ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
Guruprasad K N
ಪರಿಚಯ
I am Engineer, working in Bangalore. I love writing and reading the poems.
ಕೋಪದ ಗೆಳತಿ
ಎಲ್ಲಿಂದಲೋ ಬಂದೆ
ನನ್ನ ಮನದಲಿ ನಿಂದೆ
ಉಸಿರು ಉಸಿರಲೇ ಬೆರೆತೆ,
ನಾ ಅರಿಯುವಾ ಮೊದಲೆ
ನನ್ನೇ ನೀನು ಮರೆತೆ.........
ಅಡಿಗಡಿಗೆ ಕೂಗಾಡಿ
ಕೋಪವನು ನೀ ಮಾಡಿ
ನನ್ನ ನೀನೂ ಕಾಡಿ,
ಅರಿಯದಾದೆಯ ಗೆಳತಿ
ನನ್ನ ದುಃಖಕದೇ ದಾರಿ.....
ಮೌನವನು ನೀ ಮುರಿದು
ಪ್ರೀತಿಯಿಂದಲಿ ಎರಡು
ಮಾತುಗಳ ನೀ ಆಡು,
ಸೇರು ನನ್ಮನಸಾ ಗೂಡು
ಕೊಡದೆ ನನಗೆ ನೋವು.....
- Login or register to post comments
- 325 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಬಹಳ ಚೆನ್ನಾಗಿದೆ ಗುರು,
ಚೈತನ್ಯ
Thanks chaithanya.......