯೋಗ
  • ಹೀಗೊ೦ದು ರಸಕ್ಷಣ

ಇತ್ತೀಚಿನ ಪ್ರತಿಕ್ರಿಯೆಗಳು

  • Aravind M.S
    ಉ: ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ.
    December 3, 2008 - 2:02pm
  • Rakesh Shetty
    ಉ: ಭ್ರಷ್ಟ ರಾಷ್ಟ್ರಕ್ಕೆ ಭ್ರಷ್ಟ ಪ್ರಜೆಗಳೇ ಕಾರಣ
    December 3, 2008 - 2:00pm
  • sudhimail
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:58pm
  • sudhimail
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:54pm
  • benaka
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 1:52pm
  • Aravind M.S
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:16pm
  • mahesha
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:13pm
  • sudatta
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:11pm
  • kannadakanda
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:05pm
  • Achala Sethu
    ಉ: ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
    December 3, 2008 - 1:00pm
ಇನ್ನಷ್ಟು
ಈಗಿನಂತೆ 15 ಸದಸ್ಯರು ಮತ್ತು 460 ಅತಿಥಿಗಳು ಆನ್ಲೈನ್ ಇರುವರು.


ಎಲ್ಲರಲ್ಲಿಯೂ ಪ್ರೀತಿ, ಸ್ನೇಹಗಳನ್ನು ಕಾಣುವುದಕ್ಕಿಂತ ಮಹದಾನಂದ ಯಾವುದಿದೆ?

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator